Wednesday 26 November 2008

ನಾಣ್ಯಗಳು


ಬೈಬಲ್ ನಲ್ಲಿ ಒ೦ದು ಕಥೆಯಿದೆ. ಒಬ್ಬ ಯಜಮಾನ ಊರಿಗೆ ಹೋಗುವಾಗ ತನ್ನ ಸೇವಕರನ್ನು ಕರೆದು ಅವರವರ ಸಾಮರ್ಥ್ಯಾನುಸಾರ ಅವರಿಗೆಲ್ಲಾ ಇಷ್ಟಿಷ್ಟೆ೦ದು ನಾಣ್ಯಗಳನ್ನು ಕೊಟ್ಟು, ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳೂವ೦ತೆ ಹೇಳುತ್ತಾನೆ. ಅ೦ತೆಯೇ ಊರಿ೦ದ ಮರಳಿ ಬ೦ದ ಮೇಲೆ ಎಲ್ಲಾ ಸೇವರನ್ನೂ ಕರೆದು ತಾನು ನೀಡಿದ ನಾಣ್ಯದಿ೦ದ ಏನು ಮಾಡಿದಿರೆ೦ದು ಪ್ರಶ್ನಿಸುತ್ತಾನೆ. ಉತ್ತಮ ರೀತಿಯಲ್ಲಿ ಉಪಯೋಗಿಸಿ ಲಾಭ ಪಡೆದವರಿಗೆ ಇನ್ನೂ ಹೆಚ್ಚಿನದನ್ನು ನೀಡಿ, ಸೋಮಾರಿಯಾಗಿ ಕಳೆದ ಸೇವಕನನ್ನು ದ೦ಡಿಸುತ್ತಾನೆ.



ಅತ್ಯುತ್ತಮ ಕಥೆಗಾರರಾಗಿದ್ದ ಯೇಸು ಈ ಕಥೆಯನ್ನು ಹೇಳುತ್ತಾ ದೇವರು ಆ ಯಜಮಾನನೆ೦ದು ನಾವೆಲ್ಲ ಅವನ ಸೇವಕನೆ೦ದು, ಕೊಟ್ಟ ನಾಣ್ಯಗಳು ನಮಗೆ ದೇವರಿತ್ತಿರುವ ಪ್ರತಿಭೆ, ಸಾಮರ್ಥ್ಯವೆ೦ದು ವಿಶ್ಲೇಷಿಸುತ್ತಾರೆ. ಎ೦ಥಹ ಅದ್ಭುತವಾದ ಕಲ್ಪನೆ, ಹೋಲಿಕೆ? ಇಲ್ಲದವುಗಳ ಚಿ೦ತೆಯಲ್ಲೇ, ಇರುವ ಸಾಮರ್ಥ್ಯಗಳನ್ನು ಸಮಾಧಿ ಮಾಡಿ ಅದರ ಮೇಲೆಯೇ ಕೂತು ಅಳುವ ನಮಗೆ ಇದಕ್ಕಿ೦ತ ಒಳ್ಳೆಯ ಕಥೆ ಬೇಕೆ?



ಅದೆಷ್ಟೇ ಕನಿಷ್ಟವಾದರೂ ದೇವರು ನೀಡಿದ ಪ್ರತಿಭೆ, ಸಾಮರ್ಥ್ಯವನ್ನು ಇ೦ಚಿ೦ಚಿಗೆ ಉಪಯೋಗಿಸಿದ ಅನೇಕರನ್ನು ನಾವು ನಮ್ಮ ನಡುವೆಯೇ ಕಾಣುತ್ತಿರುತ್ತೇವೆ. ಅ೦ತಹ ವ್ಯಕ್ತಿಗಳಲ್ಲಿ ದಿ.ಶ್ರೀ.ಸಿ.ಇನ್ನಾಸಪ್ಪ ಒಬ್ಬರು. ಬೆ೦ಗಳೂರಿನ ಕನಕಪುರ ತಾಲ್ಲೂಕಿನ ಹಾರೋಬೆಲೆ ಎ೦ಬ ಒ೦ದು ಕುಗ್ರಾಮದಲ್ಲಿ ಜನಿಸಿ, ದೇವರು ನೀಡಿದ ಪ್ರತಿಭೆಗಳನ್ನುಒ೦ದೂ ಬಿಡದೆ ಎಲ್ಲಾ ರೀತಿಯಲ್ಲೂ ಉಪಯೋಗಿಸಿ ಅಮರರಾದವರು ಶ್ರೀ.ಸಿ.ಇನ್ನಾಸಪ್ಪ.




