Sunday 27 November 2011

ಕುಲಜ


Read more!
ಪ್ರೀತಿಯ ಅನುಗೆ,
ಸ್ನೇಹಾಂಜಲಿ. ಹಲವಾರು ವರ್ಷಗಳಿಂದ ಗರ್ಭಕಟ್ಟಿಕೊಂಡಿದ್ದ ಕುಲಜ ಎಂಬ ಸಣ್ಣ ಕಥೆ, ಅಕ್ಷರ ರೂಪದಲ್ಲಿ ಪ್ರಸವಗೊಂಡಿದೆ. ನನ್ನ ವೈಯಕ್ತಿಕ ಅನುಭವ ಮತ್ತು ಕಲ್ಪನ ಶಕ್ತಿಯ ಕೂಡಿನಿಂದ ಹುಟ್ಟಿದ ಕೂಸಿದು. ಈ ಕಥೆಯನು ಓದಿ ಪ್ರತಿಕ್ರಿಯಿಸುವೆ ಎಂಬ ಉನ್ನತ ಭರವಸೆಯಿಂದ … ಕಥೆಯ ಓದಿಗೆ ನಿನ್ನನ್ನು ವಿನಯದಿಂದ ಸ್ವಾಗತಿಸುತ್ತೇನೆ…. Happy reading!!

ಕುಲಜ
ಕೊಲ್ಲುವವನೇ ಮಾದಿಗ.. ಕೊಲ್ಲುವವನೇ ಮಾದಿಗ.. ಹೊಲಸು ತಿಂಬುವವನೇ ಹೊಲೆಯ,
ಹೊಲೆಯ….. ಕುಲವೇನೋ ಅವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲ ಸಂಗನ ಶರಣರೇ ಕುಲಜರು…
ಮಗಳು ಬಾಯಿಪಾಠ ಮಾಡುತ್ತಿದ್ದ ವಚನವು ಮುಂಭಾಗದ ಕೋಣೆಯಲ್ಲಿದ್ದ ರಾಜಣ್ಣ ಗೌಡ್ರಿಗೆ ಚೆನ್ನಾಗಿ ಕೇಳಿಸುತಿತ್ತು. ಅದೇ ಕೋಣೆಯ ಒಂದು ಮೂಲೆಯಲ್ಲಿ ಹೆಸರಿಗೆ ತಕ್ಕಂತೆ ಮೈ ಬಣ್ಣ ಹೊಂದಿದ್ದ ಕರಿಯ ಕೂತಿದ್ದ. ಕಾಕಿ ಚಡ್ಡಿ..ತ್ಯಾಪೆಗಳ ಅಂಗಿ…ಅವನ ವ್ಯಾಸಕ್ಕೆ ತಕ್ಕಂತಿದ್ದವು. ಗೌಡ್ರ ಮನೆಯ ಮಾಮೂಲು ಗಿರಾಕಿಯಾಗಿದ್ದ ಉಲ್ಲಾಸಪ್ಪ.. ಗೌಡ್ರ ಪಕ್ಕದಲೇ ಇದ್ದ ಕುರ್ಚಿ ಮೇಲೆ ಕುಳಿತು..ಗೌಡ್ರ ಜೊತೆಗೆ ಮಾತಿಗಿಳಿಯಲು ಯಾವುದೋ ಘನವಾದ ವಿಷಯದ ಹುಡುಕಾಟದಲ್ಲಿರುವಂತೆ ಕಂಡು ಬಂದರು. ಗೌಡ್ರ ಪಕ್ಕದ ಮನೆಯವ ಇಡೀ ಊರಿಗೆ ಕೇಳಿಸುವಂತೆ ರೇಡಿಯೋ ಹಚ್ಚಿದ್ದನು…
