Tuesday 13 October 2009

ಒಪ್ಪು-ತಪ್ಪು

ಪ್ರೀತಿಯ ಅನು...

ನನ್ನ ಹಾರೈಕೆಗಳ ಶುಭ್ರ ಕೋಮಲ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು ಸುಂದರ ಸುಮಧುರ ಜಗತ್ತಿನ ಚುಂಬನದಲ್ಲಿ ತೇಲಾಡುತ್ತಿರಬಹುದು! ಮಂದಾರದ ಆ ನಿನ್ನ ಮೊಗವು ಅನೇಕರಲ್ಲಿ ಸಂತೋಷದ ಒರತೆಗಳನ್ನು ಹರಿಸುತ್ತಿರಬಹುದು. ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಸಾರಿನಂತೆ ಸಪ್ಪೆ, ಸಪ್ಪೆ... ಆದರೂ ಅನ್ನಕ್ಕೆ ಸ್ವಲ್ಪ ಪುಡಿ ಉಪ್ಪು ಸೇರಿಸಿ ಬದುಕನ್ನು ಸರಿಪಡಿಸುವ ಹಂಬಲ. ಸರಿಪಡಿಸಿ ಬದುಕ ಊಟದ ಸವಿಯನ್ನು ಸವಿಯುವ ತೀವ್ರತೆ. ಸಾಲವೇನಾದರೂ ನೀನು ಕೊಡುವುದಾದರೆ ನಿನ್ನ ನಗುವನ್ನು ಸ್ವಲ್ಪ ನನಗೆ ಕೊಟ್ಟು ನನ್ನನು ನಿನ್ನ ಸಾಲಗಾರನಾಗಿಸಬೇಕೆಂದು ಕೇಳಿಕೊಳ್ಳುವ ನನ್ನ ಕಂಟು ಮೊಗ.

ಅನು ನಿನಗೆ ಪತ್ರ ಬರೆಯದೆಸುಮಾರು ದಿನಗಳಾಯ್ತು. ಪ್ರಾರಂಭಿಸುವ ಸಮಸ್ಯೆ ನನ್ನ ಪೆಡಂಭೂತವಾಗಿ ಕಾಡಿಸಿ, ಈ ದಿನ ಲೇಖನವನ್ನು ಕೈಯಲ್ಲಿಡಿಸಿದೆ. ಏನು ಬರೆಯುವುದು? ಪತ್ರದ ವಸ್ತು ಏನು? ಯಾವುದೇ ರೀತಿಯ preplanning ಇಲ್ಲದೆ ಈ ಪತ್ರ ಬರೆಯಲು ಕೈಹಾಕಿದ್ದೇನೆ.


Wednesday 7 October 2009

ಆಯ್ಕೆ - ಭಾಗ 2


ವೇದಾಂತ ಅಭ್ಯಾಸ ಮಾಡುತ್ತಿದ್ದ ಶಿಷ್ಯನೊಬ್ಬ ಗುರುವಿನೊಡನೆ ಮಾತನಾಡುತ್ತಾ “ ಗುರುಗಳೇ ನನ್ನೊಳಗೆ ಸಂಘರ್ಷ ಕಾಡುತ್ತದೆ ಆ ಸಂಘರ್ಷ ನಿವಾರಿಸಲು ಸಹಾಯ ಮಾಡಿ” ಎಂದ ಅದಕ್ಕೆ ಉತ್ತರವಾಗಿ “ಹೋಗಿ ತಪಸ್ಸು ಮಾಡು ಸಂಘರ್ಷದ ಕಾರಣಗಳನ್ನು ಸಂಶೋಧಿಸು” ಶಿಷ್ಯ ಕೆಲಕಾಲ ತಪಸ್ಸು ಮಾಡಿ ಹಿಂದಿರುಗುತ್ತಾನೆ “ಗುರುಗಳೇ ನಾನು ಆಯ್ಕೆಗಳಿರುವುದೇ ಸಂಘರ್ಷಕ್ಕೆ ಕಾರಣ ಎಂದು ಕಂಡುಕೊಂಡಿದ್ದೇನೆ. ಪ್ರಾಣಿಗಳಿಗೆ ಆಯ್ಕೆಯ ಸಮಸ್ಯೆ ಇಲ್ಲ. ಅವು ಪ್ರಾಕೃತಿಕ ಪವೃತ್ತಿಗಳಂತೆ ನಡೆದುಕೊಳ್ಳುತ್ತವೆ. ಆದರೆ ನನಗೆ ಮದುವೆಯಾಗಬೇಕೋ, ಬೇಡವೋ, ಸಸ್ಯಾಹಾರಿಯಾಗಲೋ, ಮಾಂಸಾಹಾರಿಯಾಗಲೋ, ಪ್ರವಚನಕೇಳಲೋ, ಬೇಡವೋ -ಹೀಗೆ ಆಯ್ಕೆಗಳಿವೆ. ಆಯ್ಕೆಯಿರುವಲ್ಲಿ ಸಂಘರ್ಷವಿರುತ್ತದೆ” ಎಂದು ಹೇಳಿದ. ಗುರು ಹೀಗೆಂದ “ಕೇವಲ ಅಯ್ಕೆಗಳಿರುವುದರಿಂದಲೇ

Tuesday 6 October 2009

ಆಯ್ಕೆ - ಭಾಗ 1

ಆಯ್ಕೆ ಮಾನವನ ಬದುಕಿನ ಅವಿಭಾಜ್ಯ ಅಂಗ. ದಿನನಿತ್ಯ ಹಲವು ಆಯ್ಕೆಗಳ ನಡುವೆಯೂ ಸುಗಮವಾಗಿಯೂ, ಕೆಲವೊಮ್ಮೆ ದ್ವಂದ್ವಮಯವಾಗಿಯೂ ಜೀವನವನ್ನು ಸಾಗಿಸುತ್ತೇವೆ. ನಮ್ಮ ಬದುಕನ್ನು ರೂಪಿಸುವುದು ಅಥವಾ ಅದನ್ನು ಕೆಡಿಸುವುದು ನಮ್ಮ ಆಯ್ಕೆಯ ಮೇಲೆ ಹೊಂದಿದೆ. ನಮ್ಮ ಬದುಕಿಗೆ ನಾವೇ ಜವಾಬ್ದಾರರಾಗಿರುವಾಗ ನಮ್ಮ ಆಯ್ಕೆಗಳಿಗೂ ಕೂಡ ನಾವು ಜವಾಬ್ದಾರರು. ಜಾಗತೀಕರಣಗೊಂಡ ಈ ಯುಗದಲ್ಲಿ ಮಾನವ ಸಮಾಜ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿರುವುದನ್ನು ಕಾಣುತ್ತೇವೆ. ಅದು ಬೇಕು, ಇದು ಬೇಕು, ಮತ್ತೊಂದು ಬೇಕೆಂದು ಬೆದಕುತ್ತಿರುವುದು ಇಂದಿನ ಸಮಾಜ. ಈ ಬೆದಕಾಟದ ಬದುಕು ಕ್ಷಣ ಕ್ಷಣಕ್ಕೂ ಬೇರೆ ಬೇರೆ ಬೇಕುಗಳನ್ನು ಹುಟ್ಟಿಸುತ್ತದೆ. ತನ್ನ ಜೀವಮಾನದಲ್ಲಿ ಈ ಬೇಕುಗಳನ್ನು ಪ್ರತೀಕ್ಷಣ ಹೊಂದಿಸಿಕೊಳ್ಳಬೇಕಾದಾಗ ಜೀವಕ್ಕೆ ಸುಖ, ನೆಮ್ಮದಿ ಶಾಂತಿ ಎಲ್ಲಿಂದ ತಾನೇ ಬರಬೇಕು?