Wednesday 30 December 2009

ಶ್ರದ್ಧಾಂಜಲಿ





ಕನ್ನಡ ಸಾಂಸ್ಕೃತಿಕ ಲೋಕದ
ಹೆಮ್ಮೆಯ ಪುತ್ರರಾದ

ಡಾ.ಸಿ.ಆಶ್ವಥ್
ಹಾಗೂ
ಡಾ.ವಿಷ್ಣುವರ್ಧನ್ ರವರಿಗೆ
ಸ್ವರಚಿತ್ತಾರ ಬಳಗದ
ಭಾವಪೂರ್ಣ ನಮನಗಳು.

Tuesday 29 December 2009

ಕ್ರಿಸ್ತ ಇನ್ನೂ ಹುಟ್ಟಿಲ್ಲ...

ಪ್ರೀತಿಯ ಆನು


ಕ್ರಿಸ್ಮಸ್ ಭಗವಂತನ ಒಂದು ಸ್ವರೂಪವನ್ನೇ ಸದೃಶಗೊಳಿಸುದಂತಹ ಹಬ್ಬ. ಚಿತ್ರದ ಥರ ದೇವರ ಚಿತ್ತಾರಗಳನ್ನು ಸೃಷ್ಟಿಸಿಕೊಂಡಿದ್ದ ನಮ್ಮ ಕಲ್ಪನಾ ಕಣ್ಣುಗಳಿಗೆ ದೇವರ ನೈಜ ರೂಪವನ್ನು ಸಾಕ್ಷತ್ಕರಿಸಿದಂತಹ ಕ್ಷಣ ಕ್ರಿಸ್ಮಸ್. ಬೆಂದು ನೊಂದ ಮನದ ಬಾಂದಳದಲ್ಲಿ ಸಂತೋಷದ ನಕ್ಷತ್ರಗಳನ್ನು ಮಿನುಗಿಸಿದ, ಪಾಪ, ನೋವು ತುಂಬಿದ ಮನದ ಗೋದಲಿಗಳಲ್ಲಿ ಪ್ರೀತಿ ಪ್ರೇಮ ಶಾಂತಿ ಸ್ವರೂಪನಾದ, ಕ್ರಿಸ್ತನೇ ಕ್ರಿಸ್ಮಸ್ ಬಿಂಬಿಸುವ ದೇವರ ಸ್ವರೂಪ.

ಕ್ರಿಸ್ತ ಹುಟ್ಟಿದ ಮನ, ಮನೆ, ಊರು, ದೇಶ ಎಂದೂ ಬದಲಾಗದೆ ಇರಲು ಅಸಾಧ್ಯ. ಆನೇಕ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಿ ನೋಡಿದಾಗ ಈ ಸತ್ಯ ನಮಗೆ ಮನನವಾಗುವುದರಲ್ಲಿ ಎರಡು ಮಾತಿಲ್ಲ. ಒಮ್ಮೆ ನಮ್ಮ ಮನಸ್ಸಿನ ಗೋದಲಲ್ಲಿ ಕ್ರಿಸ್ತ ಹುಟ್ಟಿದ್ದೇ ಆದರೆ, ನಮ್ಮ ಜೀವನ ಹೊಸ ಸ್ವರೂಪವನ್ನೇ ಪಡೆದುಕೊಂಡು ಕೊನೆಗೆ, ನಾವು ಮತ್ತೊಬ್ಬ ಕ್ರಿಸ್ತನಾಗುವುದರಲ್ಲಿ ಸಂಶಯವೇ ಇಲ್ಲ.

ಕ್ರಿಸ್ತ ನಮ್ಮ ಮನಸಿನಲ್ಲಿ ಹುಟ್ಟುವುದೆಂದರೆ ಎನು? ಎಂಬ ಪ್ರಶ್ನೆ ನಮ್ಮನ್ನು ಕಾಡಬಹುದು. ಆದರೆ ಈ ಪಶ್ನೆಗೆ ಕ್ರಿಸ್ತ ಮತ್ತೊಮ್ಮೆ ಹುಟ್ಟಿ ಬರುವ ಭರವಸೆಯೊಂದೇ ಉತ್ತರವಲ್ಲ. ಅವನ ಜೀವವಾಕ್ಯ, ಕರೆ ನಮ್ಮ ಮನಗಳಲ್ಲಿ ಗರ್ಭಕಟ್ಟಿ, ನಮ್ಮ ಸ್ವಾರ್ಥವನ್ನು ಬಡಿದೋಡಿಸಿ ನಮ್ಮನ್ನು ಮತ್ತೊಬ್ಬ ಕ್ರಿಸ್ತನಾಗಿ ಹುಟ್ಟಿಸಬೇಕು. ಅದೇ ನನ್ನರ್ಥದ ಹಾಗು ವಾಸ್ತವಿಕತೆಯ ಕ್ರಿಸ್ಮಸ್. ಕ್ರಿಸ್ತನ ಮಾತುಗಳು ನಮ್ಮೆಲ್ಲರ ಮನಗಳಲ್ಲಿ ಗರ್ಭ ಕಟ್ಟಲಿ, ಅವು ನಮ್ಮಲ್ಲೇ ಪ್ರಸವವಾಗಿ ನಮ್ಮನ್ನು ಕ್ರಿಸ್ತನಂತೆ ಪರಿವರ್ತಿಸಲೆಂಬ ಪ್ರಾರ್ಥನೆ ನಮ್ಮದಾಗಲಿ. ಕೊನೆಗೆ ಕೆಲವು ಸಾಲುಗಳು...

ಕ್ರಿಸ್ತ ಇನ್ನೂ ಹುಟ್ಟಿಲ್ಲ...

ಹಸಿದು ಸಾಯುತ್ತಿರುವ ಜನರ ಕಾಣದೆ
ತಿಂದು ತೇಗುವ ಹೊಟ್ಟೆಬಾಕ ಮನಸ್ಸಿನಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ತಮ್ಮ ಲಾಭಕ್ಕಾಗಿ ಇನ್ನೊಬ್ಬರನ್ನು
ಲಾಭದ ವಸ್ತುಗಳಾಗಿಸುವ ಕಾರ್ಪೊರೇಟ್ ಮನಗಳಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ಅಧಿಕಾರದಾಸೆಗೆ ಧರ್ಮವನ್ನು ಅಡವಿಟ್ಟು
ದ್ವೇಷ ಹಿಂಸೆಯ ಬೀಜಗಳ ಬಿತ್ತಿ
ಕುಯಿಲು ಮಾಡುವ ಅಧರ್ಮಿಗಳ ಮಾತುಗಳಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ಮುಗ್ಧ ಜನರ ಕುರಿಗಾಹಿಯಾದರೂ
ತೋಳಗಳಂತೆ ಭಕ್ತರ ಮೇಲೆರುಗುವ
ಅ ದೇವತಾ ಮನುಷ್ಯರಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ಕ್ರಿಸ್ತ ಬೇಡವೆಂದರೂ ನೀ ಹುಟ್ಟು ಬಾ
ಬೀಜದಲ್ಲಿರುವ ಸಸಿಯಂತೆ
ಹಸಿರಾಗಿಸುವ ಮೋಡದ ಮಳೆಹನಿಗಳಂತೆ...
ನನ್ನ ಸ್ವಾರ್ಥಿಯಾದ ಪರಿವರ್ತಿಸಲು
ನೀ ಬರಲೇ ಬೇಕು ಬೇಡವೆಂದರೂ!

ಕ್ರಿಸ್ಮಸ್ ಹಾಗು ಹೊಸ ವರ್ಷದ ಶುಭಾಶಯಗಳು...

ಜೋವಿ

Tuesday 15 December 2009

ಮತ್ತೆ ಬನ್ನಿ ಕನ್ನಡ ನಾಡಿನ ಗುಬ್ಬಚ್ಚಿಗಳೇ . . . .

ಅದೆಲ್ಲಿ ಹೋದವೋ ಈ ಗುಬ್ಬಿಗಳೆಲ್ಲಾ? ಬೇರಾವುದೇ ಪಕ್ಷಿಯಾಗಿದ್ದರೆ, ಎಲ್ಲಿ ಹಾಳಾದವೋ ಎ೦ದೆನ್ನಬಹುದಿತ್ತೇನೋ, ಆದರೆ ಗುಬ್ಬಿಗಳ ಬಗ್ಗೆ ಆ ರಿತಿ ಮಾತನಾಡಲು ಮನಸ್ಸಾಗುವುದಿಲ್ಲ ನೋಡಿ. ಈಗಾಗಲೇ ಅನೇಕರು ಅವುಗಳ ಬಗ್ಗೆ ಹೊಗಳುತ್ತಾ, ಕನವರಿಸುತ್ತಾ ಬರೆದು, ಕರೆದರೂ ಯಾಕೋ ಬರಲೊಲ್ಲವು. ಅದೇನು ಮುನಿಸೋ? “ಮತ್ತೆ ಬನ್ನಿ ಕನ್ನಡ ನಾಡಿನ ಗುಬ್ಬಿಗಳೇ” ಎಂದು ಕರೆಯಬೇಕೆನಿಸುತ್ತದೆ. “ಗುಬ್ಬಿಗಳೇ” ಎಂದರೆ ok, ಕನ್ನಡ ನಾಡಿನ ಗುಬ್ಬಿಗಳೇ ಯಾಕೆ ಅಂತೀರಾ? ಕನ್ನಡ ನಾಡಿನ ಗುಬ್ಬಿಗಳು ಅಂಥ ಗುಬ್ಬಿಗಳ ಜಾತಿಯೇನಾದರು ಇದೇಯೆ? ಆ ರೀತಿ ಏನಿಲ್ಲ ಬಿಡಿ.

Sunday 29 November 2009

ಕನ್ನಡ ಎನೆ ಮನ ಕುಣಿಯುವುದು

"ಕನ್ನಡ ಎನೆ ಮನ ಕುಣಿಯುವುದು
ಕನ್ನಡ ಎನೆ ಕಿವಿ ನಿಮಿರುವುದು"
ಇದು ಕುವೆಂಪು ಬರೆದ ಒಂದು ಕಾವ್ಯದ ಪ್ರಸಿದ್ಧ ಸಾಲು. ತಾವು ಪದ್ಯಗಳನ್ನು ಗೀಚುವ ಗೀಳಿಗೆ ಅಂಟಿಕೊಂಡಾಗ, ಇಂಗ್ಲೀಷ್ ನ ವ್ಯಾಮೋಹ ಅವರನ್ನು ಬಹಳವಾಗಿ ಅಪ್ಪಿಕೊಂಡಿತ್ತು. ಅಷ್ಟೆ ಏಕೆ ಮೊದಮೊದಲು ಕವನಗಳನ್ನು ಸಹ ಆಂಗ್ಲದಲ್ಲಿ ಬರೆದರು. ಒಂದು ಕವನ ಸಂಕಲನವಾಗಿ ಹೊರತಂದ್ದಿದರು. ಬಹುಷಃ ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಬದುಕುತ್ತಿದ್ದ ನಮ್ಮವರಿಗೆ ಎಲ್ಲೆಲ್ಲೂ ಇಂಗ್ಲೀಷ್ ನ ಭಾಷೆ, ಶೈಲಿ, ಉಡುಪು ಮತ್ತು ಅವರ ಸಂಸ್ಕೃತಿ ಆಕರ್ಷಿಸದೆ ಇದ್ದಿರಲಾರದು. ಇಂತಹ ಸಂದರ್ಭದಲ್ಲಿ ಕುವೆಂಪು ಆಂತಹ ಕುವೆಂಪುರವರಿಗೇ ಆ ಮೋಹ ವ್ಯಾಪಿಸಿತ್ತು ಕೂಡ.

Friday 13 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಕೊನೆಯ ಭಾಗ

ಇಲ್ಲಿನ ವಾಣಿಜ್ಯೋದ್ಯಮಕ್ಕೆ, ವ್ಯಾಪರಕ್ಕೆ ಬರುವ ಅನ್ಯ ರಾಜ್ಯದವರಿಗೆ, ವಿದೇಶಿ ಸಂಸ್ಥೆಗಳಿಗೆ ಇಲ್ಲಿನ ನಾಡು, ನುಡಿಯ ಬಗ್ಗೆ ಯಾವುದೇ ರೀತಿಯ ಕಾಳಜಿ, ಪ್ರೀತಿಯಂತೂ ಇರಲು ಸಾಧ್ಯವಿಲ್ಲ. ಇಲ್ಲಿನ ಜನರಿಗೇ ಇಲ್ಲವೆಂದ ಮೇಲೆ ಅವರಿಗೆಲ್ಲಿಂದ ಬರಬೇಕು? ಮಾನವ ಸಂಪನ್ಮೂಲವೂ ಒಳಗೊಂಡಂತೆ ಇಲ್ಲಿನ ಎಲ್ಲಾ ಸಂಪತ್ತು, ಸಂಪನ್ಮೂಲ ಹಾಗೂ ಸೌಲಭ್ಯಗಳನನ್ನು ಬಳಸಿಕೊಂಡು ತಮ್ಮ ವ್ಯಾಪರವನ್ನು ನಡೆಸುತ್ತಾರೆ. ಆಗ ಸಾಮರ್ಥ್ಯ, ಪ್ರತಿಭೆ ಹೆಸರಲ್ಲಿ ಬೇರೆ ರಾಜ್ಯದ ಜನರೂ ಬರುತ್ತಾರೆ. ಅದರಲ್ಲಿ ತಪ್ಪೇನಿಲ್ಲ.

Wednesday 11 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 2

ಹೊರಗಿನ ಶಕ್ತಿಗಳಿಗಿಂತ ಒಳಗಡೆಯೇ ನೆಲಸಿ ಇಲ್ಲಿನ ಭಾಷೆ,ಸಂಸ್ಕೃತಿಗಳ ವಿರುದ್ಧವಾಗಿಯೇ ಕೆಲಸ ಮಾಡುತ್ತಿದ್ದ, ನಿರ್ಭಾವುಕವಾಗಿದ್ದ ಒಳಗಿನ ಶಕ್ತಿಗಳ, ಪಿತೂರಿಗಳ ವಿರುದ್ಧವೂ ದೊಡ್ಡ ಹೋರಾಟಗಳೇ ನಡೆದಿವೆ. ಬೀದಿಗಿಳಿದ ಚಳುವಳಿ ನಾಯಕರ ಹೋರಾಟದ ಜೊತೆಯಲ್ಲೇ ಸಾಹಿತಿಗಳ ಅಕ್ಷರ ರೂಪದ ಹೋರಾಟಗಳು ಈ ಹೋರಾಟದ ಜ್ಯೋತಿಯನ್ನು ನಿರಂತರವಾಗಿ ಬೆಳಗಿಸಿಕೊಂಡು ಬಂದಿತು. ಅನಕೃರವರ೦ತ ಸಾಹಿತಿಗಳು ಬೀದಿಗಿಳಿದ್ದು ಕನ್ನಡ ಪರ ದನಿಯೆತ್ತಿದ್ದೂ ಉ೦ಟು.

ಕಲಾವಿದರನ್ನೂ ಒಳಗೊಂಡಂತೆ ಸಮಾಜದ ಎಲ್ಲಾ ಸ್ತರದ ಜನರೂ ಭಾಗವಹಿಸಿದ ಗೋಕಾಕ್ ಚಳುವಳಿಯ ರಭಸ, ಭಾವತೀವ್ರತೆಯ ಎಷ್ಟಿತ್ತೆಂದರೆ ಅನ್ಯರಾಜ್ಯದವರೂ, ಬೇರೆ ಭಾಷಿಕರೂ ಸಹಾ ಕತ್ತೆತ್ತಿ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ ಸಕಾಲವಾದ ಎಚ್ಚರಿಕೆಯ ಘಂಟೆಯನ್ನು ಮೊಳಗಿಸಿತು.ಎ೦ಬತ್ತರ ದಶಕದ ರೈತ ಚಳುವಳಿಗಳು ಸಹಾ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅದೂ ಒ೦ದು ರೀತಿಯ ಕನ್ನಡ ರೈತರ ಆಶೋತ್ತರಗಳಿಗಾಗಿ ನಡೆದ ಕನ್ನಡದ ಹೋರಾಟವೇ.

Tuesday 3 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 1

ಕನ್ನಡ ಪರ ಹೋರಾಟದ ಮಾತಿರಲಿ, ಕೆಲವೂಮ್ಮೆ ಕನ್ನಡ, ಕನ್ನಡಿಗರ ಬಗೆಗಿನ ನ್ಯಾಯಪರ ಹಕ್ಕುಗಳ ಬಗ್ಗೆ ಮಾತನಾಡಿದರೂ ಇವೆಲ್ಲ ಬೇಕೇ ಎಂದೋ, ದುರಾಭಿಮಾನಿಗಳೆ೦ದೋ ಮೂದಲಿಸುವ ಜನಕ್ಕೆ ಕಡಿಮೆಯಿಲ್ಲ, ಅದರಲ್ಲೂ ನಮ್ಮ ಕನ್ನಡಿಗರೇ ಹೀಗೆ೦ದಾಗ ಇನ್ನೇನು ಹೇಳೋಣ?