“ತುತ್ತು ಅನ್ನ ತಿನೋಕೆ ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ” ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡಿಗೆ ಕರಿಯ ಕೈಯಲ್ಲಿದ್ದ ಬೆಂಕೆಪೊಟ್ಟಣದ ಸಹಾಯದಿಂದ ತಾಳ ಹಾಕುತ್ತಿದ್ದ. ತಕ್ಷಣ ಎನೋ ಹೊಳ್ದದಂತೆ “ಗೌಡ್ರೆ ನಮ್ ಕೇರಿಲಿ ನೆನ್ನೆ ರಾತ್ರಿ ಅಂತೋಣಪ್ಪ ಗಂಟ್ಲು ತುಂಬಾ ಕುಡ್ದು ಸಿಕ್ಕಾಪಟ್ಟೆ ಜಗ್ಳ ಮಾಡ್ದ ಗೌಡ್ರೆ… ಎಂದು ಅಲ್ಪವಿರಾಮ ಕೊಟ್ಟು ..ಕಥೆಯನ್ನು ಇನ್ನೇನು ಮುಂದುವರಿಸಬೇಕು ಅಷ್ಟ್ರಲ್ಲಿ ಶಿವ್ ಪೂಜೆಯಲ್ಲಿ ಕರಡಿ ಬಿಟ್ಟಂತೆ ಉಲ್ಲಾಸಪ್ಪ..”ನಿಮ್ ಜಾತಿಯವ್ರೆ ಅಂಗೆ..ಯಾವಗ್ಲೂ ಹುಚ್ಚು ನಾಯಿಗಳಂಗೆ ಕಚ್ಚಾಡೋದೇ ನಿಮ್ ಕೆಲ್ಸ” ಎಂದು ಹೀಯಾಳಿಸಿ ಕಥೆ ಹೇಳುತ್ತಿದ್ದ ಕರಿಯನ ಮುಖವನ್ನು ಸಣ್ಣದಾಗಿಸಿದ.
ಆ ಅಂತೋಣಪ್ಪನ ಹೆಂಡ್ರು ಅವ್ಳಾತ್ರ ಇರೋ ಮಗುನಾ ಜನಕ್ಕೆ ತೋರ್ಸಕೊಂಡು… ಇದು ಚಿನ್ನಿದು ಮಗು ಅಂತಾ ಸಾರ್ಕೊಂಡು ಬರ್ತಾಳಂತೆ. ಅದ್ಕೆ ಚಿನ್ನಿ ಎಲ್ಲಿ ಹೂಲೆಯಾಳ ಜೊತೆ ಮಲಗಿದ್ದ ಅಂತಾ ,, ಜನರು ಆಡ್ಕೋತಾರೆ ಅಂತಾ.. ಅಂತೋಣಪ್ಪಗೆ ಚೆಂದಾಗಿ ಕುಡ್ಸಿ ಹೆಂಡ್ತಿಯ ಬಾಯಿಮುಚ್ಚಿಸೋಕೆ ಹೇಳಿ ಕಳ್ಸಿದ್ನಂತೆ” ಕಥೆ ಹೇಳಿ ಮುಗಿಸುವಷ್ಟರಲ್ಲಿ, ನಾಗಮ್ಮ ಹೋಟ್ಲಿಂದ ನಂಜುಂಡ ಬಿಸಿ ಬಿಸಿ ಕಾಫಿ ತಂದ. ಗೌಡ್ರ ಹೆಂಡ್ತಿ ಇವತ್ತು ಬೆಳ್ಳಿಗೆನೇ ಬಟ್ಟೆ ಹೊಗೆಯುವುದಕ್ಕೆ ತೊರೆಗೆ ಹೋಗಿದ್ದರಿಂದ ಗೌಡ್ರ ಮನೆಯ ಮಾಮೂಲು ಗಿರಾಕಿಗಳಿಗೆ ಗೌಡ್ರ ಮನೆಯ ಸ್ಟ್ರಾಂಗ್ ಕಾಫಿ ಕುಡಿಯುವ ಪುಣ್ಯ ತಪ್ಪಿತ್ತು.
ಬಿಸಿ ಬಿಸಿ ಕಾಫಿ ಕಂಡಾಕ್ಷಣ ಕರಿಯ …ಕೋಣೆಯ ಮೂಲೆಯಲ್ಲಿ ಪ್ರತ್ಯೇಕವಾಗಿ ಇಟ್ಟಿದ ಅಲ್ಯೂಮಿನಿಯಂ ಲೋಟವನ್ನು ಎತ್ಕೊಂಡು ತನ್ನ ಭುಜದ ಮೇಲಿದ್ದ ಹಳೇ ಟವಾಲಿನಿಂದ ಒರೆಸಿಕೊಳ್ಳುತಾ ಕಾಫಿ ಹಾಕಿಸಿಕೊಳ್ಳಲು ಅಣಿಯಾದ.