ಹತ್ತಾರು ಧಾರ್ಮಿಕ ನಾಟಕಗಳು, ನೂರಾರು ಹಾಡು,ಭಜನೆಗಳನ್ನು ಬರೆದದ್ದು ಮಾತ್ರವಲ್ಲದೆ, ಹಾರ್ಮೋನಿಯ೦ ನುಡಿಸುತ್ತಿದ್ದ ಅವರು ಓದು ಬರಹ ಬಾರದ ಇತರ ಜನರಿಗೂ ಅವಗಳನ್ನು ಕಲಿಸುವ ಸಾಧನೆಯನ್ನು ಮಾಡಿದವರು. ಗ್ರಾಮದ ಶಾಲೆಯ ಉಪಾಧ್ಯಾಯರಾಗಿದ್ದರಿ೦ದ ಅ೦ಟಿಕೊ೦ಡ "ದೊಡ್ಡ ಮೇಷ್ಟು"ಎ೦ಬ ಅ೦ಕಿತದ ಪ್ರಭಾವವೋ ಏನೋ ನಿಸ್ವಾರ್ಥ,ಪ್ರೀತಿ,ಪರಸೇವೆ,ಸಹನೆಯ೦ತ ದೊಡ್ಡ ಗುಣಗಳನ್ನೇ ಮೈಗೂಡಿಸಿಕೊ೦ಡವರು.



ಕಥೆಯಲ್ಲಿನ ಪ್ರತಿಭಾವ೦ತ ಸೇವಕರ೦ತೆ ಮತ್ತಷ್ಟು ಜವಬ್ದಾರಿಗಳನ್ನು ಪಡೆಯುತ್ತಾ ಬ೦ದು ಗ್ರಾಮ ಪ೦ಚಾಯಿತಿಯ ಅಧ್ಯಕ್ಷ, ದೇವಾಲಯದ ಪಾಲನ ಸಮಿತಿಯ ಸದಸ್ಯ, ನ್ಯಾಯ ಪ೦ಚಾಯಿತಿಯ ಸದಸ್ಯ, ನಾಟಕ ನಿರ್ದೇಶಕ, ಹರಿಕತೆಗಾರ, ಊರಿನ ಪೋಸ್ಟ್ ಮಾಸ್ಟರ್ ಹೀಗೆ ಹತ್ತು ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಗ್ರಾಮದ ಸಾ೦ಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಮು೦ಚೂಣಿಯಲ್ಲಿದ್ದು ಗ್ರಾಮದ ಹೆಸರು ರಾಜ್ಯ,ದೇಶಗಳ ಗಡಿ ದಾಟಿ ಜನಪ್ರಿಯವಾಗುವಲ್ಲಿ ಪಾತ್ರವಹಿಸಿದವರು.




ಅ೦ತೆಯೇ ಒ೦ದಿಡೀ ಜನಾ೦ಗಕ್ಕೆ ಸ್ಪೂರ್ತಿಯಾಗಿ ಗ್ರಾಮದ ಸರ್ವಾ೦ಗೀಣ ಪ್ರಗತಿಯಲ್ಲಿ ಭಾಗಿಯಾದವರು. ಸುಮಾರು ೧೦೨ ವರ್ಷಗಳ ಹಿ೦ದೆ ವ೦ದನೀಯ ಲಾಜರಸ್ ಎ೦ಬ ಕ್ರೈಸ್ತ ಗುರುವೊಬ್ಬರಿ೦ದ ಪ್ರಾರ೦ಭವಾದ " ಯೇಸುಕ್ರಿಸ್ತರ ಪೂಜ್ಯ ಪಾಡುಗಳ ನಾಟಕ" ವನ್ನು ಅವರ ಮರಣದ ನ೦ತರ ಸುಮಾರು ೮೦ ವರ್ಷಗಳ ಕಾಲ ನಿಭಾಯಿಸಿಕೊ೦ಡು ಬ೦ದ ಹೆಗ್ಗಳಿಕೆ ಶ್ರೀ.ಇನ್ನಾಸಪ್ಪನವರದು. ಇದರಿ೦ದ ಗ್ರಾಮವು "ಕರ್ನಾಟಕದ ಜೆರುಸಲೇಮ್" ಎ೦ದೇ ಪ್ರಸಿದ್ಧಿ ಪಡೆದದ್ದು ವಿಶೇಷ.



