Wednesday, 30 December 2009

ಶ್ರದ್ಧಾಂಜಲಿ





ಕನ್ನಡ ಸಾಂಸ್ಕೃತಿಕ ಲೋಕದ
ಹೆಮ್ಮೆಯ ಪುತ್ರರಾದ

ಡಾ.ಸಿ.ಆಶ್ವಥ್
ಹಾಗೂ
ಡಾ.ವಿಷ್ಣುವರ್ಧನ್ ರವರಿಗೆ
ಸ್ವರಚಿತ್ತಾರ ಬಳಗದ
ಭಾವಪೂರ್ಣ ನಮನಗಳು.

Tuesday, 29 December 2009

ಕ್ರಿಸ್ತ ಇನ್ನೂ ಹುಟ್ಟಿಲ್ಲ...

ಪ್ರೀತಿಯ ಆನು


ಕ್ರಿಸ್ಮಸ್ ಭಗವಂತನ ಒಂದು ಸ್ವರೂಪವನ್ನೇ ಸದೃಶಗೊಳಿಸುದಂತಹ ಹಬ್ಬ. ಚಿತ್ರದ ಥರ ದೇವರ ಚಿತ್ತಾರಗಳನ್ನು ಸೃಷ್ಟಿಸಿಕೊಂಡಿದ್ದ ನಮ್ಮ ಕಲ್ಪನಾ ಕಣ್ಣುಗಳಿಗೆ ದೇವರ ನೈಜ ರೂಪವನ್ನು ಸಾಕ್ಷತ್ಕರಿಸಿದಂತಹ ಕ್ಷಣ ಕ್ರಿಸ್ಮಸ್. ಬೆಂದು ನೊಂದ ಮನದ ಬಾಂದಳದಲ್ಲಿ ಸಂತೋಷದ ನಕ್ಷತ್ರಗಳನ್ನು ಮಿನುಗಿಸಿದ, ಪಾಪ, ನೋವು ತುಂಬಿದ ಮನದ ಗೋದಲಿಗಳಲ್ಲಿ ಪ್ರೀತಿ ಪ್ರೇಮ ಶಾಂತಿ ಸ್ವರೂಪನಾದ, ಕ್ರಿಸ್ತನೇ ಕ್ರಿಸ್ಮಸ್ ಬಿಂಬಿಸುವ ದೇವರ ಸ್ವರೂಪ.

ಕ್ರಿಸ್ತ ಹುಟ್ಟಿದ ಮನ, ಮನೆ, ಊರು, ದೇಶ ಎಂದೂ ಬದಲಾಗದೆ ಇರಲು ಅಸಾಧ್ಯ. ಆನೇಕ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಿ ನೋಡಿದಾಗ ಈ ಸತ್ಯ ನಮಗೆ ಮನನವಾಗುವುದರಲ್ಲಿ ಎರಡು ಮಾತಿಲ್ಲ. ಒಮ್ಮೆ ನಮ್ಮ ಮನಸ್ಸಿನ ಗೋದಲಲ್ಲಿ ಕ್ರಿಸ್ತ ಹುಟ್ಟಿದ್ದೇ ಆದರೆ, ನಮ್ಮ ಜೀವನ ಹೊಸ ಸ್ವರೂಪವನ್ನೇ ಪಡೆದುಕೊಂಡು ಕೊನೆಗೆ, ನಾವು ಮತ್ತೊಬ್ಬ ಕ್ರಿಸ್ತನಾಗುವುದರಲ್ಲಿ ಸಂಶಯವೇ ಇಲ್ಲ.

ಕ್ರಿಸ್ತ ನಮ್ಮ ಮನಸಿನಲ್ಲಿ ಹುಟ್ಟುವುದೆಂದರೆ ಎನು? ಎಂಬ ಪ್ರಶ್ನೆ ನಮ್ಮನ್ನು ಕಾಡಬಹುದು. ಆದರೆ ಈ ಪಶ್ನೆಗೆ ಕ್ರಿಸ್ತ ಮತ್ತೊಮ್ಮೆ ಹುಟ್ಟಿ ಬರುವ ಭರವಸೆಯೊಂದೇ ಉತ್ತರವಲ್ಲ. ಅವನ ಜೀವವಾಕ್ಯ, ಕರೆ ನಮ್ಮ ಮನಗಳಲ್ಲಿ ಗರ್ಭಕಟ್ಟಿ, ನಮ್ಮ ಸ್ವಾರ್ಥವನ್ನು ಬಡಿದೋಡಿಸಿ ನಮ್ಮನ್ನು ಮತ್ತೊಬ್ಬ ಕ್ರಿಸ್ತನಾಗಿ ಹುಟ್ಟಿಸಬೇಕು. ಅದೇ ನನ್ನರ್ಥದ ಹಾಗು ವಾಸ್ತವಿಕತೆಯ ಕ್ರಿಸ್ಮಸ್. ಕ್ರಿಸ್ತನ ಮಾತುಗಳು ನಮ್ಮೆಲ್ಲರ ಮನಗಳಲ್ಲಿ ಗರ್ಭ ಕಟ್ಟಲಿ, ಅವು ನಮ್ಮಲ್ಲೇ ಪ್ರಸವವಾಗಿ ನಮ್ಮನ್ನು ಕ್ರಿಸ್ತನಂತೆ ಪರಿವರ್ತಿಸಲೆಂಬ ಪ್ರಾರ್ಥನೆ ನಮ್ಮದಾಗಲಿ. ಕೊನೆಗೆ ಕೆಲವು ಸಾಲುಗಳು...

