Tuesday 18 November 2014

ದೇವರ ವಿಳಂಬಗಳು ದೇವರ ನಿರಾಕರಣೆಗಳಲ್ಲ - ಭಾಗ 2

ನೀವು ಚೈನಾ ಬಿದಿರಿನ ಬೀಜವೊಂದನ್ನು ಮಣ್ಣಿನಲ್ಲಿ ನೆಟ್ಟು, ನೀರುಣಿಸಿ, ಒಂದು ವರ್ಷದ ಕಾಲ ಅದನ್ನು ಪೋಷಿಸಿದರೂ ಒಂದು ಸಣ್ಣ ಚಿಗುರೂ ಮೊಳಕೆಯೊಡೆಯುವುದಿಲ್ಲ. ಒಂದು ವರ್ಷವೇಕೆ? ಭರ್ತಿ 5 ವರ್ಷಗಳ ಕಾಲ ಯಾವುದೇ ಚಿಗುರು ಕಾಣುವುದಿಲ್ಲ. ಆದರೆ ಹಠಾತ್ತಾಗಿ ಒಂದು ದಿನ ಒಂದು ಸಣ್ಣ ಕಡ್ಡಿ ಮಣ್ಣನ್ನು ಸೀಳಿಕೊಂಡು ಹೊರ ಬಂದಿರುತ್ತದೆ. ಮುಂದಿನ 6 ವಾರಗಳಲ್ಲಿ ಅದೇ ಬಿದಿರು ಗಿಡ 90 ಅಡಿಗಳಷ್ಟು ಉದ್ದಕ್ಕೆ ಬೆಳೆಯಬಲ್ಲದು. 24 ಗಂಟೆಗಳಲ್ಲಿ  39 ಇಂಚುಗಳಷ್ಟು ಉದ್ದ ಬೆಳೆಯುಲು ಅದಕ್ಕೆ ಸಾಧ್ಯವಾಗುತ್ತದೆ. ಅಕ್ಷರಶ ನೀವು ಗಿಡ ಬೆಳಯುವುದನ್ನು ಕಣ್ಣಾರೆ ಕಾಣಬಹುದು. ಐದು ವರ್ಷಗಳಲ್ಲಿ ಬಚ್ಚಿಟ್ಟುಕೊಂಡತ್ತಿದ್ದ ಸಸಿ ಏನು ಮಾಡುತ್ತಿತ್ತು? ಅದು ತನ್ನ ಬೇರುಗಳನ್ನು ಬೆಳೆಸಿಕೊಳ್ಳುತಿತ್ತು. ಪೂರ್ತಿ 5 ವರ್ಷಗಳ ಕಾಲ ಅದು ತನ್ನ ವೇಗದ ಬೃಹತ್ ಬೆಳವಣಿಗೆಗೆ ತನ್ನನ್ನೇ ಸಿದ್ಧಗೊಳಿಸಿಕೊಳ್ಳುತಿತ್ತು. ಒಂದು ಬೇರಿನ ವ್ಯವಸ್ಥೆ ಇಲ್ಲದೆ ಗಿಡ ತನ್ನ ಮುಂದಿನ ಬೆಳವಣಿಗೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ . ಕೆಲವರು ಗಿಡ 6 ವಾರದಲ್ಲಿ 90 ಅಡಿ ಬೆಳೆಯಿತು ಎನ್ನಬಹುದು, ಆದರೆ ನಾನು ಅದು 5 ವರ್ಷ 6 ವಾರಗಳಲ್ಲಿ ಅಷ್ಟು ಎತ್ತರವಾಗಿ ಬೆಳೆಯಿತು ಎಂದು ಹೇಳುತ್ತೇನೆ. ಹಾಗೆಯೇ, ಹಂತವು ನನ್ನ ಆರಂಭಿಕ ಪಯಣದಲ್ಲಿ ನನ್ನ ಪ್ರತಿಭೆಯ ಕಡೆಗಿನ  ನನ್ನ ವಿಶ್ವಾಸವನ್ನು ನನ್ನ ಸಿದ್ಧತೆಯನ್ನು ಪರೀಕ್ಷಿಸಿತು.
  