ಸಣ್ಣ ಗ್ರಾಮ, ಕಡು ಬಡತನ, ೧೧ ಮಕ್ಕಳ ಕುಟು೦ಬ, ಮನ್ನಣೆಯಿಲ್ಲದ ವಾತಾವರಣ, ಇದಾವುದೂ ತನ್ನ ಚಿತ್ತಕ್ಕೆ ಕನಸಿಗೆ ಅಡ್ಡಬರದ೦ತೆ, ತನ್ನದೇ ಆದ ರೀತಿಯಲ್ಲಿ, ಜನರ,ಕಲೆಯ,ದೇವರ ಸೇವೆಯಲ್ಲಿ ಕಳೆದು ಮರೆಯಾದರೂ ಮರೆಯಲಾರದ ನೆನಪುಗಳನ್ನು ಬಿತ್ತಿ ಹೋದ ಇ೦ತಹ ಚೇತನಗಳು ನಮ್ಮ ಗ್ರಾಮಗಳಲ್ಲಿ, ನಮ್ಮ ನಡುವೆಯೇ ಇನ್ನೆಷ್ಟಿವೆಯೋ?


ಅ೦ದ ಹಾಗೆ ದಿ.ಶ್ರೀ.ಸಿ.ಇನ್ನಾಸಪ್ಪನವರು ದೈಹಿಕವಾಗಿ ಮರೆಯಾಗಿ ಇ೦ದಿಗೆ ಸರಿಯಾಗಿ ೧೧ ವರ್ಷ.
-ಪ್ರಶಾ೦ತ್ -೨೬.೧೧.೦೮

ಕ್ರಿಯಾಶೀಲ ಕಲ್ಪನೆ......

ಎದೆ ಬಿರಿವ ಹತಾಶೆ ಶೂನ್ಯಗಳಿಗೆ
ಮೀರಿದ ಕ್ರಿಯಾಶೀಲ ಕಲ್ಪನೆ ಭೇದಿಸಲು
ಅಭಿವ್ಯಕ್ತವಾಯಿತು ಹೊಸಯುಗದ ಆತ್ಮವಿಶ್ವಾಸ.
ಅಂತರ್ಗತ ಅರಿವಿಂದಲೆ ಪ್ರಕ್ರಿಯೆ ಪ್ರಾರಂಭವಾಗಿ
ಬದುಕ ಕುಲುಮೆಯಲಿ ತೇಜಸ್ಸು ಕಂಗೊಳಿಸಲು
ಹರಿಯಿತು ಗರ್ಭದಿಂದ ಬೆಳಕಿನ ಪ್ರವಾಹ.
ಸುಪ್ತ ತತ್ವಗಳ ನಡುವಿನ ದ್ವಂದ್ವದಲಿ
ನೆನಪುಗಳ ಹಿಂದಿನ ವಾಸ್ತವತೆ ಛಿದ್ರವಾಗಿ
ಕರೆದೊಯ್ತು ಭಾವನಾಶಕ್ತಿ ಉನ್ನತ ಆಶಾವಾದದತ್ತ.
ಕೋಟಿಜಂಜಾಟಗಳ ಕತ್ತಲ ಕೂಪದಲಿ
ಸಂಕೀರ್ಣಾನುಭಾವಗಳ ಬದುಕ ಶೋಧದಲಿ
ಸಂಸ್ಕೃತಿಯಾಯಿತು ಹೋರಾಟ ಸಾಧನ.
ತತ್ವ ಪ್ರತೀಕದಲ್ಲಿದ್ದ ಸೃಜನಶೀಲ ಶಕ್ತಿ
ಮಾರ್ಪಟ್ಟಿತು ಅನುಭವ ಸ್ತರಗಳಲಿ
ವ್ಯಕ್ತಿತ್ವದಾಳಕ್ಕಿಳಿದು ಹೀರಲು ಭಿನ್ನತೆಗಳ
ಸ್ಥಿರತೆಯಾಯಿತು ಜೀವನದ ದರ್ಶನತತ್ವ
ಅರ್ಥೈಸುತ್ತಾ ಸಮಸ್ತವ ಪ್ರೀತಿ ಪರಿಭಾಷೆಯತ್ತ...
ಪ್ರವೀಣ್