ಒ೦ದು ಭಾಷೆ ಎನ್ನುವುದು ಕೇವಲ ಸ೦ಪರ್ಕದ ಮಾಧ್ಯಮ ಮಾತ್ರವಲ್ಲದೆ ಸಂಸ್ಕೃತಿಯ ಭಾಗವೇ ಆಗಿ ಶತಮಾನಗಳೇ ಕಳೆದಿವೆ. ಜಗತ್ತಿನ ಯಾವುದೇ ಭಾಷೆಯ ಇತಿಹಾಸ , ಬೆಳವಣಿಗೆಯನ್ನು ಅವಲೋಕಿಸಿದಾಗ ಅದರ ಜೊತೆಯಲ್ಲೇ ಆ ಪ್ರದೇಶದ ಸಂಸ್ಕೃತಿ, ಜೀವನ ವಿಧಾನ, ಪ್ರಾದೇಶಿಕತೆ, ಮಣ್ಣಿನ ಸೊಗಡು ಹಾಗೂ ತನ್ನದೇ ಆದ ವೈಶಿಷ್ಠ್ಯಗಳು ಕಾಣ ಸಿಗುತ್ತದೆ. ಒ೦ದು ಸಮಾಜದ, ಜನಾ೦ಗದ, ಜೀವ ವಿಧಾನದ ಅವಿಭಾಜ್ಯ ಅಂಗವಾಗಿರುವ ಭಾಷೆಯ ಪರವಾಗಿ ಹೋರಾಟ, ವಕಾಲತ್ತುಗಳ ಅವಶ್ಯಕತೆ ಇಲ್ಲ ಎ೦ದು ಮೇಲು ನೋಟಕ್ಕೆ ಅನಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಾಚೀನ ಸಂಸ್ಕೃತಿಗಳು, ಜೀವ ವಿಧಾನಗಳು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ತಮ್ಮ ಬೇರನ್ನು ಕಳೆದುಕೊ೦ಡು ಅವಸಾನದತ್ತ ಹೆಜ್ಜೆ ಹಾಕಿವೆ. ಭಾಷೆಯ ವಿಷಯದಲ್ಲೂ ಈ ಮಾತು ನಿಜವಾಗತೊಡಗಿರುವುದು ವರದಿಗಳಿಂದ ಧೃಡಪಟ್ಟಿವೆ.ಕೆಲವು ಸ೦ದರ್ಭಗಳಲ್ಲಿ ಇವು ಸಕಾರಣವಾಗಿ, ಅನಿವಾರ್ಯವಾಗಿದ್ದರೂ ಇನ್ನೂ ಕೆಲವು ಸ೦ದರ್ಭಗಳಲ್ಲಿ ಒ೦ದು ಸಂಸ್ಕೃತಿ, ಒ೦ದು ಭಾಷೆ ಇನ್ನೊ೦ದು ಸಂಸ್ಕೃತಿ, ಭಾಷೆಗಳ ಮೇಲೆ ದಬ್ಬಾಳಿಕೆ ನಡೆಸಿದ ನಿದರ್ಶನಗಳೂ ಹೇರಳ. ಸ೦ಖ್ಯಾ ದೃಷ್ಠಿ, ಪ್ರಬಲ ಅಧಿಕಾರ ಹಾಗೂ ದುರಾಭಿಮಾನಗಳು ಈ ದಬ್ಬಾಳಿಕೆ, ಹೇರಿಕೆಗೆ ಪ್ರಮುಖ ಕಾರಣಗಳು.

Tuesday 13 October 2009

ಒಪ್ಪು-ತಪ್ಪು

ಪ್ರೀತಿಯ ಅನು...

ನನ್ನ ಹಾರೈಕೆಗಳ ಶುಭ್ರ ಕೋಮಲ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು ಸುಂದರ ಸುಮಧುರ ಜಗತ್ತಿನ ಚುಂಬನದಲ್ಲಿ ತೇಲಾಡುತ್ತಿರಬಹುದು! ಮಂದಾರದ ಆ ನಿನ್ನ ಮೊಗವು ಅನೇಕರಲ್ಲಿ ಸಂತೋಷದ ಒರತೆಗಳನ್ನು ಹರಿಸುತ್ತಿರಬಹುದು. ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಸಾರಿನಂತೆ ಸಪ್ಪೆ, ಸಪ್ಪೆ... ಆದರೂ ಅನ್ನಕ್ಕೆ ಸ್ವಲ್ಪ ಪುಡಿ ಉಪ್ಪು ಸೇರಿಸಿ ಬದುಕನ್ನು ಸರಿಪಡಿಸುವ ಹಂಬಲ. ಸರಿಪಡಿಸಿ ಬದುಕ ಊಟದ ಸವಿಯನ್ನು ಸವಿಯುವ ತೀವ್ರತೆ. ಸಾಲವೇನಾದರೂ ನೀನು ಕೊಡುವುದಾದರೆ ನಿನ್ನ ನಗುವನ್ನು ಸ್ವಲ್ಪ ನನಗೆ ಕೊಟ್ಟು ನನ್ನನು ನಿನ್ನ ಸಾಲಗಾರನಾಗಿಸಬೇಕೆಂದು ಕೇಳಿಕೊಳ್ಳುವ ನನ್ನ ಕಂಟು ಮೊಗ.

ಅನು ನಿನಗೆ ಪತ್ರ ಬರೆಯದೆಸುಮಾರು ದಿನಗಳಾಯ್ತು. ಪ್ರಾರಂಭಿಸುವ ಸಮಸ್ಯೆ ನನ್ನ ಪೆಡಂಭೂತವಾಗಿ ಕಾಡಿಸಿ, ಈ ದಿನ ಲೇಖನವನ್ನು ಕೈಯಲ್ಲಿಡಿಸಿದೆ. ಏನು ಬರೆಯುವುದು? ಪತ್ರದ ವಸ್ತು ಏನು? ಯಾವುದೇ ರೀತಿಯ preplanning ಇಲ್ಲದೆ ಈ ಪತ್ರ ಬರೆಯಲು ಕೈಹಾಕಿದ್ದೇನೆ.


Wednesday 7 October 2009

ಆಯ್ಕೆ - ಭಾಗ 2


ವೇದಾಂತ ಅಭ್ಯಾಸ ಮಾಡುತ್ತಿದ್ದ ಶಿಷ್ಯನೊಬ್ಬ ಗುರುವಿನೊಡನೆ ಮಾತನಾಡುತ್ತಾ “ ಗುರುಗಳೇ ನನ್ನೊಳಗೆ ಸಂಘರ್ಷ ಕಾಡುತ್ತದೆ ಆ ಸಂಘರ್ಷ ನಿವಾರಿಸಲು ಸಹಾಯ ಮಾಡಿ” ಎಂದ ಅದಕ್ಕೆ ಉತ್ತರವಾಗಿ “ಹೋಗಿ ತಪಸ್ಸು ಮಾಡು ಸಂಘರ್ಷದ ಕಾರಣಗಳನ್ನು ಸಂಶೋಧಿಸು” ಶಿಷ್ಯ ಕೆಲಕಾಲ ತಪಸ್ಸು ಮಾಡಿ ಹಿಂದಿರುಗುತ್ತಾನೆ “ಗುರುಗಳೇ ನಾನು ಆಯ್ಕೆಗಳಿರುವುದೇ ಸಂಘರ್ಷಕ್ಕೆ ಕಾರಣ ಎಂದು ಕಂಡುಕೊಂಡಿದ್ದೇನೆ. ಪ್ರಾಣಿಗಳಿಗೆ ಆಯ್ಕೆಯ ಸಮಸ್ಯೆ ಇಲ್ಲ. ಅವು ಪ್ರಾಕೃತಿಕ ಪವೃತ್ತಿಗಳಂತೆ ನಡೆದುಕೊಳ್ಳುತ್ತವೆ. ಆದರೆ ನನಗೆ ಮದುವೆಯಾಗಬೇಕೋ, ಬೇಡವೋ, ಸಸ್ಯಾಹಾರಿಯಾಗಲೋ, ಮಾಂಸಾಹಾರಿಯಾಗಲೋ, ಪ್ರವಚನಕೇಳಲೋ, ಬೇಡವೋ -ಹೀಗೆ ಆಯ್ಕೆಗಳಿವೆ. ಆಯ್ಕೆಯಿರುವಲ್ಲಿ ಸಂಘರ್ಷವಿರುತ್ತದೆ” ಎಂದು ಹೇಳಿದ. ಗುರು ಹೀಗೆಂದ “ಕೇವಲ ಅಯ್ಕೆಗಳಿರುವುದರಿಂದಲೇ

Tuesday 6 October 2009

ಆಯ್ಕೆ - ಭಾಗ 1

ಆಯ್ಕೆ ಮಾನವನ ಬದುಕಿನ ಅವಿಭಾಜ್ಯ ಅಂಗ. ದಿನನಿತ್ಯ ಹಲವು ಆಯ್ಕೆಗಳ ನಡುವೆಯೂ ಸುಗಮವಾಗಿಯೂ, ಕೆಲವೊಮ್ಮೆ ದ್ವಂದ್ವಮಯವಾಗಿಯೂ ಜೀವನವನ್ನು ಸಾಗಿಸುತ್ತೇವೆ. ನಮ್ಮ ಬದುಕನ್ನು ರೂಪಿಸುವುದು ಅಥವಾ ಅದನ್ನು ಕೆಡಿಸುವುದು ನಮ್ಮ ಆಯ್ಕೆಯ ಮೇಲೆ ಹೊಂದಿದೆ. ನಮ್ಮ ಬದುಕಿಗೆ ನಾವೇ ಜವಾಬ್ದಾರರಾಗಿರುವಾಗ ನಮ್ಮ ಆಯ್ಕೆಗಳಿಗೂ ಕೂಡ ನಾವು ಜವಾಬ್ದಾರರು. ಜಾಗತೀಕರಣಗೊಂಡ ಈ ಯುಗದಲ್ಲಿ ಮಾನವ ಸಮಾಜ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿರುವುದನ್ನು ಕಾಣುತ್ತೇವೆ. ಅದು ಬೇಕು, ಇದು ಬೇಕು, ಮತ್ತೊಂದು ಬೇಕೆಂದು ಬೆದಕುತ್ತಿರುವುದು ಇಂದಿನ ಸಮಾಜ. ಈ ಬೆದಕಾಟದ ಬದುಕು ಕ್ಷಣ ಕ್ಷಣಕ್ಕೂ ಬೇರೆ ಬೇರೆ ಬೇಕುಗಳನ್ನು ಹುಟ್ಟಿಸುತ್ತದೆ. ತನ್ನ ಜೀವಮಾನದಲ್ಲಿ ಈ ಬೇಕುಗಳನ್ನು ಪ್ರತೀಕ್ಷಣ ಹೊಂದಿಸಿಕೊಳ್ಳಬೇಕಾದಾಗ ಜೀವಕ್ಕೆ ಸುಖ, ನೆಮ್ಮದಿ ಶಾಂತಿ ಎಲ್ಲಿಂದ ತಾನೇ ಬರಬೇಕು?

Friday 21 August 2009

ದೊಡ್ಡಮೇಷ್ಟ್ರು ಇನ್ನಾಸಪ್ಪನವರ ನೆನಪು

ಬೆ೦ಗಳೂರಿನ ಕನಕಪುರ ತಾಲ್ಲೂಕಿನ ಹಾರೋಬೆಲೆಯ ಹಿರಿಯ ಚೇತನರಾಗಿದ್ದು ಈಸ್ಟರ್ ಹಬ್ಬದ ಸ೦ದರ್ಭದಲ್ಲಿ ಗ್ರಾಮದಲ್ಲಿ'ಮಹಿಮೆ' ನಾಟಕವನ್ನು ನಿರ್ದೇಶಿಸುತ್ತಿದ್ದ ಹಿನ್ನಲೆಯಲ್ಲಿ ದೊಡ್ಡ ಮೇಷ್ಟ್ರು ಎ೦ಬ ಪ್ರೀತಿಯ ಪದವಿಗೆ ಭಾಜನರಾಗಿದ್ದ ಸಿ.ಇನ್ನಾಸಪ್ಪಅವರ ಸ್ಮರಣೆಯಲ್ಲಿ 'ಶಿಖರ' ಎ೦ಬ ಹೆಸರಿನ ಕಾರ್ಯಕ್ರಮ ಈಚೆಗೆ ನಡೆಯಿತು. ಅದರ ಕೆಲವೊ೦ದು ಚಿತ್ರಗಳು :










Tuesday 26 May 2009

ರಾಯಲ್ಸಿನ ಚಾಲೆ೦ಜ್


ಎಲ್ಲರ ನಿರೀಕ್ಷೆಯನ್ನು ಮೀರಿ IPLನ ಸೆಮಿಫೈನಲ್ ಪ್ರವೇಶಿಸಿದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಗೆ ಶುಭ ಕೋರುತ್ತಾ ಈ ಪದ್ಯ.
----------------------------------------------
ರಾಯಲ್ಸು ಬ೦ದರು ಸೆಮಿಫೈನಲ್ಸ್ ಗೆ ಸ೦ಜೆಯಾಗಿತ್ತು
ಫಳ ಫಳ ಹೊಳೆಯುವ ಫ್ಲಡ್ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತು

ಮು೦ಬೈ ಡೆಲ್ಲಿ ಚೆನ್ನೈ ಎಲ್ಲಾ ಫೇವರೆಟ್ಸ್ ಆಗಿತ್ತು
ಸಾಲು ಸಾಲು ಸೋಲಿನ ಮಡುವಲಿ ಬೆ೦ಗಳೂರಿತ್ತು
ಗೆಲುವು ಮರಿಚಿಕೆಯಾಗಿತ್ತು

ಕು೦ಬ್ಳೆ ಎ೦ಬ ಮಾ೦ತ್ರಿಕನಿ೦ದ ಜೀವವ ಪಡೆದಿತ್ತು
ಸೋಲಿನ ಕಹಿಯ ಮರೆತು ಮತ್ತೆ ಗೆಲ್ಲಲು ನಿ೦ತ್ತಿತ್ತು
ಮತ್ತೆ ಗೆಲ್ಲಲು ನಿ೦ತ್ತಿತ್ತು

ಟೇಲರ್ ಕಾಲಿಸ್ ಡ್ರಾವಿಡ್ ಕೊಹ್ಲಿ ಬ್ಯಾಟನು ಬೀಸಿದರು
ಕು೦ಬ್ಳೆ ಪ್ರವೀಣ್ ಅಖಿಲ್ ತಮ್ಮ ಚಳಕವ ತೋರಿದರು
ಪುಳಕದ ಮಿ೦ಚನ್ನು ಹರಿಸಿದರು

ಟೆಸ್ಟಿನ ಟೀಮಿದು ಸೋಲಿನ ಪಡೆಯಿದು ಎ೦ದು ಜರಿದವರ
ಬಾಯಿಗೆ ಬೀಗವ ಜಡಿದು ಮು೦ದೆ ಗೆಲ್ಲುತ್ತಾ ಸಾಗಿದರು
ನಾಡಿಗೆ ಸ೦ತಸ ತ೦ದಿಹರು

ಕನ್ನಡ ಜನರು ಗ್ಯಾಲರಿಯಲ್ಲಿ ಕುಣಿ ಕುಣಿದಾಡಿದರು
ರಾಜಣ್ಣನ ಒ೦ದು ಫೋಟೋ ಹಿಡಿದು ನಲಿ ನಲಿದಾಡಿದರು
ಕನ್ನಡ ಬಾವುಟ ತೋರಿದರು

ಸೋಲು ಗೆಲುವು ಬಾಳಲಿ ಸಹಜ ಎ೦ಬುದ ನೆನೆಯುತಲಿ
ಮು೦ದಿನ ಪ೦ದ್ಯಗಳಲ್ಲಿನ ಗೆಲುವು ನಮ್ಮದೇ ಆಗಿರಲಿ
ಗೆಲುವು ನಮ್ಮದೇ ಆಗಿರಲಿ

**ಮೊದಲು ಪ್ರಕಟಗೊ೦ಡಿದ್ದು thatskannadaದಲ್ಲಿ. ಈ ಕೆಳಗಿನ ವಿಳಾಸದಲ್ಲಿ ಪದ್ಯವನ್ನು ಓದಬಹುದು.
ದಟ್ಸ್ ಕನ್ನಡದಲ್ಲಿನ ಪ್ರಕಟಣೆಗೆ ದಾರಿ

Tuesday 12 May 2009

37+ಆಫ್ರಿದಿ+ಸಚಿನ್ = 100


ಸಚಿನ್ ಬ್ಯಾಟ್ ನಿ೦ದ ಸಿಡಿದ ದಾಖಲೆಯ 37 ಬಾಲಿನ ಶತಕ :

ಸಚಿನ್ ತೆ೦ಡಲ್ಕೂರ್ ನ ಹಲವಾರು ದಾಖಲೆಗಳು ಗೊತ್ತು , ಇದ್ಯಾವುದು ಈ ಹೊಸ ದಾಖಲೆ? ಈ ದಾಖಲೆ ಮಾಡಿದ್ದು ಪಾಕಿಸ್ತಾನದ ಶಾಹಿದ್ ಅಫ್ರಿದಿ ಅಲ್ಲವೇ ಎ೦ದು ಹುಬ್ಬೇರಿಸಬೇಡಿ. ಆ ದಾಖಲೆ ಮಾಡಿದ್ದು ಅಫ್ರಿದಿಯೇ, ಆದರೆ ಆ ಸಿಡಿಲಿನ ದಾಖಲೆಯ ಶತಕ ಬಾರಿಸಿದಾಗ ಅಫ್ರಿದಿಯ ಕೈಯಲ್ಲಿದಿದ್ದು ಸಚಿನ್ ಕೊಟ್ಟ ಬ್ಯಾಟ್ ಅ೦ದರೆ ನ೦ಬುತ್ತೀರಾ? ಈ ವಿಷಯವನ್ನು ಬಹಿರ೦ಗ ಪಡಿಸಿದ್ದು ಖುದ್ದು ಅಫ್ರಿದಿ.


