ಪ್ರವಾದಿಗಳನ್ನು ನೆನೆಯುತ್ತಾ…
ನೀ ಹೇಳಿದ ಸತ್ಯ..
ಅಸತ್ಯ ನನ್ನ ಬದುಕಿಗೆ ಕಸಿವಿಸಿಯ ಬೀಜಗಳಾದವು
ಹಿಂಸೆಯಿಂದ ನುಂಗುವ ಕಹಿ ಮಾತ್ರೆಗಳಾದವು…
ಮನಕೊರೆಯುವ ಉಳಿ ಸುತ್ತಿಗೆಗಳಾದವು
ನನ್ನ ಮಾತು ಕೃತಿಗಳನ್ನು ನಿರ್ದಯೆಯಿಂದ
ತೂಗುವ ತಕ್ಕಡಿಗಳಾದವು
ನನ್ನ ಟೊಳ್ಳು ಹಂಬುತನಕ್ಕೆ ಹಿಡಿಯುವ
ಕನ್ನಡಿಗಳಾದವು
ಕೊನೆಗೆ, ಅದು ಸಹಿಸಲಾಗದ ಉಗ್ರ ಹಿಂಸೆಯಾದಾಗ
ಸತ್ಯದ ಮೂಲ ನಿನ್ನನೇ..
ಸಮಾಧಿ ಮಾಡಿದೆ..ನಾನು
ಕೇವಲ ನನ್ನ ಕ್ಷಣಿಕ ಪರಿಹಾರಕ್ಕೆ..
ಜೋವಿ..
No comments:
Post a Comment