Thursday 16 December 2010

ಕಾವ್ಯ - ಕ್ರಿಸ್ಮಸ್ ದೀಪ

ದೀಪ ಹಚ್ಚಿದವರ್ಯಾರು?
ಈ ಕೂಪ ಬೆಳಕಾಗಲೆಂದೂ....!

ಕಿಚ್ಚು ಹತ್ತಿಸಿ ಕರುಬುತ್ತಿದ್ದ ಜನಕ್ಕೆ ಶಾಂತಿ ತಂದ ದೂತನಾರು?
ಕಿಲುಬಿದ್ದ ಮನಗಳಿಗೆ ಚೈತನ್ಯ ತುಂಬಿದ್ದವರ್ಯಾರು?
ತಾರುಣ್ಯ  ಚಿತ್ತದೆಡೆಗೆ ............
ಕಾರ್ಗತ್ತಲ ಮಬ್ಬು ತುಂಬಿ
ತಬ್ಬಿಬಾದ ಕುಲದ ನಡುವೆ
ದೀಪ ಹಚ್ಚಿದವರ್ಯಾರು? ಈ ಕೂಪ ಬೆಳಕಾಗಲೆಂದು....!
ಆಚಾರವಿಲ್ಲದ ಅನಾಚಾರ, ಕಾಟಚಾರ ಭ್ರಷ್ಟಾಚಾರಗಳನ್ನು
ಹಿಡಿದು ಹೊಸೆದು ಉರಿಗೊಳಿಸಿ
ಸತ್ಯ ತ್ಯಾಗ ಪ್ರೀತಿ ಪಸರಿಸುವ ಎಣ್ಣೆಯಿಂದ
ನಿತ್ಯ ಉರಿಯುವ ದೀಪ ಹಚ್ಚಿದವರ್ಯಾರು?
ಈ ಕೂಪ ಬೆಳಕಾಗಲೆಂದು....!
ಮಿಂಚಿನಾರ್ಭಾಟದ ಸಂಚಿನ ನಡೆಗೆ
ಕ್ಷುದ್ರ ಮನುಜನ ಛಿದ್ರ ಪರಿಗೆ ಅಂಜುತ್ತಿದ್ದ
ಮುಗ್ದ ಸ್ನಿಗ್ದ ದೀನರ ನಡುವೆ
ದೀನನಾಗಿ ಹುಟ್ಟಿದ ಈ ದೀಪ
ಹಚ್ಚಿದವರ್ಯಾರು? ಈ ಕೂಪ ಬೆಳಕಾಗಲೆಂದು....!

-ಸಂತೋಷ್
Read more!