Friday 15 March 2013


ಪ್ರೀತಿಯ ಅನು..
ದಡೂತಿಯಾಗಿ ಕಾಣುತ್ತಿದ್ದ ಗಿಡ್ಡನೆಯ ಮನುಷ್ಯ ಪಾಧರ್ ವಿಲ್ಫ಼್ರೆಡ್ ಬರಿಗೈಯಲ್ಲಿ ಬಂದಿರಲಿಲ್ಲ. ಮಾರ್ಕೆಟ್‍ನಲ್ಲಿ ಕಣ್ಣು ಕೈಗಳಿಗೆ ಸಿಕ್ಕದ್ನೆಲ್ಲಾ ಬಾಚಿಕೊಂಡು ಬಂದಂತೆ ಕಂಡುಬಂದರು. ಹಾಲು, ಹಣ್ಣು, ಮಾಂಸ, ಸಾಪ್ಟ್‍ಡ್ರಿಂಗ್ಸ್, ಬ್ರೆಡ್, ತರ್ಕಾರಿ ತರತರವಾದ ತಿಂಡಿತಿನಿಸುಗಳ ತಂದು ರುಚಿಯನ್ನು ಮರೆತಿದ್ದ ನಮ್ಮ ನಾಲಿಗೆ ಬಾಯಿಗಳಿಗೆ ರುಚಿಯನ್ನು ಮರುಕಳಿಸುವ ಪ್ರಯತ್ನ ಮಾಡಿದ್ದರು. “ಬಂದ್‍ನಿಂದ ಏನು ತರ್ಲಿಕೆ ಆಗ್ಲಿಲ್ಲ… ಅಂಗ್ಡಿಗಳೆಲ್ಲಾ ಮುಚ್ಚಿದವು” ಎಂದು ನಿಮಿಷಕ್ಕೊಮ್ಮೆ ಹೇಳಿ ಹೇಳಿ ಮರುಗುತ್ತಿದ್ದ ಪಾಧರ್‍ ವಿಲ್ಫ಼್ರೆಡ್‍ಗೆ “ಸಾಕಪ್ಪ ನೀನು ಇಷ್ಟೇಲಾ ತಂದು ನಮ್ ಮುಂದೆ ಗುಡ್ಡೆ ಆಕಿದ್ಯಲ್ಲ ಅಷ್ಟೇ ಸಾಕು, ನೀನು ತಂದಿರುವ ತಿಂಡಿತಿನಿಸುಗಳಿಗಿಂತಲೂ ನಿನ್ನ ಹೃದಯದ ಉದಾರತೆಯೇ ನಾನು ಮೆಚ್ಚಿದ್ದು” ಎಂದು ಹೇಳಿಬಿಡಬೇಕೆಂದುಕೊಂಡರು ಹೇಳಲಿಲ್ಲ.
ಅರಳು ಹುರಿದಂತೆ ಪಟ ಪಟ ಎಂದು ಮಾತಾನಾಡುತ್ತಿದ್ದ ವಿಲ್ಫ಼್ರೆಡ್ ಆಗಾಗ ತಾನು ಮಾಡಲಾಗದನ್ನು ನೆನೆಸಿಕೊಂದು ನಿಟ್ಟುಸಿರು ಬಿಡುತ್ತಿದ್ದರು.  ಬಡಜನರ ಉದ್ಧಾರಕ್ಕೆ ಮಾಡಿದ್ದನ್ನು ಲೆಕ್ಕ ಮಾಡದೆ, ತನ್ನ ಕೈಯಲ್ಲಿ ಮಾಡಲಾಗದನ್ನು ಕೆದಕಿ ಕೆದಕಿ ನೆನಪಿಗೆ ತಂದು ಲೆಕ್ಕ ಒಪ್ಪಿಸುತ್ತಿದ್ದನ್ನು ಕೇಳಿ ನನಗೆ ಸ್ವಲ್ಪ ಕೋಪವು ಬಂತು. ಹೌದು ಜೀವಪೂರಕ ಕಾರ್ಯಗಳಲ್ಲಿ ತೊಡಗಿರುವ ಜನರ ಮನಸ್ಥಿತಿಯೇ ಹೀಗೆ ಏನೋ. ಮಾಡಿದಷ್ಟರಲ್ಲಿ ತೃಪ್ತಿ ಇರುವುದಿಲ್ಲ, ಮಾಡಬೇಕಾದನ್ನು ಹಿಡಿ ಹಿಡಿಯಾಗಿ ಲೆಕ್ಕ ಮಾಡುವುದನ್ನು ಬಿಡುವುದಿಲ್ಲ. ಇದೇ ಮನಸ್ಥಿತಿಯ ವಿಲ್ಫ಼್ರೆಡ್ ನಾನು ಬೀಡು ಬಿಟ್ಟಿರುವ ಮವೈತ್ ಎಂಬ ಬೆಂಗಾಡಿನಲ್ಲಿ ಸುಮಾರು ಹತ್ತುವರ್ಷಗಳ ಕಾಲ ಅವಿರತವಾಗಿ ದುಡಿದ್ದು, ಪರಿವರ್ತನೆಗೆ ಕಾರಣಕರ್ತರಾಗಿದ್ದರು. ಅದ್ವಿತೀಯ ಸಾಧನೆಗೆ ಭಾಜನರಾದರು. ೧೨ ವರ್ಷಗಳ ಹಿಂದೆ ಯಾರೋ ಪ್ರಾರಂಭಿಸಿದ್ದ ಶಾಲೆ ಇವರ ಕೈಸೇರಿ ಬೆಳೆದು ಈವತ್ತು ಸುಮಾರು ೬೦೦ ಹುಡುಗ ಹುಡುಗಿಯರಿಗೆ ಜ್ಞಾನದೇಗುಲವಾಗಿದೆ.  ಎಷ್ಟೂ ಹುಡುಗ ಹುಡುಗಿಯರು ಈ ಶಾಲೆಯಿಂದ ಶಿಕ್ಷಣ ಪಡೆದು ಜೀವನಾಧಾರವನ್ನು ಕಂಡುಕೊಂಡಿದ್ದಾರೆ. ಕೊಲ್ ಮೈನ್ಸ್‍ಗಳಲ್ಲಿ ದುಡಿಯುತ್ತಿದ್ದ ಹುಡುಗರನ್ನು ಕರೆತಂದ ಪಾಧರ್, ಅವರನ್ನು ಶಾಲೆಗೆ ಹಚ್ಚಿ ಶಿಕ್ಷಣಕೊಟ್ಟದರಿಂದ ಇವತ್ತು ಅದೇ ಹುಡುಗರು ಅರಿವು ನೀಡುವ ಶಿಕ್ಷಕರಾಗಿದ್ದಾರೆ.
ಮೊನ್ನೆ ಪಾಧರ್ ವಿಲ್ಫ಼್ರೆಡ್ ನಮ್ಮ ಮನೆಗೆ ಬಂದಾಗ ಅನೇಕ ಯುವಕ ಯುವಕಿಯರು, ವಿದ್ಯಾರ್ಥಿಗಳು, ಮಹಿಳೆಯರು ಅವರನ್ನು ಭೇಟಿ ಮಾಡಲು ಸಾಲು ಸಾಲಾಗಿ ಬರುತ್ತಿದ್ದರು. ಬಂದವರನ್ನು ಪ್ರೀತಿಯಿಂದ, ಆದರದಿಂದ ಮಾತನಾಡಿಸಿ ಕಳುಹಿಸಿಕೊಡುತ್ತಿದ್ದ ಪಾಧರ್ ವಿಲ್ಫ಼್ರೆಡ್ ನನಗೆ ತಿಳಿಯದಂತೆ ಮಾನವತ್ವದ ಹಾಗು ಉದಾರತೆಯ ರೂಪಕವಾಗಿ ಮೆಲ್ಲನೆ ನನ್ನ ಮನ ಸೇರಿಬಿಟ್ಟಿದ್ದರು.
ಜೋವಿ ಯೇ.ಸ
Read more!

No comments:

Post a Comment