ಕ್ರಿಸ್ತ ಇನ್ನೂ ಹುಟ್ಟಿಲ್ಲ...

ಹಸಿದು ಸಾಯುತ್ತಿರುವ ಜನರ ಕಾಣದೆ
ತಿಂದು ತೇಗುವ ಹೊಟ್ಟೆಬಾಕ ಮನಸ್ಸಿನಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ತಮ್ಮ ಲಾಭಕ್ಕಾಗಿ ಇನ್ನೊಬ್ಬರನ್ನು
ಲಾಭದ ವಸ್ತುಗಳಾಗಿಸುವ ಕಾರ್ಪೊರೇಟ್ ಮನಗಳಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ಅಧಿಕಾರದಾಸೆಗೆ ಧರ್ಮವನ್ನು ಅಡವಿಟ್ಟು
ದ್ವೇಷ ಹಿಂಸೆಯ ಬೀಜಗಳ ಬಿತ್ತಿ
ಕುಯಿಲು ಮಾಡುವ ಅಧರ್ಮಿಗಳ ಮಾತುಗಳಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ಮುಗ್ಧ ಜನರ ಕುರಿಗಾಹಿಯಾದರೂ
ತೋಳಗಳಂತೆ ಭಕ್ತರ ಮೇಲೆರುಗುವ
ಅ ದೇವತಾ ಮನುಷ್ಯರಲ್ಲಿ
ಕ್ರಿಸ್ತ ಇನ್ನೂ ಹುಟ್ಟಿಲ್ಲ!

ಕ್ರಿಸ್ತ ಬೇಡವೆಂದರೂ ನೀ ಹುಟ್ಟು ಬಾ
ಬೀಜದಲ್ಲಿರುವ ಸಸಿಯಂತೆ
ಹಸಿರಾಗಿಸುವ ಮೋಡದ ಮಳೆಹನಿಗಳಂತೆ...
ನನ್ನ ಸ್ವಾರ್ಥಿಯಾದ ಪರಿವರ್ತಿಸಲು
ನೀ ಬರಲೇ ಬೇಕು ಬೇಡವೆಂದರೂ!

ಕ್ರಿಸ್ಮಸ್ ಹಾಗು ಹೊಸ ವರ್ಷದ ಶುಭಾಶಯಗಳು...

ಜೋವಿ

Tuesday, 15 December 2009

ಮತ್ತೆ ಬನ್ನಿ ಕನ್ನಡ ನಾಡಿನ ಗುಬ್ಬಚ್ಚಿಗಳೇ . . . .

ಅದೆಲ್ಲಿ ಹೋದವೋ ಈ ಗುಬ್ಬಿಗಳೆಲ್ಲಾ? ಬೇರಾವುದೇ ಪಕ್ಷಿಯಾಗಿದ್ದರೆ, ಎಲ್ಲಿ ಹಾಳಾದವೋ ಎ೦ದೆನ್ನಬಹುದಿತ್ತೇನೋ, ಆದರೆ ಗುಬ್ಬಿಗಳ ಬಗ್ಗೆ ಆ ರಿತಿ ಮಾತನಾಡಲು ಮನಸ್ಸಾಗುವುದಿಲ್ಲ ನೋಡಿ. ಈಗಾಗಲೇ ಅನೇಕರು ಅವುಗಳ ಬಗ್ಗೆ ಹೊಗಳುತ್ತಾ, ಕನವರಿಸುತ್ತಾ ಬರೆದು, ಕರೆದರೂ ಯಾಕೋ ಬರಲೊಲ್ಲವು. ಅದೇನು ಮುನಿಸೋ? “ಮತ್ತೆ ಬನ್ನಿ ಕನ್ನಡ ನಾಡಿನ ಗುಬ್ಬಿಗಳೇ” ಎಂದು ಕರೆಯಬೇಕೆನಿಸುತ್ತದೆ. “ಗುಬ್ಬಿಗಳೇ” ಎಂದರೆ ok, ಕನ್ನಡ ನಾಡಿನ ಗುಬ್ಬಿಗಳೇ ಯಾಕೆ ಅಂತೀರಾ? ಕನ್ನಡ ನಾಡಿನ ಗುಬ್ಬಿಗಳು ಅಂಥ ಗುಬ್ಬಿಗಳ ಜಾತಿಯೇನಾದರು ಇದೇಯೆ? ಆ ರೀತಿ ಏನಿಲ್ಲ ಬಿಡಿ.

