Saturday 20 October 2018

ಮಾನವನಾಗಿ ಹುಟ್ಟಿದ್ ಮೇಲೆ ಏನೇನು ಕಂಡಿ? - ಭಾಗ 2

ಕಳೆದ ಒಂದಷ್ಟು ದಿನಗಳಿಂದ ಕೋರ್ಟ್ ತೀರ್ಪುಗಳದ್ದೇ ಸುದ್ದಿ. ಪ್ರಸಿದ್ಧ ದೇವಾಲಯಕ್ಕೆ ಮಹಿಳೆಯರ ಪ್ರವೇಶದಿಂದ ಹಿಡಿದು ಸಹಜ-ಅಸಹಜ, ನೈತಿಕ-ಅನೈತಿಕ, ಧಾರ್ಮಿಕ-ಸಾಮಾಜಿಕ ನಡುವಿನ ತೆಳು ಗೆರೆಯ ವ್ಯಾಖ್ಯಾನವನ್ನು ಸಂವಿಧಾನಾತ್ಮಕವಾಗಿ ನೀಡಿ ಕೊಟ್ಟಿರುವ ತೀರ್ಪುಗಳು ಚರ್ಚೆಗೆ ಗ್ರಾಸವಾಗಿದೆ. ಚರ್ಚೆಗಳು ಪ್ರತಿಭಟನೆಗಳು ಕಾವೇರುತ್ತಿರುವಂತೆ ಬೆಂಗಳೂರಿಗರಿಗೆ ಸಂತಸ ತರುವ 2 ಆದೇಶಗಳು ಸಹ ಹೊರಬಿದ್ದಿವೆ. ಒಂದು ಬೆಂಗಳೂರನ್ನು ಫ್ಲೆಕ್ಸ್ ಮುಕ್ತವಾಗಿ ಮಾಡುವುದು, ಮತ್ತೊಂದು ಇಂತಿಷ್ಟು ದಿನಗಳಲ್ಲಿ ಬೆಂಗಳೂರಿನ ಎಲ್ಲಾ ರಸ್ತೆಗಳು ಗುಂಡಿ ಮುಕ್ತವಾಗಬೇಕೆನ್ನುವುದು.

ಯಾವುದೇ ತೀರ್ಪು ಬಂದಾಗ ಒಂದಷ್ಟು ಜನಕ್ಕೆ ನಷ್ಟ ನೋವು ಸಹಜ.  ಫ್ಲೆಕ್ಸುಗಳನ್ನೇ ನಂಬಿಕೊಂಡಿದ್ದ ಕಾರ್ಮಿಕ ವರ್ಗ, ಮಾಲೀಕರು, ಉದ್ಯಮಕ್ಕೆ ತೀರ್ಪು ನುಂಗಲಾರದ ತುತ್ತಾಗಿದೆ.  ಅಂತೆಯೇ ಗುಂಡಿಗಳು ಮುಚ್ಚಬೇಕು ಎಂದಾಗ ಯಾರಿಗೆ ನಷ್ಟ, ಅಸಹನೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಬಹುತೇಕರಿಗೆ ಈ ಎರಡು ತೀರ್ಪುಗಳು ಸಂತೋಷ ತಂದಿರುವುದು ನಿಜವೇ. ಈ  ಲಾಭ-ನಷ್ಟಗಳ ಒಂದು ಸಣ್ಣ ಅವಲೋಕನ ಇಲ್ಲಿದೆ.

ಮೊದಲಿಗೆ ಈ ರಸ್ತೆಗಳ ಗುಂಡಿಗಳ ವಿಷಯಕ್ಕೆ ಬರೋಣ. ಒಬ್ಬ ಚಿಂತಕನ ಪ್ರಕಾರ ’ಜೀವನ ಒಂದು ಪಯಣ, ರಸ್ತೆ ಅಥವಾ ದಾರಿ ಎಷ್ಟೇ ಕೆಟ್ಟದಾಗಿದ್ದರೂ ಸಾಗಲೇಬೇಕು’. ಮೇಲ್ನೋಟಕ್ಕೆ ಒಂದು ತಾತ್ವಿಕ ಚಿಂತನೆ ಎಂಬಂತೆ ಕಂಡರೂ  ಬೆಂಗಳೂರಿಗರ ಪಾಲಿಗೆ ಅದು ವಾಸ್ತವವೇ. ಇನ್ನೊಬ್ಬ ಚಿಂತಕರು ಉದ್ಘರಿಸುತ್ತಾರೆ, ’ಅಹಾ ಅದೆಷ್ಟು ದಾರಿಗಳು, ಅದೆಷ್ಟು ಆಯ್ಕೆಗಳು, ಅದೆಷ್ಟು ತಪ್ಪುಗಳು”. ಈ ಹೇಳಿಕೆಯ ಅರ್ಥ, ಹಿನ್ನೆಲೆ ಬೇರೆ, ಅದನ್ನು ಈ ರಸ್ತೆಗಳನ್ನು ವಹಿಸಿಕೊಂಡಿರುವ ಕಾಂಟ್ರಾಕ್ಟರಗಳ ಬಗ್ಗೆ ಎಂದು ಭಾವಿಸಬಾರದು. ಆ ನಿಟ್ಟಿನಲ್ಲಿ ಯೋಚನೆ ಮಾಡಿದರೆ ಆ ರೀತಿ   ಅರ್ಥವಾಗುತ್ತದೆ ಅಷ್ಟೇ.