ನಂಜುಂಡ ಗೌಡ್ರುಗೆ ಹಾಗು ಉಲ್ಲಾಸಪ್ಪಗೆ ಕಾಫಿ ಕೊಟ್ಟು.. ಕರಿಯನ ಅಲ್ಯೂಮಿನಿಯಂ ಲೋಟಕ್ಕೆ ಮೇಲೆತ್ತಿ ತಂದಿದ್ದ ಲೋಟದಿಂದ ಕಾಫಿ ಸುರಿದ. ಆಷ್ಟ್ರಲಿ ಗೌಡ್ರ ಮಗಳು ಶಾಲೆಚೀಲವನ್ನು ಬೆನ್ನಿಗೆ ನೇತಾಕಿಕೊಂಡು .. ಶಾಲೆಗೆ ಹೊರಡುತ್ತಿದ್ದಂತೆ” ಮಗ ನಿಮ್ ಅಮ್ಮ ಇನ್ನೂ ತೂರೆಯಿಂದ ಬಂದಿಲ್ಲ. ಏನಾಯ್ತಂಥ ನೋಡ್ಕೋ ಬರೋಗ್, ಬೆಳ್ಗೆ ಅಷ್ಟೋತ್ಕೆ ಹೋದ್ಳು. ಇನ್ನೂ ಬಂದೇಯಿಲ್ಲ..” ಗೌಡ್ರು ಮಗಳಿಗೆ ಹೇಳುತ್ತಿದಂತೆ “ ಶಾಲೆಗೆ ಟೈಮ್ ಆಯಿತ್ತಾಪ್ಪ ಲೇಟಾದ್ರೆ ಟೀಚರ್ ಹೊಡಿತಾರೆ” ಅಂತಾ ಹೇಳಿ ಮನೆಯಿಂದ ಓಟಕಿತ್ತಳು.
“ಗೌಡ್ರೆ ನನ್ ಮಗ ಸಾಲೆಗೆ ಹೋಗ್ತಿನಿ ಅಂತಾದಾ” ಎಂದು ಕರಿಯ ಗೊಣಗಿದಾಗ, “ನಿಮ್ಮ ಕೇರಿಯವರ್ಗೆ ಶಾಲೆ ಏಕೆ ಬೇಕು ಹೇಳು… ಯಾರದಾದ್ರು ಮನೇಲ್ಲಿ ಸಂಬಳ್ಕೆ ಇರ್ಸು ಅಷ್ಟೋ ಇಷ್ಟೋ ಕೈಗೆ ಸಿಗ್ತದೆ ” ಎಂದು ಉಲ್ಲಾಸಪ್ಪ ಕರಿಯಂಗೆ ಉಚಿತ ಸಲಹೆಯನ್ನಿಟ್ಟು, ಗೌಡ್ರುಗೆ ಸಂಜೆ ಬರುವುದಾಗಿ ಹೇಳಿ, ತನ್ನ ತೋಟದ ಕಡೆ ಹೆಜ್ಜೆ ಹಾಕಿದ. ಕರಿಯ ಕೂಡ ಕೇರಿ ಕಡೆಗೆ ನಡೆದ. ಹೆಂಡ್ತಿ ಯಾಕೆ ತೊರೆಯಿಂದ ಇನ್ನೂ ಬಂದಿಲ್ಲ? ತನ್ನನೇ ಪ್ರಶ್ನೆ ಮಾಡಿಕೊಂಡ. ಪಕ್ಕದ ಮನೆಯ ರೇಡಿಯೋ ಇನ್ನೂ ಜೋರಾಗಿ ಕಿರುಚಿಕೊಳ್ಳುತ್ತಿತ್ತು.