Sunday, 29 November 2009

ಕನ್ನಡ ಎನೆ ಮನ ಕುಣಿಯುವುದು

"ಕನ್ನಡ ಎನೆ ಮನ ಕುಣಿಯುವುದು
ಕನ್ನಡ ಎನೆ ಕಿವಿ ನಿಮಿರುವುದು"
ಇದು ಕುವೆಂಪು ಬರೆದ ಒಂದು ಕಾವ್ಯದ ಪ್ರಸಿದ್ಧ ಸಾಲು. ತಾವು ಪದ್ಯಗಳನ್ನು ಗೀಚುವ ಗೀಳಿಗೆ ಅಂಟಿಕೊಂಡಾಗ, ಇಂಗ್ಲೀಷ್ ನ ವ್ಯಾಮೋಹ ಅವರನ್ನು ಬಹಳವಾಗಿ ಅಪ್ಪಿಕೊಂಡಿತ್ತು. ಅಷ್ಟೆ ಏಕೆ ಮೊದಮೊದಲು ಕವನಗಳನ್ನು ಸಹ ಆಂಗ್ಲದಲ್ಲಿ ಬರೆದರು. ಒಂದು ಕವನ ಸಂಕಲನವಾಗಿ ಹೊರತಂದ್ದಿದರು. ಬಹುಷಃ ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಬದುಕುತ್ತಿದ್ದ ನಮ್ಮವರಿಗೆ ಎಲ್ಲೆಲ್ಲೂ ಇಂಗ್ಲೀಷ್ ನ ಭಾಷೆ, ಶೈಲಿ, ಉಡುಪು ಮತ್ತು ಅವರ ಸಂಸ್ಕೃತಿ ಆಕರ್ಷಿಸದೆ ಇದ್ದಿರಲಾರದು. ಇಂತಹ ಸಂದರ್ಭದಲ್ಲಿ ಕುವೆಂಪು ಆಂತಹ ಕುವೆಂಪುರವರಿಗೇ ಆ ಮೋಹ ವ್ಯಾಪಿಸಿತ್ತು ಕೂಡ.

Friday, 13 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಕೊನೆಯ ಭಾಗ

ಇಲ್ಲಿನ ವಾಣಿಜ್ಯೋದ್ಯಮಕ್ಕೆ, ವ್ಯಾಪರಕ್ಕೆ ಬರುವ ಅನ್ಯ ರಾಜ್ಯದವರಿಗೆ, ವಿದೇಶಿ ಸಂಸ್ಥೆಗಳಿಗೆ ಇಲ್ಲಿನ ನಾಡು, ನುಡಿಯ ಬಗ್ಗೆ ಯಾವುದೇ ರೀತಿಯ ಕಾಳಜಿ, ಪ್ರೀತಿಯಂತೂ ಇರಲು ಸಾಧ್ಯವಿಲ್ಲ. ಇಲ್ಲಿನ ಜನರಿಗೇ ಇಲ್ಲವೆಂದ ಮೇಲೆ ಅವರಿಗೆಲ್ಲಿಂದ ಬರಬೇಕು? ಮಾನವ ಸಂಪನ್ಮೂಲವೂ ಒಳಗೊಂಡಂತೆ ಇಲ್ಲಿನ ಎಲ್ಲಾ ಸಂಪತ್ತು, ಸಂಪನ್ಮೂಲ ಹಾಗೂ ಸೌಲಭ್ಯಗಳನನ್ನು ಬಳಸಿಕೊಂಡು ತಮ್ಮ ವ್ಯಾಪರವನ್ನು ನಡೆಸುತ್ತಾರೆ. ಆಗ ಸಾಮರ್ಥ್ಯ, ಪ್ರತಿಭೆ ಹೆಸರಲ್ಲಿ ಬೇರೆ ರಾಜ್ಯದ ಜನರೂ ಬರುತ್ತಾರೆ. ಅದರಲ್ಲಿ ತಪ್ಪೇನಿಲ್ಲ.

Wednesday, 11 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 2

ಹೊರಗಿನ ಶಕ್ತಿಗಳಿಗಿಂತ ಒಳಗಡೆಯೇ ನೆಲಸಿ ಇಲ್ಲಿನ ಭಾಷೆ,ಸಂಸ್ಕೃತಿಗಳ ವಿರುದ್ಧವಾಗಿಯೇ ಕೆಲಸ ಮಾಡುತ್ತಿದ್ದ, ನಿರ್ಭಾವುಕವಾಗಿದ್ದ ಒಳಗಿನ ಶಕ್ತಿಗಳ, ಪಿತೂರಿಗಳ ವಿರುದ್ಧವೂ ದೊಡ್ಡ ಹೋರಾಟಗಳೇ ನಡೆದಿವೆ. ಬೀದಿಗಿಳಿದ ಚಳುವಳಿ ನಾಯಕರ ಹೋರಾಟದ ಜೊತೆಯಲ್ಲೇ ಸಾಹಿತಿಗಳ ಅಕ್ಷರ ರೂಪದ ಹೋರಾಟಗಳು ಈ ಹೋರಾಟದ ಜ್ಯೋತಿಯನ್ನು ನಿರಂತರವಾಗಿ ಬೆಳಗಿಸಿಕೊಂಡು ಬಂದಿತು. ಅನಕೃರವರ೦ತ ಸಾಹಿತಿಗಳು ಬೀದಿಗಿಳಿದ್ದು ಕನ್ನಡ ಪರ ದನಿಯೆತ್ತಿದ್ದೂ ಉ೦ಟು.

ಕಲಾವಿದರನ್ನೂ ಒಳಗೊಂಡಂತೆ ಸಮಾಜದ ಎಲ್ಲಾ ಸ್ತರದ ಜನರೂ ಭಾಗವಹಿಸಿದ ಗೋಕಾಕ್ ಚಳುವಳಿಯ ರಭಸ, ಭಾವತೀವ್ರತೆಯ ಎಷ್ಟಿತ್ತೆಂದರೆ ಅನ್ಯರಾಜ್ಯದವರೂ, ಬೇರೆ ಭಾಷಿಕರೂ ಸಹಾ ಕತ್ತೆತ್ತಿ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ ಸಕಾಲವಾದ ಎಚ್ಚರಿಕೆಯ ಘಂಟೆಯನ್ನು ಮೊಳಗಿಸಿತು.ಎ೦ಬತ್ತರ ದಶಕದ ರೈತ ಚಳುವಳಿಗಳು ಸಹಾ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅದೂ ಒ೦ದು ರೀತಿಯ ಕನ್ನಡ ರೈತರ ಆಶೋತ್ತರಗಳಿಗಾಗಿ ನಡೆದ ಕನ್ನಡದ ಹೋರಾಟವೇ.

Tuesday, 3 November 2009

ಕನ್ನಡ, ಹೋರಾಟ ಹಾಗೂ ಅದರ ಅವಶ್ಯಕತೆ - ಭಾಗ 1

ಕನ್ನಡ ಪರ ಹೋರಾಟದ ಮಾತಿರಲಿ, ಕೆಲವೂಮ್ಮೆ ಕನ್ನಡ, ಕನ್ನಡಿಗರ ಬಗೆಗಿನ ನ್ಯಾಯಪರ ಹಕ್ಕುಗಳ ಬಗ್ಗೆ ಮಾತನಾಡಿದರೂ ಇವೆಲ್ಲ ಬೇಕೇ ಎಂದೋ, ದುರಾಭಿಮಾನಿಗಳೆ೦ದೋ ಮೂದಲಿಸುವ ಜನಕ್ಕೆ ಕಡಿಮೆಯಿಲ್ಲ, ಅದರಲ್ಲೂ ನಮ್ಮ ಕನ್ನಡಿಗರೇ ಹೀಗೆ೦ದಾಗ ಇನ್ನೇನು ಹೇಳೋಣ?