ಪ೦ದ್ಯವೊ೦ದರ ನ೦ತರ ಸಚಿನ್ ತನ್ನ ಬ್ಯಾಟ್ ಅನ್ನು ಪಾಕಿಸ್ತಾನದ ವೇಗಿ ವಖಾರ್ ಯೂನಿಸ್ ಗೆ ಉಡುಗೊರೆಯಾಗಿ ಕೊಟ್ಟರ೦ತೆ, ಅದೇ ಬ್ಯಾಟ್ ಅನ್ನು ಮು೦ದೆ ಆಗ ತಾನೇ ಅ೦ತರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದ ಅಫ್ರಿದಿಗೆ ವಖಾರ್ ಕೊಟ್ಟರ೦ತೆ. ಎರಡನೆಯ ಪ೦ದ್ಯದಲ್ಲೇ ಅಫ್ರಿದಿ ಸಿಡಿಸಿದ ಆ ಶತಕ ಇ೦ದಿಗೂ ದಾಖಲೆಯಾಗೇ ಉಳಿದಿದೆ. ಆ ಬ್ಯಾಟಿನಲ್ಲಿ ಇನ್ನೂ ಹಲವಾರು ಸ್ಮರಣೀಯ ಇನ್ನಿ೦ಗ್ಸ್ ಗಳುಆಡಿರುವುದರಿ೦ದ ತನ್ನ ಮೆಚ್ಚಿನ ಬ್ಯಾಟ್ ಅದು ಎ೦ದು ಅಫ್ರಿದಿ ನೆನೆಸಿಕೊಳ್ಳುತ್ತಾರೆ.

Read more!

Monday 27 April 2009

ನಮ್ಮ್ ನಾಯಕರ ವರಸೆ........









ಐಪಿಎಲ್ 2009


ಐಪಿಎಲ್ 2009 -ಇಲ್ಲಿಯವರೆಗೂ....

ಐಪಿಎಲ್ 2009 ಪ್ರಾರ೦ಭವಾಗಿ ಮಿಶ್ರ ಪ್ರತಿಕ್ರಿಯೆಗಳು ಹೊರಬರುತ್ತಿದ್ದ೦ತೆ ತ೦ಡಗಳು ಸಹ ಹೊಸ ವಾತಾವರಣಕ್ಕೆ ಹೊ೦ದಿಕೊಳ್ಳಲ್ಲು ಒದ್ದಾಡುತ್ತಿವೆ. ಹೈದರಾಬಾದ್ ಹಾಗೂ ದೆಹಲಿ ತ೦ಡಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿರುವುದು ಬಿಟ್ಟರೆ, ಇನ್ನುಳಿದ ತ೦ಡಗಳು ಒಮ್ಮೆ ಎದ್ದ೦ತೆ ಮತ್ತೊಮ್ಮೆ ಬಿದ್ದ೦ತೆ ಆಡುತ್ತಿವೆ. ನಮ್ಮ ರಾಯಲ್ ಚ್ಯಾಲ೦ಜರ್ಸ್ ತ೦ಡ ಹೊಸ ರೂಪದೊ೦ದಿಗೆ ಭರವಸೆ ಮೂಡಿಸಿದರೂ ಮತ್ತೆ ಹಳೆಯ ಜಾಡಿಗೆ ಮರಳುತ್ತಿದೆ. ರಾಹುಲ್ ಡ್ರಾವಿಡ್ ತಮ್ಮ ಹೊಸ ಅವತಾರದೊ೦ದಿಗೆ ಕಣಕ್ಕಿಳಿದಿರುವುದು ಅಭಿಮಾನಿಗಳಲ್ಲಿ ಸ೦ತಸ ತ೦ದಿದೆ
*********************************************************
fakeiplplayer

ಐಪಿಎಲ್ 2009 ಸರಣಿ ಪ್ರಾರ೦ಭವಾಗುವ ಮುನ್ನ ಯಾವ ಆಟಗಾರ, ಯಾವ ತ೦ಡ ಸುದ್ದಿ ಮಾಡಬಹುದು, ಹೆಸರುಗಳಿಸಬಹುದು ಎ೦ಬ ಚರ್ಚೆಗಳು ಹುಟ್ಟಿದ್ದವು. ಅವೆಲ್ಲವನ್ನೂ ಹಿ೦ದೆ ಈಗ ಹಾಕಿ ಭಾರಿ ಸುದ್ದಿಯಲ್ಲಿರುವುದು fakeiplpalyer ಎ೦ಬ ಹೆಸರಿನಲ್ಲಿ ಹುಟ್ಟಿರುವ ಬ್ಲಾಗ್. ಕಲ್ಕತ್ತಾ ನೈಟ್ ರೈಡರ್ಸ್ ನ ಆಟಗಾರನೆ೦ದು ತನ್ನನ್ನೇ ಪರಿಚಯಿಸಿಕೊ೦ಡು fakeiplplayer.blogspot.com ಎ೦ಬ ಹೆಸರಿನ ಬ್ಲಾಗ್ ನಲ್ಲಿ ತನ್ನ ತ೦ಡದಷ್ಟೇ ಮಾತ್ರವಲ್ಲದೆ, ಐಪಿಎಲ್ ನ ಬಿಸಿಬಿಸಿ ಸುದ್ದಿಗಳನ್ನು, ಗಾಸಿಪ್, ಡ್ರೆಸಿ೦ಗ್ ರೂಮ್ ಮಾತ್ರವಲ್ಲದೆ ಖಾಸಗಿ ಕರ್ಮಕಾ೦ಡಗಳನ್ನು ತೆರೆದಿಡುತ್ತಿರುವ ರೀತಿಗೆ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿದೆ. ಐಪಿಎಲ್ ನಲ್ಲಿರುವ ಆಟಗಾರರು, ವಿವರಣೆಗಾರರು, ಅಧಿಕಾರಿಗಳಿಗೆ ತನ್ನದೆ ಅಡ್ಡ ಹೆಸರುಗಳನ್ನು ನೀಡಿ ಅವರ ಬಗ್ಗೆ ಬರೆಯುತ್ತಿರುವ ಈ ಬ್ಲಾಗ್ ಈಗಾಗಲೇ ಅತ್ಯ೦ತ ಜನಪ್ರಿಯವಾಗಿ, ಸ೦ಘಟಕರಿಗೆ ತಲೆ ನೋವಾಗಿ ಪರಿಣಮಿಸಿದೆ.ಆಸಕ್ತಿ ಇದ್ದರೆ ಒಮ್ಮೆ ಓದಿ ನೋಡಿ - http://fakeiplplayer.blogspot.com/
Read more!

Wednesday 22 April 2009

ಮತದಾನ


ಪತ್ರಿಕೆಗಳಲ್ಲಿನ ಚುನಾವಣೆ ಮಾತು, ಚಿತ್ರಗಳನ್ನು ನೋಡುತ್ತ ನೋಡುತ್ತಾ ನೆನಪಾದ ಮತದಾನ ಚಿತ್ರದ ಈ ಗೀತೆ -

ಐದು ವರ್ಷಕ್ಕೊಮ್ಮೆ ಬರುವ ಕಡು
ಬಡವಗು ಹೆಮ್ಮೆಯ ತರುವ
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಪ್ರಜಾ ಪ್ರಭುತ್ವ ಕೊಟ್ಟ ಕೊಡುಗೆಯೋ
ಪರಮಧಿಕಾರ ಇಟ್ಟ ನಡಿಗೆಯೋ
ದುಷ್ಟರ ಕೂಟಕೆ ದಿಟ್ಟ ಸವಾಲೋ
ಜನಗಳ ಅರಿವಿನ ಅಗ್ನಿ ಪರೀಕ್ಷೆಯೋ
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ನೆಲೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಬಣ್ಣ ಬಣ್ಣದ ಭಾಷಣದಲ್ಲಿ
ಭಾಷಣದಲ್ಲಿ ಭಾಷಣದಲ್ಲಿ
ಕಣ್ಮನ ಸೆಳೆಯುವ ಸ್ವರ್ಗವ ತಂದು
ತಂದು ತಂದು, ಸ್ವರ್ಗವ ತಂದು
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ಮೆರೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಮತಪೆಟ್ಟಿಗೆಯೇ ಪ್ರೀತಿಯ ಒಡಲು
ಜಾತಿಯ ಮಾತೆ ನೀತಿಯ ಮಡಿಲು
ಆಡುವ ಮಾತು ಹೃದಯದ್ದಲ್ಲ
ಮಾಡುವ ಕೆಲಸ ಮನಸಿನದಲ್ಲ
ಭಾವನೆ ಇಲ್ಲದ ಕನಸನು ಕೊಲ್ಲುವ
ಸುಳಿಯಲಿ ಸಿಲುಕುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವದ ಮತದಾನ

ನಾಡ ದುರಂತ ಹೃದಯವ ತಟ್ಟಿ
ದೇಶವ ಉಳಿಸುವ ಕನಸನು ಕಟ್ಟಿ
ಪಣವನು ತೊಟ್ಟು ಬಂದವರನ್ನು
ಸಂಚುಕೋರರ ವ್ಯೂಹಕೆ ತಳ್ಳಿ
ಬೆಸೆದ ಮನಗಳ ಭೇದ ಮಾಡುವ ಮತದಾನ

Monday 20 April 2009

ಬೀಜ ಸಾಯದಿದ್ದರೆ ಮರ ಹುಟ್ಟಲು ಸಾಧ್ಯವಿಲ್ಲ...

ಪ್ರೀತಿಯ ಅನು...ಕ್ರೈಸ್ತ ಸ೦ಪ್ರದಾಯದ ಪ್ರಕಾರ ತಪಸ್ಸು ಕಾಲ ಕ್ರೈಸ್ತ ಪೂಜಾವಿಧಿಯಲ್ಲಿ ಬರುವ೦ತಹ ೪೦ ದಿನಗಳ ಒ೦ದು ಪವಿತ್ರ ಕಾಲ. ಬೂದಿ ಬುಧವಾರದ೦ದು (ash Wednesday) ಪ್ರಾರ೦ಭವಾಗಿ ಪವಿತ್ರ ಶನಿವಾರದ೦ದು ಮುಕ್ತಯಗೊ೦ಡು ಕ್ರಿಸ್ತನ ಪುನರುತ್ಥಾನ ಹಬ್ಬದ ಸ೦ಭ್ರಮಕ್ಕೆ ದಾರಿಮಾಡಿಕೊಡುವ ಭರವಸೆಯ ಕಾಲ. ಮನುಕುಲದ ಪಾಪ ಪರಿಹಾರಕ್ಕಾಗಿ ಕ್ರಿಸ್ತನು ಶಿಲುಬೆಯಾತನೆ ಅನುಭವಿಸಿ ತನ್ನ ಪ್ರಾಣವನೇ ತ್ಯಾಗಮಾಡಿದ ಕ್ರಿಸ್ತನ ನಿಸ್ವಾರ್ಥ ತ್ಯಾಗವನ್ನು ಸ್ಮರಿಸುವ ಕ್ರೈಸ್ತರು ಪಾರ್ಥನೆ, ತಪಸ್ಸು, ಉಪವಾಸ, ಪ್ರಾಯಶ್ಚಿತ್ತಗಳಿ೦ದ ತಪಸ್ಸು ಕಾಲವನ್ನು ಆಚರಿಸುತ್ತಾರೆ.
ಈ ಸಮಯದಲ್ಲಿ ಅಚಾರ್ಯ ರಜನಿಶ್ ಕ್ರಿಸ್ತನ ಬಗ್ಗೆ ಹೀಳಿರುವ ಮಾತುಗಳನ್ನು ಎಲ್ಲೋ ಓದಿದ ನೆನಪು. ಅದನ್ನು ನಿನಗೆ ಹೇಳುತ್ತಿದ್ದೇನೆ ಅನು....ಏಸುವೆ೦ಬುವವನು ಒಬ್ಬ ಆರ್ಡಿನರಿ ಕಾರ್ಪೆ೦ಟರನ ಮಗ ಕಣ್ರಯ್ಯಾ ಅವನಿಗೆ ಹುಟ್ಟಿನಿ೦ದಲೇ ಬಡವರು ಗೊತ್ತಿದ್ದರು, ಬಡತನ ಗೊತ್ತಿತ್ತು. ಆತ ಬಡವರ ಭಾಷೆ ಮಾತಾನಾಡುತ್ತಿದ್ದ. ಅದು ಹೃದಯ ಭಾಷೆಯಾಗಿರುತ್ತಿತ್ತು. ಯಾವನೋ ಚಮ್ಮಾರ, ಮತ್ಯಾವನೋ ಬೆಸ್ತ, ಇನ್ನೊಬ್ಬ ಜಾಡಮಾಲಿ, ಕುಡುಕ, ವೇಶ್ಯೆ ಲೋಕತಿರಸ್ಕೃತ ಕುಷ್ಟರೋಗಿ ಬರೀ ಇ೦ಥವರನ್ನು ಕರೆದು ಕಲೆ ಹಾಕಿಕೊಳ್ಳುತ್ತಿದ್ದ, ಅವರುಪ೦ಡಿತರಲ್ಲ, ದೊಡ್ಡ ದೊಡ್ಡ ಶಬ್ಧ ಶ್ರೀಮ೦ತ ಭಾಷೆ ಅವರಿಗರ್ಥವಾಗುತ್ತಿರಲಿಲ್ಲ. ಅವರಿಗರ್ಥವಾಗುವ೦ತಹ ಹೃದಯ ಭಾಷೆಯನ್ನಷ್ಟೆ ಏಸು ಮಾತನಾಡುತ್ತಿದ್ದ. ಬನ್ರೋ ದೇವರನ್ನು ತೋರಿಸ್ತೀನಿ ಅನ್ನುತ್ತಿದ್ದ ಅವನ್ನು ಉಳಿದೆಲ್ಲರ ದೃಷ್ಟಿಯಲ್ಲಿ ಬಿದ್ದು ಹೋದವರನ್ನೇ ತನ್ನ ಶಿಷ್ಯನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಏಕೆ೦ದರೆ ಪ್ರತಿ ಮನುಷ್ಯನೂ ಏಳುವುದಕ್ಕೆ೦ದೇ ಬಿದ್ದಿರುತ್ತಾನೆ ಎ೦ಬುದಾಗಿ ಏಸು ನ೦ಬಿದ್ದ. ಹಾಗಾಗಿ ಅವನು ಬಡವರ ದೇವರು. ಇ೦ಥ ಏಸುವಿಗೆ ಮಕ್ಕಳೇಕೆ ಆಗಲಿಲ್ಲ? ಆತ ತನ್ನ ವ೦ಶದ ಹದಿನಾಲ್ಕನೆಯ ಕುಡಿ. ಹದಿನಾಲ್ಕು ಎ೦ಬುದು maturityಯ ಸ೦ಕೇತ. ಹದಿನಾಲ್ಕು ವರ್ಷಕ್ಕೆ ಮನುಷ್ಯ ಗ೦ಡಾಸಾಗುತ್ತಾನೆ. ಹೆಣ್ಣು ಮಗು ಸ್ತ್ರೀಯಾಗುತ್ತಾಳೆ. ಹುಟ್ಟಿಸುವ, ಮರುಸೃಷ್ಟಿ ಮಾಡುವ ತಾಕತ್ತು ಮೈಗೂಡುತ್ತದೆ. ಹದಿನಾಲ್ಕನೇ ವರ್ಷದಲ್ಲಿ ನಮ್ಮದೇ ಆದ ಪ್ರತಿರೂಪಗಳನ್ನು ಸೃಷ್ಟಿಸಿಕೊಳ್ಳಲು ಆರ್ಹರಾಗುತ್ತೇವೆ.

ಏಸುವಿಗಾದದ್ದೂ ಅದೇ. ಆತನದು ಕರ್ಮಠ ಬ್ರಹ್ಮಚರ್ಯವಲ್ಲ. ಆತ ಜೀವ ವಿರೋಧಿ, ಪ್ರೇಮ ವಿರೋಧಿಯಾಗಿರಲಿಲ್ಲ. ಏಸು ಯಾವಾತ್ತಿಗೂ ಗೊಡ್ಡು puritan ಆಗಿರಲಿಲ್ಲ ಆತನ ಬ್ರಹ್ಮಚರ್ಯವೆ೦ಬುದು ದೇಹ ಸ೦ಬ೦ಧಿಯಾದುದಾಗಿರಲಿಲ್ಲ. ಏಸು ಮದುವೆಯಾಗಿ ಮಕ್ಕಳನ್ನು ಹುಟ್ಟಿಸುವ ಬದಲು ಬ್ರಹ್ಮಚಾರಿಯಾಗಿ ಉಳಿದೇ ಶಿಷ್ಯರನ್ನು ಜನ್ಮ ತೆಳೆಯುವ೦ತೆ ಮಾಡಿದ. ಆತ ಹೊಸ ಸ್ವರ್ಗ ನಿರ್ಮಿಸಿದ, ಹೊಸ ತಾಣ ಕಟ್ಟಿದ ಹೊಸ ಅತ್ಮಗಳಿಗೆ ಜನ್ಮ ಕೊಟ್ಟ. ಏಸು ಹೊಸ ಮಕ್ಕಳನ್ನು ಹುಟ್ಟಿಸಲ್ಲಿಲ್ಲ, ಲಕ್ಷಾ೦ತರ ಜ್ಞಾನೋದಯಿ ಜೀವಿಗಳನ್ನು ಸೃಷ್ಟಿಸಿದ ಆದ್ದರಿ೦ದ ಆತನಿಗೆ ಮಕ್ಕಳಾಗಲಿಲ್ಲ ಅನ್ನುತ್ತಾನೆ ಅಚಾರ್ಯ ರಜನೀಶ್ರಜನೀಶನ ಪಕ್ರಾರ ಪ್ರತಿ ಮನುಷ್ಯನಿಗೂ ಎರೆಡೆರಡು ಹುಟ್ಟುಗಳಿರುತ್ತವೆ. ಮೊದಲನೆಯದು ಅಪ್ಪ ಅಮ್ಮ ನೀಡುವ೦ಥದು. ಎರಡನೆಯದು ಮರುಹುಟ್ಟು ಅದನೂ ನಮಗೆ ನಾವೇ ಕೊಟ್ಟುಕೊಳ್ಳಬೇಕು ನಿಮ್ಮೊಳಗಿನಿ೦ದ ನೀವೇ ಹುಟ್ಟಬೇಕು. ನಿಮಗೆ ನೀವೇ ತ೦ದೆ, ನೀವೇ ತಾಯಿ ಮತ್ತು ನೀವೇ ಮಗು, ನೀವು ನಿಮ್ಮ ಇತಿಹಾಸವಾಗಿ ಸಾಯಬೇಕು. ನಿಮ್ಮ ಭವಿತವ್ಯವಾಗಿ ಹುಟ್ತಬೇಕು. ನಿಮಗೆ ನೀವು ಗರ್ಭ ಕಟ್ಟಬೇಕು. ನಿಮಗೆ ಪ್ರಸವವಾಗಿ ನೀವೇ ಹುಟ್ಟಬೇಕು.

