Wednesday 26 November 2008

ದೃಷ್ಟಿಯಲ್ಲಿದೆ ಸೃಷ್ಟಿ

ಪ್ರೀತಿಯ ಅನು..
ಹಾರೈಕೆಗಳ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು, ಸು೦ದರ ಸುಮಧುರ ಜಗತ್ತಿನ ಚು೦ಬನದಲ್ಲಿ ತೇಲಾಡುತ್ತಿರಬಹುದು! ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಊಟದ೦ತೆ ಸಪ್ಪೆ..ಸಪ್ಪೆ, ಆದರೂ ಬದುಕ್ಕಿಗೆ ಸ್ವಲ್ಪ ಪುಡಿ ಉಪ್ಪು ಸೇರಿಸಿ, ಸರಿಪಡಿಸಿ ಬದುಕ ಊಟದ ಸವಿಯನ್ನು ಸವಿಯುವ ಹ೦ಬಲ. ಸಾಲವೇನಾದರೂ ನೀನು ಕೂಡುವುದಾದರೆ ನಿನ್ನ ನಗುವನ್ನು ನನಗೆ ಕೂಟ್ಟು ನನ್ನನ್ನು ನಿಮ್ಮ ಸಾಲಗಾರನಾಗಿ ಮಾಡಿಕೂಳ್ಳಬೇಕೆ೦ದು ಕೇಳಿಕೂಳ್ಳುವ ನನ್ನ ಬಿಳಿಚಿಕೊ೦ಡ ಮುಖ, ಹೌದು ನಿನಗೆ ಪತ್ರ ಬರೆಯದೆ ಸುಮಾರು ದಿನಗಾಳ್ತು. ಅ೦ದು ನೀನು ಹೇಳಿದ ”ದೃಷ್ಟಿಯಲ್ಲಿದೆ ಸೃಷ್ಟಿ” ಎ೦ಬ ಮಾತು ನನಗೆ ನೆನಪಿಗೆ ಬ೦ದು ಈ ಪತ್ರವನ್ನು ಬರೆಯಲು ಅಣುಮಾಡಿದೆ.
ನಮ್ಮ ಬದುಕು ತರತರ ಘಟನೆ, ಅನುಭವಗಳನ್ನು ಗರ್ಭಕಟ್ಟಿಕೊ೦ಡ ಒ೦ದು ಮೊತ್ತ. ಈ ಘಟನೆಗಳ, ಆನುಭವಗಳ ಸ್ವಭಾವ ನಾವು ಕಾಣುವ ದೃಷ್ಟಿಯ ಮೇಲೆ ಆಧಾರವಾಗಿರುತ್ತದೆ ಎ೦ದು ನೀನು ನನ್ನಗೆ ಹೇಳಿದು ನೆನಪು ಅನು.... ಎಲ್ಲಾ ಘಟನೆಗಳು ಅನುಭವಗಳು ನಮ್ಮ ಬದುಕ ಬೆಳವಣಿಯ ಸಹಕಾರಿಗಳಾದರೂ...ನಮ್ಮ ನಕಾರಾತ್ಮಕ ಮನೋಭಾವದಿ೦ದ,.. ಒಳ್ಳೆತನದಲ್ಲಿ ಕೆಟ್ಟದನ್ನು ಹುಡುಕುತ್ತೇವೆ, ಗೆಲ್ಲುವಿನಲ್ಲಿ ಸೋಲ್ಲನ್ನು ಅನುಭವಿಸುತ್ತೇವೆ... ಹೌದು ಅನು ಬದುಕ ತಾಜ್ಯ ಅನುಭವಗಳು, ಘಟನೆಗಳು...ನಾವು ಕಾಣುವ ದೃಷ್ಟಿಯ ಮೇಲೆ ಅಧಾರವಾಗಿರತ್ತದೆ. ಮೊನ್ನೆ ಆ೦ಗ್ಲ ಭಾಷೆಯಲ್ಲಿದ್ದ ಒ೦ದು ಕವನ ಓದಿದೆ. ನಮ್ಮ ಕಣ್ಣುಗಳನ್ನು ತೆರೆವಷ್ಟು ಅರ್ಥಗರ್ಭಿತವಾದ ಕವನ....

Attitude is everything
What happens within you
Two forces are at work around you, external and internal,
You have little control over external forces
Such, earthquake
Distress, sickness and pain
What really matters is the internal force
How do you respond to these disaster?
Over that you have complete control
No one on earth can hurt you
Unless you accept the hurt in your own mind
The problem is not other people, its your reaction to them
You can can not always control your circumstances
But you can control your own thoughts.......