ಒ೦ದು ಭಾಷೆ ಎನ್ನುವುದು ಕೇವಲ ಸ೦ಪರ್ಕದ ಮಾಧ್ಯಮ ಮಾತ್ರವಲ್ಲದೆ ಸಂಸ್ಕೃತಿಯ ಭಾಗವೇ ಆಗಿ ಶತಮಾನಗಳೇ ಕಳೆದಿವೆ. ಜಗತ್ತಿನ ಯಾವುದೇ ಭಾಷೆಯ ಇತಿಹಾಸ , ಬೆಳವಣಿಗೆಯನ್ನು ಅವಲೋಕಿಸಿದಾಗ ಅದರ ಜೊತೆಯಲ್ಲೇ ಆ ಪ್ರದೇಶದ ಸಂಸ್ಕೃತಿ, ಜೀವನ ವಿಧಾನ, ಪ್ರಾದೇಶಿಕತೆ, ಮಣ್ಣಿನ ಸೊಗಡು ಹಾಗೂ ತನ್ನದೇ ಆದ ವೈಶಿಷ್ಠ್ಯಗಳು ಕಾಣ ಸಿಗುತ್ತದೆ. ಒ೦ದು ಸಮಾಜದ, ಜನಾ೦ಗದ, ಜೀವ ವಿಧಾನದ ಅವಿಭಾಜ್ಯ ಅಂಗವಾಗಿರುವ ಭಾಷೆಯ ಪರವಾಗಿ ಹೋರಾಟ, ವಕಾಲತ್ತುಗಳ ಅವಶ್ಯಕತೆ ಇಲ್ಲ ಎ೦ದು ಮೇಲು ನೋಟಕ್ಕೆ ಅನಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಾಚೀನ ಸಂಸ್ಕೃತಿಗಳು, ಜೀವ ವಿಧಾನಗಳು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ತಮ್ಮ ಬೇರನ್ನು ಕಳೆದುಕೊ೦ಡು ಅವಸಾನದತ್ತ ಹೆಜ್ಜೆ ಹಾಕಿವೆ. ಭಾಷೆಯ ವಿಷಯದಲ್ಲೂ ಈ ಮಾತು ನಿಜವಾಗತೊಡಗಿರುವುದು ವರದಿಗಳಿಂದ ಧೃಡಪಟ್ಟಿವೆ.ಕೆಲವು ಸ೦ದರ್ಭಗಳಲ್ಲಿ ಇವು ಸಕಾರಣವಾಗಿ, ಅನಿವಾರ್ಯವಾಗಿದ್ದರೂ ಇನ್ನೂ ಕೆಲವು ಸ೦ದರ್ಭಗಳಲ್ಲಿ ಒ೦ದು ಸಂಸ್ಕೃತಿ, ಒ೦ದು ಭಾಷೆ ಇನ್ನೊ೦ದು ಸಂಸ್ಕೃತಿ, ಭಾಷೆಗಳ ಮೇಲೆ ದಬ್ಬಾಳಿಕೆ ನಡೆಸಿದ ನಿದರ್ಶನಗಳೂ ಹೇರಳ. ಸ೦ಖ್ಯಾ ದೃಷ್ಠಿ, ಪ್ರಬಲ ಅಧಿಕಾರ ಹಾಗೂ ದುರಾಭಿಮಾನಗಳು ಈ ದಬ್ಬಾಳಿಕೆ, ಹೇರಿಕೆಗೆ ಪ್ರಮುಖ ಕಾರಣಗಳು.

Tuesday, 13 October 2009

ಒಪ್ಪು-ತಪ್ಪು

ಪ್ರೀತಿಯ ಅನು...

ನನ್ನ ಹಾರೈಕೆಗಳ ಶುಭ್ರ ಕೋಮಲ ಗುಲಾಬಿಗಳು ನಿನ್ನ ಮಡಿಲಿಗೆ. ನೂರಾರು ಜನರ ಸ್ಫೂರ್ತಿಯ ಸೆಲೆ ನಿನ್ನ ಬದುಕು ಸುಂದರ ಸುಮಧುರ ಜಗತ್ತಿನ ಚುಂಬನದಲ್ಲಿ ತೇಲಾಡುತ್ತಿರಬಹುದು! ಮಂದಾರದ ಆ ನಿನ್ನ ಮೊಗವು ಅನೇಕರಲ್ಲಿ ಸಂತೋಷದ ಒರತೆಗಳನ್ನು ಹರಿಸುತ್ತಿರಬಹುದು. ನಾನು ಮತ್ತು ನನ್ನ ಬದುಕು ಉಪ್ಪೇ ಇಲ್ಲದ ಸಾರಿನಂತೆ ಸಪ್ಪೆ, ಸಪ್ಪೆ... ಆದರೂ ಅನ್ನಕ್ಕೆ ಸ್ವಲ್ಪ ಪುಡಿ ಉಪ್ಪು ಸೇರಿಸಿ ಬದುಕನ್ನು ಸರಿಪಡಿಸುವ ಹಂಬಲ. ಸರಿಪಡಿಸಿ ಬದುಕ ಊಟದ ಸವಿಯನ್ನು ಸವಿಯುವ ತೀವ್ರತೆ. ಸಾಲವೇನಾದರೂ ನೀನು ಕೊಡುವುದಾದರೆ ನಿನ್ನ ನಗುವನ್ನು ಸ್ವಲ್ಪ ನನಗೆ ಕೊಟ್ಟು ನನ್ನನು ನಿನ್ನ ಸಾಲಗಾರನಾಗಿಸಬೇಕೆಂದು ಕೇಳಿಕೊಳ್ಳುವ ನನ್ನ ಕಂಟು ಮೊಗ.

ಅನು ನಿನಗೆ ಪತ್ರ ಬರೆಯದೆಸುಮಾರು ದಿನಗಳಾಯ್ತು. ಪ್ರಾರಂಭಿಸುವ ಸಮಸ್ಯೆ ನನ್ನ ಪೆಡಂಭೂತವಾಗಿ ಕಾಡಿಸಿ, ಈ ದಿನ ಲೇಖನವನ್ನು ಕೈಯಲ್ಲಿಡಿಸಿದೆ. ಏನು ಬರೆಯುವುದು? ಪತ್ರದ ವಸ್ತು ಏನು? ಯಾವುದೇ ರೀತಿಯ preplanning ಇಲ್ಲದೆ ಈ ಪತ್ರ ಬರೆಯಲು ಕೈಹಾಕಿದ್ದೇನೆ.