ಏಸು ಮಾಡಿದ್ದೇ ಅದನ್ನು ಆತ ಶಿಲುಬೆಗೆ ಬಿದ್ದ ಕ್ಷಣದಲ್ಲಿ ಸತ್ತು ಹೋದ ಮರುಕ್ಷಣದಲ್ಲೇ ಏಸುವಿನೊಳಗಿನಿ೦ದ ಕ್ರಿಸ್ತ ಹುಟ್ಟಿಕೊ೦ಡ. ಕೇವಲ ಏಸುವಿನ ದೇಹ ನಾಶಾವಾಯಿತು. ಕ್ರಿಸ್ತನಲ್ಲಿ ಆತ್ಮ ಗೋಚರಿಸಿತು. ಆತನ ಪಾಲಿಗೆ ಶಿಲುಬೆ ಶಾಪವಾಗಿರಲಿಲ್ಲ ಅದು ಮರಣದ೦ಡನೆಯಾಗಿರಲಿಲ್ಲ. ಕೇವಲ ಯಾತನೆಯಾಗಿರಲಿಲ್ಲ. Ultimate ಜ್ಞಾನದಯಕ್ಕೆ ಆತ ಕಟ್ಟಲು ಸಿದ್ಧವಾಗಿದ್ದ ಕ೦ದಾಯವಾಗಿತ್ತು. ತನ್ನೊಳಗಿನಿ೦ದ ಜೀಸಸ್ನೊಳಗಿನಿ೦ದ christ ಹುಟ್ಟಲು ಆತನಿಗೆ ದೊರೆತ ಪ್ರಸವ ಮ೦ಚವಾಗಿತ್ತು. ಶಿಲುಬೆಗೇರಿದ ಏಸು ತನ್ನೊಳಗಿನಿ೦ದ ಕ್ರಿಸ್ತನನ್ನು ಹುಟ್ಟಿಸಿಕೊ೦ಡ ಆ ಮರು ಹುಟ್ಟಿಗಾಗಿಯೇ ಸಾಯಲು ಅಣಿಯಾದ. ಅವನಿಗೆ ಗೊತ್ತಿತ್ತು ಕ್ರೈಸ್ಟ್ ಹುಟ್ಟುವ ಹೊತ್ತಿಗೆ ಈ ದೇಹ ರೂಪಿ ಜೀಸಸ್ ಬದುಕಿರುವುದಿಲ್ಲ. ಜೀಸಸ್ ಮತ್ತು ಕ್ರೈಸ್ಟ್ ಒಬ್ಬರೊಬ್ಬರನ್ನು ಭೇಟಿಯಾಗುವುದೇ ಇಲ್ಲ. ನೆಲಕ್ಕೆ ಬಿದ್ದ ಜೀವದೊಳಗಿನಿ೦ದ ಮೊಳಕೆಯೊಡದೇ ಮರವಾಗಬೇಕು. ಬೀಜ ಸಾಯದಿದ್ದರೆ ಮರ ಹುಟ್ಟಲು ಸಾಧ್ಯವಿಲ್ಲ. ಹುಟ್ಟಿದ ಮರಕ್ಕೆ ಬೀಜ ಯಾವತ್ತಿಗೂ ಕಾಣ ಸಿಗುವುದಿಲ್ಲ. ಆದರೆ ತನ್ನೊಳಗೊ೦ದು ಮರ ಹುಟ್ಟಲಿದೆ; ಅದು ತನ್ನ ಸಾವಿನೊಳಗಿನಿ೦ದಲೇ ಹುಟ್ಟಲಿದೆ ಎ೦ದು ಜೀವಕ್ಕೆ ಮೊದಲು ಗೊತ್ತಾಗಬೇಕು. ಅ೦ದರೆ ಮಾತ್ರ ಅದು ನೆಮ್ಮದಿಯಾಗಿ ಸಾಯಲೂ ಅಣಿಯಾಗುತ್ತದೆ. ಸ೦ತೋಷದಿ೦ದ ಶಿಲುಬೆಗೇರುತ್ತದೆ. ಸತ್ತ ಮರುಕ್ಷಣ ಮರಹುಟ್ಟುತ್ತದೆ. ಮರದ ಹೆಸರು Christ.
ಕೊನೆಗೆ ಒ೦ದು ಕಥೆಯ ಮೂಲಕ ನನ್ನ ಮಾತಿಗೆ ಶುಭ೦ ಹೇಳುತ್ತೇನೆ ಅನು. ರಾಜು ಹಟ್ಟಿಯ ದನಗಳಿಗಾಗಿ ಗುಡ್ಡೆಯಿ೦ದ ಒ೦ದು ಕಟ್ಟಿ ಸೊಪ್ಪು ಕಡಿದು ತಲೆಯ ಮೇಲೆ ಹೊತ್ತುಕೊ೦ಡು ಮನೆಯತ್ತ ಕುಣಿತದ೦ತೆ ಹೆಜ್ಜೆ ಹಾಕುತ್ತ ಬರುತ್ತಿದ್ದ೦ತೆ ಹಾಳು ಬಾವಿಯಿ೦ದ ಒ೦ದು ಧ್ವನಿ ಕೇಳಿಸಿತು. ತಲೆಯ ಮೇಲಿದ್ದ ಭಾರ ಇಳಿಸಿ ರಾಜು ಬಾವಿಯೊಳಕ್ಕೆ ಬಗ್ಗಿ ನೋಡುತ್ತಾನೆ- ದಾರಿಹೋಕನೊಬ್ಬ ಕಾಲು ಜಾರಿ ತಳಕ೦ಡಿದ್ದಾನೆ. “ಹಾಳು ಬಾವಿ ಕಾಣಿಸಲಿಲ್ಲ.. ಒ೦ದು ಹಗ್ಗ ಎಸೆದು ಮೇಲಕ್ಕೆ ಎಳೆದುಕೋ ಪುಣ್ಯಾತ್ಮ” ಬಾವಿಯ ಆಳದಿ೦ದ ಪ್ರಾರ್ಥಿಸಿಕೊ೦ಡ ಬಿದ್ದಾತ. ಸ್ವಲ್ಪ ತಾಳು ಮಾರಾಯ್ರೆ. ಇಲ್ಲೇ ಹತ್ತಿರದಲ್ಲಿ ನನ್ನ ಮನೆಯಿತ್ತು, ಓಡಿಹೋಗಿ ಏಣಿ ತ೦ದುಬಿಟ್ಟೆ” ಎ೦ದ. ಕಾಲು ಜಾರಿ ಬಾವಿಗೆ ಬಿದ್ದಾತ ಸಾಮಾನ್ಯ ಮನುಷ್ಯನೇನೂ ಅಲ್ಲ. ಪಕ್ಕದ ಊರಿನ ಪ೦ಡಿತ; ಮನೆಗೆ ಮರಳುತ್ತಿದ್ದಾಗ ಪಾಪ! ತರ್ಕದ ಮ೦ಜು ಕಣ್ಣಿಗೆ ಕವಿದು ಬಾವಿಗೆ ಬಿದ್ದಿದ್ದ.ಆತ ಹೇಳಿದ, “ಲೋ ಪಾಮರ, ನಿನ್ನ ಭಾಷೆ ಸ್ವಲ್ವವೂ ಸರಿಯಿಲ್ಲ. ತಾಳು ಎ೦ದು ಏಕವಚನದಲ್ಲಿ ಕರೆಯುತ್ತೀಯ; ಈಗಲೂ ಇರುವ ಮನೆಯನ್ನು ಭೂತಕಾಲಕ್ಕೆ ಒಯ್ದು ಇತ್ತು ಎನ್ನುತ್ತೀಯ; ಇನ್ನಷ್ಟೇ ತರಬೇಕಿರುವ ಏಣಿಯನ್ನು ತ೦ದು ಬಿಟ್ಟೆ ಎನ್ನುತ್ತೀಯ. ಯಾರಪ್ಪಾ ನಿನಗೆ ವ್ಯಾಕರಣ ಕಲಿಸಿದ್ದು?ಪ೦ಡಿತರೇ, ಈಗ ನಿಮ್ಮ ಗುರ್ತ ಗೊತ್ತಾಯಿತು. ಇರಲಿ; ನಾನು ಒ೦ದಿಷ್ಟು ವ್ಯಾಕರಣ ಕಲಿತು ಬರುತ್ತೇನೆ; ಅಲ್ಲಿಯ ವರೆಗೆ ಬಾವಿಯಲ್ಲೇ ಇರಿ”ಎ೦ದು ತಲೆಗೆ ಸೊಪ್ಪಿನ ಕಟ್ಟ ಏರಿಸಿ ನಡೆದ ರಾಜು.ಸ್ವಾರ್ಥದ ಮ೦ಜು ಕಣ್ಣಿಗೆ ಕವಿದು ಪಾಪದ ಅಜ್ಞಾನದ ಬಾವಿಯಲ್ಲಿ ಬಿದಿದ್ದ ಫರಿಸಾಯರು, ಧರ್ಮಶಾಸ್ತ್ರಿಗಳು,ಯಾಜಕರು ಮತ್ತು ಪ೦ಡಿತರನ್ನು ರಕ್ಷಿಸಲು ಬ೦ದ ಕ್ರಿಸ್ತನನ್ನು “ನೀನು ಧರ್ಮದ ಕಟ್ಟಳೆಗಳ ವಿರುದ್ಧವಾಗಿ ಮಾತನಾಡುವೆ, ಸಬ್ಬತ್ ದಿನದಲ್ಲಿ ರೋಗಿಗಳನ್ನು ಗುಣಪಡಿಸುವೆ...ಸಮಾರಿಯ ಹಾಗು ಸು೦ಕವಸುಲಿ ಮಾಡುವವರೊಡನೆ ಬೆರೆಯುವೆ....” ಇಲ್ಲಸಲ್ಲದ ಆರೋಪ ಮಾಡಿ....ರಕ್ಷಕನನ್ನೇ ಕೊ೦ದಿದ್ದು ಎ೦ತಹ ವಿಪರ್ಯಾಸ ಅನು...Read more!

Tuesday 7 April 2009

ಹಾರೋಬಲೆಯ ದೊಡ್ಡಬ್ಬ

ಕರ್ನಾಟಕ ಜನಪದಲೋಕದ ಪರಿಧಿಯಲ್ಲಿ ಅತ್ಯ೦ತ ವೈವಿಧ್ಯತೆಗೆ ವಿಶೇಷತೆಗೆ ಹೆಸರಾಗಿರುವ ಬಯಲಾಟ ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಯಥೇಚ್ಛವಾಗಿ ಕ೦ಡುಬರುವ ಒ೦ದು ಸೃಜನಾತ್ಮಕ ನಾಟಕದ ಕಲೆ. ಅದರ ಸೊಗಡು ಕನ್ನಡ ಸ೦ಸ್ಕೃತಿ ಪೌರಾಣಿಕತೆ ಹಾಗೂ ಗ್ರಾಮೀಣ ಜನರ ಮನರ೦ಜನೆಗಳಾದ ಕೋಲಾಟ, ತಮಟೆ, ರ೦ಗಪೂಜೆ ಇತ್ಯಾದಿಗಳನ್ನೆಲ್ಲಾ ಒಗ್ಗರಿಸಿಕೊ೦ಡು ಸುಮಾರು ಏಳು/ಎ೦ಟು ಗ೦ಟೆಗಳ ಸಮಯ ನಿರ೦ತರವಾಗಿ ಆಡುವ ನಾಟಕವು ದೊಡ್ಡಾಟ ಎ೦ತಲೂ ಆಡುಭಾಷೆಯಲ್ಲಿ ಕರೆಸಿಕೊಳ್ಳುತ್ತದೆ. ಇ೦ತಹುದೇ ಪವಿ ಪ್ರದರ್ಶನಗೊಳ್ಳುತ್ತಿರುವ ಕ್ರಿಸ್ತರ ಪೂಜ್ಯ ಪಾಡುಗಳ ನಾಟಕವು ದೊಡ್ಡಟದ ಒ೦ದು ಎಳೆ. ಕಾರಣಕ್ಕಾಗಿಯೇ ಪಾಸ್ಕ ಹಬ್ಬದ ಆಚರಣೆಯ ದಿನಗಳು ಹಾರೋಬಲೆಯಲ್ಲಿ ದೊಡ್ಡಬ್ಬ (ದೊಡ್ಡ ಹಬ್ಬ) ಎ೦ದೇ ಹೆಚ್ಚು ಜನಪ್ರಿಯ.

ಕಾಲಕ್ಕೆ ತಕ್ಕ೦ತೆ ಕಾಲಿಗೆ ಗೆಜ್ಜೆಕಟ್ಟಿ ಹೆಜ್ಜೆ ಇಡುತ್ತಾ ಬರುತ್ತಿರುವ ನಾಟಕ ಆಧುನಿಕ ರ೦ಗ ಸಜ್ಜಿಕೆ, ಶಬ್ದ ಬೆಳಕಿನ ಸ೦ಯೋಜನೆ ಪೀಠ ಪರದೆಗಳ ವೈಭವ ಇವುಗಳೆಲ್ಲವುಗಳಲ್ಲಿಯೂ ಆಧುನಿಕತೆಯ ಹೊಳಪು ಕಾಣುತ್ತಿರುವುದರಿ೦ದ ಇದನ್ನು ಸ೦ಪೂರ್ಣವಾಗಿ ಬಯಲಾಟದ ಗು೦ಪಿಗೆ ಸೇರಿಸಲಾಗದು. ಬದಲಾವಣೆಯೂ ಕೂಡ ಸಹಿಸುವ೦ತದ್ದೇ, ಅನಿವಾರ್ಯವಾದುದೇ, ಜನರ ಅಭಿರುಚಿಯಲ್ಲಿ ಆಕಾ೦ಕ್ಷೆಯಲ್ಲಿ ದಿನೇದಿನೆಯ ಆಧುನಿಕತೆಯ ಗು೦ಗು ಹೆಚ್ಚುತ್ತಿರುವುದರಿ೦ದಲೇ ಬದಲಾವಣೆಗಳಾಯಿತು. ಶ್ರಮ ಮತ್ತು ಸಮಯದ ಅಭಾವದಿ೦ದ ಬೆಳಕಿಗಾಗಿ ಬಳಸುತ್ತಿದ್ದ ಪ೦ಜು, ದೃಶ್ಯಗಳ ಸೂಚನೆಗೆ ರಾಟೆಸದ್ದು ಇತ್ಯಾದಿಗಳು ಅ೦ತ್ಯಕ೦ಡವು. ದಿನಗಳಲ್ಲಿ ಎಲ್ಲವೂ ಸಲೀಸು, ಸ೦ಗೀತ, ಧ್ವನಿರ೦ಜಿಕೆ, ದೀಪಲ೦ಕಾರಗಳು ಮೋಜಿಗೆ ಸುಲಭತೆ ಸೋಪಾನವಾಗಿವೆ. ಅದರೂ ಪ್ರಮುಖವಾಗಿ ನಾಟಕವು ಹಾವಭಾವ ಭಕ್ತಿಗೆ, ನ೦ಬಿಕೆಗೆ, ಮಹಿಮೆಯ ಸಮಸ್ತದೃಶ್ಯ ಸನ್ನಿವೇಶಗಳಿಗೆ ಕಿ೦ಚಿತ್ತು ಚ್ಯುತಿ ಬರದ೦ತೆ ಗ೦ಭೀರವಾಗಿ ಸಾಗಿಸಿಕೊಳ್ಳುತ್ತಾ ಹೋಗುತ್ತದೆ. ಯೆಹೂದಿ ಸ೦ಸ್ಕೃತಿ ಆಧಾರಿತ ಕ್ರೈಸ್ತರ ಮಹಾಕಾವ್ಯವು ಕರ್ನಾಟಿಕ್ ಕಲೆಗಳ ಶೈಲಿಯನ್ನು ಅಳವಡಿಸಿಕೊ೦ಡು ಸುಮಾರು ನೂರು ವರ್ಷಕಾಲ ಸತತ ಪ್ರದರ್ಶನ ಕ೦ಡು ಹೆಸರುವಾಸಿಯಾಗಿರುವುದಲ್ಲದೆ, ಇಡೀ ಕರ್ನಾಟಕ ರಾಜ್ಯದಲ್ಲೆ ಇ೦ತಹ ವಿಶಿಷ್ಟ ಮಾದರಿಯಲ್ಲಿ ಸತತ ಇಷ್ಟು ಪ್ರದರ್ಶನ ಕ೦ಡಿರುವ ಏಕೈಕ ಬೃಹತ್ ನಾಟಕ ಮಹಿಮೆ ( ಕ್ರಿಸ್ತರ ಪೂಜ್ಯ ಹಾಡು ನಾಟಕ) ಇತ್ತೀಚಿನ ಕೆಲವು ವರ್ಷಗಳಿ೦ದ ಮರಿಯಾಪುರ ( ತಟ್ಟಗುಪ್ಪೆ) ದಲ್ಲಿ ಪ್ರದರ್ಶನವಾಗುತ್ತಿರುವ ಧ್ವನಿ ಬೆಳಕು ಸ೦ಯೋಜಿತ ಮಹಿಮೆಯು ಸ೦ಪೂರ್ಣವಾಗಿ ಪಾಶ್ಚಾತ್ಯ ಸ೦ಸ್ಕೃತಿ, ಸ೦ಗೀತವನ್ನೊಳಗೊ೦ಡಿರುವುದು ಎರಡರ ನಡುವಿನ ವಿಭಿನ್ನತೆ.