ಒಟ್ಟಾರೆಯಾಗಿನನ್ನದು ಅತ್ಯಂತ ತೃಪ್ತಿಕರವಾದ ಕೀಡಾ ಜೀವನ. ಅನೇಕ ಏಳುಗಳ ಜೊತೆ ಹಲವಾರು ನಿರಾಸೆಗಳೂ ಇದ್ದವು. ಆಸ್ಟೇಲಿಯಾ ಪ್ರವಾಸದ ಬಳಿಕ ನನ್ನ ಆಟದ ಸಮಯ ಮುಗಿದಿದೆ ಹಾಗೂ ನಾನು 16 ವರ್ಷದ ಹಿಂದೆ ಬಂದಂತೆ, ಮುಂದಿನ ತಲೆಮಾರಿನ ಪ್ರತಿಭಾವಂತ ಯುವ ಬ್ಯಾಟ್ಸ್ ಮೆನ್ ಗಳಿಗೆ ಅವರ ಪಯಣವನ್ನು ಪ್ರಾರಂಭಿಸಲು ದಾರಿ ಮಾಡಿಕೊಡಬೇಕು ಎಂದು ಅತ್ಯಂತ ಸ್ಪಷ್ಟವಾಗಿ ಅನಿಸಲು ಪ್ರಾರಂಭಿಸಿತು. ನನ್ನ ಕುಟುಂಬ, ಸಹ ಆಟಗಾರರು ಹಾಗೂ ಗೆಳೆಯರ ನಡುವೆ ನನ್ನ ಕ್ರೀಡಾ ಜೀವನಕ್ಕೆ ತೆರೆ ಎಳೆಯಲು ಇದೇ ತಕ್ಕ ಸಮಯವೆನಿಸಿ ಸಂತೋಷದಿಂದ ನಿರ್ಧಾರ ತೆಗೆದುಕೊಂಡೆ. ನನಗೆ ಸಿಕ್ಕ ಪ್ರೀತಿ ನನ್ನ ಹೃದಯವನ್ನು  ತಟ್ಟಿದೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ಯಾವುದೇ ಪೂರೈಸದ ವೃತ್ತಿ ಗುರಿಗಳಿಲ್ಲ, ನನಗೆ ನಾನೇ ಸಾಬೀತು ಪಡಿಸಲು ಇನ್ನು  ಏನೂ ಉಳಿದಿಲ್ಲ. ನಾನು ಬಾಲಕನಾಗಿ ಏರಬೇಕೆಂದು ಅಂದುಕೊಂಡಿದ್ದ  ನನ್ನ ಪರ್ವತವನ್ನು ಏರಿದ್ದೇನೆ. ಏರಬೇಕೆಂದು ಕಣ್ಣಿಟ್ಟದ ಪರ್ವತವನ್ನು ಹತ್ತುವ ಪಯಣದಲ್ಲಿ ನನ್ನ ಶಾಲೆಯ ಮುಖ್ಯೋಪಾಧ್ಯಾರೂ ಸೇರಿದಂತೆ ಅನೇಕರ ಸಹಾಯ ಪಡೆದುಕೊಂಡಿದ್ದೇನೆ. ಒಬ್ಬನೇ ಕುಳಿತು ನನ್ನ ಸೋಲು ಗೆಲವುಗಳನ್ನು  ಮೆಲುಕು ಹಾಕುವಾಗ ನನ್ನ ಬಗ್ಗೆ ನಾನು ಹೆಚ್ಚು ಅರ್ಥ ಮಾಡಿಕೊಂಡಿದ್ದೇನೆ. ಹಾಗೇ ಏರುವುದೇ ನನಗೆಲ್ಲಾವೂ ಆಗಿ ನಾನು ಅದರಲ್ಲೇ ಮುಳುಗಿಹೋದೆ. ನನ್ನ ಗುರಿಗೆ ಹತ್ತಿರವಾಗುತ್ತಿದ್ದಂತೆ ಅದರಲ್ಲೇ ನನ್ನ ಗಮನವನ್ನು ಕೇಂದ್ರೀಕರಿಸಿ, ಗುರಿಯತ್ತ ನನ್ನ ದೃಷ್ಟಿಯಿರಿಸಿದೆ. ಕೊನೆಗೆ ನನ್ನ ಗುರಿ ತಲುಪಿ, ನಾನು ನಿಂತ ಸ್ಥಾನದಲ್ಲಿ ಅಪಾರವಾದ ಆನಂದ ಪಡೆದೆ. ಒಂದು ರೀತಿಯ ಶಾಂತಿ ಹಾಗೂ ಸಮಾನತೆ ಭಾವ ನನ್ನದಾಯಿತು. ಆಗ ನನಗೆ ಅರಿವಾದುದು ಏನೆಂದರೆ, ನೀವು ಜಗತ್ತಿನಲ್ಲಿ ಮೊದಲಿಗರೇ ಅಗಬೇಕಾಗಿಲ್ಲ, ನಿಮಗೆ ನೀವು ಮೊದಲಿಗರಾದರೆ ಸಾಕು. ನಿಮಗೆ ನೀವೆ ಮೊದಲಿಗರಾಗಬೇಕೆನ್ನುವ ಶಿಖರವೇ ಅತ್ಯಂತ ಎತ್ತರದ ಶಿಖರ.