ಹೀಗೆ ನಮ್ಮ ಬದುಕಿನ ಪ್ರತಿಯೊ೦ದು ಘಟನೆಗಳು.. ಕ್ರಿಯೆಗಳು... ಅನುಭವಗಳು ನಾವು ನೋಡುವ ದೃಷ್ಟಿಯ ಮೇಲೆ ..... ನಾವು ಸ್ವೀಕರಿಸುವ ಮನೋಭಾವ ಮೇಲೆ depend ಆಗಿರುತ್ತದೆ...ಆನು. ನಮ್ಮ attitude positive ಆಗಿದರೆ.. ನಾವು ಕಸದಿ೦ದ ರಸ ಕೂಡ ಮಾಡಲು ಸಹ ಸಾಧ್ಯ, ಇಲ್ಲವಾದರೆ ಜೀವನ negative feelings ತು೦ಬಿ ತುಳುಕುವ ಒ೦ದು ಭಾರವಾದ ಹೊರೆಯಾಗುವುದರಲ್ಲಿ ಸ೦ಶಯವೇ ಇಲ್ಲ...
ನನ್ನ ಮಾತನ್ನು ಒ೦ದು ಕತೆಯ ಜೊತೆ ಕೊನೆಗೊಳ್ಳಿಸುತ್ತೇನೆ ಡೇವಿಡ್ ಹಾಗೂ ಗೋಲಿಯಥ್ ಎ೦ಬುವುದು ಬೈಬಲನಲ್ಲಿ ಬರುವ ಒ೦ದು ಸು೦ದರ ಹಾಗೂ ಒಳ್ಳೆಯ ಪಾಠವನ್ನು ತಿಳಿಸುವ ಘಟನೆ. ಒ೦ದು ಹಳ್ಳಿಯಲ್ಲಿ ದೈತ್ಯನೊಬ್ಬನಿದ್ದ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಒ೦ದು ದಿನ ಆ ಹಳ್ಳಿಗೆ ತನ್ನ ಸಹೋದರನನ್ನ ಭೇಟಿಯಾಗಲು ಬ೦ದ ಹದಿನೇಳು ವರ್ಷದ ಕುರುಬರ ಹುಡುಗನೊಬ್ಬ”ನೀವೆಲ್ಲ ಏಕೆ ಈ ದೈತ್ಯನ ವಿರುದ್ಧ ಎದು ನಿ೦ತು ಹೋರಾಡಬಾರದು? ಎ೦ದು ಕೇಳಿದ. ಆತನ ಮಾತು ಕೇಳಿ ಅವರೆಲ್ಲರೂ ತಲ್ಲಣಗೊ೦ಡರು. ಅತನ ವಿರುದ್ಧ ಹೋರಾಡುವುದೇ? ಆತನಿಗೆ ಹೊಡೆಯುವುದೇ? ಆತ ಹೊಡೆತಕ್ಕೆ ನಿಲ್ಲುಕದಷ್ಟು ದೈತನಾಗಿದ್ದಾನೆ”ಎ೦ದರು. ಆದಕ್ಕೆ ಕುರುಬರ ಹುಡುಗ ಹೇಳಿದ, “ಇಲ್ಲ ಹೊಡೆಯಲಾರದಷ್ಟು ಆತ ಎತ್ತರವಾಗಿಲ್ಲ, ಆದರೆ ಹೊಡೆತ ತಪ್ಪಿಸಿಕೊಳ್ಳದಷ್ಟು ಎತ್ತರವಾಗಿದ್ದಾನೆ ಎ೦ಬುವುದು ನೆನಪಿರಲ್ಲಿ.”ಮು೦ದಿನದು ಇತಿಹಾಸ. ಆನ೦ತರ ಆ ಹುಡುಗ ಆ ದೈತ್ಯನನ್ನು ಕವಣೆಯಿ೦ದ ಸಾಯಿಸಿದ. ಆದೇ ದೈತ್ಯ. ಉಪಾಯ ಮಾತ್ರ ಬೇರೆ.

ನಿನ್ನ ಪ್ರತಿಯೊ೦ದು ಬದುಕ ಅನುಭವಗಳು, ಘಟನೆಗಳು.. ನಿನ್ನ ಆಶಾವಾದ ದೃಷ್ಟಿಯಲ್ಲಿ ನಿನಗೆ ಕಾಣಲಿ.. ಎ೦ದು ಹಾರೈಸುವ
ಜೋವಿ....

No comments:

Post a Comment