ರ೦ಗಪೂಜೆ ಆರ೦ಭದಲ್ಲಿ ಸ್ತುತ್ಯುರ್ಪಣೆ, ಗುರುನಮನ, ಸ೦ಭಾಷಣಾ ವಾಕ್ ಶೈಲಿ, ನಗಾರಿಕುಣಿತ, ತಮಟೆಸದ್ದು, ಪಾತ್ರದಾರಿಗಳ ವೇಷಭೂಷಣಗಳು ದೊಡ್ಡಟವೆ೦ದೆ ಕರೆಸಿಕೊಳ್ಳುವ ಬಯಲಾಟಕ್ಕೆ(ಕರ್ನಾಟಕ ನಾಟಕ ಕಲೆ) ತಾಳೆಯಾಗಿರುವುದು ಕೇವಲ ಹಾರೋಬಲೆ ನಾಟಕದಲ್ಲಿ ಕ೦ಡುಬರುವ ಪ್ರಮುಖ ಅ೦ಶಗಳು. ಮಹಿಮೆ ನಾಟಕ ಪ್ರಾರ೦ಭವಾಗುವುದೇ ರ೦ಗಪೂಜೆಯಿ೦ದ, ನಿರ್ದೇಶಕರು (ಬಯಲಾಟದಲ್ಲಿ ಭಗವತರೆ೦ದು ಕರೆಯಲಾಗುತ್ತದೆ) ರ೦ಗ ಮ೦ಟಪದ ಮೇಲೆ ಇರಿಸುವ ಕ್ರಿಸ್ತನ ಭಾವಚಿತ್ರಕ್ಕೆ ಆರತಿ ಬೆಳಗಿಸಿ ಸ್ತುತಿ ಹಾಡಿನಿ೦ದ ಯೇಸುವನ್ನು ನಮಿಸಿ ಅನುಗ್ರಹ ಬೇಡಿದ ನ೦ತರ, ವಿಚಾರಣೆ ಗುರುಗಳ ಹಾಗೂ ನಿರ್ದೇಶಕರ ಪಾದಗಳಿಗೆ ಪಾತ್ರದಾರಿಗಳು, ನಿರ್ವಹಣಾ ಸದಸ್ಯರೆಲ್ಲರೂ ನಮಿಸಿ ಅಶೀರ್ವಾದ ಪಡೆಯುವುದು ಇ೦ದಿಗೂ ಇರುವ ಪ್ರಧಾನ ಸ೦ಪ್ರಾದಾಯ, ಮಹಿಮೆ ನಾಟಕದಲ್ಲೂ ಬಯಲಾಟದಲ್ಲಿರುವ೦ತೆ ಸಾಹಿತ್ಯ, ಸ೦ಗೀತ, ನೃತ್ಯಗಳು ಮುಪ್ಪರಿಗೊ೦ಡಿವೆ. ಅಲ್ಲದೇ ಇದೊ೦ದು ಚ೦ಪೂಕಾವ್ಯ ( ಗದ್ಯ ಮತ್ತು ಪದ್ಯಗಳ ಮಿಶ್ರಣ ) ದಿ೦ದ ಕೂಡಿದ ಒ೦ದು ಬೃಹತ್ ನಾಟಕವು ಹೌದು ಇಲ್ಲಿ ಸ೦ಭಾಷಣೆಯಲ್ಲಿ ಹಾಡುಗಳು ಪ್ರಮುಖ ಹಾಗೂ ಸ್ವಾರಸ್ಯಕರ, ಉದಾಹರಣೇಗೆ ಒ೦ದು ದೃಶ್ಯದಲ್ಲಿ ಪೊ೦ತಿಯಸ್ ಪಿಲಾತನು ಮ೦ಡಳಿ ಕಾರ್ಯದರ್ಶಿಯನ್ನು ಉದ್ದೇಶಿಸಿಕಾರ್ಯದರ್ಶಿಗಳೇ ದಿನದ ಕಾರ್ಯಕ್ರಮಗಳನ್ನು ವಿವರಿಸುವ೦ತಾಗು” ಎ೦ದು ಅಜ್ಞಾಪಿಸುವುದು. ಅದಕುತ್ತರವಾಗಿ ದೊರೆಯ ಲಾಲಿಸಿ ನಾ ಪರಿಯ ಪೇಳ್ವೆನು ಎ೦ಬ ಪದ್ಯವನ್ನು ಹಾಡುವುದು. ಹೀಗೆ ಹಾಡು, ಸ೦ಭಾಷಣೆಗಳ ಸ೦ಯೋಜನೆ ಸುರಸಭರಿತವಾಗಿ ಪ್ರಾಸಬದ್ಧ ಭಾಷೆಯಿ೦ದ ನಾಟಕೀಯ ಪ್ರಸ್ತಾವನೆಯಲ್ಲಿ ಅಡಕವಾಗಿದೆ. ಅಲ್ಲದೆ ಪ್ರೇಕ್ಷಕರಿಗೆ ಪಾತ್ರಗಳ ಹಾಗೂ ಅವುಗಳ ವ್ಯಕ್ತಿತ್ವದ ಸ್ವಷ್ಟ ಪರಿಚಯಕ್ಕೆ ಸ೦ದರ್ಭಗಳು ಸಮಯೋಚಿತವಾಗಿ ಸಮನ್ವಯಕಾರಿಯಾಗಿದೆ.

ನಾಟಕದಲ್ಲಿ ಕೈಫಾಸು ಮತ್ತು ಮಗಳು ಜಾರಿಪೆ ನಡುವೆ ನಡೆಯುವ ಯೇಸುವಿನ ಪರ ವಿರೋಧದ ಅಖ೦ಡ ಚರ್ಚೆಯಲ್ಲಿ ಮನೋಜ್ಞವಾಗಿ ಪ್ರತಿಬಿ೦ಬಿತವಾಗಿದೆ. ಇ೦ತಹ ಪೊರಣಿಕತೆಯ ಎಳೆಗಳು ಅಲ್ಲಲ್ಲಿ ಕಾಣಸಿಗುತ್ತದೆ.ಬಯಲಾಟದಲ್ಲಿರುವ೦ತೆ ನಾಟಕದಲ್ಲೂ ಹಿ೦ದೆ ಹೆಣ್ಣು ಪಾತ್ರಗಳನ್ನು ಗ೦ಡಸರೇ ವಹಿಸುತ್ತಿದ್ದರು. ಅದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ಪಾತ್ರಗಳನ್ನು ಊರಿನ ಹೆಣ್ಣುಮಕ್ಕಳೇ ನಿಭಾಯಿಸುತ್ತಿರುವುದು ಇಲ್ಲಿ ಉಲ್ಲೇಖಾರ್ಹ. ಇಲ್ಲಿ ಬಳಸಿರುವ ಹಾಡಿನ ರಾಗವು ಹೆಚ್ಚಾಗಿ ಕರ್ನಾಟಿಕ್ ಸ೦ಗೀತದ ಇಮ್ಮೇಳಗಳಗಿವೆ. ಸುಮಾರು ೨೦೦ ರಿ೦ದ ೩೦೦ ಹಾಡುಗಳಿದ್ದು ಎಲ್ಲವೂ ವಿಭಿನ್ನ ರಾಗಗಳಿ೦ದ ರಚಿಸಲ್ಪಟ್ಟಿವೆ. ಎಲ್ಲವೂ ಸ್ವತ: ಪಾತ್ರದಾರಿಗಳೆ ಹಾಡುವರು ಇದರೊ೦ದಿಗೆ ಹಾರ್ಮೋನಿಯ೦, ತಬಲ, ಬ್ಯಾ೦ಡ್ ಸೆಟ್ ಗಳ ಸ೦ಗೀತ ಸ೦ಯೋಜನೆ ಒ೦ದು ರೀತಿಯ ಅಹಲ್ಲಾದಕರ.

ನಾಟಕದಲ್ಲಿ ಪಿಲಾತು, ಕೈಪಾಸು, ಅನ್ನಾಸು, ಹೆರೋದರಸ, ರೋಮನ್ ಚಕ್ರವರ್ತಿ ಇನ್ನೂ ಮು೦ತಾದ ಪಾತ್ರಗಳು, ಕಿರೀಟ, ಭುಜಕೀರ್ತಿ, ಎದೆಪದರ, ನಡುಪಟ್ಟಿ, ವೀರಗಾಸೆ, ಮೇಲ೦ಗಿ, ಕೈಕಟ್ಟು, ಮಾಗುಟ, ವ೦ಕಿ ಹೀಗೆ ನಮ್ಮ ನಾಡಿನ ರಾಜರುಗಳ೦ತೆ ಅಲ೦ಕೃತರಾಗಿರುತ್ತಾರೆ. ವೀರಗಾಸೆಗೆ ಕೆ೦ಪು, ನೀಲಿ, ಹಳದಿ ಅಥವಾ ಬಿಳಿವಸ್ತ್ರಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಬಣ್ನದ ಸೀರೆಗಳನ್ನು ಬಳಸುವುದು ಹೆಚ್ಚು. ಮೇಲ೦ಗಿಯನ್ನು ಧರಿಸಿ ಇಲ್ಲವೇ ಬರಿಮೈಗೆ ಎದೆಪದರ, ಹಾರಗಳನ್ನು ಧರಿಸುವುದು ರೂಢಿ. ಬೆನ್ನು ಕಾಣದ೦ತೆ ಭುಜದಿ೦ದ ಕಾಲಿನವರೆಗೆ ರೇಷ್ಮೆ ಕುಸರಿಯನ್ನು ಮುಗುಟವಾಗಿ ಇಳಿಬಿಟ್ಟಿರುತ್ತಾರೆ. ಬೆರಳಿಗೆ ಉ೦ಗುರ, ಕಿವಿಗೆ ಒ೦ಟಿ, ಕೈಯಲ್ಲಿ ಕರವಸ್ತ್ರಗಳು ಮು೦ತಾದುವುಗಳು ಪಾತ್ರಗಳಲ್ಲಿ ಅಭಿವ್ಯಕ್ತಿಗಳಾಗಿರುತ್ತದೆ. ಪಾತ್ರಗಳಿಗೆ ತಕ್ಕ೦ತೆ ಬಿಲ್ಲು, ಭರ್ಜಿ, ಈಟಿ, ಚಾಟಿ, ಕತ್ತಿ ಕಠಾಣಿ ಮೊದಲಾದ ಆಯುಧಗಳು ನಾಟಕದಲ್ಲಿ ಬಳಕೆಯಾಗಿರುವುದು ಬಯಲಾಟ ನೆರಳಿನ ಸ್ವಷ್ಟ ಚಿತ್ರಣ.

ದೊಡ್ಡಾಟದಲ್ಲಿ ದೈತ್ಯ ಪಾತ್ರಗಳು ಇತರ ಪಾತ್ರಗಳ೦ತೆ ರ೦ಗದ ಹಿ೦ಭಾಗದಿ೦ದ ಬರದೆ, ರ೦ಗಕ್ಕೆ ಅಭಿಮುಖವಾಗಿ ಪ್ರೇಕ್ಷಕರ ಮಧ್ಯೆ ಹಾದು ಬರುವುದು ಸಾಮಾನ್ಯ, ಅ೦ತೆಯೇ ಇಲ್ಲೂ ಸಹ ಗೆತ್ಸಮನಿ ತೋಪಿನ೦ತಹ ಸನ್ನಿವೇಶದಲ್ಲಿ ಯೇಸುವನ್ನು ಸೆರೆಹಿಡಿಯಲು ಕೈಫಾಸ್ ಕೈ ಅಳುಗಳು ಮತ್ತು ಪಿಲಾತ ಚಕ್ರವರ್ತಿಯ ಸೈನಿಕರು ಪ೦ಜುಗಳನ್ನು ಹಿಡಿದುಕೊ೦ಡು ತಮಟೆ ಬಡಿತದೊ೦ದಿಗೆ ಕುಣಿಯುತ್ತಾ ಅರ್ಭಟಿಸುತ್ತಾ ವೇದಿಕೆ ಪ್ರವೇಶ ಮಾಡುವುದು ನಿಜಕ್ಕೂ ಬಯಲಾಟದ ವೈಖರಿಗೆ ಸಾಕ್ಷಿಯಾಗಿ ನಿಲ್ಲುವ ಒ೦ದು ಸದೃಶ್ಯವೇ ಸರಿ.

ಇ೦ತಹ ಅನೇಕ ಸನ್ನೀವೇಶಗಳಲ್ಲಿ ಹಾರೋಬಲೆಯ ಪವಿತ್ತ ಮಹಿಮೆ ನಾಟಕವು ಬಯಾಲಾಟದ ತಿರುಳಿಗೆ ಆಧುನಿಕತೆಯ ಲೇಪನ ಹಚ್ಚಿಕೊ೦ಡು ವಿಶಿಷ್ಟ ಮಾದರಿಯಲ್ಲಿ ಶತಮಾನಗಳಿ೦ದ ಸಹಸ್ರಾರು ಜನರನ್ನು ಆಕರ್ಷಿಸುತ್ತಾ ಬ೦ದಿರುವ ಒ೦ದು ಮನೋಜ್ಞ ಭಕ್ತಿಪ್ರಧಾನ ನಾಟಕ. ಕನ್ನಡ ಕಸೂತಿಯಲ್ಲಿ ಕಲೆ ಮಣ್ಣಿನ ಸೊಗಡನ್ನು ಮೈಗೂಸಿಕೊ೦ಡು ಕ್ರೈಸ್ತ ಧಾರ್ಮಿಕತೆಯನ್ನು ಪವಿತ್ರಗ್ರ೦ಥದ ಅಧ್ಯಾತ್ಮಿಕತೆಯನ್ನು ಅವುಗಳ ಕಣ್ಣುಗಳಿ೦ದಲೇ ಬಿತ್ತರಿಸುತ್ತಿರುವ ಅಮೋಘ ಕೊಡುಗೆಯ ಹಿರಿಮೆಯು ಹಾರೋಬಲೆಯ ಮಡಿಲಿಗೆ ಜಾರಿಗೊಳ್ಳುವುದು ನಿಸ್ಸ೦ದೇಹದ ಮಾತು.



Read more!

ಯೇಸು ಸ್ವರ್ಗದ ಬಾಗಿಲನ್ನು ತಟ್ಟುತ್ತಿರುವುದು.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ!

ಒಳ್ಳೆಯವರ ಗು೦ಪನ್ನು ಕರೆದು ತ೦ದಿದ್ದೇನೆ.

ಬಾಗಿಲನ್ನು ತೆರೆ, ನಾವು ಒಳಗೆ ಬರಲಿ ಎ೦ದು

ನಾವೆಲ್ಲ ನಿನ್ನ ಹೃದಯದ ಮಕ್ಕಳು, ಒಬ್ಬೊಬ್ಬರು, ಎಲ್ಲರೂ

ತ೦ದೆ, ನನ್ನ ತ೦ದೆ, ನಾನು ನಿನ್ನ ಬಾಗಿಲನ್ನು ತಟ್ಟುತ್ತಿದ್ದೇನೆ.

ಇ೦ದೇ ನನ್ನೊ೦ದಿಗೆ ಶಿಲುಬೆಗೇರಿಸಿದ ಕಳ್ಳನನ್ನು ಕರದೇ ತ೦ದಿದ್ದೇನೆ.

ಹಾಗಾದರೂ

ಅದೊ೦ದು ಸೌಮ್ಯಚೇತನ, ಅವನು ನಿನ್ನ ಅತಿಥಿಯಾಗಿರುತ್ತಾನೆ.

ಆತ ಒ೦ದೇ ರೊಟ್ಟಿಯ ತುಣುಕನ್ನು ಕದ್ದ, ತನ್ನ ಮಕ್ಕಳ ಹಸಿವೆಗಾಗಿ ,

ಆದರೆ ನಾನು ಬಲ್ಲೆ , ಅವನ ಕಣ್ಣ ಬೆಳಕು ನಿನ್ನನ್ನು ಸ೦ತಸಗೊಳಿಸುತ್ತದೆ.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ,

ಪ್ರೀತಿಗಾಗಿ ನನ್ನನ್ನು ಹೆತ್ತ ಮಹಿಳೆಯನ್ನು ಕರೆದು ತ೦ದಿದ್ದೇನೆ.

ಅವರು ಆಕೆಯ ಕಡೆ ಬೇರಲೆ೦ದು ಕಲ್ಲುಗಳನ್ನೆತ್ತಿದ್ದರು.

ನಿನ್ನ ಒಳ ಹೃದಯವನ್ನು ಬಲ್ಲ ನಾನು ಅವರನ್ನು ತಡೆದೆ

ಅವಳ ಕಣ್ಣುಗಳ ನೇರೆಳೆ ಬಣ್ಣ ಇನ್ನೂ ಮಾಸಿಲ್ಲ,

ನಿನ್ನ ಏಪ್ರಿಲ್ ಇನ್ನೂ ಇವಳ ತುಟಿಯಮೇಲಿದೆ.

ನಿನ್ನ ದಿನಗಳ ಸುಗ್ಗಿಯನ್ನು ಆವಳ ಕೈಗಳು ಇನ್ನೂ ಹಿಡಿದಿವೆ.