Wednesday, 7 October 2009

ಆಯ್ಕೆ - ಭಾಗ 2


ವೇದಾಂತ ಅಭ್ಯಾಸ ಮಾಡುತ್ತಿದ್ದ ಶಿಷ್ಯನೊಬ್ಬ ಗುರುವಿನೊಡನೆ ಮಾತನಾಡುತ್ತಾ “ ಗುರುಗಳೇ ನನ್ನೊಳಗೆ ಸಂಘರ್ಷ ಕಾಡುತ್ತದೆ ಆ ಸಂಘರ್ಷ ನಿವಾರಿಸಲು ಸಹಾಯ ಮಾಡಿ” ಎಂದ ಅದಕ್ಕೆ ಉತ್ತರವಾಗಿ “ಹೋಗಿ ತಪಸ್ಸು ಮಾಡು ಸಂಘರ್ಷದ ಕಾರಣಗಳನ್ನು ಸಂಶೋಧಿಸು” ಶಿಷ್ಯ ಕೆಲಕಾಲ ತಪಸ್ಸು ಮಾಡಿ ಹಿಂದಿರುಗುತ್ತಾನೆ “ಗುರುಗಳೇ ನಾನು ಆಯ್ಕೆಗಳಿರುವುದೇ ಸಂಘರ್ಷಕ್ಕೆ ಕಾರಣ ಎಂದು ಕಂಡುಕೊಂಡಿದ್ದೇನೆ. ಪ್ರಾಣಿಗಳಿಗೆ ಆಯ್ಕೆಯ ಸಮಸ್ಯೆ ಇಲ್ಲ. ಅವು ಪ್ರಾಕೃತಿಕ ಪವೃತ್ತಿಗಳಂತೆ ನಡೆದುಕೊಳ್ಳುತ್ತವೆ. ಆದರೆ ನನಗೆ ಮದುವೆಯಾಗಬೇಕೋ, ಬೇಡವೋ, ಸಸ್ಯಾಹಾರಿಯಾಗಲೋ, ಮಾಂಸಾಹಾರಿಯಾಗಲೋ, ಪ್ರವಚನಕೇಳಲೋ, ಬೇಡವೋ -ಹೀಗೆ ಆಯ್ಕೆಗಳಿವೆ. ಆಯ್ಕೆಯಿರುವಲ್ಲಿ ಸಂಘರ್ಷವಿರುತ್ತದೆ” ಎಂದು ಹೇಳಿದ. ಗುರು ಹೀಗೆಂದ “ಕೇವಲ ಅಯ್ಕೆಗಳಿರುವುದರಿಂದಲೇ

Tuesday, 6 October 2009

ಆಯ್ಕೆ - ಭಾಗ 1

ಆಯ್ಕೆ ಮಾನವನ ಬದುಕಿನ ಅವಿಭಾಜ್ಯ ಅಂಗ. ದಿನನಿತ್ಯ ಹಲವು ಆಯ್ಕೆಗಳ ನಡುವೆಯೂ ಸುಗಮವಾಗಿಯೂ, ಕೆಲವೊಮ್ಮೆ ದ್ವಂದ್ವಮಯವಾಗಿಯೂ ಜೀವನವನ್ನು ಸಾಗಿಸುತ್ತೇವೆ. ನಮ್ಮ ಬದುಕನ್ನು ರೂಪಿಸುವುದು ಅಥವಾ ಅದನ್ನು ಕೆಡಿಸುವುದು ನಮ್ಮ ಆಯ್ಕೆಯ ಮೇಲೆ ಹೊಂದಿದೆ. ನಮ್ಮ ಬದುಕಿಗೆ ನಾವೇ ಜವಾಬ್ದಾರರಾಗಿರುವಾಗ ನಮ್ಮ ಆಯ್ಕೆಗಳಿಗೂ ಕೂಡ ನಾವು ಜವಾಬ್ದಾರರು. ಜಾಗತೀಕರಣಗೊಂಡ ಈ ಯುಗದಲ್ಲಿ ಮಾನವ ಸಮಾಜ ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿರುವುದನ್ನು ಕಾಣುತ್ತೇವೆ. ಅದು ಬೇಕು, ಇದು ಬೇಕು, ಮತ್ತೊಂದು ಬೇಕೆಂದು ಬೆದಕುತ್ತಿರುವುದು ಇಂದಿನ ಸಮಾಜ. ಈ ಬೆದಕಾಟದ ಬದುಕು ಕ್ಷಣ ಕ್ಷಣಕ್ಕೂ ಬೇರೆ ಬೇರೆ ಬೇಕುಗಳನ್ನು ಹುಟ್ಟಿಸುತ್ತದೆ. ತನ್ನ ಜೀವಮಾನದಲ್ಲಿ ಈ ಬೇಕುಗಳನ್ನು ಪ್ರತೀಕ್ಷಣ ಹೊಂದಿಸಿಕೊಳ್ಳಬೇಕಾದಾಗ ಜೀವಕ್ಕೆ ಸುಖ, ನೆಮ್ಮದಿ ಶಾಂತಿ ಎಲ್ಲಿಂದ ತಾನೇ ಬರಬೇಕು?

Friday, 21 August 2009

ದೊಡ್ಡಮೇಷ್ಟ್ರು ಇನ್ನಾಸಪ್ಪನವರ ನೆನಪು

ಬೆ೦ಗಳೂರಿನ ಕನಕಪುರ ತಾಲ್ಲೂಕಿನ ಹಾರೋಬೆಲೆಯ ಹಿರಿಯ ಚೇತನರಾಗಿದ್ದು ಈಸ್ಟರ್ ಹಬ್ಬದ ಸ೦ದರ್ಭದಲ್ಲಿ ಗ್ರಾಮದಲ್ಲಿ'ಮಹಿಮೆ' ನಾಟಕವನ್ನು ನಿರ್ದೇಶಿಸುತ್ತಿದ್ದ ಹಿನ್ನಲೆಯಲ್ಲಿ ದೊಡ್ಡ ಮೇಷ್ಟ್ರು ಎ೦ಬ ಪ್ರೀತಿಯ ಪದವಿಗೆ ಭಾಜನರಾಗಿದ್ದ ಸಿ.ಇನ್ನಾಸಪ್ಪಅವರ ಸ್ಮರಣೆಯಲ್ಲಿ 'ಶಿಖರ' ಎ೦ಬ ಹೆಸರಿನ ಕಾರ್ಯಕ್ರಮ ಈಚೆಗೆ ನಡೆಯಿತು. ಅದರ ಕೆಲವೊ೦ದು ಚಿತ್ರಗಳು :










Tuesday, 26 May 2009

ರಾಯಲ್ಸಿನ ಚಾಲೆ೦ಜ್


ಎಲ್ಲರ ನಿರೀಕ್ಷೆಯನ್ನು ಮೀರಿ IPLನ ಸೆಮಿಫೈನಲ್ ಪ್ರವೇಶಿಸಿದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಗೆ ಶುಭ ಕೋರುತ್ತಾ ಈ ಪದ್ಯ.
----------------------------------------------
ರಾಯಲ್ಸು ಬ೦ದರು ಸೆಮಿಫೈನಲ್ಸ್ ಗೆ ಸ೦ಜೆಯಾಗಿತ್ತು
ಫಳ ಫಳ ಹೊಳೆಯುವ ಫ್ಲಡ್ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತು

ಮು೦ಬೈ ಡೆಲ್ಲಿ ಚೆನ್ನೈ ಎಲ್ಲಾ ಫೇವರೆಟ್ಸ್ ಆಗಿತ್ತು
ಸಾಲು ಸಾಲು ಸೋಲಿನ ಮಡುವಲಿ ಬೆ೦ಗಳೂರಿತ್ತು
ಗೆಲುವು ಮರಿಚಿಕೆಯಾಗಿತ್ತು

ಕು೦ಬ್ಳೆ ಎ೦ಬ ಮಾ೦ತ್ರಿಕನಿ೦ದ ಜೀವವ ಪಡೆದಿತ್ತು
ಸೋಲಿನ ಕಹಿಯ ಮರೆತು ಮತ್ತೆ ಗೆಲ್ಲಲು ನಿ೦ತ್ತಿತ್ತು
ಮತ್ತೆ ಗೆಲ್ಲಲು ನಿ೦ತ್ತಿತ್ತು

ಟೇಲರ್ ಕಾಲಿಸ್ ಡ್ರಾವಿಡ್ ಕೊಹ್ಲಿ ಬ್ಯಾಟನು ಬೀಸಿದರು
ಕು೦ಬ್ಳೆ ಪ್ರವೀಣ್ ಅಖಿಲ್ ತಮ್ಮ ಚಳಕವ ತೋರಿದರು
ಪುಳಕದ ಮಿ೦ಚನ್ನು ಹರಿಸಿದರು

ಟೆಸ್ಟಿನ ಟೀಮಿದು ಸೋಲಿನ ಪಡೆಯಿದು ಎ೦ದು ಜರಿದವರ
ಬಾಯಿಗೆ ಬೀಗವ ಜಡಿದು ಮು೦ದೆ ಗೆಲ್ಲುತ್ತಾ ಸಾಗಿದರು
ನಾಡಿಗೆ ಸ೦ತಸ ತ೦ದಿಹರು

ಕನ್ನಡ ಜನರು ಗ್ಯಾಲರಿಯಲ್ಲಿ ಕುಣಿ ಕುಣಿದಾಡಿದರು
ರಾಜಣ್ಣನ ಒ೦ದು ಫೋಟೋ ಹಿಡಿದು ನಲಿ ನಲಿದಾಡಿದರು
ಕನ್ನಡ ಬಾವುಟ ತೋರಿದರು

ಸೋಲು ಗೆಲುವು ಬಾಳಲಿ ಸಹಜ ಎ೦ಬುದ ನೆನೆಯುತಲಿ
ಮು೦ದಿನ ಪ೦ದ್ಯಗಳಲ್ಲಿನ ಗೆಲುವು ನಮ್ಮದೇ ಆಗಿರಲಿ
ಗೆಲುವು ನಮ್ಮದೇ ಆಗಿರಲಿ

**ಮೊದಲು ಪ್ರಕಟಗೊ೦ಡಿದ್ದು thatskannadaದಲ್ಲಿ. ಈ ಕೆಳಗಿನ ವಿಳಾಸದಲ್ಲಿ ಪದ್ಯವನ್ನು ಓದಬಹುದು.
ದಟ್ಸ್ ಕನ್ನಡದಲ್ಲಿನ ಪ್ರಕಟಣೆಗೆ ದಾರಿ

Tuesday, 12 May 2009

37+ಆಫ್ರಿದಿ+ಸಚಿನ್ = 100


ಸಚಿನ್ ಬ್ಯಾಟ್ ನಿ೦ದ ಸಿಡಿದ ದಾಖಲೆಯ 37 ಬಾಲಿನ ಶತಕ :

ಸಚಿನ್ ತೆ೦ಡಲ್ಕೂರ್ ನ ಹಲವಾರು ದಾಖಲೆಗಳು ಗೊತ್ತು , ಇದ್ಯಾವುದು ಈ ಹೊಸ ದಾಖಲೆ? ಈ ದಾಖಲೆ ಮಾಡಿದ್ದು ಪಾಕಿಸ್ತಾನದ ಶಾಹಿದ್ ಅಫ್ರಿದಿ ಅಲ್ಲವೇ ಎ೦ದು ಹುಬ್ಬೇರಿಸಬೇಡಿ. ಆ ದಾಖಲೆ ಮಾಡಿದ್ದು ಅಫ್ರಿದಿಯೇ, ಆದರೆ ಆ ಸಿಡಿಲಿನ ದಾಖಲೆಯ ಶತಕ ಬಾರಿಸಿದಾಗ ಅಫ್ರಿದಿಯ ಕೈಯಲ್ಲಿದಿದ್ದು ಸಚಿನ್ ಕೊಟ್ಟ ಬ್ಯಾಟ್ ಅ೦ದರೆ ನ೦ಬುತ್ತೀರಾ? ಈ ವಿಷಯವನ್ನು ಬಹಿರ೦ಗ ಪಡಿಸಿದ್ದು ಖುದ್ದು ಅಫ್ರಿದಿ.


ಪ೦ದ್ಯವೊ೦ದರ ನ೦ತರ ಸಚಿನ್ ತನ್ನ ಬ್ಯಾಟ್ ಅನ್ನು ಪಾಕಿಸ್ತಾನದ ವೇಗಿ ವಖಾರ್ ಯೂನಿಸ್ ಗೆ ಉಡುಗೊರೆಯಾಗಿ ಕೊಟ್ಟರ೦ತೆ, ಅದೇ ಬ್ಯಾಟ್ ಅನ್ನು ಮು೦ದೆ ಆಗ ತಾನೇ ಅ೦ತರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದ ಅಫ್ರಿದಿಗೆ ವಖಾರ್ ಕೊಟ್ಟರ೦ತೆ. ಎರಡನೆಯ ಪ೦ದ್ಯದಲ್ಲೇ ಅಫ್ರಿದಿ ಸಿಡಿಸಿದ ಆ ಶತಕ ಇ೦ದಿಗೂ ದಾಖಲೆಯಾಗೇ ಉಳಿದಿದೆ. ಆ ಬ್ಯಾಟಿನಲ್ಲಿ ಇನ್ನೂ ಹಲವಾರು ಸ್ಮರಣೀಯ ಇನ್ನಿ೦ಗ್ಸ್ ಗಳುಆಡಿರುವುದರಿ೦ದ ತನ್ನ ಮೆಚ್ಚಿನ ಬ್ಯಾಟ್ ಅದು ಎ೦ದು ಅಫ್ರಿದಿ ನೆನೆಸಿಕೊಳ್ಳುತ್ತಾರೆ.

Read more!