“ರಸ್ತೆಗಳು ದೇಶದ ಜೀವನಾಡಿಗಳು, ಬೆನ್ನೆಲುಬು” ಎಂಬ ಮಾತಿದೆ. ಆದರೆ ನಮ್ಮ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸುವಾಗ ಅಥವಾ ನಡೆದುಕೊಂಡು ಹೋಗುವಾಗ ನಾಡಿ ಮಿಡಿತ ಒಂದಷ್ಟು ಏರುಪೇರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿನ ಗುಂಡಿಗಳು ಒಮ್ಮೊಮ್ಮೆ ಅದೆಷ್ಟು ಆಳವಾಗಿರುತ್ತದೆ ಎಂದರೆ ಅವುಗಳಲ್ಲಿ ಇಳಿದ ಮೇಲೆ ಬೆನ್ನೆಲುಬು ಮತ್ತೆ ಸಹಜ ಸ್ಥಿತಿಗೆ ಹಿಂದಿರುಗುವುದು ಕಷ್ಟವೇ. 

ಹನಿಗವನ ಒಂದರಲ್ಲಿ ಪತಿಯನ್ನು ಕಂಡು ಪತ್ನಿಯು ಕೇಳುತ್ತಾಳೆ “ನಡೆಯಲಿಲ್ಲ ಓಡಲಿಲ್ಲ ಗಾಡಿಯಲ್ಲಿ ಬಂದರೂ ಇಷ್ಟೊಂದು ಸುಸ್ತೇ? ಗಂಡ ಹೇಳುತ್ತಾನೆ “ಹೌದೇ ಮಾರಾಯ್ತಿ, ಹಾಗಿದೆ ನಮ್ಮ ರಸ್ತೆ”. ಇದು ಇದು ನಮ್ಮೆಲ್ಲರದೂ ಅವಸ್ಥೆ. ಹಾಡೊಂದರಲ್ಲಿ “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ? ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ” ಎಂಬ ಸಾಲಿದೆ. ಬೆಂಗಳೂರಿಗರಿಗೆ “ಬದುಕೋದಾದ್ರೆ ನೋಡಿಕೊಂಡು ಹೋಗು ನೂರಾರು ಗುಂಡಿ” ಎಂದು ಬದಲಾಯಿಸಬೇಕಾಗುತ್ತದೆ.

ಮಾನ್ಯ ನ್ಯಾಯಾಲಯವೇನೋ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ಎಂದು ಆದೇಶ ನೀಡಿದೆ. ಆದರೆ ಎಷ್ಟೋ ಕಡೆ ರಸ್ತೆಗಳಲ್ಲಿ ಗುಂಡಿಯ ಬದಲು ಗುಂಡಿಗಳ ನಡುವೆ ಅಲ್ಪಸ್ವಲ್ಪ ರಸ್ತೆ ಇದೆ. “ಅಲ್ಲಿ ರಸ್ತೆ ಮಾಡಿರಿ” ಎಂಬ ಆದೇಶ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಬೆಂಗಳೂರಿನ ಗುಂಡಿಗಳ ಹೆಚ್ಚುಗಾರಿಕೆ ಎಂದರೆ ಅದು ನಮಗೆ ಬಯಾಲಜಿ, ಫಿಸಿಕ್ಸ್, ಮೆಕ್ಯಾನಿಕಲ್ ಜ್ಞಾನವನ್ನು ನಮಗೆ ಅರಿವಿಲ್ಲದಂತೆ ತಿಳಿಸಿಕೊಡುತ್ತದೆ.
ಮೊನ್ನೆ ಮಗನ ಫಿಸಿಕ್ಸ್ ಪುಸ್ತಕದಲ್ಲಿ ಎನರ್ಜಿಯ ಬಗೆಗಿನ ಪಾಠದಲ್ಲಿ ಒಂದು ವಾಹನ ಬೆಟ್ಟವನ್ನು ಏರುವಾಗ, ಏರಿದ ಮೇಲೆ ಹಾಗೂ ಇಳಿಯುವಾಗ ಹೊರಡಿಸುವ ಶಕ್ತಿಯ ಸ್ಥಿತಿಯ ಬಗ್ಗೆ  ವಿವರಣೆ  ಇತ್ತು. ಬೆಟ್ಟಗಳನ್ನು ನೋಡದ ಮಕ್ಕಳು ಅದನ್ನೇ ರಸ್ತೆಯಲ್ಲಿನ ಗುಂಡಿಯ ಒಳಗೆ ವಾಹನ ಇಳಿದಾಗ, ಇಳಿದ ಮೇಲೆ, ಮೇಲೆ ಬರುವಾಗ ಎಂದು ಅರ್ಥ ಮಾಡಿಕೊಂಡರೆ  ಫಿಸಿಕ್ಸ್ ಹೆಚ್ಚು ಅರ್ಥವಾಗುತ್ತದೆ. 