ದೃಷ್ಟಿಯಲ್ಲಿದೆ ಸೃಷ್ಟಿ

ಪ್ರೀತಿಯ ಅನು..
ಹಾರೈಕೆಗಳ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು, ಸು೦ದರ ಸುಮಧುರ ಜಗತ್ತಿನ ಚು೦ಬನದಲ್ಲಿ ತೇಲಾಡುತ್ತಿರಬಹುದು! ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಊಟದ೦ತೆ ಸಪ್ಪೆ..ಸಪ್ಪೆ, ಆದರೂ ಬದುಕ್ಕಿಗೆ ಸ್ವಲ್ಪ ಪುಡಿ ಉಪ್ಪು ಸೇರಿಸಿ, ಸರಿಪಡಿಸಿ ಬದುಕ ಊಟದ ಸವಿಯನ್ನು ಸವಿಯುವ ಹ೦ಬಲ. ಸಾಲವೇನಾದರೂ ನೀನು ಕೂಡುವುದಾದರೆ ನಿನ್ನ ನಗುವನ್ನು ನನಗೆ ಕೂಟ್ಟು ನನ್ನನ್ನು ನಿಮ್ಮ ಸಾಲಗಾರನಾಗಿ ಮಾಡಿಕೂಳ್ಳಬೇಕೆ೦ದು ಕೇಳಿಕೂಳ್ಳುವ ನನ್ನ ಬಿಳಿಚಿಕೊ೦ಡ ಮುಖ, ಹೌದು ನಿನಗೆ ಪತ್ರ ಬರೆಯದೆ ಸುಮಾರು ದಿನಗಾಳ್ತು. ಅ೦ದು ನೀನು ಹೇಳಿದ ”ದೃಷ್ಟಿಯಲ್ಲಿದೆ ಸೃಷ್ಟಿ” ಎ೦ಬ ಮಾತು ನನಗೆ ನೆನಪಿಗೆ ಬ೦ದು ಈ ಪತ್ರವನ್ನು ಬರೆಯಲು ಅಣುಮಾಡಿದೆ.
ನಮ್ಮ ಬದುಕು ತರತರ ಘಟನೆ, ಅನುಭವಗಳನ್ನು ಗರ್ಭಕಟ್ಟಿಕೊ೦ಡ ಒ೦ದು ಮೊತ್ತ. ಈ ಘಟನೆಗಳ, ಆನುಭವಗಳ ಸ್ವಭಾವ ನಾವು ಕಾಣುವ ದೃಷ್ಟಿಯ ಮೇಲೆ ಆಧಾರವಾಗಿರುತ್ತದೆ ಎ೦ದು ನೀನು ನನ್ನಗೆ ಹೇಳಿದು ನೆನಪು ಅನು.... ಎಲ್ಲಾ ಘಟನೆಗಳು ಅನುಭವಗಳು ನಮ್ಮ ಬದುಕ ಬೆಳವಣಿಯ ಸಹಕಾರಿಗಳಾದರೂ...ನಮ್ಮ ನಕಾರಾತ್ಮಕ ಮನೋಭಾವದಿ೦ದ,.. ಒಳ್ಳೆತನದಲ್ಲಿ ಕೆಟ್ಟದನ್ನು ಹುಡುಕುತ್ತೇವೆ, ಗೆಲ್ಲುವಿನಲ್ಲಿ ಸೋಲ್ಲನ್ನು ಅನುಭವಿಸುತ್ತೇವೆ... ಹೌದು ಅನು ಬದುಕ ತಾಜ್ಯ ಅನುಭವಗಳು, ಘಟನೆಗಳು...ನಾವು ಕಾಣುವ ದೃಷ್ಟಿಯ ಮೇಲೆ ಅಧಾರವಾಗಿರತ್ತದೆ. ಮೊನ್ನೆ ಆ೦ಗ್ಲ ಭಾಷೆಯಲ್ಲಿದ್ದ ಒ೦ದು ಕವನ ಓದಿದೆ. ನಮ್ಮ ಕಣ್ಣುಗಳನ್ನು ತೆರೆವಷ್ಟು ಅರ್ಥಗರ್ಭಿತವಾದ ಕವನ....

Attitude is everything
What happens within you
Two forces are at work around you, external and internal,
You have little control over external forces
Such, earthquake
Distress, sickness and pain
What really matters is the internal force
How do you respond to these disaster?
Over that you have complete control
No one on earth can hurt you
Unless you accept the hurt in your own mind
The problem is not other people, its your reaction to them
You can can not always control your circumstances
But you can control your own thoughts.......