ಒಬ್ಬ ಉತ್ತಮ ಪರ್ವತರೋಹಿಯ ಹಾಗೇ ನಾನು ಈಗ ಮತ್ತೊಂದು ಪರ್ವತದ ಹುಡುಕಾಟದಲ್ಲಿದ್ದೇನೆ. ಅದರ ಅನಿಶ್ವಿತತೆ ನನ್ನನ್ನು ಆತಂಕಕ್ಕೆ ತಳ್ಳುತ್ತದೆ, ಅದರೆ ಅದೇ ನನ್ನನು ಉತ್ತೇಜಿಸುತ್ತದೆ ಕೂಡ. ನಾನೀಗ ಮತ್ತೆ ನನ್ನ ತಂದೆಯ ಕೊಠಡಿಯ ಟ್ರಾನ್ಸಿಸ್ಟರ್ ನಿಂದ ಕ್ರಿಕೆಟ್ ವೀಕ್ಷಕ ವಿವರಣೆ ಕೇಳುತ್ತಿದ್ದ ಬಾಲಕನಂತಾಗಿದ್ದೇನೆ. ಇಂದಿಲ್ಲಿ ಪದವಿ ಪಡೆಯುತ್ತಿರುವ ದೇಶದ ಅತ್ಯಂತ ಚುರುಕು ಬುದ್ಧಿಯವರಲ್ಲಿ ಒಬ್ಬರಾದ ೨೦೧೩ ಬ್ಯಾಚಿನ ನಿಮಗೆ ನಿಮ್ಮ ಮುಂದಿನ ರೋಮಾಂಚಕ ಪಯಣಕ್ಕೆ ಶುಭವನ್ನು ಹಾರೈಸುತ್ತೇನೆ.

  ನಿಮಗೆ ತಕ್ಕದಾದ ಪರ್ವತ ನಿಮಗೆ ಸಿಗಲಿ. ಪಯಣದಲ್ಲಿ ನಿಮಗೆ ಬೆಂಬಲ ಸಿಗಲಿ ಮತ್ತು ನೀವು ಅದನ್ನು ಮತ್ತೊಬ್ಬರಿಗೆ ಕೊಡುವಂತಾಗಲಿ. ಸಹನೆಯಿಂದಿರಿ ಮತ್ತು ಪಯಣದಲ್ಲಿ ಬರಬಹುದಾದ ಏಳು ಬೀಳುಗಳ ಸಮಯದಲ್ಲಿ ನಿಮ್ಮ ಪ್ರಯತ್ನ ಮುಂದುವರಿಯಲಿ. ಅದಕ್ಕಿಂತ ಮುಖ್ಯವಾಗಿ ನೀವು ಪ್ರಾರಂಭಿಸಲಿರುವ ಪಯಣವನ್ನು ಮನಪೂರ್ವಕವಾಗಿ ಅನಂದಿಸಿ. ವಂದನೆಗಳು

No comments:

Post a Comment