ಚಂದದ ಬರಹಗಳನ್ನು ಕೊಟ್ಟ ಮಿತ್ರವೃಂದಕ್ಕೆ ನನ್ನ ನಮನಗಳು. ಬಹಳ ಉತ್ತಮವಾಗಿದೆ ಓದಿಕೊಳ್ಳಿ ಎಂದು ಹೇಳಲು ಧೈರ್ಯ ಬರುತ್ತಿಲ್ಲ. ಹಾಗೇ ಹೇಳಿದರೆ ಮುಂದಿನ ದಿನಗಳಲ್ಲಿ ಓದುಗರು ಸಿಗದೇ ಹೋಗಬಹುದು. ನೀವೇ ಓದಿ ನಿರ್ಧಾರ ಮಾಡಿಕೊಳ್ಳಿ ಎನ್ನೋಣ ಎಂದರೆ ಲೇಖನಗಳನ್ನು ಕೊಟ್ಟ ಲೇಖಕರು ಇನ್ನು ಮುಂದೆ ನೀವೇ ಬರೆದುಕೊಳ್ಳಿ ಎನ್ನುವರೋ ಎಂಬ ಸಣ್ಣ ಅಂಜಿಕೆ. ಈ ಭಯ ಅಂಜಿಕೆಗಳ ನಡುವಿನ ಸ್ವರಚಿತ್ತಾರದ ಈ ಪ್ರಯತ್ನಕ್ಕೆ ನಿಮ್ಮದೊಂದು ಉತ್ತೇಜನ ಇರಲಿ.ನಡುವೆ ಎಫ್.ಎಂ.ನಂದಗಾವ್ ಹಾಗೂ ಮರಿಜೋಸೆಫ್ ರಂತಹ ಪ್ರಬುದ್ಧರ ಕಥೆ, ಲೇಖನಗಳಿವೆ. ಅಷ್ಟರ ಮಟ್ಟಿಗಾದರೂ ನಾವು ಸೇಫ್. ಕೆಲವು ಚಿತ್ರಗಳನ್ನು ಪ್ರತೀಕ್ ನ ಬತ್ತಳಿಕೆಯಿಂದ ಬಳಸಿಕೊಳ್ಲಲಾಗಿದೆ. ಕಮೆಂಟ್ ಬಾಕ್ಸ್ ಕಡೆ ಒಮ್ಮೆ ಕೈಯಾಡಿಸಿ ಬನ್ನಿ. ಇನ್ನೂ ಉತ್ತಮವಾದ ಪ್ರಯತ್ನ ಮುಂದೆ ನಮ್ಮಿಂದಾಗುತ್ತದೆ ಎಂಬ ಭರವಸೆ ನಮ್ಮದು.
ಓದಿ ಕೊಳ್ಳಿ ಸ್ವರ ಚಿತ್ತಾರದ ನಮ್ಮ ಕನ್ನಡ ರಾಜ್ಯೋತ್ಸವದ.... ಅಲ್ಲಲ್ಲ ನವೆಂಬರ್ ವಿಶೇಷ ಸಂಚಿಕೆ. ಮುಂದೆ ’ಕ್ರಿಸ್ ಮಸ್ ವಿಶೇಷ ಸಂಚಿಕೆ’ ತರುವ ಉದ್ದೇಶವಿದ್ದು, ಯುಗಾದಿ ಹಬ್ಬಕೆ ಮೊದಲು ಹೊರತರವ ಅಶ್ವಾಸನೆ ನಮ್ಮದು.
ನಮಸ್ಕಾರ.
ಸ್ವರಚಿತ್ತಾರದ ಪರವಾಗಿ
ಪ್ರಶಾಂತ್
ಪರಿವಿಡಿ
ಆಗಲೇ ಸೀತಾಪಹರಣ ಆಗಿಬಿಟ್ಟಿದೆ - ಎಫ್.ಎಂ.ನಂದಗಾವ್
ಕನ್ನಡ ಯಾರು ಓದುತ್ತಾರೆ ಬಿಡ್ರಿ - ಪ್ರಶಾಂತ್ ಇಗ್ನೇಷಿಯಸ್
ವಿಮೋಚನೆ - ಜೋವಿ
ಕ್ರಿಕೆಟ್ ಹಾಗೂ ನವೆಂಬರ್ 15 - ಸವ್ಯಸಾಚಿ
Congrulations! Good work, all the best
ReplyDeleteThanks Srinivas.
ReplyDelete