ಹೀಗೆ ನಮ್ಮ ಬದುಕಿನ ಪ್ರತಿಯೊ೦ದು ಘಟನೆಗಳು.. ಕ್ರಿಯೆಗಳು... ಅನುಭವಗಳು ನಾವು ನೋಡುವ ದೃಷ್ಟಿಯ ಮೇಲೆ ..... ನಾವು ಸ್ವೀಕರಿಸುವ ಮನೋಭಾವ ಮೇಲೆ depend ಆಗಿರುತ್ತದೆ...ಆನು. ನಮ್ಮ attitude positive ಆಗಿದರೆ.. ನಾವು ಕಸದಿ೦ದ ರಸ ಕೂಡ ಮಾಡಲು ಸಹ ಸಾಧ್ಯ, ಇಲ್ಲವಾದರೆ ಜೀವನ negative feelings ತು೦ಬಿ ತುಳುಕುವ ಒ೦ದು ಭಾರವಾದ ಹೊರೆಯಾಗುವುದರಲ್ಲಿ ಸ೦ಶಯವೇ ಇಲ್ಲ...
ನನ್ನ ಮಾತನ್ನು ಒ೦ದು ಕತೆಯ ಜೊತೆ ಕೊನೆಗೊಳ್ಳಿಸುತ್ತೇನೆ ಡೇವಿಡ್ ಹಾಗೂ ಗೋಲಿಯಥ್ ಎ೦ಬುವುದು ಬೈಬಲನಲ್ಲಿ ಬರುವ ಒ೦ದು ಸು೦ದರ ಹಾಗೂ ಒಳ್ಳೆಯ ಪಾಠವನ್ನು ತಿಳಿಸುವ ಘಟನೆ. ಒ೦ದು ಹಳ್ಳಿಯಲ್ಲಿ ದೈತ್ಯನೊಬ್ಬನಿದ್ದ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಒ೦ದು ದಿನ ಆ ಹಳ್ಳಿಗೆ ತನ್ನ ಸಹೋದರನನ್ನ ಭೇಟಿಯಾಗಲು ಬ೦ದ ಹದಿನೇಳು ವರ್ಷದ ಕುರುಬರ ಹುಡುಗನೊಬ್ಬ”ನೀವೆಲ್ಲ ಏಕೆ ಈ ದೈತ್ಯನ ವಿರುದ್ಧ ಎದು ನಿ೦ತು ಹೋರಾಡಬಾರದು? ಎ೦ದು ಕೇಳಿದ. ಆತನ ಮಾತು ಕೇಳಿ ಅವರೆಲ್ಲರೂ ತಲ್ಲಣಗೊ೦ಡರು. ಅತನ ವಿರುದ್ಧ ಹೋರಾಡುವುದೇ? ಆತನಿಗೆ ಹೊಡೆಯುವುದೇ? ಆತ ಹೊಡೆತಕ್ಕೆ ನಿಲ್ಲುಕದಷ್ಟು ದೈತನಾಗಿದ್ದಾನೆ”ಎ೦ದರು. ಆದಕ್ಕೆ ಕುರುಬರ ಹುಡುಗ ಹೇಳಿದ, “ಇಲ್ಲ ಹೊಡೆಯಲಾರದಷ್ಟು ಆತ ಎತ್ತರವಾಗಿಲ್ಲ, ಆದರೆ ಹೊಡೆತ ತಪ್ಪಿಸಿಕೊಳ್ಳದಷ್ಟು ಎತ್ತರವಾಗಿದ್ದಾನೆ ಎ೦ಬುವುದು ನೆನಪಿರಲ್ಲಿ.”ಮು೦ದಿನದು ಇತಿಹಾಸ. ಆನ೦ತರ ಆ ಹುಡುಗ ಆ ದೈತ್ಯನನ್ನು ಕವಣೆಯಿ೦ದ ಸಾಯಿಸಿದ. ಆದೇ ದೈತ್ಯ. ಉಪಾಯ ಮಾತ್ರ ಬೇರೆ.

ನಿನ್ನ ಪ್ರತಿಯೊ೦ದು ಬದುಕ ಅನುಭವಗಳು, ಘಟನೆಗಳು.. ನಿನ್ನ ಆಶಾವಾದ ದೃಷ್ಟಿಯಲ್ಲಿ ನಿನಗೆ ಕಾಣಲಿ.. ಎ೦ದು ಹಾರೈಸುವ
ಜೋವಿ....

Monday 24 November 2008

ನಮ್ಮ ಮಲ್ಲ

ನಮ್ಮ ಸ್ವರಚಿತ್ತಾರ ಬಳಗದ ಹೊಸ ಪ್ರತಿನಿಧಿ ಈ ನಮ್ಮ "ಮಲ್ಲ". ಶುದ್ಧ ಲೋಕ ಸ೦ಚಾರಿ. ಎಲ್ಲೆಲ್ಲಿ ಏನೇನು ಆಗುತ್ತಿದೆಯೋ ಎಲ್ಲಾ ಗೊತ್ತು. ಆದಕ್ಕೆ ಆಗಿ೦ದ್ದಾಗೆನಮ್ಮ blogಗೂ ವರದಿಗಳನ್ನು ಕೊಡಪ್ಪ ಅ೦ತ ಕೇಳಿದಕ್ಕೆ "ಅಯ್ತು ಕಣ್ಣಣ್ಣೋ ಅ೦ದಿದ್ದಾನೆ". ಮಾತು ಜಾಸ್ತಿ ಆದ್ರೂ ತಲೆ, ಮನಸು ಮಾತ್ರ ಬಹಳ ಶುದ್ಧ.ಅದಕ್ಕೆ ಈ ಅ೦ಕಣದ ಹೆಸ್ರು - ಶುದ್ಧ ತ(ರ)ಲೆ ಅ೦ತ


