Tuesday 26 October 2010

"ಯಕ್ಕ ರಾಜ ರಾಣಿ ನನ್ನ ಕೈಯೊಳಗೆ ಹಿಡಿ" -ರಾಜಕೀಯದ ಹಾಡು

ಇತಿಚೆಗಷ್ಟೇ ಬಿಡುಗಡೆಗೊಂಡ ಬಿಡುಗಡೆಗೊ೦ಡು ಭರ್ಜರಿಯಾಗಿ ಪ್ರದರ್ಶನ ಕಾಣುತಿರುವ ಜಾಕಿ ಚಲನಚಿತ್ರ ದ "ಯಕ್ಕ ರಾಜ ರಾಣಿ ನನ್ನ ಕೈಯೊಳಗೆ ಹಿಡಿ" ಎಂಬ ಗೀತೆಗೆ ಹೊಸ ಸಾಹಿತ್ಯವನ್ನು ಬರೆಯಲಾಗಿದೆ. ಇದು ಕರ್ನಾಟಕ ರಾಜ್ಯ ರಾಜಕೀಯದ ಪ್ರಸ್ತುತ ವಿದ್ಯಮಾನದಲ್ಲಿ ರಾಜ್ಯದ ಮಾನ ಕಳೆಯುತಿರುವ ಮೂರು ಅಪವಿತ್ರ ಪಕ್ಷಗಳ ವಿಡಂಬನ ಪರಿಚಯವಾಗಿದೆ. ಈ ಕಾವ್ಯವನ್ನು "ಯಕ್ಕ ರಾಜ ರಾಣಿ ನನ್ನ ಕೈಯೊಳಗೆ ಹಿಡಿ"   ಗೀತೆ ಗೆಅನುಗುಣವಾಗಿ ಹಾಡಿಕೊಂಡು ಹೋದರೆ ಮತ್ತೂ ರುಚಿಕಟ್ಟಾಗಿರುತದೆ ಎಂದು ಭಾವಿಸುತೇವೆ.

ನಮ್ಮ ರಾಜ್ಯ ಕಮಲ ದಳ ಕೈ ಯೊಳಗೆ
ಹಿಡಿ ಮಣ್ಣು ಜನ್ರ ಬಾಯೊಳಗೆ
ರಾಜಕೀಯಕೆ ಥೂ ಅಂದು ಬಿಡು (೨)
ರಾಜ್ಯದ ಹರಾಜು ನೋಡಿಬಿಡು

ನೀತಿಯಲ್ಲಿ ದೊಡ್ಡವರು ನಿಯತ್ನಲ್ಲಿ ನೇತಾರರು
ಹೇಳಿಕೊಂಡು ಮಾಡಿದೆಲ್ಲ ದ್ರೋಹವನ್ನೇ
ಜೊತೆಲಿದವರು ಬಿಟ್ಟುಹೋದ್ರು ಪಕ್ಷವನ್ನೇ
ಮೂವತ್ತಿದ್ದರೂ ಪಕ್ಷದಲಿ
ನಡೆಯೊದ್ ಮಾತ್ರ ಮೂವರಲಿ

ಯಾರೊ ಇಲ್ಲಿ ಅಂದರ್ ಆದ್ರು
ಯಾರೊ ಇಲ್ಲಿ ಬಾಹ್ಯರ್ ಆದ್ರು (೨)
ಯಾರು ಕೇಳೋದಿಲ್ಲ ಅಂತ ಪಕ್ಷಬಿಟ್ಟು
ಇದನ್ ಕೇಳೋರಿಗೂ ಇಲ್ಲವಲ್ಲ ಮಾನಮಟ್ಟು
ಸಿಂಪಲ್ ಜನ ನಾವು ಸ್ಯಾಂಪಲ್ ಗ೦ತ ಓಟು ಕೊಟ್ಟು
ಸೀಮೆಗಿಲ್ದ ಪಕ್ಷವನ್ನು ತಂದುಬಿಟ್ವೀ
ಬರಿ ರೆಸಾರ್ಟ್ ರಾಜಕೀಯ ಮಾಡಿಬಿಟ್ರು
ಅಭಿವೃದ್ದಿ ನಮ್ಮ ಮಂತ್ರ ಎನ್ನುತಲಿ
ಅಪಾರ ಆಸ್ತಿ ಪಾಸ್ತಿ ನುಂಗಿಬಿಟ್ರು

ನಾಯಕತ್ವ ಬೇಕು ಅಂತ ನಾಯಿತರ ಕಚ್ಚಾಡ್ ಕೊಂಡು
ಗಲ್ಲಿಗೊಬ್ಬ ಲೀಡರ್ ಅಂತ ಮೆರಿತಾವ್ರೆ
ಆ ದಿಲ್ಲಿಗೋಗಿ ಚಾಡಿಯನ್ನ ಚುಚ್ಚುತಾವ್ರೆ
ಮಾತಿಗ್ಮುಂಚೆ ಪಾದಯಾತ್ರೆ ಮಾಡುತ್ತಾರೆ
ಮೈ ಕೈ ನೋವಂತ ಮಲಗ್ಬಿಡತಾರೆ

ಬಹಿರಂಗ ಸಭೆ ಮಾಡಿ ಬಡವ್ರನ್ ಮುಂದೆ ಕೂರಿಸ್ಕೊಂಡು
ಕುರಿ ಕೋಳಿ ಕಥೆಯನ್ನು ಊದುತಾರೆ
ಎಲ್ಲ ಹಗರ್ಣನು ಬಿಚ್ಚುತ್ತಿವಿ ಅನ್ನುತಾರೆ
ಹರ ಹರ ಎಂದರು ಬಿಚ್ಚೋದಿಲ್ಲ
ಮೂರು ಕಾಸಿಗೂ ಇವ್ರು ಬಾಳೋದಿಲ್ಲ 

ಇಂದ:  ಸಂತೋಷ್