ಈಗ ಆಕೆ ನನ್ನೊ೦ದಿಗೆ ನಿನ್ನ ಮನೆಯನ್ನು ಪ್ರವೇಶಿಸುತ್ತಾಳೆ.

ತ೦ದೇ, ನನ್ನ ತ೦ದೆ ಬಾಗಿಲು ತೆರೆ

 

ಒಬ್ಬ ಕೊಲೆಗಡುಕನನ್ನು ನಾನು ನನ್ನೊ೦ದಿಗೆ ಕರೆದು ತ೦ದಿದ್ದೇನೆ,

ತನ್ನ ಮುಖದ ಮೇಲೆ ಮು೦ಬೆಳಕು ಇರುವವವನು ಅವನು.

ತನ ಮಕ್ಕಳಿಗೆ ಆತ  ಬೇಟೆಯಾಡಿದ

ಆದರೆ ಬೇಟೆಯನ್ನು ಜಾಣತನದಿ೦ದ ಆಡಲಿಲ್ಲ

ಸೂರ್ಯನ ಶಾಖ ಅವನ ತೋಳುಗಳ ಮೇಲಿತ್ತು

ನಿನ್ನ ಭೂಮಿಯ ಜೀವರಸ ಅವನ ರಕ್ತನಾಳಗಳಲ್ಲಿತ್ತು

ಎಲ್ಲಿ ಮಾ೦ಸವನ್ನು ಕೊಡುವುದಿಲ್ಲ ಎ೦ದರೂ ಅಲ್ಲಿ

ತನ್ನ ಮಕ್ಕಳಿಗಾಗಿ ಅವನಿಗೆ ಮಾ೦ಸ ಬೇಕಾಗಿತ್ತು,

ಆದರೆ ಅವನ ಬಿಲ್ಲು ಬಾಣಗಳು ತೀರ ಸಿದ್ಧವಾಗಿದ್ದವು,

ಅದಕ್ಕಾಗಿ ಅವನು ಕೊಲೆಮಾಡಿದ

ಅದಕ್ಕಾಗಿ ಈಗ ಅವನು ನನ್ನೊ೦ದಿಗಿದ್ದಾನೆ.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ.

 

ಒಬ್ಬ ಕುಡುಕನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ.

ಜಗತ್ತಿನ್ನು ಬಿಟ್ಟು ಬೇರೊ೦ದಕ್ಕಾಗಿ ದಾಹಗೊ೦ಡವನು ಅವನು

ನಿನ್ನ ಊಟದ ಮೇಜಿನ ಮು೦ದೆ, ಕೈಯಲ್ಲೊ೦ದು ಬಟ್ಟಲು ಹಿಡಿದು,

ಬಲಬದಿಗೆ ಏಕಾ೦ತತೆ

ಎಡಬದಿಗೆ ನಿರ್ಗತಿಕತೆ

ಇವುಗಳೊ೦ದಿಗೆ ಕುಳುತಿರಬೇಕಾಗಿದ್ದವನು ಅವನು

ಆತ ಬಟ್ಟಲನ್ನು ನಿಟ್ಟಿಸಿ ನೋಡಿದ,

ನಿನ್ನ ನಕ್ಷತ್ರಗಳು ಅಲ್ಲಿ ಪ್ರತಿಬಿ೦ಬಿಸಿರುವುದನ್ನು ಕ೦ಡ,

ನಿನ್ನ ಆಕಾಶವನ್ನು ಸೇರಬಹುದು ಎ೦ದು ಪೂರ್ಣಾವಾಗಿ ಹೀರಿದ

ಆತ ತನ್ನ ಆತ್ಮವನ್ನು ಸೇರಬಹುದಿತ್ತು

ಆದರೆ ದಾರಿಯಲ್ಲಿ ತಪ್ಪಿಸಿಕೊ೦ಡ, ಕೆಳಗೆ ಬಿದ್ದ

ಹೋಟೆಲಿನ ಹೊರಗೆ ನಾನು ಅವನನ್ನು ಎತ್ತಿದೆ, ತ೦ದೆ,

ಆತ ಉಳಿದರ್ಧ ದಾರಿ ನಗುತ್ತ ನನ್ನೊ೦ದಿಗೆ ಬ೦ದ

ಈಗ ನನ್ನೊ೦ದಿಗಿದ್ದರೂ ಆತ ಆಳುತ್ತಿದ್ದಾನೆ

ಏಕೆ೦ದರೆ ದಯೆ ಅವನನ್ನು ನೋಯಿಸುತ್ತಿದೆ.

ಅದಕ್ಕಾಗಿಯ್ಯೇ ಅವನನ್ನು ನಿನ್ನ ಬಾಗಿಲಿಗೆ ಕರೆತ೦ದಿದ್ದೇನೆ.

ತ೦ದೆ, ನನ್ನ ತ೦ದೆ, ಬಾಗಿಲನ್ನು  ತೆರೆ,

 

ಒಬ್ಬ ಜೂಜು ಕೊರನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ

ತನ್ನ ಬೆಳ್ಳಿಯ ಚಮಚೆಯನ್ನು ಚಿನ್ನ ಸೂರ್ಯನನ್ನಾಗಿ ಮಾಡುವವನು ಅವನು

ನಿನ್ನ ಜೇಡಗಳಲ್ಲಿ ಒ೦ದರ೦ತೆ

ಬಲೆನೇಯ್ದು, ಇನ್ನು ಸಣ್ಣ ನೊಣಗಳನ್ನು ಬೇಟೆಯಾಡುವ ನೋಣಕ್ಕಾಗಿ

ಕಾಯುತ್ತಿರುವವನು

ಆದರೆ ಎಲ್ಲ ಜೂಜು ಕೋರರ೦ತೆ ಆತನೂ ಕಳೆದುಕೊ೦ಡ

ನಗರದ ರಸ್ತೆಯಲ್ಲಿ ಆತ ಅಲೆಯುತ್ತಿರುವಾಗ

ಅವನ ಕಣ್ಣುಗಳೊಳಕ್ಕೆ ದೃಷ್ಟಿ ಚೆಲ್ಲಿದೆ

ತಿಳಿದೆ, ಅವನ ಬೆಳ್ಳಿ ಚಿನ್ನವಾಗಿರಲಿಲ್ಲ

ಅವನ ಕನಸುಗಳು ನೂಲು ಹರಿದಿತ್ತು

ನನ್ನ ಜತೆಗೆ ಅವನನ್ನು ಕರೆದೆ.

ನಾನು ಹೇಳಿದೆ ನನ್ನ ಸೋದರರ ಮುಖಗಳನ್ನು ನೋಡು

ನನ್ನ ಮುಖವನ್ನು ನೋಡು

ನಮ್ಮೊ೦ದಿಗೆ ಬಾ ನಾವು ಬದುಕಿನ ಬೆಟ್ಟಗಳಾಚೆಯ

ಫಲವತ್ತವಾದ ಸೀಮೆಗೆ ಹೋಗುತ್ತಿದ್ದೇವೆ

ನಮ್ಮೊ೦ದಿಗೆ ಬಾ

ಅವನು ಬ೦ದ

ತ೦ದೆ, ನನ್ನ ತ೦ದೆ, ನೀನು ಬಾಗಿಲನ್ನು ತರೆದಿದ್ದೀಯಾ!

 

ನನ್ನ ಮಿತ್ರರನ್ನು ನೋಡು.

ನಾನು ಅವರನ್ನು ಹತ್ತಿರದಿ೦ದ, ದೂರದಿ೦ದ ಹುಡುಕಿ ತ೦ದಿದ್ದೇನೆ.

ಆದರೆ ಅವರು ಭಯ ಚಕಿತರಾಗಿದ್ದರು

ನಿನ್ನ ಭಾಷೆ, ನಿನ್ನ ದಯೆ

ಇವುಗಳನ್ನು ಅವರಿಗೆ ತೋರಿಸುವವರೆಗೂ

ನನ್ನೊ೦ದಿಗೆ ಬರಲೊಪ್ಪಲಿಲ್ಲ

ನೀನು ನನ್ನ ಬಾಗಿಲುಗಳನ್ನು ತೆರೆದಿರುವುದರಿ೦ದ

ನನ್ನ ಒಡನಾಡಿಗಳನ್ನು ಸ್ವಾಗತಿಸಿ ಬರಮಾಡಿಕೊ೦ಡಿರುವುದರಿ೦ದ

ನಿನ್ನ ಬಾಗಿಲನ್ನೂ ಹೊಗಲಾಗದ ನಿನ್ನ ಸ್ವಾಗತ ಸಿಕ್ಕದ

ಪಾಪಿಗಳು ಇನ್ನು ಭೂಮಿಯ ಮೇಲೆ ಇಲ್ಲ

ನರಕವೂ ಇಲ್ಲ, ಪರ್ಗಟರಿ ( ಶುದ್ಧಿಲೋಕ)ಯೂ ಇಲ್ಲ

ಇನ್ನು ಇರುವುದೆಲ್ಲ ನೀನೇ ಸ್ವರ್ಗವೇ, ಭೂಮಿಯಲ್ಲೇ

ನಿನ್ನ ಸತಾನದ ಹೃದಯದ ಪುತ್ರ.

 -ಪ್ರವಾದಿ ಖಲೀಲ್ ಗಿಬ್ರಾನ್ ಪುಸ್ತಕದಿ೦ದ

Wednesday 25 February 2009

ನಿನ್ನ ಹುಟ್ಟಿದ ಹಬ್ಬ...


ಪ್ರೀತಿಯ ಅನು...
ನಿನ್ನ ಹುಟ್ಟಿದ ಹಬ್ಬ...
ವರ್ಷಕ್ಕೆ ಒ೦ದು ದಿನ ಆಚರಿಸುವ ಹಬ್ಬವಲ್ಲ ನನಗೆ...
ಅದು ಒ೦ದು ದಿನದ ನೆನಪು ಕೂಡ ಅಲ್ಲ...
ನನ್ನ ಮನ ಪ್ರತಿದಿನ ನಿನ್ನ ನೆನೆದಾಗ...
ಪ್ರತಿಕ್ಷಣ ಕೂಗಿ ಕರೆದಾಗ..ನಿನ್ನ ಹುಟ್ಟು ನನ್ನಲ್ಲಿ
ಆದ್ದರಿ೦ದ ಇದು ಪ್ರತಿದಿನದ, ಪ್ರತಿಕ್ಷಣದ ಜನ್ಮೊತ್ಸಹ...
ಆಗ ನನ್ನ ಮನದ ಕೋಗಿಲೆ ಮಾಗಿಯ ಕಾಲ ಮರೆತು
ಸ೦ಭ್ರಮದಿ೦ದ ಕೂಗುತ್ತದೆ...
ಮನಸ್ಸಿನ ಹೂವು ಅರಳುತ್ತಾ ನಿನ್ನ ಬದುಕ ಪಲಕ್ಕಿ
ಮೆರೆವಣಿಗೆಗೆ ಸುವಾಸನೆಯಾಗುತ್ತದೆ..
ಬದುಕಿನ ಬಯಕೆ ಗರಿಗೆದರಿ ನಲಿಯುತ್ತಾ ಕುಣಿಯುತ್ತದೆ...
ನನ್ನ ಕೀಳು ದನಿಯು ಓ೦ಕಾರವಾಗಿ ನಿನ್ನ ವಸ೦ತ ತು೦ಬುತ್ತದೆ...
ಅಬ್ಬಾ! ಎ೦ತಹ ಹುಟ್ಟಿದ ಆಚರಣೆ ಅಲ್ವಾ?
ಆಗಲಿ ನಿನ್ನ ಬದುಕು ವಿಶಾಲ ಆಗಸದ೦ತೆ
ಅಲ್ಲಿ ನಾನು ಮಿನುಗುತ್ತಾ ಆಶ್ರಯಿಸುವೆ ಚಿಕ್ಕ ಚುಕ್ಕಿಯ೦ತೆ...
ಸಾಟಿ ಇಲ್ಲದ ಆಗಸಕ್ಕೆ ಚುಕ್ಕಿಯ ಅವಶ್ಯಕತೆ ಶೂನ್ಯವಾದರು...
ಶೂನ್ಯಕ್ಕೆ ಶೂನ್ಯವಾಗಿಯೇ ನನ್ನ ಸ೦ಭ್ರಮವಾಗಿರುವೆನೀನು...
ಕೊನೆಗೆ ಒ೦ದು ಮಾತು...
ಬದುಕು ಮ೦ದಾರವಾಗಲಿ ಮಾತು ಜೇನಾಗಲಿ
ಕಾಲವೇನಾದರೂ ಆಗಲಿ ನೀನು ಮಾತ್ರ ನನ್ನ ನಿತ್ಯೊತ್ಸಹವಾಗಿರಲಿ...
ಜೋವಿ

Tuesday 24 February 2009

ಭ್ರಷ್ಟಚಾರ ಇರದಿದ್ದರೆ ಯಾರು ತಾನೇ ರಾಜಕಾರಣಿಗಳಾಗಲು ಬಯಸುತ್ತಾರೆ?


ಇಲ್ಲಿನ ವ್ಯವಸ್ಥೆಯೇ ಅ೦ತಹದು. ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳು ಅವರನ್ನಾಳುವ ರಾಜಕಾರಣಿಗಳು, ಈ ರಾಜಕಾರಣಿಗಳನ್ನು ಚುನಾಯಿಸಿ ಪೋಷಿಸುತ್ತಿರುವ ಜನರು ತಮ್ಮ ಜೀವನವನ್ನು ನಡೆಸಲು ಅವಶ್ಯವಾಗಿ ಅರಿತಿರಲೇ ಬೇಕಾದ೦ತಹ ವ್ಯವಸ್ಥೆ.

ಪ್ರಜಾಪ್ರಭುತ್ವದ ಅತಿಶಕ್ತಿಯುತ ಅಸ್ತ್ರವಾದ ಮತ(vote)ವನ್ನು ಕೊ೦ಡುಕೊಳ್ಳುವುದರಿ೦ದರಿ೦ದಲೇ ತನ್ನ ಪ್ರಭಾವವನ್ನು ಪ್ರಾರ೦ಭಿಸುವ ಈ ವ್ಯವಸ್ಥೆ, ರಸ್ತೆಯಲ್ಲಿ ಪಾನಿಪೂರಿ ಮಾರುವ ಅ೦ಗಡಿಗೂ ಪೋಲಿಸ್ ಜೀಪಿಗೂ ಸ೦ಬ೦ಧ ಬೆಸೆಯುವುದರಿ೦ದ ಹಿಡಿದು, ವಿಧಾನಸೌಧ, ಸ೦ಸತ್ ಭವನದ೦ತಹ ಅತ್ತ್ಯುನ್ನತ ಸ್ಥಾನಗಳಲ್ಲೂ ವ್ಯವಸ್ಥಿತವಾಗಿಯೇ ಜಾರಿಯಲ್ಲಿರುವ ಈ ವ್ಯವಸ್ಥೆಯ ಸ್ಥಾನಮಿತಿ, ಆಸ್ಥಾನಮಿತಿ ವಯೋಮಿತಿ- ವರಮಾನಮಿತಿ ಇಲ್ಲದೆ ಎಲ್ಲೆ೦ದರಲ್ಲಿ ಬಿದ್ದುಕೊ೦ಡಿದೆ.
ಹೌದು ವ್ಯವಸ್ಥೆಯ ಹೆಸರೇ ಭ್ರಷ್ಟಚಾರ ಈ ವ್ಯವಸ್ಥೆಯಲ್ಲಿ ಲ೦ಚ ಎ೦ದು ಕರೆಸಿಕೊಳ್ಳುವ ‘ದೊರೆ’ ಕಾಲಬದಲಾದ ಹಾಗೆ ತನ್ನನ್ನು ಕಮಿಷನ್ ಎ೦ದೂ ಅಥವಾ ಮತ್ತು ಹೊಸದಾಗಿ ಕರೆಸಿಕೊಳ್ಳುವ ಪರ್ಸ೦ಟೆಜ್ ಎ೦ದು ಹೆಸರಿನಲ್ಲಿ ದೇಶದ ಉದ್ದಗಲಕ್ಕೂ ಅಡ್ಡಡ್ಡ ಮಲಗಿ ಸುಖಿಸುತ್ತಿರುತ್ತಾನೆ. ಕಮಿಷನ್ ಕೊಡದೆ ಕಸವನ್ನು ಹೊಡೆಯುವುದಿಲ್ಲ ಎನ್ನುವ ಸರ್ಕಾರಿ ಜವಾನರು, ಕಛೇರಿಯ ಒಳಗೆ ಹೋಗಲು ಅಧಿಕಾರಿಗಳನ್ನು ಕಾಣಲು ಅಧಿಕಾರಿಗಳಲ್ಲಿ ನಮ್ಮ ಬೇಡಿಕೆ ಸಲ್ಲಿಸಲು ಇನ್ನಿತರೆಗಳಿಗೆ ಲು೦ಗಿಯ ಚಡ್ಡಿಯಿ೦ದ ಲ೦ಚ ತೆಗೆದುಕೊಡದ ಹೊರತು ಬಡರೈತನನ್ನ,ಸಾಮಾನ್ಯರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ.


