Saturday 15 December 2012

ಅವತರಿಸಿದ ಕ್ರಿಸ್ತ

ಸೃಷ್ಟಿ ಹೇಳ್ವ ಅಳಲು ಕೇಳ್ವ ಕರ್ತ ಕ್ರಿಸ್ತನಾಥನು


ತನ್ನ ಸೃಷ್ಟಿ ಮನುಜರೂಪಿ ತಾನೇ ಆದ ಆತನು



ಬರುವಾತ ಇಳೆಗೆ ಸೂರ್ಯ ಬೀಱ್ವ ಬೆಳಕ ಬಿತ್ತಲು

ಬರುವ ಗಳಿಗೆ ಹೊನಲು ಇಲ್ಲ ಎಲ್ಲೂ ಬರಿಯ ಕತ್ತಲು



ರತ್ನತೊಟ್ಟು ಬರುವದಾರಿ ಸೋನೆ ಮೇಘ ಮೆಟ್ಟಿಲು

ಬರುವ ಹಟ್ಟಿ ಶೂನ್ಯತಳದ ಬರಿದು ಬೇಗೆ ಬಟ್ಟಲು



ಸರ್ವಲೋಕ ಸರ್ವಶಕ್ತ ಏಕಮಾತ್ರ ದೇವನು

ತುಳಿತ ದಲಿತ ಕರಿಯ ಜನರ ನೆಳಲು ಮಾತ್ರ ಕಾಣ್ವನು



ಬೆತ್ತಲಾದ ಜಗಕ್ಕೆ ಕ್ರಿಸ್ತ ರಕ್ಷೆ ಕೋಟೆ ಕೊತ್ತಲು

ಬಸಿದು ಬಂದ ಬಸಿರ ಸುತ್ತ ಶೇಷ ಉಸಿರು ಕಾವಲು



ನೆಲದ ಆ ನಿರೀಕ್ಷೆ ಮೀರಿ ಅವತರಿಸಿದ ದೇವನು

ನಮ್ಮ ಮನದಲ್ಲಿ ಜಾಗ ಅಲ್ಪ ಸಿಕ್ಕರೂ ಸಾಕು...

ಮತ್ತೆ ಹುಟ್ಟಿ ಬರುವನು..

ಕ್ರಿಸ್ತ ಮತ್ತೆ ಹುಟ್ಟಿ ಬರುವನು....!!

                                                                  -Santhosh Ignatius

No comments:

Post a Comment