Tuesday 18 November 2014

ದೇವರ ವಿಳಂಬಗಳು ದೇವರ ನಿರಾಕರಣೆಗಳಲ್ಲ - ರಾಹುಲ್ ಡ್ರಾವಿಡ್

2013ರ ಮಧ್ಯ ಭಾಗದಲ್ಲಿ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿಟ್ಸ್ ಪಿಲಾನಿ ವಿಧ್ಯಾರ್ಥಿಗಳ ಪದವಿ ಸ್ವೀಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಕ್ರಿಕೆಟ್ ಪಟು ರಾಹುಲ್ ಡ್ರಾವಿಡ್ ಮಾಡಿದ ಭಾಷಣ ಅಪಾರ ಮೆಚ್ಚುಗೆಯನ್ನು ಪಡೆಯಿತು. ಗುರಿಯನ್ನು ಹಿಡಿದು ಸಾಗುವ ಯುವ ಮನಸ್ಸುಗಳು ಪಡೆಯಬೇಕಾದ ಸ್ಪೂರ್ತಿ, ತೋರಬೇಕಾದ ಸಹನೆ, ಶ್ರಮ ಹಾಗೂ ದೇವರು ಹಾಗೂ ತಮ್ಮ ಸಾಮರ್ಥ್ಯದ ಬಗ್ಗೆ ಇಟುಕೊಳ್ಳಬೇಕಾದ ವಿಶ್ವಾಸದ ಬಗ್ಗೆ ಸುವಿಸ್ತಾರವಾಗಿ ಮಾತನಾಡಿದ್ದಾರೆ. ಉಪಯೋಗವಾಗಬಹುದು ಎಂಬ ಆಶಯದೊಂದಿಗೆ ಸರಳವಾಗಿ ಕನ್ನಡಕ್ಕೆ ತರುವ ಒಂದು ಪ್ರಯತ್ನ 
- ಪ್ರಶಾಂತ್ ಇಗ್ನೇಶಿಯಸ್
----------------------------------------------------------------------------------------------------------------------------

ಪದವಿ ಸ್ವೀಕಾರದ ದಿನದಂದು ನಿಮ್ಮೆಲ್ಲರ ನಡುವೆ ನಿಂತು ಮಾತನಾಡುವುದು ನಿಜಕ್ಕೂ ನನಗೆ ದೊಡ್ಡ ಗೌರವ ಹಾಗೂ ಅನಂದದ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆಯೊಂದಿಗೆ ದೇಶದ ಪ್ರಗತಿಯಲ್ಲಿ ತನ್ನದೆ ಆದ ಕೊಡುಗೆಯನ್ನು ನೀಡುತ್ತಿರುವ  ಬಿಟ್ಸ್ ನಂಥ ಸಂಸ್ಥೆಗೆ ಭೇಟಿ ಕೊಡುವುದು ನನ್ನನ್ನು ವಿನೀತನನ್ನಾಗಿಸಿದೆ. ಸಂಸ್ಥೆಯಲ್ಲಿ ಪ್ರವೇಶ ಪಡೆಯ ಬೇಕಾದರೆ ಗಣಿತ ಹಾಗೂ ಭೌತ ವಿಜ್ಞಾನದಲ್ಲಿ  (Physics) ಕನಿಷ್ಟ 75 ಅಂಕ ಪಡೆದಿರಬೇಕು ಎಂಬ ಮಾಹಿತಿ ಇದೆ. ಆದರೆ ಆರ್ಹತೆ ಇಲ್ಲಿ ಬರುವ ಮುಖ್ಯ ಆತಿಥಿಗಳಿಗೆ ಅನ್ವಯಿಸುವುದಿಲ್ಲ ಎಂಬುದು ಸಮಾಧಾನಕರ ವಿಷಯ. ಮಟ್ಟಿಗೆ ನಾನಿಂದು ಅದೃಷ್ಟಶಾಲಿ.

ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಕಳೆದ ಒಂದುವರೆ ವರ್ಷವು ಆತ್ಮಾವಲೋಕನದ ಅತ್ತ್ಯುತ್ತಮವಾದ ಕಾಲವಾಗಿದ್ದೂ, ನನ್ನ ವೃತ್ತಿ ಜೀವನವನ್ನು ಹಿಂದುರುಗಿ ನೋಡುವ ಸದವಕಾಶವನ್ನು ನೀಡಿದೆಹಿಂದಿರುಗಿ ನೋಡಿದಾಗ, ಕ್ರಿಕೆಟ್ ನನ್ನನ್ನು ಮತ್ತಷ್ಟು ಉತ್ತಮ ಹಾಗೂ ಪರಿಪೂರ್ಣ ವ್ಯಕ್ತಿಯನ್ನಾಗಿಯೂ, ನನ್ನ ವ್ಯಕ್ತಿತ್ವಕ್ಕೆ ಪಕ್ವತೆಯನ್ನೂ, ಯಶಸ್ಸು ಹಾಗೂ ಸೋಲನ್ನು ನೋಡುವ ವೇದಿಕೆಯನ್ನು ಒದಗಿಸಿ, ಅದರಿಂದ ಕಲಿಯುತ್ತ ಎರಡನ್ನೂ  ಜೀವನದ ಅಂಗವಾಗಿ ತೆಗೆದುಕೊಳ್ಳುವದನ್ನು ಕಲಿಸಿದೆ. ಯಶಸ್ಸನ್ನು ಹೇಗೆ ಸಾಧಿಸಬಹುದು ಎಂಬ ಪ್ರಶ್ನೆಯನ್ನು ನನಗೆ ಹಲವಾರು ಬಾರಿ ಕೇಳಲಾಗಿದೆಪ್ರಾಮಾಣಿಕವಾಗಿ ಹೇಳಬೇಕಾದರೆ ಯಶಸ್ಸನ್ನು ಸಾಧಿಸಲು ಲಕ್ಷಾಂತರ ದಾರಿಗಳಿವೆ ಹಾಗೂ ಯಾವುದು ಸರಿ ಎಂಬುದನ್ನು ಹೇಳಲು ನಾನ್ಯಾರು? ಇಲ್ಲಿರುವ ಪ್ರತಿಯೊಬ್ಬನೂ ತನ್ನದೇ ಆದ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ನಿಮ್ಮ ಮುಂದೆ ಮಾತನಾಡುವ ಅವಕಾಶ ಸಿಕ್ಕಿರುವ ಸಂದರ್ಭದಲ್ಲಿ ನನ್ನದೇ ಜೀವನ ಪಯಣದ ಕೆಲವೊಂದು ಕಥೆಗಳನ್ನು ಹೇಳುತ್ತಾ ಅದು ನಿಮ್ಮಲ್ಲಿ ಪ್ರತಿಧ್ವನಿಸಬಹುದು ಎಂಬ ಆಶಯ ನನ್ನದಾಗಿದೆ.

ಒಬ್ಬ ಸಾಧರಣ ಮಧ್ಯಮ ವರ್ಗದ ಹುಡುಗನೊಬ್ಬನನ್ನು ಕಲ್ಪಿಸಿಕೊಳ್ಳಿ. ಹುಡುಗ ನಾನಾಗಿದ್ದೆ. ಒಂದಷ್ಟು ಭಿನ್ನವಾದದ್ದೇನೆಂದರೆ ನನ್ನ ಮಾವ ಸಿ.ಕೆ. ನಾಯ್ಡು ಅವರೊಟ್ಟಿಗೆ ಕ್ರಿಕೆಟ್ ಆಡಿದವರು ಹಾಗೂ ನನ್ನ ತಂದೆ ತಮ್ಮ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದರು . ಕ್ರಿಕೆಟ್ ಎಂಬುದು ಅವರ ಗೀಳಾಗಿತ್ತು. ಮನೆಯಲ್ಲಿ ರೇಡಿಯೋ ಕಾಮೆಂಟ್ರಿ ಸದಾ ಓಡುತ್ತಿತ್ತು ಹಾಗೂ ಅದು ಅಂತರರಾಷ್ಟ್ರೀಯವಾಗಿರಲಿ, ದೇಶಿಯ ಕ್ರಿಕೆಟ್ ಪಂದ್ಯವಾಗಿರಲಿ, ಪ್ರತಿಯೊಂದು ಕ್ರಿಕೆಟ್ ಪಂದ್ಯವನ್ನೂ ನನ್ನ ತಂದೆ ಆಸಕ್ತಿಯಿಂದ ಅನುಸರಿಸುತ್ತಿದ್ದರು, ಕೇಳುತ್ತಿದ್ದರುನನ್ನನ್ನು ಹಾಗೂ ನನ್ನ ತಮ್ಮನನ್ನು ಅವಕಾಶ ಸಿಕ್ಕಾಗಲೆಲ್ಲಾ ಕ್ರೀಡಾಂಗಣಕ್ಕೆ ಕರೆದು ಹೋಗುವುದನ್ನು ತಪ್ಪಿಸುತ್ತಿರಲಿಲ್ಲ.

ಅವರ ಪ್ರಕಾರ ಸಮಯವನ್ನು ಅದಕ್ಕಿಂತ ಉತ್ತಮವಾಗಿ ಬಳಸಲು ಸಾಧ್ಯವಿರಲಿಲ್ಲ. ಒಬ್ಬ ಬಾಲಕನಾಗಿ ನನ್ನ ತಂದೆ ನನಗೆ ಅರಾಧ್ಯ ದೈವವಾಗಿದ್ದರಿಂದ ಅವರು ಅಷ್ಟು ಮೆಚ್ಚುತ್ತಿದ್ದ ಕ್ರೀಡೆಯ ಬಗ್ಗೆ ಸಹಜವಾದ ಕುತೂಹಲ ಬೆಳೆಯುತ್ತಾ ಸಾಗಿತು. ಕ್ರಿಕೆಟನ್ನು ನೋಡುತ್ತಾ ಬೆಳೆಯುತ್ತ , ಮನೆಯ ಮುಂದೆ ಆಡುತ್ತಾ ಹೆಚ್ಚು ಸಮಯ ಕಳೆದಂತೆ ಕುತೂಹಲ ಆಸಕ್ತಿಯಾಗಿ ಬೆಳೆಯಲಾರಂಭಿಸಿತು. ಸ್ವಲ್ಪ ಸಮಯದಲ್ಲೇ ಆಸಕ್ತಿ ಅಮರಮಿತವಾದ ಪ್ರೀತಿಗೆ ತಿರುಗಿತು. ನನಗೆ ನೆನಪಿರುವಂತೆ ಒಂದು ಘಟ್ಟದಲ್ಲಿ ನಾನು ಏನಾಗಬೇಕೆಂಬ ಭಾವನೆ ನನ್ನ ಅಂತರಾಳದಲ್ಲಿ ರೂಪ ತಳೆಯಲು ಪ್ರಾರಂಭಿಸಿತು. ದ್ರಾವಿಡ್ ಕುಂಟುಂಬದಲ್ಲಿನ ನನ್ನ ಜನನ ಆಕಸ್ಮಿಕವಲ್ಲವೆಂಬ ಭಾವನೆ ಮೂಡಲಾರಂಭಿಸಿತು.ಕೆಲವೊಮ್ಮ ಸ್ಪೂರ್ತಿ ನಮ್ಮ ಮುಂದೆಯೇ ನಮ್ಮನ್ನು ದಿಟ್ಟಿಸಿ ನೋಡುತ್ತಿರುತ್ತದೆ.

ನನ್ನ ಶಾಲ ದಿನಗಳಲ್ಲಿ ನನ್ನದೇ ಆದ ಕ್ರಿಕೆಟ್ ಲೋಕದೊಳಗೆ ಹೆಚ್ಚು ಹೆಚ್ಚು ಹೋಗಲಾರಂಭಿಸಿದೆ. ಅಂತರ ಶಾಲಾ ಟೋರ್ನಿಗಳನ್ನು ಗೆಲ್ಲುವುದು ವಿಶ್ವ ಕಪ್ಪನ್ನೇ ಗೆದ್ದಂತ ಅನುಭವ ನೀಡುತ್ತಿತ್ತು. ಶಾಲೆ ಹಾಗೂ ರಾಜ್ಯ ತಂಡಗಳ ನಾಯಕತ್ವ ವಹಿಸುವುದೇ ದೊಡ್ಡ ಗುರಿಯಾಗಲಾರಂಭಿಸಿತು. ಅದರೂ, ಶಾಲ ದಿನದಲ್ಲಿನ ಅದೊಂದು ಆಸಕ್ತಿದಾಯಕ ಕಥೆಯೊಂದನ್ನು ನಿಮಗೆ ಹೇಳಲೇ ಬೇಕು. ನನ್ನ ಕ್ರಿಕೆಟ್ ಪ್ರೇಮದ ನಡುವೆಯೇ , ನನ್ನ ತಂದೆ ತಾಯಿಗೆ ಅಂದಿನ ಇತರ ಪೋಷಕರಂತೆಯೇ ಆತಂಕ, ಅನುಮಾನಗಳು ಶುರುವಾದವು. ಕೇವಲ ಕ್ರಿಕೆಟ್ಟನ್ನೇ ಯೋಚಿಸಿಕೊಂಡರೆ ಮುಂದೇ ಹೇಗೆ ಎಂಬ ಸಣ್ಣ ಭಯವದು.

ನಾನು 8ನೇ ತರಗತಿಯಲ್ಲಿದ್ದಾಗ, ನನ್ನ ಶಾಲೆಯ ಮುಖ್ಯೋಪಾಧ್ಯರಾದ ಫಾದರ್ ಕೊಹಿಲೋ ಬಳಿ ಬಂದು ತಮ್ಮ ಕಳವಳವನ್ನು ಹೇಳಿಕೊಂಡರು. ನಾನಾಗಲೇ 15 ವರ್ಷದೊಳಗಿನ ತಂಡಕ್ಕೆ  ಸತತ ಎರಡನೆಯ ಬಾರಿಗೆ ಆಯ್ಕೆಯಾಗಿದ್ದೂ, ಪಂದ್ಯಗಳು ಇತರ ರಾಜ್ಯಗಳಲ್ಲಿ ಹಾಗೂ ನಮ್ಮ ಶಾಲೆಯ ಪರೀಕ್ಷೆಗಳ ಸಮಯದಲ್ಲೇ ನಡೆಯುತ್ತಿದ್ದವು. ನನ್ನ ತಂದೆ ತಾಯಿಗಳು ನಮ್ಮ ಮುಖ್ಯೋಪಾಧ್ಯಾರ ಮುಂದೆ ವಿನಮ್ರವಾಗಿಯೇ ನನ್ನ ಕ್ರಿಕೆಟ್ ನನ್ನ ಶಿಕ್ಷಣದ ದಾರಿಗೆ ಹಾಗೂ ನನ್ನ ಶಾಲೆಯ ಹಾಜರಾತಿಗೆ ತೊಡಕಾಗಬಹುದೆಂಬ  ಶಂಕೆ ವ್ಯಕ್ತಪಡಿಸುತ್ತಾ, ಕ್ರಿಕೆಟ್ ಸರಣಿಗೆ  ಕಳುಹಿಸದೇ ಇರುವ ನಿರ್ಧಾರವನ್ನು ತಿಳಿಸಿದರು. ಅಂತೆಯೇ ಅವರ ಮುಂದಿನ ಸಲಹೆಯನ್ನೂ ಕೇಳಿದರು. ಎಲ್ಲವನ್ನೂ ಸಹನೆಯಿಂದ ಕೇಳಿಸಿಕೊಂಡ ಫಾದರ್ ಕೊಹಿಲೋ, “ನಿಮ್ಮ ಮಗನ ಶಿಕ್ಷಣದ ವಿಷಯ ನನಗೆ ಬಿಟ್ಟು ಅವನನ್ನು ಕ್ರಿಕೆಟ್ ಆಡಲು ಬಿಡಿ, ಒಂದು ದೊಡ್ಡ ಸಾಹಸಕ್ಕೆ ಅವನು ಮುಂದಾಗಿದ್ದಾನೆ, ನಾವು ಅವನನ್ನು ಬೆಂಬಲಿಸೋಣಎಂದರು. ನಾನಂದು ಕೋಣೆಯಲ್ಲಿ ಸಂತೋಷದಿಂದ ಜಿಗಿದೆ ಎಂಬ ನೆನಪು ಇದೆ. ಅಂದೇನಾದರೂ ನನ್ನ ಮುಖ್ಯೋಪಾಧ್ಯಾಯರು ನನ್ನ ಪೋಷಕರ ಮಾತಿಗೆ ಒಪ್ಪಿದ್ದರೆ, ನಾನು ವೃತ್ತಿ ಕ್ರಿಕೆಟ್ ಆಡುವುದನ್ನು ಬಿಟ್ಟು, ಒಳ್ಳೆಯ ಅಂಕಗಳೊಂದಿಗೆ ಇನ್ಯಾವುದೋ ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತಿದ್ದೆ. ಒಮ್ಮೊಮ್ಮೆ ಬಯಸದ ಕಡೆಗಳಿಂದ ಬರುವ ಬೆಂಬಲವೇ ನಮಗೆ ದೊಡ್ಡ ತಿರುವಾಗುತ್ತದೆ ಎಂಬುದನ್ನು ನಾನು ಅಂದು ಅರಿತುಕೊಂಡೆ.

ಗೆಳೆಯರಿಂದ ನೋಟ್ಸ್ ಗಳನ್ನು ತೆಗೆದುಕೊಂಡು , ಕೊನೆಯ ಸಮಯದಲ್ಲಿ ಅವಸವಸರವಾಗಿ ಶಾಲಾ ಹಾಗೂ ಕಾಲೇಜು ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಾ, ಕ್ರಿಕೆಟ್ ಆಟಗಾರನಾಗಿ ಬೆಳೆಯುತ್ತಾ ಬಂದೆ. ಸಮಯದಲ್ಲಿ ಅನೇಕ ಲೀಗ್ ಹಾಗೂ ಕಿರಿಯ ಟೋರ್ನಿಗಳನ್ನು ಪುಟಿದೇಳುವ ಪಿಚ್ಚುಗಳ ಮೇಲೆ ಆಡುತ್ತಿದ್ದೆವು. ದೇಶದ ಉದ್ದಗಲ್ಲಕ್ಕೂ ರೈಲುಗಳಲ್ಲಿ ಪ್ರಯಾಣ ಮಾಡುತ್ತಾ, ಒಂದೇ ಕೋಣೆಯಲ್ಲಿ 5,6 ಜನ ಇರುತ್ತಿದ್ದೆವು. ಇಡೀ ದೇಶವನ್ನು ಹಾಗೂ ವೈವಿಧ್ಯಮಯ ಜನವನ್ನು ನೋಡುವ ಒಳ್ಳೆಯ ಅವಕಾಶ ನಮಗೆ ಸಿಕ್ಕಿತು. ಕಠಿಣ ಅಭ್ಯಾಸ ಹಾಗೂ ಕಿರಿಯರ ಸರಣಿಗಳಲ್ಲಿನ ನನ್ನ ಸಾಧನೆಯಿಂದಾಗಿ ರಾಜ್ಯಕ್ಕೆ ಆಡುವ ಅವಕಾಶವೂ ದೊರಕಿತು. ಅದು ನನಗೆ ಅರಿವಾಗುವ ಮೊದಲೇ ಕರ್ನಾಟಕ ರಾಜ್ಯಕ್ಕೆ ರಣಜಿ ಪಂದ್ಯಗಳನ್ನೂ ಸಹಾ ಆಡಲು ಪ್ರಾರಂಭಿಸಿದ್ದೆ. ನನಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿಯೇ ಬಳಸಿಕೊಂಡೆ ಮತ್ತು ಅತ್ತ್ಯುತ್ತಮ ಎನ್ನಬಹುದಾದ ಬೌಲರ್ ಹಾಗೂ ಎಸೆತಗಳನ್ನು ಎದುರಿಸುವ ಅವಕಾಶವೂ ರಾಷ್ಟ್ರೀಯ ಪಂದ್ಯಗಳಲ್ಲೇ ದೊರಕಿತು.

 ಅಂತರರಾಷ್ಟ್ರೀಯ ವೇಗದ ಬೌಲರಗಳನ್ನು ಎದುರಿಸುವ ಅವಕಾಶ ಅಷ್ಟಾಗಿ ಸಿಗದ ಕಾರಣ ನನ್ನದೇ ಆದ ಭಿನ್ನವಾದ ತಯಾರಿಗಳನ್ನು ಮಾಡುವ ನಿರ್ಧಾರ ಮಾಡಿದೆ. ನನ್ನ ಸಹಾ ಆಟಗಾರರಿಗೆ ೧೫ ಗಜಗಳಷ್ಟು ದೂರದಿಂದ ನೀರಲ್ಲಿ ನೆನಸಿದ ಟೆನಿಸ್ ಬಾಲನ್ನು ಎಸೆಯಲು ವಿನಂತಿಸುತ್ತಿದ್ದೆ. ಮೂಲಕ ಅತ್ತ್ಯುತ್ತಮ ವೇಗದ  ಬೌಲರ್ ಗಳನ್ನು ಎದುರಿಸುವ ಕೃತಕ ಸನ್ನಿವೇಶವನ್ನು ಸೃಷ್ಟಿಸಿಕೊಂಡು ಅದಕ್ಕೆ ತಯಾರಾದೆ. ನನ್ನ ತಯಾರಿಯನ್ನು ಅಚ್ಚರಿ ಹಾಗೂ ಗೊಂದಲಗೊಂಡ ಕಣ್ಣುಗಳು ಗಮನಿಸಿದವು ಮತ್ತು ಅನೇಕರಿಗೆ ಇದು ಸಮಯ ವ್ಯರ್ಥ ಕಸರತ್ತಾಗಿತ್ತು. ಆದರೆ ನನಗೆ ಮಾತ್ರ ಇದು ಅವಶ್ಯಕವಾದ ತಯಾರಿಯಾಗಿತ್ತು. ಅಷ್ಟರಲ್ಲಾಗಲೇ ರಾಷ್ಟ್ರೀಯ ತಂಡದಲ್ಲಿನ್ನ ಸಂಭವನೀಯರ ಪಟ್ಟಿಯಲ್ಲಿ ನನ್ನ ಹೆಸರು ಕೇಳಿ ಬರುತ್ತಿತ್ತು. ಭಾರತ ೧೯ ವರ್ಷದೊಳಗಿನವರ ತಂಡಕ್ಕೆ ನಾಯಕನೂ ಆಗಿದ್ದೆ. ಎಲ್ಲೇ ಹೋದರೂ, “ಭಾರತ ತಂಡದಲ್ಲಿ ಆಡುವುದು ಯಾವಾಗ”? ಎಂಬ ಪ್ರಶ್ನೆ ಎದುರಾಗುತ್ತಿತ್ತು. ಅದು ನನ್ನ  ನಿಯಂತ್ರಣದಲ್ಲಿ ಇರದ ಸಂಗತಿಯಾದರೂ ನನ್ನ ಜೀವನ ಹಾಗೂ ಆಟದ ಮೇಲೆ ಪ್ರಶ್ನೆ ಪ್ರಭಾವ ಬೀರಲಾರಂಭಿಸಿತು. ನಾನು ದೇಶಕ್ಕೆ ಆಡುವ ಮೊದಲು ಆಗಾಗಲೇ ಐದು ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದೆ. ಇದರಿಂದ  ನಿಧಾನವಾಗಿ ಹತಾಶೆಗೊಳಗಾದೆ. ನನಗಿನ್ನೂ ನೆನಪಿದೆ, ನನ್ನ ಕೈನಟಿಕ್ ಹೋಂಡ ಬೈಕಿನ ಮೇಲೊಂದು ಬರಹ ಅಂಟಿಸಿಕೊಂಡೆ. ದೇವರ ವಿಳಂಬಗಳು ದೇವರ ನಿರಾಕರಣೆಗಳಲ್ಲಎಂಬರ್ಥದ ಸ್ಟಿಕರ್ ಅದು. ಪ್ರತಿದಿನ ನನ್ನ ಕ್ರಿಕೆಟ್ ಕಿಟ್ ಅನ್ನು ಬೈಕಿನ ಮೇಲೆ ಇಟ್ಟು ಅದನ್ನು ಪ್ರಾರಂಭಿಸುವಾಗಲೆಲ್ಲಾ ನೆನಪಿಸುವಂತೆ ಹಾಗೂ ಭರವಸೆ, ವಿಶ್ವಾಸ  ಕಳೆದು ಕೊಳ್ಳದಂತೆ ನೆನಪಿಸಲು ಅದನ್ನು ಅಂಟಿಸಿಕೊಂಡಿದ್ದೆ.

ಈಗ ಹಿಂದಿರುಗಿ ನೋಡಿದಾಗದೇಶೀಯ ಕ್ರಿಕೆಟ್ ನನಗೆ ನೀಡಿದ ಕೊನೆಯ ಪಾಠಗಳು ಇಲ್ಲದಿದ್ದರೆ, ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ನನಗೆ ಲಭಿಸಿದ ಯಶಸ್ಸಿಗೆ ನಾನು ಸಿದ್ಧನಾಗಿರುತ್ತಿರಲಿಲ್ಲ ಎನಿಸುತ್ತದೆ. ಸ್ಪಿನ್, ವೇಗ, ಸುಲಭದ, ಕಷ್ಟದ ಯಾವುದೇ ಪರಿಸ್ಥಿತಿಗೂ ನಾನು ಸಿದ್ಧನಿದ್ದೆರಣಜಿಯಲ್ಲಿ ನನಗೆ ಅನುಭವಿ ಸ್ಪಿನ್ನರ್ ಗಳನ್ನು ಎದುರಿಸಲು ಸಿಕ್ಕ ಅವಕಾಶ ವಾರ್ನ್ , ಮುರಳೀಧರನ್ ರಂತವರನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯಕವಾಯಿತುಟಿನ್ನಿಸ್ ಬಾಲುಗಳಲ್ಲಿ ನಾನು ಮಾಡಿದ ಅಭ್ಯಾಸ ವ್ಯರ್ಥವಾಗದೆ, ಮ್ಯಾಕ್ ಗ್ರಾತ್, ಅಕ್ರಮ್ ಹಾಗೂ ಡೋನಲ್ಡ್ ರವರನ್ನು ಕಷ್ಟದ ಪಿಚ್ ಗಳಲ್ಲಿ ಎದುರಿಸಲು ಸಹಾಯಕ್ಕೆ ಬಂತು. ಯುವಕರನ್ನು ಮಾತನಾಡಿಸುವಾಗ, ನನ್ನ ಜೀವನದ ಹಂತವನ್ನು ಮೋಹಕವಾದ ಚೈನೀಸ್ ಬಿದಿರಿಗೆ ಹೋಲಿಸಲು ಇಷ್ಟ ಪಡುತ್ತೇನೆ.
(ಮುಂದುವರಿಯುತ್ತದೆ)