ನಮ್ಮ ದೇಹದಲ್ಲಿನ ಮೂಳೆಗಳು, ಕೀಲುಗಳ ಬಗ್ಗೆ ಪೂರ್ಣ ಪರಿಚಯವನ್ನು ನಮ್ಮ ರಸ್ತೆಗಳಲ್ಲಿನ ಗುಂಡಿಗಳು ಮಾಡುತ್ತವೆ. ಬೀಳದಿದ್ದರೂ ಒಂದು ಗುಂಡಿಗೆ ಇಳಿದಾಕ್ಷಣ ಜುಮ್ಮೆನ್ನುವ ಮೂಳೆಗಳು ಕೀಲುಗಳ ಮೂಲಕ ಜೀವಶಾಸ್ತ್ರದ ಸಣ್ಣ ಪರಿಚಯವಾಗುತ್ತದೆ. ಇನ್ನೂ ನಾವು ಓಡಿಸುವ ವಾಹನದ ಶಾಕ್ ಅಬ್ಸರವ್‌ಗಳು ಸೇರಿದಂತೆ ಪ್ರತಿ ಬಿಡಿ ಭಾಗಗಳು ಎಚ್ಚೆತ್ತು ರೋಮಾಂಚನಗೊಳ್ಳುವ ಪ್ರಕ್ರಿಯೆಯನ್ನು ಗುಂಡಿಗಳು ಪ್ರೇರೇಪಿಸುತ್ತಾ ನಮಗೆ ಮೆಕ್ಯಾನಿಕಲ್ ಪಾಠದ ಒಂದು ಅಧ್ಯಾಯವನ್ನು ತಿಳಿಸಿಕೊಡುತ್ತದೆ.

ಚಂದ್ರನ ಮೇಲೆ, ಮಂಗಳ ಗ್ರಹದ ಮೇಲೆ ನೆಲವು ಹೇಗಿರುತ್ತದೆ ಎಂಬ ಪರಿಚಯಕ್ಕೂ ಈ ನಮ್ಮ ಗುಂಡಿಯುತ ರಸ್ತೆಗಳು ಸಾಕ್ಷಿ. ಮಳೆ ನೀರು ಶೇಖರಣೆ, ಸಣ್ಣ ಕೆರೆಗಳ ನಿರ್ಮಾಣದಲ್ಲಿ ಕರ್ನಾಟಕ ನೆರೆ ರಾಜ್ಯಗಳಿಗೆ ಹೋಲಿಸಿದರೆ ಎಂದಿಗೂ ಹಿಂದೆ ಎಂಬ ಆಪಾದನೆಯನ್ನು ಸುಳ್ಳು ಮಾಡೋ ನಿಟ್ಟಿನಲ್ಲಿ ಗುಂಡಿಗಳಲ್ಲಿ ಗ್ಯಾಲೆನ್ ಗಟ್ಟಲೆ ನೀರನ್ನು ಶೇಖರಿಸಿ ಕೊಂಡಿದ್ದವು. ಅವೆಲ್ಲದಕ್ಕೂ ಈಗಿನ ಕೋರ್ಟಿನ ತೀರ್ಪಿನ ಕಾರಣದಿಂದಾಗಿ ಸಂಚಕಾರ ಉಂಟಾಗಿದೆ.

ಇನ್ನೂ ಈ ಗುಂಡಿಗಳು ಅರ್ಥಶಾಸ್ತ್ರವನ್ನು ಸಹ ನಮಗೆ ಕಲಿಸಿಕೊಡುತ್ತದೆ. ಗುಂಡಿಯ ಆಳ ಅಗಲದ ಮೇಲೆ ನಾವು ಅದನ್ನು ತಯಾರಿಸಿದ ಕಾಂಟ್ರಾಕ್ಟರಿನ  ಆರ್ಥಿಕತೆಯ ಅಳತೆ ಮಾಡಬಹುದು. ರಸ್ತೆಯ ಮೇಲ್ಪದರ ತೆಳುವಾದಷ್ಟೂ ಅವರ ಆರ್ಥಿಕತೆಯ ಹೆಚ್ಚುತ್ತಾ ಹೋಗುತ್ತದೆ. 