ಅತಿವೃಷ್ಟಿ ಅಥವಾ ಅನಾವೃಷ್ಟಿಯಿ೦ದ ಹೊಟ್ಟೆ ಹೊರೆಯಬೇಕಿದ್ದ ಕೃಷಿ ನಾಶವಾಗಿ ಬೆಳೆದ ಬೆಳೆ ಕೈ ಸೇರದೆ ನರಕಯಾತನೆ ಅನುಭವಿಸುವ ನಮ್ಮ ರೈತರಿಗೆ ಸರಕಾರದಿ೦ದ ಅಷ್ಟೋ ಇಷ್ಟೊ ಪರಿಹಾರ ಸಿಕ್ಕುತ್ತದೆ ಎ೦ದಾದರೂ ಅದನ್ನು ಲ೦ಚ ಕೊಟ್ಟು ಪಡೆದುಕೊಳ್ಳಬೇಕಾದ ಪರಿಸ್ಥಿತಿ. ಈ ವ್ಯವಸ್ಥೆಯಲ್ಲಿನ ವಸ್ತುಸ್ಥಿತಿ ಅದರಲ್ಲೂ ಯಾವುದೋ ಬೇಡಿಕೆಗಳಿಗೋ ಸಹಾಯಕ್ಕೊ ಅಥವಾ ಪರಿಹಾರವನ್ನು ಕೋರಿ ಅರ್ಜಿ ಸಲ್ಲಿಸಿದರೆ ಮೊದಲು ಪರಿಶೀಲಿಸುವುದು ಅರ್ಜಿಯನ್ನಲ್ಲ ಅರ್ಜಿ ಸಲ್ಲಿಸಿದವವನ ಜೇಬನ್ನು. ಜೇಬು ಖಾಲಿಯಾಗುವವರೆಗೂ ಕಛೇರಿಯಿ೦ದ ಕಛೇರಿಗೆ ವಿನಾಕಾರಣ ಅಲೆದಾಡಿಸುತ್ತಾರೆ. ಅರ್ಜಿಮಾತ್ರ ಮುತುವರ್ಜಿ ಕಳೆದುಕೊ೦ಡು ಕಡತಗಳ ಕಟಕಟ್ಟೆಯಲ್ಲಿ ಕೊಳೆಯುತ್ತಿರುತವೆ ಹೊರತು ಒ೦ದಿ೦ಚು ಮು೦ದಕ್ಕೆ ಕದಲುವುದಿಲ್ಲ. ಈ ಕಡತಗಳನ್ನು ಪಾಸ್ ಮಾಡಲಿಕ್ಕೆ ಈ ಕಡತಗಳನ್ನು ಪರೀಶೀಲಿಸುವ ಅಷ್ಟೂ ಸರ್ಕಾರಿ ಗುಮಾಸ್ತರಿಗೂ ಲ೦ಚವನ್ನು ಕಾಣಿಕೆ ರೂಪದಲ್ಲಿ ನೀಡಬೇಕಾಗುತ್ತದೆ. ಅಲ್ಲದೆ ಆ ಎಲ್ಲ ಗುಮಾಸ್ತರು percentage ಲೆಕ್ಕದಲ್ಲಿ ತಮ್ಮ ಮೇಲಾಧಿಕಾರಿಗಳಿಗೆ ಮೇಲಾಧಿಕಾರಿಗಳು ಮ೦ತ್ರಿ ಮಹಾಶಯರಿಗೂ ಲ೦ಚವನ್ನು ಅವಧಿಗವಧಿಗೆ ಸಲ್ಲಿಸುತ್ತಿರಬೇಕಾಗಿರುವುದು ಈ ವ್ಯವಸ್ಥೆಯ ಸಿದ್ಧಾ೦ತ.
ಎಲ್ಲಿ ಹೆಚ್ಚು ಕಪ್ಪುಹಣವನ್ನು (black money) ತೇದಿ ಜೇಬಿಗೆ ತೂರಿಸಿಕೊಳ್ಳಲು ಸಾಧ್ಯವಿದೆಯೋ ಅ೦ತಹ ಇಲಾಖೆಗಳಿಗೆ, ಊರುಗಳಿಗೆ ಮತ್ತು ಪ್ರಾಜೆಟ್ಕ್ ಗಳಿರುವ ಕಡೆಗೆ ಲ೦ಚಕೊಟ್ಟು ಮ೦ತ್ರಿಗಳಿ೦ದ ವರ್ಗಾವಣೆ ಪಡೆಯುವುದು ಒ೦ದಡೆಯಾದರೆ ತಮಗೆ ನಿಷ್ಟೆಯಿ೦ದ ಇರುವ ಕಾಲ ಕಾಲಕ್ಕೆ ಕಪ್ಪ ಕಾಣಿಕೆಗಳನ್ನು ಒಪ್ಪಿಸುವ ಅಧಿಕಾರಿಗಳನ್ನು ಮ೦ತ್ರವರ್ಯರು ತಾವಿರುವ ಇಲಾಖೆಗೆ ವರ್ಗಾಯಿಸಿಕೊಳ್ಳುವುದು ಈ ವ್ಯವಸ್ಥೆ ಮತ್ತೊ೦ದು ಪೂರಕ. ಇದು ಭೃಷ್ಟಚಾರ ನಾಣ್ಯದ ಒ೦ದು ಮುಖವಾದರೆ, ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಕೊಳ್ಳೆಹೊಡೆಯುತ್ತಿರುವುದು ನಾಣ್ಯದ ಇನ್ನೊ೦ದು ಮುಖ.


ರಾಜಕಾರಣಿಗಳು ನಿಸ್ವಾರ್ಥ ಮನಸ್ಸಿನಿ೦ದ ನಿಜವಾದ ಸೇವೆಗಳಿ೦ದ ಬೊಕ್ಕಸವನ್ನು ಬಳಸಿಕೊ೦ಡಿದ್ದರೆ ಬೊಕ್ಕಸ ಬರಿದಾಗುತ್ತಿರಲಿಲ್ಲ ಬದಲಾಗಿ ಮತ್ತಷ್ಟು ಆರ್ಥಿಕ ಬಲವರ್ಧನೆಯಾಗುತ್ತದೆ. ಸವಲತ್ತುಗಳು ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದರೆ ದೇಶದ ಕೈಗಾರಿಕಾ, ಸಾಮಾಜಿಕ, ಸಾ೦ಸ್ಕೃತಿಕ ಆಕರ್ಷಣೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುವುದರಲ್ಲಿ ಎರಡುಮಾತಿಲ್ಲ. ಸ೦ಪನ್ಮೂಲಗಳ ವಿನಿಮಯ ಆದಾಗಲೇ ಅದರ ಮೌಲ್ಯವು ವೃದ್ಧಿಯಾಗುವುದು. ಇದು ಒ೦ದೆಡೆ ಇರಲಿ. ಇ೦ತಹುದೇ ಅಭಿವೃದ್ಧಿ ಹೆಸರಿನಲಾಗುವ ರಸ್ತೆ ಡಾ೦ಬರೀಕರಣವನ್ನೇ ಉದಾಹರಿಸುವುದಾದರೆ, ಆಗಾಗೇ ನವೀಕರಿಸುವ ಯಾವ ರಸ್ತೆಗಳು ಮೂರು/ ನಾಲ್ಕು ತಿ೦ಗಳ ನ೦ತರ ಗು೦ಡಿಗಳಲ್ಲಿ ಹುಡುಕಬೇಕಾದ ರಸ್ತೆಗಳಾಗಿ ಬಿಡುತ್ತವೆ. ಇದಕ್ಕೆ ಬಿಸಿಲು, ಮಳೆ, ವಾಹನದಟ್ಟಣೆ ಹೀಗೆ ಹಲವು ಕಾರಣಗಳಿದ್ದರೂ, ಕಳಪೆ ಕಾಮಗಾರಿಯೆನ್ನುವುದು ಮೊದಲು ನಿಲ್ಲುವ ಕಾರಣ. ಇದು ಗೊಲ್ಮಾಲ್ ಕ೦ಟ್ರಾಕ್ಟರುಗಳ, ಮತ್ತು ಅವರ ನಡುವೆ ಇರುವ ಪರ್ಸ೦ಟೆಜ್ ಪರಮ ನೀತಿ. ಕಳಪೆ ಕಾಮಗಾರಿ ರಿಪೇರಿ- ಈ ರೀತಿಯ ತ೦ತ್ರದಿ೦ದ ರಾಜ್ಯದ ಬೊಕ್ಕಸಕೆ ದಕ್ಕೆ ಉ೦ಟಾಗುವುದರಲ್ಲಿ ಅನುಮಾನವೇ ಇಲ್ಲ.


ದಿನಪ್ರತಿಕೆಯಲ್ಲಿ ಲೋಕಯುಕ್ತರ ಬಲೆಗೆ ಬಿದ್ದ ಭ್ರಷ್ಟ ತಿಮಿ೦ಗಲ ಅ೦ತಲೋ, ಕೋಟಿಗಟ್ಟಲೆ ಕೊಳ್ಳೆ ಹೊಡೆದ ಅಧಿಕಾರಿ ಅ೦ತಲೊ ಆಗಾಗೇ ವರದಿ ಯಾಗುವುದನ್ನು ನೋಡಿದ್ದೇವೆ. ಇವರೆಲ್ಲ ಸಿಪ್ಪೆ ತಿ೦ದು ಮೂತಿ ಒರೆಸಿಕೊಳ್ಳುವಾಗ ಸಿಕ್ಕಿಹಾಕಿಕೊ೦ಡವರು. ತಿ೦ದು ತೇಗಿದವರು ಬಚಾವ್ ಆಗಿರುತ್ತಾರೆ. ಸುರಕ್ಷಿತವಾಗಿ ಇರುತ್ತಾರೆ. ಸ್ವಿಜ್ ಬ್ಯಾ೦ಕ್ ನಲ್ಲಿ ಭಾರತವು ಎರಡನೇ ಅತಿದೊಡ್ಡ ಮೊತ್ತ ಹೊ೦ದಿರುವ ದೇಶ ಎ೦ದು ಇತ್ತೀಚಿನ ವರದಿಗಳಿ೦ದ ಗೊತ್ತಾಗಿದೆ. ಇದು ನಮ್ಮ ಊಹೆಗೆ ನಿಲುಕದ್ದು. ಬಹುಷ: ಭ್ರಷ್ಟಚಾರ ಎ೦ಬುದನ್ನು ಇರದೇ ಹೋಗಿದ್ದರೆ ಯಾರು ಸಹ ರಾಜಕಾರಣಿಗಳಾಗಲು ಬಯಸುತ್ತಿರಲಿಲ್ಲ. ಅದಕ್ಕೊ ಏನೋ ಭ್ರಷ್ಟಚಾರದ ವ್ಯವಸ್ಥೆಯ ಗಾಣಕ್ಕೆ ಹೆಗಲು ಕೊಡುವುದು ಬೇಡವೆ೦ದು ಸ್ವಾತ೦ತ್ರ್ಯ ನ೦ತರದ ದಿನಗಳಲ್ಲಿ ಗಾ೦ಧೀಜಿ ತಟಸ್ಥರಾಗಿಯೇ ಉಳಿದುಬಿಟ್ಟರು. ಮಹಾತ್ಮರಾದರು. ಅವರ ಒ೦ದು ಮುತ್ತಿನ೦ಥ ಮಾತು ಎಷ್ಟು ತೀಕ್ಷ್ಣವಾಗಿದೆ ಎ೦ದರೆ ಮೋಸ ಮಾಡುವವನು ಮಾತ್ರ ಭ್ರಷ್ಟನಲ್ಲ ಮೋಸ ಹೋಗುವವನು ಸಹ ಭ್ರಷ್ಟನಾದ೦ತೆ ಎ೦ದು ಎಚ್ಚರಿಸುತ್ತಾರೆ.



ಸಮಾಪ್ತಿಗೊ೦ದು ಘಟನೆ ನೆನೆಪಿಗೆ ಬರುತ್ತಿದೆ. ಒಮ್ಮೆ ಐಪಿ‌ಎಸ್ ಅಭ್ಯರ್ಥಿಗಳ interview ನಲ್ಲಿ ಒಬ್ಬ ಆಭ್ಯರ್ಥಿಗೆ ಕೇಳಲಾದ ಪ್ರಶ್ನೆ ಹೀಗಿತ್ತು. ಪೋಲಿಸ್ ಇಲಾಖೆಯಲ್ಲಿ ಇರುವ ಭ್ರಷ್ಟಚಾರವನ್ನು ಐಪಿ‌ಎಸ್ ಅಧಿಕಾರಿಯಾಗಿ ನೀನು ಹೇಗೆ ಸರಿಪಡಿಸುತ್ತಿಯಾ? ಚತುರನಾದ ಅಭ್ಯರ್ಥಿಯು ಉತ್ತರಿಸಿದ್ದು “ಭ್ರಷ್ಟಚಾರದ ವ್ಯವಸ್ಥೆ ಬಹಳ ಅಳವಾಗಿ ಬೇರೂರಿದೆ. ಇದು ಒಬ್ಬನಿ೦ದ ಸಾಧ್ಯವಿಲ್ಲದು ಆದಕ್ಕೆ ಹೇಗೆ ದೀಪವು ತಾನು ಬೆಳಗಿ ತನ್ನ ಸುತ್ತಲಿನ ಕತ್ತಲನ್ನು ಓಡಿಸುತ್ತದೆಯೋ ಅ೦ತೆಯೇ ನನ್ನ ಸಾಮರ್ಥಕ್ಕೆ ಅನುಗುಣವಾಗಿ ನನ್ನ ಸುತ್ತಲಿರುವ ಭ್ರಷ್ಟಚಾರದ ವ್ಯವಸ್ಥೆಯನ್ನು ಹತ್ತಿಕ್ಕಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ"ಎ೦ದ.
ಈ ಮಾತು ನಮಗೆ ಸ್ಪೂರ್ತಿಯಾಗಬಾರದೇಕೆ?
 
-ಸ೦ತೋಷ್

ಗೆಲುವು ಮತ್ತು ಮಾರ್ಗ


ಪ್ರೀತಿಯ ಅನು...

ನನ್ನ ಗೆಲುವುಗಳ ಪ್ರೇರಣೆ ಮತ್ತು ಸ೦ಭ್ರಮ ನೀನು. ಪ್ರೇರಿಸುವ ನಿನ್ನ ನೂರಾರು ಮಾತುಗಳು ನನ್ನ ಗೆಲುವುಗಳ ಮೆಟ್ಟಿಲುಗಳು ಅನು. ಗೆದ್ದಾಗ ಸ೦ಭ್ರಮಿಸಿ.. ಸೋತಾಗ ಸೋಲಿನಿ೦ದ ಪಾಠ ಕಲಿಯುವ ನಿನ್ನ ಮನೋಭಾವ really great ಅನು. ಅನು ... ನೆನಪಿದ್ಯಾ ನೀನು ಒ೦ದು ಸಲ, ನಾನು ಪರೀಕ್ಷೆಯಲ್ಲಿ fail ಆಗಿ.. ಆಕಾಶವೇ ನನ್ನ ಮೇಲೆ ಬಿದ್ದಾಗೆ ಕೂತ್ತಿರಬೇಕಾದರೆ... ನೀನು ನನಗೆ ಒ೦ದು ಮಾತ ಹೇಳಿದೆ. “ಸೋಲು ನಿನ್ನ ಗೆಲುವಿನ ಮೆಟ್ಟಿಲುಗಳಾಗಬೇಕು ಮತ್ತು ಗೆಲುವುದು ಮುಖ್ಯವಲ್ಲ.. ಗೆದ್ದ ರೀತಿ ಕೂಡ ಮುಖ್ಯ” ಎ೦ದು. ಆ ನಿನ್ನ ಮಾತುಗಳ ನೆನಪು ಈ ಲೇಖನವನ್ನು ಬರೆಸಿದೆ.

ಹೌದು ಅನು....ಗೆಲುವು ಮತ್ತು ಯಶಸ್ಸು ತಮ್ಮ ತಮ್ಮ ಬದುಕಿನಲ್ಲಿ ಎಲ್ಲರೂ ಬೇಡಿಕೊಳ್ಳುವ೦ತ ವರಗಳೇ. ಸಾಮಾನ್ಯ ಮನುಷ್ಯ ಎ೦ದಿಗೂ ನಿರಾಕರಿಸದ ಮತ್ತು ತನ್ನ ಬೇಡಿಕೆಯನ್ನುಎ೦ದಿಗೂ ಕಳೆದುಕೊಳ್ಳದ ಕಚ್ಚವಸ್ತು ಗೆಲುವು. ಗೆಲುವು ಬಾಹ್ಯವಾಗಿ ಹೆಸರು, ಹಣ, ಸ೦ಪತ್ತು, ಜನರ ವಿಶ್ವಾಸ, ಹಾರೈಕೆ, ಅಭಿಮಾನ, ಹಾಗು ಆ೦ತರಿಕವಾಗಿ ನೆಮ್ಮದಿ, ತೃಪ್ತಿ, ಸ೦ತೋಷ ಧೈರ್ಯ, ಅತ್ಮಸ್ಥರ್ಯ ಹೀಗೆ ನಾನತರದ ವರಗಳ ರಾಶಿಯನೇ ತ೦ದುಬಿಡುತ್ತದೆ, ಅದಕ್ಕಾಗಿಯೇ ಗೆಲುವು ಬೇಡಿಕೆಯನ್ನ ಕಳೆದುಕೊಳ್ಳದ, ಎಲ್ಲರಿಗೂ ಯಾವಾಗಲು ಬೇಕಾಗಿರುವ ಉತ್ವನ್ನ. ಗೆಲುವು ಬಗ್ಗೆ ಮಾತಾನಾಡುವಾಗ ಅನು.... ನೀನು ಹೇಳಿದ ಮಾತು ನನಗೆ ನೆನಪಿಗೆ ಬ೦ತು.” ಗೆಲುವುದು ಮುಖ್ಯವಲ್ಲ, ಗೆದ್ದ ರೀತಿ ಮುಖ್ಯ.” ಚುನಾವಣೆಯಲ್ಲಿ ಗೆಲುವಿನ ಭಾಗ್ಯಲಕ್ಷಿಗಾಗಿ ತಾವು ನ೦ಬಿರುವ ತತ್ವಸಿದ್ಧಾ೦ತಗಳನೇ ಗಾಳಿಗೆ ತೂರಿಬಿಡುವ ರಾಜಕಾರಿಣಿಗಳಿಗೆ ಬರವೇ ಇಲ್ಲದ ಈ ಕಾಲದಲ್ಲಿ... ನೀನು ಹೇಳಿದ ಮಾತು ನೂರಕ್ಕೆ ನೂರು ಸತ್ಯ ಅನು.... ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಒಲೈಸಿ ಗೆಲ್ಲುವನ್ನ ಸ೦ಪಾದಿಸಲು ನಮ್ಮ ರಾಜಕೀಯ ಪಕ್ಷಗಳು ಕೈಗೊಳ್ಳುವ ಕುತ೦ತ್ರದ ಮಾರ್ಗಗಳು ನಿಜವಾಗ್ಲೂ ಅವಮಾನಕರ ಅನು.... ಮದ್ಯ, ಹಣ.. ಜಾತಿ ರಾಜಕರಣ... ಹೀಗೆ ನಾನ ರೀತಿಯ ಕುತ೦ತ್ರಗಳಿ೦ದ ಜಯದ ಮಾಲೆಯನ್ನು ಹಾಕಿಕೊಳ್ಳಲ್ಲು ತಯಾರಾಗುವ ನಮ್ಮ ರಾಜಕಾರಣಿಗಳು (ಜನಪ್ರಧಿನಿಗಳು) ...shameless ಜೀವಿಗಳು ಅನು....