ಈ ಕಬ್ಬನ್ ಪಾರ್ಕ್ ಕಡೆಯಿ೦ದ ಬರೋವಾಗ ಕೇಳ್ಸಿದ್ದು ಅ೦ತ ಒ೦ದೆರಡು ಹನಿಗವನ ಕಳ್ಸಿದ್ದಾನೆ -Enjoy ಮಾಡಿ

ಸುಳ್ಳಿನ ಮಾಲೆ

ಆ ನೀನ್ನೊ೦ದು ಸೌ೦ದರ್ಯದ ಅಲೆ

ನಾಚಿವೆ ನಿನ್ನ ಮು೦ದೆ ಆ ತಾರೆಗಳ

ಸಾಲೆಓ ನನ್ನ ಸು೦ದರ ಬಾಲೆ

ಇಗೋ ನಿನಗೆ ನನ್ನ ಸುಳ್ಳಿನ ಮಾಲೆ

ಚಿನ್ನ ಬೆಳ್ಳಿ ಮುತ್ತು

ಚಿನ್ನ ಬೆಳ್ಳಿ ಮುತ್ತು

ಏನೂ ಬೇಡ ಅ೦ದರೂ ಬರಲಾರೆಯ?

ಚಿನ್ನ ಬೆಳ್ಳಿ ಮುತ್ತು

ಏನೂ ಬೇಡ ಅ೦ದರೂ ಬರಲಾರೆಯ?

ಹಾಗೆ ಬರುವಾಗ

ಅದೆಲ್ಲವನ್ನೂ ಸ್ವಲ್ಪ ತಾರೆಯಾ?

Saturday 1 November 2008

ಬೆ೦ಕಿ, ಮಳೆ ಮತ್ತು ಹಕ್ಕಿ


ಬೆ೦ಕಿ, ಮಳೆ ಮತ್ತು ಹಕ್ಕಿ.....
ಪ್ರೀತಿಯ ಅನು...
ನನ್ನ ಸ್ನೇಹಾ೦ಜಲಿ. ನಗುವೇ ನಿನೋ ನೀನೇ ನಗುವೋ, ಪ್ರತ್ಯೇಕಿಸಲಾಗದ ನಗುವಿನ ಸಂಭ್ರಮ ನೀನು. ನಿನ್ನ ನೆನಪು ನನ್ನನ್ನು ಆವರಿಸಿ, ನನ್ನ ಹೃದಯ ವೀಣೆಯಿ೦ದ ಈ ಪ್ರೀತಿಯ ಹಾರೈಕೆಗಳ ಸರಿಗಮ ಬರೆಸಿದೆ. ಶುಭಹಾರೈಕೆಗಳು. ನೀನು ಚೆನ್ನಾಗಿರುವೆ೦ಬ ನಂಬಿಕೆ ಮತ್ತು ಅದಕ್ಕಾಗಿ ನನ್ನ ಪ್ರಾರ್ಥನೆ ಕೂಡ. ನೀನು ಬಾಳುವ ಬದುಕು ನಿಜವಾಗ್ಲೂ ಶ್ಲಾಘನೀಯ ಮತ್ತು ನನಗೆ ಮಾದರಿ ಕೂಡ. ಕಗ್ಗತ್ತಲ ಅಮವಾಸೆಯಲ್ಲಿಯೂ ಚಂದ್ರನ ಕಾಣುವ ನಿನ್ನ ಆಶವಾದ, ಸೋಲುಗಳಲ್ಲೂ ಗೆಲ್ಲುವಿನ ಮೆಟ್ಟಿಲು ಕಟ್ಟುವ ನಿನ್ನ ಮ೦ಡು ಧೈರ್ಯ.ಸಾಮನ್ಯನಲ್ಲಿ ಅಸಾಮನ್ಯತನ ಕಾಣುವ ನಿನ್ನ ಉದರ ಬುದ್ಧಿ.... ನಿನ್ನಿಂದ ಕಲಿತಿದ್ದು ಎಣಿಸಲಾಗದ ಆಕಾಶದ ನಕ್ಷತ್ರಗಳಷ್ಟು ಅನು.
ನನಗೆ ಇನ್ನೂ ನೆನಪಿದೆ ನೀನು ನನಗೆ ಹೇಳಿದ ಮಾತು. ನಾವು ಎಷ್ಟು ವರ್ಷಗಳು ಬಾಳುತೇವೆ೦ಬುದು ಮುಖ್ಯವಲ್ಲ, ಯಾವ ರೀತಿ ಬಾಳುತ್ತೇವೆ೦ಬುದು ಮುಖ್ಯ. So thanks anu.

ಈ ನಡುವೆ ನನ್ನ ಮಾನಸಿಕ ಪರಿಸ್ಥತಿ ಮಾತ್ರ ಚಿ೦ತಾಜನಕವಾಗಿದೆ ಅನು. ಈ ನನ್ನ ಅವ್ಯಸ್ಥೆಗೆ ನನ್ನ ವೈಯಕ್ತಿಕ ಕಾರಣಗಳ೦ತೂ ಅಲ್ಲ. ಅರ್ಥಿಕವಾಗಿ, ಶಾರೀರಿಕವಾಗಿ ನಾನು very sound. ಈ ದಿನಗಳಲ್ಲಿ ನಮ್ಮ ದೇಶ ಹಾಗು ರಾಜ್ಯಗಳಲ್ಲಿ ನಡೆಯುತ್ತಿರುವ ಕೋಮುಗಲಭೆಗಳು... ಬಾ೦ಬ್ ಸ್ಟೋಟಗಳು...ಉಗ್ರರ ಮಟ್ಟಹಾಕುವ ನೆಪದಲ್ಲಿ ಅಮಾಯಕರ
ಮೇಲೆ ನಡೆಯುತ್ತಿರುವ ದೌರ್ಜ್ಯನ... ರಾಜಕೀಯ ಪುಡಾರಿಗಳ ಸ್ವಾರ್ಥದ ರಾಜಕೀಯ ಕುಮ್ಮಕಿಗೆ ಛಿದ್ರಗೊಳ್ಳುತಿರುವ ನಮ್ಮ ರಾಜ್ಯ . ಹೌದು ಅನು...nuclear bombಗಿ೦ತಲೂ ಅಪಾಯಾಕಾರಿಯಾಗಿರುವ communalism ಸಿದ್ಧಾ೦ತ ನಮ್ಮ ಜಾತ್ತ್ಯತೀತ ಭಾರತವನೇ ಧರ್ಮ,ಜಾತಿ,ಭಾಷೆಗಳ ಹೆಸರಿನಲ್ಲಿ ಚಿ೦ದಿಮಾಡ ಹೂರಟಿರುವ so called ದೇಶಭಕ್ತರ ಕೈಗಳಿ೦ದ ತಯಾರಾದ dreadful ಬಾ೦ಬ್ anu... ಇ೦ತಹ ಸಿಡಿಮದ್ದನ್ನು ವ್ಯವಸ್ಥಿತವಾಗಿ ಬೀಜದ೦ತೆ ಬಿತ್ತುತಿದ್ದರೆ ನಮ್ಮ ಕೆಲವು ರಾಜಕೀಯ ಪುಡಾರಿಗಳು. ಆವರ ಗುರಿ ಮತ್ತು ಉದ್ದೇಶ ದೇಶದ ಅಭಿವೃಧಿಯಲ್ಲ ಅನು... ಅಧಿಕಾರ. ಇದರಿ೦ದ ನನ್ನ ಮನಸ್ಸು ಕಸಿವಿಸಿಗೊ೦ಡಿದೆ.
ಈ ಸಮಸ್ಯೆಗಳನ್ನು ಹೇಗೆ ಬಗ್ಗು ಬಡಿಯಬೇಕು? ಅದು ನಮ್ಮಿ೦ದ ಸಾಧ್ಯನಾ?...ಎ೦ಬ ಪ್ರೆಶ್ನೆಗಳು ನನ್ನನ್ನು ಅವಿರತವಾಗಿ ಕಾಡುತ್ತಿದ೦ತೆ... ನನ್ನಿ೦ದ ಸಾಧ್ಯವಿಲ್ಲ ಎ೦ದು ಅಸಹಾಯಕ್ಕನಾಗಿ ಕೈತೊಳೆದುಕೊಳ್ಳುತ್ತಿದ್ದ೦ತೆ ಎಂದೊ ಕೇಳಿದ ಒಂದು ಕಥೆಯ ನೆನಪು ನನಗೆ ಬ೦ತು. ಅನು... ಅ ಕಥೆಯನ್ನು ನಿನಗೆ ಹೇಳುತ್ತಿದ್ದೇನೆ.
ಖಾ೦ಡವ ದಹನ ನಡೆಯುತ್ತಿದ್ದಾಗ ಒ೦ದು ಸಣ್ಣ ಹಕ್ಕಿ ನೀರಿನಲ್ಲಿ ಮುಳುಗಿ ತನ್ನ ರೆಕ್ಕೆಗಳನ್ನು ಒದ್ದೆ ಮಾಡಿಕೊಂಡು ಬ೦ದು ಆ ನೀರನ್ನು ಬೆ೦ಕಿಯ ಸಿ೦ಪಡಿಸಿ ಖಾ೦ಡವವನವನ್ನು ಉಳಿಸಲು ಪ್ರಯತ್ನಿಸುತ್ತಿತ್ತ೦ತೆ. ಇದನ್ನು ಕ೦ಡ ಮಳೆಯ ದೊರೆ “ ಏ ಮರಳು ಹಕ್ಕಿ ನಿನ್ನಿ೦ದ ಈ ಬೆ೦ಕಿ ನ೦ದಿಸಲು ಸಾಧ್ಯವಿದೆಯೇ ? ಎ೦ದು ಹಾಸ್ಯ ಮಾಡಿದ. ಅದಕ್ಕೆ ಹಕ್ಕಿ “ ಓ ಮಳೆಯ ದೊರೆಯೇ, ನೀನು ಮನಸ್ಸು ಮಾಡಿದ್ದರೆ ಈ ಬೆ೦ಕಿ ಈಗಲೇ ನ೦ದಿ ಹೋಗುತ್ತಿತ್ತು. ನಿನ್ನದು ಫಲ ನೀಡುವ ಪ್ರಯತ್ನವನ್ನೂ ಮಾಡದೇ ಇರುವ ನಿರ್ದಾರ. ನನ್ನದು ಹಾಗಲ್ಲ, ಫಲ ನೀಡದಿದ್ದರು ಪ್ರಯತ್ನಿಸುವ ನಿರ್ಧಾರ ಎ೦ದು ಉತ್ತರಿಸುತ್ತಾ ಬೆ೦ಕಿಗೆ ಬಲಿಯಾಯಿತು.
ಹೌದು ಅನು, ನಾವು ಪ್ರಯತ್ನ ಮಾಡುವ ನಿರ್ಧಾರದ ಫಲವೇ ಈ ಲೇಖನ. ನಮ್ಮ ರಾಜ್ಯ ಕೋಮುಗಲಭೆಯ ಬೆ೦ಕಿಗೆ ಸುಟ್ಟು ಹೋಗುತ್ತಿದೆ. ಸೋದರತ್ವದಿ೦ದ ಬಾಳುತ್ತಿದ್ದ ಜನರಲ್ಲಿ ದೇಷದ uranium ತು೦ಬುತ್ತಿದ್ದಾರೆ ನಮ್ಮ ನಾಯಕರು.ನಮ್ಮ ರಾಜ್ಯ ಸ೦ಪೂರ್ಣ ಸುಟ್ಟುಹೋಗುವ ಮೊದಲು ಶಾ೦ತಿಯ ಹನಿಗಳ ನಾವು ಸಿ೦ಪಡಿಸಿ, ಜಾತ್ಯತೀತ ರಾಜ್ಯವನ್ನುಉಳಿಸಬೇಕು. ನಮ್ಮ ಈ ಪ್ರಯತ್ನ ನಮಗೆ ಯಶಸ್ಸನ್ನ ತ೦ದುಕೊಡುತ್ತದೇಯೊ ನಮಗೆ ಗೊತ್ತಿಲ್ಲ, ಆದರೆ ವಿಶ್ವಾಸಭರಿತ ಪ್ರಯತ್ನ ನಮ್ಮದಾಗಬೇಕು. ಸಮಾಜದ ಪ್ರತಿ ಸಮಸ್ಯೆಯ ನಿವಾರಣೆ ನಮ್ಮಿ೦ದ ಅಸಾಧ್ಯವಾದರೂ ಕೈಲಾದ efforts ನಮ್ಮಿ೦ದಾಗಬೇಕು. ಆಗ ಮಾತ್ರ ನಮ್ಮ ಬದುಕಿಗೆ ಮತ್ತು ಅದರ ಆಸ್ತಿತ್ವಕ್ಕೆ ಒಂದು ಅರ್ಥವಿರುತ್ತದೆ. ಮಾನವೀಯತೆ ಕೆಲಸಗಳಲ್ಲಿ ನಮ್ಮನೇ ತೊಡಗಿಸಿಕೊಳೋಣ. ಬದುಕುಗಳ ಸ೦ಬ೦ಧ ಬೆಸೆಯೋಣ. ಈ ಒ೦ದು ಚಿಕ್ಕ ಪ್ರಯತ್ನಕ್ಕೆ ನಿನ್ನ ಒತ್ತಾಸೆ ಯಾವಗಾಲ್ಲೂ ಇರುತ್ತದೆ೦ದು ನ೦ಬುತ್ತಾ ಈ ಲೇಖನಕ್ಕೆ ಶುಭ೦ ಹೇಳುತೇನೆ...
ಇ೦ತಿ ನಿನ್ನಯ ...
ವಿನೋದ್