ಯಾಕೆ ಇಷ್ಟು ಲೇಟ್? ತಲೆಕೂದಲೆಲ್ಲ ಕೆದರಿದೆ, ಬಟ್ಟೆ ಬರಿಯಲ್ಲ ಮಣ್ಣಾಗಿದೆ ಏನಾಯ್ತು? ರಾಜಪ್ಪ ಕಣ್ಣು ಬಾಯಿಬಿಟ್ಟುಕೊಂಡು ಕೇಳುತ್ತಿದಂತೆ” ತೊರೆಯಿಂದ ಬಟ್ಟೆ ಒರುವಾಗ ತಲೆಸುತ್ತಾಂಗಾಗಿ. ಬಿದ್ಬಿಟ್ಟೆ.” ಎಂದು ಹೇಳಿ ಮನೆ ಒಳ ನಡೆದಳು. “ರಾಜಪ್ಪ ಎನೋ ನೆನಸಿಕೊಂಡು ಮನೆಯ ಹೂರಗೆ ಬಂದು ನಿಂತ ಕೆಲಕ್ಷಣಗಳಲ್ಲೇ… ಕೆಲ ಜನರು ಕೆಟ್ಟ ಮಾತುಗಳಿಂದ ಬೈಯುತ್ತಾ ಹುಚ್ಚು ಕೆಂಚಣ್ಣನನ್ನು ದೊಣ್ಣೆಗಳಿಂದ ಯದ್ವಾತದ್ವಾ ಹೊಡೆಯುತ್ತಿದ್ದರು. ಹುಚ್ಚು ಕೆಂಚಣ್ಣನ ಅಸಹಾಯಕತೆಯಿಂದ ಮುಗಿಲು ಮುಟ್ಟುವಂತೆ ಕೂಗುತ್ತಿದ್ದರು ಹೂಡೆತ ನಿಲ್ಲಲಿಲ್ಲ. “ರಾಜಪ್ಪನವರೇ ಆ ಮಾದ್ಗ ಹುಚ್ಚು ಕೆಂಚಣ್ಣ ನಮ್ಮ ಬಾವಿಯಿಂದ ನೀರು ಸೇದಿ ಮೈಲಿಗೆ ಮಾಡಿದ್ದರಿಂದ ಜನರು ಅವನನ್ನು ಹಿಟಾಡಿಸಿಕೊಂಡು ಬಡಿಯುತ್ತಿದ್ದಾರೆ.. “ ಊರವ ಎಂದಾಕ್ಷಣವೇ ರಾಜಪ್ಪನವರ ಮುಖ ಕೋಪದಿಂದ ಕೆಂಡಮಂಡಲವಾಯಿತ್ತು. ಈ ಕಡೇ ಕೆಂಚಣ್ಣನ ಸ್ಥಿತಿ ಹಸಿದ ಹುಲಿಗೆ ಸಾರಗ ಸಿಕ್ಕಿದಂತಾಗಿತ್ತು. “ನಮ್ಗಿದ್ದದು ಒಂದು ಬಾವಿ, ಹಾಳಾದವ್ನೇ ಅದ್ನು ಮೈಲಿಗೆ ಮಾಡ್ಬುಟ್ಟಲೋ ನಾವು ನೀರಿಗೆ ಏನ್ಮಾಡೊದು?” ಎಂದು ಒಬ್ಬ ಕೆಂಚಣ್ಣ ಎದೆ ಮೇಲೆ ಒದ್ರೆ, ಇನ್ನೊಬ್ಬ ಊರಲ್ಲಿ ಇರೋದು ಒಂದೇ ಬೋರ್ ವೆಲ್ ಅದ್ರಲ್ಲೂ ಸರಿಯಾಗಿ ನೀರು ಬರೋಲ್ಲ.. ಒಂದು ಮೈಲಿ ದೂರ ಬೇರೆ ನಾವು ನೀರಿಗೆ ಏನ್ಮಾಡ್ಕೊಂಡು ಸಾಯೋದ್ ? ಪ್ರಶ್ನೆ ಕೇಳುತ್ತಲೇ ದೊಣ್ಣೆಯಿಂದ ತಲೆಗೆ ಬಡಿದ, ಹೀಗೆ ಜನರೆಲ್ಲಾ ಸೇರಿ ವಿಚಾರಿಸದೆ ಯದ್ವಾತದ್ವಾ ಹೊಡೆದು ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಬೀದಿಯಲ್ಲೇ ಬಿಟ್ಟು ಹೋದರು.ಅವನ ಕಪ್ಪು ಮೈ ಬಣ್ಣ ಕೆಂಪಾಗಿತ್ತು.ಮುಖ ನೋವಿನಿಂದ ಕಿವುಚಿಕೊಂಡಿತ್ತು. .. ರಸ್ತೆಯಲ್ಲಿ ಅಸಹಾಯಕತೆಯಿಂದ ಬಿದ್ದಿದ್ದ ಹುಚ್ಹು ಕೆಂಚಣ್ಣ ಕಷ್ಟದಿಂದ ಎದ್ದು.. ಮುಖ ಒರೆಸಿಕೊಳ್ಳುತ್ತಾ… “ತೊರೆಯಿಂದ ಬರುತ್ತಿದ್ದ . ಹೆಣ್ಣ್ ಮಗ್ಳುತಲೆ ತಿರುಗಿ ಬಿದ್ದರಿಂದ ನಾನು ಬಾವಿಯಿಂದ ನೀರು ಸೇದಿ..ಅವಳ್ಗಿ ನೀರು ಕುಡ್ಸಿ.. ಎಬ್ಬಿಸಿ ಕಳ್ಸಿದು ತಪ್ಪಾ?...ಎಂದು ಅಳುತ್ತಾ ತನ್ನನ್ನೇ ಕೇಳಿಕೊಳ್ಳುತ್ತಾ ಮೇಲೇಳಲು ಪ್ರಯತ್ನಿಸುತ್ತಿದಂತೆ… ಗೌಡ್ರ ಹೆಂಡತಿ ತೊಳೆದ ಬಟ್ಟೆಯನ್ನು ಒಣಗಲು ಮನೆಯ ಮುಂದಿದ್ದ ತಂತಿ ಮೇಲೆ ಹಾಕುತ್ತಾ.. ಸುತ್ತಮುತ್ತಲು ಕಣ್ಣು ಹಾಯಿಸಿ ಅಸಹಾಯಕತೆಯಲ್ಲಿ ಅಳುತ್ತಾ ಮೇಲೇಳುತ್ತಿದ್ದ ಹುಚ್ಚು ಕೆಂಚಣ್ಣನನ್ನು ಕಣ್ಣಂಚಿಂದಲ್ಲೇ ನೋಡಿ.. ಮರುಗುತ್ತಾ ಮನೆಸೇರಿಕೊಂಡಳು. ಅವನ ಮನೆಯವರು ಬಂದು ಅವನ್ನು ಬೈಯುತ್ತಾ ಕರೆದುಕೊಂಡು ಹೋದರು. ಜನರ ವರ್ತನೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗಿತ್ತು. ಕೆಂಚಣ್ಣಗೆ ಬಿದ್ದ ಹೊಡೆತಗಳು ಕೇವಲ ಅವನ ಕೃತ್ಯಕ್ಕೆ ಶಿಕ್ಷೆ ಮಾತ್ರ ಅಗಿರಲಿಲ್ಲ, ಊರಲಿದ್ದ ಇತರ ಹೊಲೆಯರಿಗೆ ಎಚ್ಚರಿಕೆಯ ಗಂಟೆಯಾಗಿತ್ತು.