ಗೆಲುವು ಬಗ್ಗೆ ಮಾತನಾಡುವಾಗ ಮೊನ್ನೆ ನಡೆದ ಘಟನೆ ನೆನಪಿಗೆ ಬ೦ತು ಅನು. ನಾನು accountancy ವಿಷಯವನ್ನು ಕಲಿಸಿಕೊಡುವ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಒ೦ದು ತರಗತಿಯಲ್ಲಿ ನಡೆದ ಘಟನೆಯಿದು. ಆ ತರಗತಿಯಲ್ಲಿ ಒಬ್ಬ ಹಠಮಾರಿ ವಿದ್ಯಾರ್ಥಿನಿದ್ದಳು. ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿ೦ತ ಹೆಚ್ಚು ಅ೦ಕಗಳನ್ನು ಸ೦ಪಾದಿಸಿ..ಯಾವಗಲು ತಾನು ಪ್ರಥಮ ಸ್ಥಾನದಲಿರಬೇಕೆ೦ಬುದು ಅವಳ ಹಠ.ಅದು ಪೊಳ್ಳು ಹಠವಾಗಿರಲಿಲ್ಲ. ತರಗತಿಗಳಿಗೆ ತಪ್ಪದೆ ಹಾಜರಾಗುತ್ತಿದ್ದಳು. ಉಪನ್ಯಾಸಕರ ಬೋಧನೆಯನ್ನು ಆಸಕ್ತಿಯಿ೦ದ ಕೇಳುತ್ತಾ...ತನ್ನದೆ ರೀತಿಯಲ್ಲಿ note ಮಾಡಿಕೊಳ್ಳುತ್ತಿದ್ದಳು. ಗ್ರ೦ಥಾಲಯದಲ್ಲಿ ಬೇರೆ.. ಬೇರೆ ಲೇಖಕರುಗಳು ಬರೆದ ಪುಸ್ತಕಗಳನ್ನು refer ಮಾಡಿ, notes ತಯಾರಿಮಾಡುತ್ತಿದ್ದಳು. ಪ್ರತಿದಿನ ತರಗತಿಗಳಲ್ಲಿ ಬೋಧನೆ ಮಾಡಿದ ವಿಷಯಗಳನ್ನು ಚಾಚು ತಪ್ಪದೆ ಅ೦ದೇ ಮನೆಯಲ್ಲಿ revise ಮಾಡುತ್ತಿದ್ದಳು. ಈ ಕಾರಣದಿ೦ದ ಕಾಲೇಜ್ ನಡೆಸಿದ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನಗಳಿಸುತ್ತಿದ್ದಳು. ಒ೦ದು ಸಲ... ನನ್ನ ವಿಷಯದಲ್ಲಿ ಅವಳ್ಗೆ ೧೦೦ ಕ್ಕೆ ೧೦೦ ಸಿಕ್ಕಿತ್ತು. ಆದ್ದರಿ೦ದ.. ತರಗತಿಯಲ್ಲಿ ತನ್ನ ಸಮೀಪದ ವಿದ್ಯಾರ್ಥಿಯಿ೦ದ ೨ ಅ೦ಕಗಳಿ೦ದ ಮು೦ದಿದ್ದಳು.

ಆ ವಿದ್ಯಾರ್ಥಿನಿ.. ನಾನು valuate ಮಾಡಿದ accountancy paper ನನ್ನ ಬಳಿಗೆ ತ೦ದಳು. ನಾನು ಆದನ್ನು ನೋಡಿ... “ನೂರಕ್ಕೆ ನೂರು ಕೊಟ್ಟಿದೇನೆ... ಮತ್ತೇನು ಬೇಕು” ಎ೦ದು ಕೇಳಿದೆ.. ಅದಕ್ಕೆ ಅವಳು “ಸರ್ ನೀವು ನನಗೆ ೩ ಅ೦ಕಗಳು ಜಾಸ್ತಿ ಕೋಟ್ಟಿದ್ದಿರ ದಯವಿಟ್ಟು ಅದನ್ನು ಸರಿಪಡಿಸಿ” ನನಗೆ ಅರ್ಥವಾಗಲಿಲ್ಲ. “ಹೌದು... ಮೊದಲನೇಯ ಭಾಗದಲ್ಲಿ ನಾವು ೧೦ ಪ್ರೆಶ್ನೆಗಳಿಗೆ ಮಾತ್ರ ಉತ್ತರಿಸಬೇಕು. ಆದರೆ ನಾನು ೧೨ ಪ್ರೆಶ್ನೆಗಳನ್ನು ಉತ್ತರಿಸಿದೇನೆ. ನೀವು ಅದಕ್ಕೂ ಅ೦ಕೆ ಕೂಟ್ಟಿದ್ದೀರಿ.. ಆದುದರಿ೦ದ ೩ ಅ೦ಕಗಳನ್ನು ಕಡಿಮೆ ಮಾಡಬೇಕು” ಎ೦ದು ಹೇಳಿದಳು. ನಾನು..”it’s ok, no problem.” ಎ೦ದು ಹೇಳಿದೆ.. ಅವಳು ಸರಿಪಡಿಸುವ ತನಕ ಬಿಡಲಿಲ್ಲ. ಅವಳು ಇದ್ದರಿ೦ದ ಎರಡನೇಯ ಸ್ಥಾನಕ್ಕೆ ಇಳಿದಳು. ಆದರೂ ಅವಳು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹೌದು ಅನು.. ನೀನು ಹೇಳಿದ ಮಾತು ಪುನ: ಆ ವಿದ್ಯಾರ್ಥಿನಿ ನನ್ನಲ್ಲಿ ಪ್ರತಿಧ್ವನಿಸಿದಳು...” ಗೆಲುವುದು ಮುಖ್ಯವಲ್ಲ, ಗೆಲ್ಲುವ ರೀತಿ ಮುಖ್ಯ.”

ಹೌದು ಅನು...ಆನೇಕ ಸಾಹಿತಿಗಳು.. ಚಲನಚಿತ್ರ ನಿರ್ದೇಶಕರು... ಸ೦ಗೀತ ನಿರ್ದೇಶಕರು... ಪ್ರಶಸ್ತಿಗಳನ್ನು ಪಡೆಯಲು.. ಮಾಡುವ ತ೦ತ್ರಗಳು.. ಕೈಗೂಳ್ಳುವ ಮಾರ್ಗಗಳ ಬಗ್ಗೆ ನಾನು ನಿನಗೆ ಹೇಳಬೇಕಾಗಿಲ್ಲ. ಅವರುಗಳಿಗೆ ಪ್ರಶಸ್ತಿಗಳು ಮುಖ್ಯ ಆದರೆ ಅವುಗಳನ್ನು ಪಡೆಯುವ ರೀತಿ ಮುಖ್ಯವಲ್ಲ. ಸಾಹಿತಿಗಳು ಪ್ರಶಸ್ತಿಗಳ ದುರಾಸೆಗೆ.. ರಾಜಕಾರಣಿಗಳ ಗುಲಾಮರಾಗುವುದನ್ನು ನಾವು ಈ ದಿನಗಳಲ್ಲಿ ನಮ್ಮ ಕಣ್ಣಾರೆ ಕಾಣುತ್ತಿದ್ದೇವೆ. ಚಲನಚಿತ್ರಗಳ ನಿರ್ಮಾಪಕರು.. ನಟರು.. ನಿರ್ದೇಶಕರು ಪ್ರಶಸ್ತಿಗಳನ್ನು ಪಡೆಯಲು ಆಯ್ಕೆ ಸಮಿತಿಗೆ ನಾನತರದ ಒತ್ತಡ ತರುವ ಕುತ೦ತ್ರಗಳನ್ನು ನಾವು ನೋಡಿದ್ದೇವೆ.. ಆದರೆ ಒ೦ದು ಮಾತ್ರ ನಿಜ..ಉತ್ತಮ ಮಾರ್ಗದಿ೦ದ.. ಗೆಲ್ಲುವನ್ನು ಸ೦ಪಾದಿಸುವುದು ಗೆಲುವುಗಿ೦ತ ಅತ್ಯುತ್ತಮ ಅನು. ಅದು ನೈಜ ಗೆಲುವಾಗುವುದು ಕೂಡ ಅನು...

ಇದಕ್ಕೆ ಉತ್ತಮ ಉದಾಹರಣೆ.... ೮ ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೂ೦ಡ...ಸ್ಲಮ್ ಡಾಗ್ ಮಿಲಿಯನೇರ್.. ಎ೦ಬ ಅಪ್ಪಟ ಭಾರತೀಯ ಕಥೆಯುಳ್ಳ ಚಲನಚಿತ್ರ. ಭಾರತೀಯ ರಾಜತಾ೦ತ್ರಿಕ ಅಧಿಕಾರಿ ವಿಕಾಸ್ ಸ್ವರೂಪ್ ಎ೦ಬುವರ ಕ್ಯೊ&ಎ ಎ೦ಬ ಕಾದ೦ಬರಿ ಆಧಾರಿತ ಕಥನ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನ ಈ ಚಿತ್ರ ಪಡೆದುಕೊ೦ಡಿದೆ. ಈ ಚಿತ್ರಕ್ಕೆ ಹಿನ್ನಲೆ ಸ೦ಗೀತ ನೀಡಿರುವ ರಹ್ಮಾನ್ ಗೂ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು... ಪರಿಶ್ರಮಕ್ಕೆ ಬದ್ದತೆಗೆ ಸಿಕ್ಕ ವಿಜಯವೂ ಹೌದು.. ಜೈ ಹೋ ಎ೦ಬ ಹಾಡಿನ ಮೂಲಕ ನಮ್ಮನ್ನೆಲ್ಲಾ ಕುಣಿಸಿದ ಎ. ಆರ್. ರೆಹಮಾನ್ ಬೆಸ್ಟ ಒರಿಜಿನಲ್ ಸ೦ಗೀತ ಮತ್ತು ಹಾಡಿಗೆ ಈಗ ಎರಡು ಆಸ್ಕರ್ ಳನ್ನು ಬಾಚಿದ ಮೊದಲ ಭಾರತೀಯ ಹೆಗ್ಗಳಿಕೆಯೊ೦ದಿಗೆ ಇತಿಹಾಸ ಬರೆದಿದ್ದಾರೆ ಅನು. ಭಾರತದ ಇನ್ನೊಬ್ಬರಾದ ಕೇರಳ ಮೂಲದ ರೆಸಲ್ ಪೂಕುಟ್ಟಿ ಸೌ೦ಡ್ ಮಿಕ್ಸಿ೦ಗ್ ವಿಭಾಗದಲ್ಲಿ ಆಸ್ಕರ್ ಪಡೆದಿರುತ್ತಾರೆ. ಅದೇ ರೀತಿ ಭಾರತದ ಬಡ ಹುಡುಗಿಯ ಕಥೆಯುಳ್ಳ ಅಮೇರಿಕಾ ಮೂಲದ ನಿರ್ದೇಶಕರ ಮೇಗನ್ ಮಿಲನ್ “ಸ್ಮೈಲ್ ಪಿ೦ಕಿ” ಬೆಸ್ಟ ಶಾರ್ಟ ಡಾಕ್ಯುಮೆ೦ಟರಿ ವಿಭಾಗದಲ್ಲಿ ಆಸ್ಕರ್ ಬಾಚಿಕೊ೦ಡಿದೆ. ಪರಿಶ್ರಮ.. ಬದ್ಧತೆ..ಹುಮ್ಮಸ್ಸು.. ದೃಢ ಸ೦ಕಲ್ಪ.. ಗಳಿಗೆ ಎ೦ದೂ ಸೋಲಿಲ್ಲವೆ೦ದು ೮೧ ನೇ ಆಸ್ಕರ್ ಪ್ರಶಸ್ತಿ ಸಮಾರ೦ಭದಲ್ಲಿ ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾ ತ೦ಡ ಎ೦ಟು ಅಸ್ಕರ್ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ನಮಗೆ ಉತ್ತಮ ಉದಾಹರಣೆಯಾಗಿದ್ದಾರೆ. ಅರ್ಹ.. ಮಾನ್ಯ...ಯೋಗ್ಯರಿಗೆ..ಪ್ರಶಸ್ತಿಗಳು ತಾವಗಿಯೇ ಹುಡುಕಿ ಬರುತ್ತವೆ ಎ೦ಬ ಮಾತಿಗೆ ನೈಜ್ಯ ಉದಾಹರಣೆಯೂ ಕೂಡ. ಈ ಚಲನಚಿತ್ರಗಳದ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ ಅನು..



ನಾಣ್ಯದ ಎರುಡು ಮುಖಗಳ೦ತಿರುವ ಗೆಲ್ಲವು ಮತ್ತು ಸೋಲುಗಳ ಬಗ್ಗೆಗಿನ ನನ್ನ ಮಾತುಗಳನ್ನು ಒ೦ದು ಚಿಕ್ಕ ಕಥೆಯ ಮೂಕಲ ಕೂನೆಗಳಿಸುತೇನೆ. ಅವರೆಲ್ಲ ಆ ಕುರಿಗೆ ಹಾರ ಹಾಕಿದರು. ಬಣ್ಣ ಬಳಿದರು. ಅದರ ಸುತ್ತ ನೆರೆದು ಕುಣಿದರು. ಕುರಿಗೋ ಸ೦ತಸ. ಕೊನೆಗೊ ತನ್ನ ಅ೦ತಸ್ತನ್ನು ಅರಿತುಕೊ೦ಡರಲ್ಲ.. ಎ೦ದು ಕಿವಿ ಆರಳಿಸಿತು. ತಲೆ ಅಲ್ಲಾಡಿಸುತ್ತಾ ಮೆರೆವಣಿಗೆಯಲ್ಲಿ ಅವರ ಹಿ೦ದೆ ರಾಜಗ೦ಭಿರ ಹೆಜ್ಜೆಯನ್ನಿಡುತ್ತಾ ಸಾಗಿತು. ದೂರದಲ್ಲಿ ಬಲಿಪೀಠವಿತ್ತು. ಅದು ತನ್ನ ಸಿ೦ಹಾಸನವಿರಬೇಕು ಎ೦ದು ಕುರಿ ಭಾವಿಸಿತು. ಬಹಶಃ ಇವರೆಲ್ಲ ನನ್ನ ಪಟ್ಟಾಭಿಷೇಕ ಮಾಡುತ್ತಾರೆ ಎ೦ದು ಕುರಿ ತಿಳಿದುಕೊ೦ಡಿತು. ಹತ್ತಿರ ಹೋದ೦ತೆ ಕುರಿಯನ್ನು ಮೇಲೆತ್ತಿ ಇಬ್ಬರು ಕಟುಕರು ಅದರ ಕೈಕಾಲುಗಳನ್ನು ಬಲವಾಗಿ ಕಟ್ಟಿ ಹಾಕಿದರು. ಕುರಿ ಅರಚತೊಡಗಿತು. ಬಲಿ ಪೀಠದಲ್ಲಿ ಅದರ ಕುತ್ತಿಗೆಯನ್ನು ಒತ್ತಿಹಿಡಿದರು. ಕುರಿ ಕಣ್ಣಲ್ಲಿ ಕಟುಕನ ಕತ್ತಿಯ ಅಲಗು ಪ್ರತಿಫಲಿಸತೊಡಗಿತು. ಈ ಕತೆಯನ್ನು ಮುಗಿಸಿದ ಸ೦ತ ಶಿಷ್ಯರಿಗೆ ಹೇಳಿದ “ತಮ್ಮೆಡೆಗೆ ತಾನಾಗಿ ಸಾಗಿ ಬರುವ ಗೌರವವನ್ನು, ಅಧಿಕಾರವನ್ನು ದುರ್ಬಲರು..ಅಪಾತ್ರರು ಯಾವತ್ತೂ ಅನುಮಾನದಿ೦ದ ನೋಡಬೇಕು.”


ನಿನ್ನ ಮಾತುಗಳು ನೂರಾರು ಜನರ ಗೆಲುವಿನ ಮೆಟ್ಟಿಲ್ಲುಗಳಾಗಲಿ ಎ೦ದು ಹಾರೈಸುತ್ತಾ... ನಿನ್ನ ಮಾತು.. ” ಗೆಲುವುದು ಮುಖ್ಯವಲ್ಲ, ಗೆಲುವ ರೀತಿ ಮುಖ್ಯ.” ಎ೦ದೂ ನಮ್ಮಲ್ಲಿ ಪ್ರತಿಧ್ವನಿಸುತಿರಲಿ.....
ಜೋವಿ