ಹೀಗೆ ರಸ್ತೆಯ ಗುಂಡಿ ಎನ್ನುವುದು ಕೇವಲ ಒಂದು ಪಿಡುಗು ಮಾತ್ರವಲ್ಲದೆ ಅದೊಂದು ದೊಡ್ಡ ಅಧ್ಯಯನದ ವಿಷಯವೇ ಆಗಿದೆ. ಎಷ್ಟೋ ಬಾರಿ ನಮ್ಮ ಅಧ್ಯಯನಕ್ಕೆ ಸಂಬಂಧಪಟ್ಟ ಮಾಹಿತಿಗಳು ಸಿಗುವುದೇ ಇಲ್ಲ. ಅದೇ ರಸ್ತೆ ಗುಂಡಿಯನ್ನು ಅಧ್ಯಯನದ ವಿಷಯ ಮಾಡಿಕೊಂಡಿರುವವರಿಗೆ ಪ್ರತಿ ರಸ್ತೆಯಲ್ಲೂ, ಪ್ರತಿ ತಿರುವಿನಲ್ಲೂ ಪ್ರತಿ ಹೆಜ್ಜೆಯಲ್ಲೂ ಮಾಹಿತಿಗಳು ಭರ್ತಿಯಾಗಿ ಸಿಗಬಲ್ಲವು.

ಇನ್ನು ಫ್ಲೆಕ್ಸ್ ಗಳದೇ ಒಂದು ಲೋಕ. ಫ್ಲೆಕ್ಸ್ ಉದ್ಯಮದಲ್ಲಿದ್ದವರಿಗೆ ತೀರ್ಪು ಬರಸಿಡಿಲು. ಅದರಲ್ಲೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆ ದೊಡ್ಡ ಯಂತ್ರಗಳನ್ನು ಕಂತಿನ ಲೆಕ್ಕದಲ್ಲಿ ತಂದವರ ಪಾಡು ಯಾರಿಗೂ ಬೇಡ. ಜೊತೆಗೆ ಫ್ಲೆಕ್ಸ್ ಉದ್ಯಮದಲ್ಲಿ ತೊಡಗಿಕೊಂಡಿರುವ ಡಿಸೈನರ‍್ ಗಳು, ಕಟ್ಟುವ ಕಾರ್ಮಿಕರು, ಚಾಲಕರು ಎಲ್ಲರದೂ ಒಂದು ರೀತಿಯ ತ್ರಿಶಂಕು ಸ್ಥಿತಿ. ಬಿಬಿಎಂಪಿ ಹಾಗೂ ನ್ಯಾಯಾಲಯ ಮಾತ್ರ ಸಾಕಷ್ಟು ಮೊದಲೇ ಅವರಿಗೆಲ್ಲಾ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ಹೇಳುತ್ತದೆ. ವಾದ-ವಿವಾದಗಳು ಏನೇ ಇರಲಿ ಈ ಪರಿಸ್ಥಿತಿ ಬರಲು ಕಾರಣವಾದರೂ ಏನು?

ಬೆಂಗಳೂರು ಹಸಿರು ನಗರಿ ಎಂದೇ ಪ್ರಸಿದ್ಧ. ಹಸಿರು ಮಾತ್ರವೇಕೆ ಬಣ್ಣ ಬಣ್ಣದ ನಗರಿಯಾಗಲಿ ಎಂಬಂತೆ ಫ್ಲೆಕ್ಸುಗಳು ಬೆಂಗಳೂರಿನ ಮುಖಕ್ಕೆ ರಾಚುವಂತೆ ಈ ಇತ್ತೀಚಿನ ವರ್ಷಗಳಲ್ಲಿ ನಮ್ಮ ರಸ್ತೆಗಳಲ್ಲಿ ರಾರಾಜಿಸಿದವು. ಒಂದು ದೊಡ್ಡ ಫಲಭರಿತ ಉದ್ಯಮವಾಗಿ ಬೆಳೆದು ನಿಂತು ಬೆಂಗಳೂರಿನ ಮೂಲ ಸ್ವರೂಪವನ್ನೇ ಬದಲಾಯಿಸಿತು. ಒಂದು ಪರವಾನಗಿ, ಕಾಂಟ್ರ್ಯಾಕ್ಟ್ ಅದರ ಜೊತೆಗೆ ಸಹಜವೆಂಬಂತೆ ಭ್ರಷ್ಟಾಚಾರ, ಪರಿಸರದ ಕಾಳಜಿ ಇಲ್ಲದ ಮನಸ್ಸುಗಳೆಲ್ಲ ಸೇರಿಕೊಂಡು ಬೇಕು-ಬೇಡ ಎಲ್ಲದರ ರಾಶಿಯನ್ನು ಫ್ಲೆಕ್ಸುಗಳ ಮೂಲಕ ಬೆಂಗಳೂರನ್ನು ಆಕ್ರಮಿಸಿಕೊಂಡಿತು.  

(ಮುಂದುವರೆಯುತ್ತದೆ)

ಮಾನವನಾಗಿ ಹುಟ್ಟಿದ್ ಮೇಲೆ ಏನೇನು ಕಂಡಿ? - ಭಾಗ 1

ಕಳೆದ ಒಂದಷ್ಟು ದಿನಗಳಿಂದ ಕೋರ್ಟ್ ತೀರ್ಪುಗಳದ್ದೇ ಸುದ್ದಿ. ಪ್ರಸಿದ್ಧ ದೇವಾಲಯಕ್ಕೆ ಮಹಿಳೆಯರ ಪ್ರವೇಶದಿಂದ ಹಿಡಿದು ಸಹಜ-ಅಸಹಜ, ನೈತಿಕ-ಅನೈತಿಕ, ಧಾರ್ಮಿಕ-ಸಾಮಾಜಿಕ ನಡುವಿನ ತೆಳು ಗೆರೆಯ ವ್ಯಾಖ್ಯಾನವನ್ನು ಸಂವಿಧಾನಾತ್ಮಕವಾಗಿ ನೀಡಿ ಕೊಟ್ಟಿರುವ ತೀರ್ಪುಗಳು ಚರ್ಚೆಗೆ ಗ್ರಾಸವಾಗಿದೆ. ಚರ್ಚೆಗಳು ಪ್ರತಿಭಟನೆಗಳು ಕಾವೇರುತ್ತಿರುವಂತೆ ಬೆಂಗಳೂರಿಗರಿಗೆ ಸಂತಸ ತರುವ 2 ಆದೇಶಗಳು ಸಹ ಹೊರಬಿದ್ದಿವೆ. ಒಂದು ಬೆಂಗಳೂರನ್ನು ಫ್ಲೆಕ್ಸ್ ಮುಕ್ತವಾಗಿ ಮಾಡುವುದು, ಮತ್ತೊಂದು ಇಂತಿಷ್ಟು ದಿನಗಳಲ್ಲಿ ಬೆಂಗಳೂರಿನ ಎಲ್ಲಾ ರಸ್ತೆಗಳು ಗುಂಡಿ ಮುಕ್ತವಾಗಬೇಕೆನ್ನುವುದು.

ಯಾವುದೇ ತೀರ್ಪು ಬಂದಾಗ ಒಂದಷ್ಟು ಜನಕ್ಕೆ ನಷ್ಟ ನೋವು ಸಹಜ.  ಫ್ಲೆಕ್ಸುಗಳನ್ನೇ ನಂಬಿಕೊಂಡಿದ್ದ ಕಾರ್ಮಿಕ ವರ್ಗ, ಮಾಲೀಕರು, ಉದ್ಯಮಕ್ಕೆ ತೀರ್ಪು ನುಂಗಲಾರದ ತುತ್ತಾಗಿದೆ.  ಅಂತೆಯೇ ಗುಂಡಿಗಳು ಮುಚ್ಚಬೇಕು ಎಂದಾಗ ಯಾರಿಗೆ ನಷ್ಟ, ಅಸಹನೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಬಹುತೇಕರಿಗೆ ಈ ಎರಡು ತೀರ್ಪುಗಳು ಸಂತೋಷ ತಂದಿರುವುದು ನಿಜವೇ. ಈ  ಲಾಭ-ನಷ್ಟಗಳ ಒಂದು ಸಣ್ಣ ಅವಲೋಕನ ಇಲ್ಲಿದೆ.

ಮೊದಲಿಗೆ ಈ ರಸ್ತೆಗಳ ಗುಂಡಿಗಳ ವಿಷಯಕ್ಕೆ ಬರೋಣ. ಒಬ್ಬ ಚಿಂತಕನ ಪ್ರಕಾರ ’ಜೀವನ ಒಂದು ಪಯಣ, ರಸ್ತೆ ಅಥವಾ ದಾರಿ ಎಷ್ಟೇ ಕೆಟ್ಟದಾಗಿದ್ದರೂ ಸಾಗಲೇಬೇಕು’. ಮೇಲ್ನೋಟಕ್ಕೆ ಒಂದು ತಾತ್ವಿಕ ಚಿಂತನೆ ಎಂಬಂತೆ ಕಂಡರೂ  ಬೆಂಗಳೂರಿಗರ ಪಾಲಿಗೆ ಅದು ವಾಸ್ತವವೇ. ಇನ್ನೊಬ್ಬ ಚಿಂತಕರು ಉದ್ಘರಿಸುತ್ತಾರೆ, ’ಅಹಾ ಅದೆಷ್ಟು ದಾರಿಗಳು, ಅದೆಷ್ಟು ಆಯ್ಕೆಗಳು, ಅದೆಷ್ಟು ತಪ್ಪುಗಳು”. ಈ ಹೇಳಿಕೆಯ ಅರ್ಥ, ಹಿನ್ನೆಲೆ ಬೇರೆ, ಅದನ್ನು ಈ ರಸ್ತೆಗಳನ್ನು ವಹಿಸಿಕೊಂಡಿರುವ ಕಾಂಟ್ರಾಕ್ಟರಗಳ ಬಗ್ಗೆ ಎಂದು ಭಾವಿಸಬಾರದು. ಆ ನಿಟ್ಟಿನಲ್ಲಿ ಯೋಚನೆ ಮಾಡಿದರೆ ಆ ರೀತಿ   ಅರ್ಥವಾಗುತ್ತದೆ ಅಷ್ಟೇ.

“ರಸ್ತೆಗಳು ದೇಶದ ಜೀವನಾಡಿಗಳು, ಬೆನ್ನೆಲುಬು” ಎಂಬ ಮಾತಿದೆ. ಆದರೆ ನಮ್ಮ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸುವಾಗ ಅಥವಾ ನಡೆದುಕೊಂಡು ಹೋಗುವಾಗ ನಾಡಿ ಮಿಡಿತ ಒಂದಷ್ಟು ಏರುಪೇರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿನ ಗುಂಡಿಗಳು ಒಮ್ಮೊಮ್ಮೆ ಅದೆಷ್ಟು ಆಳವಾಗಿರುತ್ತದೆ ಎಂದರೆ ಅವುಗಳಲ್ಲಿ ಇಳಿದ ಮೇಲೆ ಬೆನ್ನೆಲುಬು ಮತ್ತೆ ಸಹಜ ಸ್ಥಿತಿಗೆ ಹಿಂದಿರುಗುವುದು ಕಷ್ಟವೇ. 

ಹನಿಗವನ ಒಂದರಲ್ಲಿ ಪತಿಯನ್ನು ಕಂಡು ಪತ್ನಿಯು ಕೇಳುತ್ತಾಳೆ “ನಡೆಯಲಿಲ್ಲ ಓಡಲಿಲ್ಲ ಗಾಡಿಯಲ್ಲಿ ಬಂದರೂ ಇಷ್ಟೊಂದು ಸುಸ್ತೇ? ಗಂಡ ಹೇಳುತ್ತಾನೆ “ಹೌದೇ ಮಾರಾಯ್ತಿ, ಹಾಗಿದೆ ನಮ್ಮ ರಸ್ತೆ”. ಇದು ಇದು ನಮ್ಮೆಲ್ಲರದೂ ಅವಸ್ಥೆ. ಹಾಡೊಂದರಲ್ಲಿ “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ? ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ” ಎಂಬ ಸಾಲಿದೆ. ಬೆಂಗಳೂರಿಗರಿಗೆ “ಬದುಕೋದಾದ್ರೆ ನೋಡಿಕೊಂಡು ಹೋಗು ನೂರಾರು ಗುಂಡಿ” ಎಂದು ಬದಲಾಯಿಸಬೇಕಾಗುತ್ತದೆ.

ಮಾನ್ಯ ನ್ಯಾಯಾಲಯವೇನೋ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ಎಂದು ಆದೇಶ ನೀಡಿದೆ. ಆದರೆ ಎಷ್ಟೋ ಕಡೆ ರಸ್ತೆಗಳಲ್ಲಿ ಗುಂಡಿಯ ಬದಲು ಗುಂಡಿಗಳ ನಡುವೆ ಅಲ್ಪಸ್ವಲ್ಪ ರಸ್ತೆ ಇದೆ. “ಅಲ್ಲಿ ರಸ್ತೆ ಮಾಡಿರಿ” ಎಂಬ ಆದೇಶ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಬೆಂಗಳೂರಿನ ಗುಂಡಿಗಳ ಹೆಚ್ಚುಗಾರಿಕೆ ಎಂದರೆ ಅದು ನಮಗೆ ಬಯಾಲಜಿ, ಫಿಸಿಕ್ಸ್, ಮೆಕ್ಯಾನಿಕಲ್ ಜ್ಞಾನವನ್ನು ನಮಗೆ ಅರಿವಿಲ್ಲದಂತೆ ತಿಳಿಸಿಕೊಡುತ್ತದೆ.
ಮೊನ್ನೆ ಮಗನ ಫಿಸಿಕ್ಸ್ ಪುಸ್ತಕದಲ್ಲಿ ಎನರ್ಜಿಯ ಬಗೆಗಿನ ಪಾಠದಲ್ಲಿ ಒಂದು ವಾಹನ ಬೆಟ್ಟವನ್ನು ಏರುವಾಗ, ಏರಿದ ಮೇಲೆ ಹಾಗೂ ಇಳಿಯುವಾಗ ಹೊರಡಿಸುವ ಶಕ್ತಿಯ ಸ್ಥಿತಿಯ ಬಗ್ಗೆ  ವಿವರಣೆ  ಇತ್ತು. ಬೆಟ್ಟಗಳನ್ನು ನೋಡದ ಮಕ್ಕಳು ಅದನ್ನೇ ರಸ್ತೆಯಲ್ಲಿನ ಗುಂಡಿಯ ಒಳಗೆ ವಾಹನ ಇಳಿದಾಗ, ಇಳಿದ ಮೇಲೆ, ಮೇಲೆ ಬರುವಾಗ ಎಂದು ಅರ್ಥ ಮಾಡಿಕೊಂಡರೆ  ಫಿಸಿಕ್ಸ್ ಹೆಚ್ಚು ಅರ್ಥವಾಗುತ್ತದೆ. 

ನಮ್ಮ ದೇಹದಲ್ಲಿನ ಮೂಳೆಗಳು, ಕೀಲುಗಳ ಬಗ್ಗೆ ಪೂರ್ಣ ಪರಿಚಯವನ್ನು ನಮ್ಮ ರಸ್ತೆಗಳಲ್ಲಿನ ಗುಂಡಿಗಳು ಮಾಡುತ್ತವೆ. ಬೀಳದಿದ್ದರೂ ಒಂದು ಗುಂಡಿಗೆ ಇಳಿದಾಕ್ಷಣ ಜುಮ್ಮೆನ್ನುವ ಮೂಳೆಗಳು ಕೀಲುಗಳ ಮೂಲಕ ಜೀವಶಾಸ್ತ್ರದ ಸಣ್ಣ ಪರಿಚಯವಾಗುತ್ತದೆ. ಇನ್ನೂ ನಾವು ಓಡಿಸುವ ವಾಹನದ ಶಾಕ್ ಅಬ್ಸರವ್‌ಗಳು ಸೇರಿದಂತೆ ಪ್ರತಿ ಬಿಡಿ ಭಾಗಗಳು ಎಚ್ಚೆತ್ತು ರೋಮಾಂಚನಗೊಳ್ಳುವ ಪ್ರಕ್ರಿಯೆಯನ್ನು ಗುಂಡಿಗಳು ಪ್ರೇರೇಪಿಸುತ್ತಾ ನಮಗೆ ಮೆಕ್ಯಾನಿಕಲ್ ಪಾಠದ ಒಂದು ಅಧ್ಯಾಯವನ್ನು ತಿಳಿಸಿಕೊಡುತ್ತದೆ.

ಚಂದ್ರನ ಮೇಲೆ, ಮಂಗಳ ಗ್ರಹದ ಮೇಲೆ ನೆಲವು ಹೇಗಿರುತ್ತದೆ ಎಂಬ ಪರಿಚಯಕ್ಕೂ ಈ ನಮ್ಮ ಗುಂಡಿಯುತ ರಸ್ತೆಗಳು ಸಾಕ್ಷಿ. ಮಳೆ ನೀರು ಶೇಖರಣೆ, ಸಣ್ಣ ಕೆರೆಗಳ ನಿರ್ಮಾಣದಲ್ಲಿ ಕರ್ನಾಟಕ ನೆರೆ ರಾಜ್ಯಗಳಿಗೆ ಹೋಲಿಸಿದರೆ ಎಂದಿಗೂ ಹಿಂದೆ ಎಂಬ ಆಪಾದನೆಯನ್ನು ಸುಳ್ಳು ಮಾಡೋ ನಿಟ್ಟಿನಲ್ಲಿ ಗುಂಡಿಗಳಲ್ಲಿ ಗ್ಯಾಲೆನ್ ಗಟ್ಟಲೆ ನೀರನ್ನು ಶೇಖರಿಸಿ ಕೊಂಡಿದ್ದವು. ಅವೆಲ್ಲದಕ್ಕೂ ಈಗಿನ ಕೋರ್ಟಿನ ತೀರ್ಪಿನ ಕಾರಣದಿಂದಾಗಿ ಸಂಚಕಾರ ಉಂಟಾಗಿದೆ.

ಇನ್ನೂ ಈ ಗುಂಡಿಗಳು ಅರ್ಥಶಾಸ್ತ್ರವನ್ನು ಸಹ ನಮಗೆ ಕಲಿಸಿಕೊಡುತ್ತದೆ. ಗುಂಡಿಯ ಆಳ ಅಗಲದ ಮೇಲೆ ನಾವು ಅದನ್ನು ತಯಾರಿಸಿದ ಕಾಂಟ್ರಾಕ್ಟರಿನ  ಆರ್ಥಿಕತೆಯ ಅಳತೆ ಮಾಡಬಹುದು. ರಸ್ತೆಯ ಮೇಲ್ಪದರ ತೆಳುವಾದಷ್ಟೂ ಅವರ ಆರ್ಥಿಕತೆಯ ಹೆಚ್ಚುತ್ತಾ ಹೋಗುತ್ತದೆ. 

ಹೀಗೆ ರಸ್ತೆಯ ಗುಂಡಿ ಎನ್ನುವುದು ಕೇವಲ ಒಂದು ಪಿಡುಗು ಮಾತ್ರವಲ್ಲದೆ ಅದೊಂದು ದೊಡ್ಡ ಅಧ್ಯಯನದ ವಿಷಯವೇ ಆಗಿದೆ. ಎಷ್ಟೋ ಬಾರಿ ನಮ್ಮ ಅಧ್ಯಯನಕ್ಕೆ ಸಂಬಂಧಪಟ್ಟ ಮಾಹಿತಿಗಳು ಸಿಗುವುದೇ ಇಲ್ಲ. ಅದೇ ರಸ್ತೆ ಗುಂಡಿಯನ್ನು ಅಧ್ಯಯನದ ವಿಷಯ ಮಾಡಿಕೊಂಡಿರುವವರಿಗೆ ಪ್ರತಿ ರಸ್ತೆಯಲ್ಲೂ, ಪ್ರತಿ ತಿರುವಿನಲ್ಲೂ ಪ್ರತಿ ಹೆಜ್ಜೆಯಲ್ಲೂ ಮಾಹಿತಿಗಳು ಭರ್ತಿಯಾಗಿ ಸಿಗಬಲ್ಲವು.

ಇನ್ನು ಫ್ಲೆಕ್ಸ್ ಗಳದೇ ಒಂದು ಲೋಕ. ಫ್ಲೆಕ್ಸ್ ಉದ್ಯಮದಲ್ಲಿದ್ದವರಿಗೆ ತೀರ್ಪು ಬರಸಿಡಿಲು. ಅದರಲ್ಲೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆ ದೊಡ್ಡ ಯಂತ್ರಗಳನ್ನು ಕಂತಿನ ಲೆಕ್ಕದಲ್ಲಿ ತಂದವರ ಪಾಡು ಯಾರಿಗೂ ಬೇಡ. ಜೊತೆಗೆ ಫ್ಲೆಕ್ಸ್ ಉದ್ಯಮದಲ್ಲಿ ತೊಡಗಿಕೊಂಡಿರುವ ಡಿಸೈನರ‍್ ಗಳು, ಕಟ್ಟುವ ಕಾರ್ಮಿಕರು, ಚಾಲಕರು ಎಲ್ಲರದೂ ಒಂದು ರೀತಿಯ ತ್ರಿಶಂಕು ಸ್ಥಿತಿ. ಬಿಬಿಎಂಪಿ ಹಾಗೂ ನ್ಯಾಯಾಲಯ ಮಾತ್ರ ಸಾಕಷ್ಟು ಮೊದಲೇ ಅವರಿಗೆಲ್ಲಾ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ಹೇಳುತ್ತದೆ. ವಾದ-ವಿವಾದಗಳು ಏನೇ ಇರಲಿ ಈ ಪರಿಸ್ಥಿತಿ ಬರಲು ಕಾರಣವಾದರೂ ಏನು?

ಬೆಂಗಳೂರು ಹಸಿರು ನಗರಿ ಎಂದೇ ಪ್ರಸಿದ್ಧ. ಹಸಿರು ಮಾತ್ರವೇಕೆ ಬಣ್ಣ ಬಣ್ಣದ ನಗರಿಯಾಗಲಿ ಎಂಬಂತೆ ಫ್ಲೆಕ್ಸುಗಳು ಬೆಂಗಳೂರಿನ ಮುಖಕ್ಕೆ ರಾಚುವಂತೆ ಈ ಇತ್ತೀಚಿನ ವರ್ಷಗಳಲ್ಲಿ ನಮ್ಮ ರಸ್ತೆಗಳಲ್ಲಿ ರಾರಾಜಿಸಿದವು. ಒಂದು ದೊಡ್ಡ ಫಲಭರಿತ ಉದ್ಯಮವಾಗಿ ಬೆಳೆದು ನಿಂತು ಬೆಂಗಳೂರಿನ ಮೂಲ ಸ್ವರೂಪವನ್ನೇ ಬದಲಾಯಿಸಿತು. ಒಂದು ಪರವಾನಗಿ, ಕಾಂಟ್ರ್ಯಾಕ್ಟ್ ಅದರ ಜೊತೆಗೆ ಸಹಜವೆಂಬಂತೆ ಭ್ರಷ್ಟಾಚಾರ, ಪರಿಸರದ ಕಾಳಜಿ ಇಲ್ಲದ ಮನಸ್ಸುಗಳೆಲ್ಲ ಸೇರಿಕೊಂಡು ಬೇಕು-ಬೇಡ ಎಲ್ಲದರ ರಾಶಿಯನ್ನು ಫ್ಲೆಕ್ಸುಗಳ ಮೂಲಕ ಬೆಂಗಳೂರನ್ನು ಆಕ್ರಮಿಸಿಕೊಂಡಿತು.  
(ಮುಂದುವರಿಯುತ್ತದೆ)