ಮೈಲಿಗೆ ಆದ ಬಾವಿ ಪಾಳಾಯ್ತು. ಕುಡಿಯುವ ನೀರಿಗಾಗಿ ಜನರು ಊರಿನಲ್ಲಿದ್ದ ಒಂದೇ ಒಂದು ಬೋರ್ ವೆಲ್ ಮೇಲೆ ಅವಲಂಬಿತರಾದ್ದರು. ಒಂದೇ ಒಂದು ಬೋರ್ ಊರಿನ ಜನರಿಗೆ ಎಷ್ಟ ದಿನ ನೀರು ಕೊಡಲು ಸಾಧ್ಯ?. ಕೆಲವು ದಿನಗಳ ನಂತರ ಬೋರ್ ಕೂಡ ಮಿತಿಮೀರಿದ ಬಳಕೆಯಿಂದ ಕೆಟ್ಟಿತ್ತು. ಬೇಸಿಗೆಯಾದ್ದರಿಂದ ತೊರೆಯಲ್ಲಿ ಕೂಡ ನೀರು ಸುಂಡಿತ್ತು.ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಯಿತ್ತು. ಕೆಲ ಜನರು ತಮ್ಮ ತೋಟದ ಬಾವಿಗಳಿಂದ ಎತ್ತಿನಗಾಡಿಗಳ ಮೂಲಕ ದೊಡ್ಡ ದೊಡ್ಡ ಡ್ರಮ್ ಗಳಲ್ಲಿ ನೀರು ತುಂಬಿಸಿ ತರಲು ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ಊರಿನಲ್ಲಿದ್ದ ಜಾತಿವ್ಯವಸ್ಥಯ ವಿರುದ್ಧ ಗಂಟಲು ಹರಿದುಕೊಳ್ಳುವಷ್ಟು ಮಾತನಾಡುತ್ತಲೇ ಬಂದಿದ್ದ ಇಗರ್ಜಿಯ ಗುರುಗಳು ಯಾವುದೇ ರೀತಿಯ ಫಲಕಾಣದೆ ಮೌನಕ್ಕೆ ಶರಣಾಗಿದ್ದರು.
ಒಂದು ದಿನ ವಿಚಾರಣೆಗೆ ಹೂಸದಾಗಿ ನೇಮಕಗೊಂಡು ಘಟನೆಯ ಹಿನ್ನಲೆಯ ಬಗ್ಗೆ ಸಾಕಷ್ಟ ಮಾಹಿತಿ ಕಲೆಹಾಕಿದ್ದ ಯುವ ಗುರುಗಳು ಮೈಲಿಗೆಯಾಗಿದ್ದ ಬಾವಿಯಿಂದ ನೀರು ತಂದು ಉಪಯೋಗಿಸಲು ಪ್ರಾರಂಭಿಸಿದರು. ಗುರುಗಳ ಈ ರೀತಿಯ ವರ್ತನೆಯಿಂದ ದಿಗ್ಭ್ರಮೆಗೊಂಡ ಊರಿನ ಜನರು ಗುರುಗಳ ವಿರುದ್ಧ ಪಿತೂರಿ ನಡೆಸಲು ಪ್ರಾರಂಭಿಸಿದರು. ಗುರುಗಳನ್ನು ವರ್ಗಾಯಿಸಬೇಕೆಂಬ ಮನವಿಯೊಂದಿಗೆ ಊರಿನ ನಿಯೋಗವೊಂದು ಬಿಷಪ್ವರನ್ನು ವೈಯಕ್ತಿವಾಗಿ ಬೇಟಿಮಾಡಿ ಬಂದರು. ಒಂದು ದಿನ ಭಾನುವಾರದ ಬಲಿಪೂಜೆಯ ಪ್ರಬೋಧನೆಯ ಸಮಯದಲ್ಲಿ “ಮೈಲಿಗೆಯಾಗಿದ್ದ ಬಾವಿಯಿಂದ ನೀರು ತಂದು ನಾನು ಕುಡಿದರೂ ನನಗೆ ಯಾವ ರೋಗ ಬರಲಿಲ್ಲ … ಸಾಯಲಿಲ್ಲ?” ಎಂದು ಘಟನೆಯ ಬಗ್ಗೆ ಗುರುಗಳು ಹೇಳುತ್ತಿದ್ದಂತೆ.. ಊರಿನ ಕೆಲ ಹಿರಿಯರು, ಕೊನೆಯ ಭೋಜನದ ಸಮಯದಲ್ಲಿ ಗುರುದ್ರೋಹಿ ಯೂದನು ಕ್ರಿಸ್ತನನ್ನು ಬಿಟ್ಟು ಎದ್ದು ಹೊರಟು ಹೋದಂತೆ ದೇವಸ್ಥಾನದಿಂದ ಹೂರ ನಡೆಯಲು ಪ್ರಾರಂಭಿಸಿದರು!!!!!
ಜೋವಿ

1 comment: