Showing posts with label ಹೃದಯದ ತಾಳದಲ್ಲಿ. Show all posts
Showing posts with label ಹೃದಯದ ತಾಳದಲ್ಲಿ. Show all posts

Sunday, 10 May 2020

ಮಿನುಗಿ ಮರೆಯಾದ ಬ್ರದರ್ ಚಿನ್ನಪ್ಪ



ಒಂದಾಗಿ ಸೇರೋಣ ಬನ್ನಿರೋ, ವಾದ್ಯಮೇಳ ಮೊಳಗಲಿ ಜೇನು ಮಳೆ ಸುರಿಯಲಿ, ಕುಂದಿದೆ  ಮನವು, ಯೇಸುವೇ ಸ್ತೋತ್ರ, ಶಿರ ಬಾಗಿಹೆ ಕರ ಚಾಚಿಹೆ,  ನಿನಗಾರು ದೇವರೆಂದರೆ ಯೇಸು ಎನ್ನುವೆನು, ಪುನರುತ್ಥಾನರಾದರೇಸು ಮುಂತಾದ ಹಾಡುಗಳನ್ನು ಕೇಳಿ ತಲೆದೂಗದವರಿಲ್ಲ, ದನಿಗೂಡಿಸದವರಿಲ್ಲ.  80 ದಶಕದ ಕೊನೆಯಲ್ಲಿ ಹೊಮ್ಮಿದ ಈ ಹಾಡುಗಳನ್ನು ಎಂದಿಗಾದರೂ
ಮರೆಯುವುದುಂಟೆ?

ಹತ್ತು ಹನ್ನೆರೆಡು ವರ್ಷಗಳ ಹಿಂದೆ ಒಂದಷ್ಟು ಜನಪ್ರಿಯ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳನ್ನು ಆರಿಸಿ, ಅದರಿಂದ ವಾದ್ಯಸಂಗೀತದ ಇನ್ಸ್ಟ್ರುಮೆಂಟಲ್ ಸಿಡಿ  ಮಾಡುವ ಬಗ್ಗೆ ಯೋಚಿಸಿದ್ದೆವು. ಸೆಲ್ವ, ಚಂದ್ರು ಇದರ ಮುಂಚೂಣಿಯಲ್ಲಿ ನಿಂತು, ಸಿಡಿಗೆ ಒಂದು ಒಳ್ಳೆಯ ಹೆಸರಿಡುವ  ಆಲೋಚನೆಯನ್ನು ನಮಗೆ ಬಿಟ್ಟಿದರು. ಕನ್ನಡದ ಯಾವುದಾದರೂ ಜನಪ್ರಿಯ ಕ್ರೈಸ್ತ ಭಕ್ತಿಗೀತೆಯ ಮೊದಲ ಸಾಲನ್ನೇ ಸಿಡಿಯ  ಹೆಸರಾಗಿಸುವ ನಿರ್ಧಾರ ಮಾಡಿದೆವು. ಜನಪ್ರಿಯ ಹೆಸರಾದರೆ ಕೊಳ್ಳುಗರನ್ನು ಸೆಳೆಯಬಹುದು ಎಂಬುದು ಮತ್ತೊಂದು ಉದ್ದೇಶ. ಯಾವ ಶೀರ್ಷಿಕೆ ಎಂದು ಸುಮಾರು ಗೀತೆಗಳನ್ನು ರಿಸಿಕೊಂಡು ಹುಡುಕತೊಡಗಿದೆವು. ನೂರಾರು ಹಾಡುಗಳ ಟಫ್ ಫೈಟ್ ನಡುವೆ ಆಯ್ಕೆಯಾದದ್ದು ಚೇತನ ಧ್ವನಿಸುರಳಿಯ ಯೇಸುವೇ ಸ್ತೋತ್ರ’. 

ಕನ್ನಡ ಕ್ರೈಸ್ತರ ವ್ಯಾಪ್ತಿಯಲ್ಲಿ ಒಂದಷ್ಟು ಹಾಡುಗಳು ಗಾಳಿಯಷ್ಟೇ ವ್ಯಾಪಕ. ’ಸುಂದರವಾದ ಮನೆಯಲ್ಲಿ’ ಹಾಡು ಹಾಡಿಸಿಕೊಳ್ಳದ ನೂತನ ಮನೆಯಿಲ್ಲ. ’ಮಣ್ಣಿನಿಂದ ಸೃಷ್ಟಿಯಾದ ಮನುಜನೇ’ ಹಾಡಿಲ್ಲದ ಶವ ಸಂಸ್ಕಾರವಿಲ್ಲ. ಈಗಂತೂ ’ಪಾವನಾತ್ಮರೇ ಪ್ರಿಯ ಪಾವನಾತ್ಮರೇ’ ಇಲ್ಲದ ಸಾಮೂಹಿಕ ಪ್ರಾರ್ಥನೆಯಿಲ್ಲ. ಹೀಗೆ ಹಳೆಯ ಹಾಡುಗಳು,  ಫಾ. ಫೆಲಿಕ್ಸ್, ಫಾ.ಚಸರಾ, ಫಾ ಮರಿಜೋ ಮುಂತಾದವರ ಹಾಡುಗಳ ನಡುವೆ ನಾವು ಈ  ’ಯೇಸುವೇ ಸೋತ್ರ’ ಹಾಡು ಆರಿಸಿಕೊಂಡದ್ದು ಆಕಸ್ಮಿಕವೇನ್ನಲ್ಲ.  ಕನ್ನಡ ಕ್ರೈಸ್ತರು ಮಾತ್ರವಲ್ಲದೆ ಕನ್ನಡ ಬಲ್ಲ ಎಲ್ಲಾ ಕ್ರೈಸ್ತರಲ್ಲೂ ಈ ಹಾಡು ಸುಪರಿಚಿತವಾಗಿತ್ತು. ಅಲ್ಲದೆ ಈ  ಹಾಡಿಗೂ, ಭಕ್ತರಿಗೂ  ಒಂದು ಅವಿನಾಭಾವ ಸಂಬಂಧವಿತ್ತು. ಪೂಜೆಗಳಲ್ಲಿ ಮಾತ್ರವಲ್ಲದೆ,  ಪ್ರಾರ್ಥನೆಗಳಲ್ಲಿ, ಧ್ಯಾನಗಳಲ್ಲೂ ಈ ಹಾಡನ್ನು ಜನರು ಸುಲಲಿತವಾಗಿ ಹಾಡುತ್ತಿರುವುದನ್ನು ನಮ್ಮ ಮಟ್ಟಿಗೆ ನಾವು ಗಮನಿಸಿದ್ದೆವು. ಕೊನೆಗೆ ಸಿಡಿಯ ಹೆಸರು ’ಯೇಸುವೇ ಸ್ತೋತ್ರ’ ಆಯಿತು, ಸಿಡಿಯ ಮೊದಲ ಹಾಡೂ ಅದೇ ಆಯಿತು.

ಫಾ.ಜೆ ಅಂತೋಣಪ್ಪ (ಆಗಿನ್ನು ಬ್ರದರ್)ನವರ ’ಯೇಸುವೇ ಸ್ತೋತ್ರ’ದ ಸರಳ, ಸುಂದರ ಸಾಹಿತ್ಯಕ್ಕೆ ಮಧುರವಾಗಿ ಕೊರಳಾದವರು ಗಾಯಕಿ ಕಸ್ತೂರಿ ಶಂಕರ್. ಆದರೆ ಹಾಡಿನ ಹಿಂದಿನ ಮಾಂತ್ರಿಕತೆಯಿದದ್ದು ರಾಗ   ಸಂಯೋಜನೆಯಲ್ಲಿ. ಆ ರಾಗ-ಸ್ವರ ಮಾಂತ್ರಿಕನೇ ಬ್ರದರ್ ಚಿನ್ನಪ್ಪ M V ಅಥವಾ ಎಲ್ಲರ ಮೆಚ್ಚಿನ ಚಿನ್ನು. ಮೊದಲು ತಿಳಿಸಿದ ಆ ಎಲ್ಲಾ ಹಾಡುಗಳೂ ಅವರದೇ.
ಇದೇ ಏಪ್ರಿಲ್ ಗೆ ಬ್ರದರ್ ಚಿನ್ನು ಅಗಲಿ ಮೂವತ್ತು ವರ್ಷಗಳು. 90 ಏಪ್ರಿಲ್ 16ರ ಆ ದೌರ್ಭಾಗ್ಯದ ದಿನದಂದು ಮರಳಿ ಬಾರದ ಲೋಕಕ್ಕೆ ಹೊರಟ ಚಿನ್ನು, ಬಿಟ್ಟು ಹೋದದ್ದು ಒಂದಷ್ಟು ಸುಮಧುರ ಹಾಡುಗಳ ಬುತ್ತಿ, ತುಂಬಲಾಗದ ಖಾಲಿತನ ಹಾಗೂ ಎಂದಿಗೂ ಮುಗಿಯದ ಗುನುಗು.           

ಕನ್ನಡ ಕ್ರೈಸ್ತ ಭಕ್ತಿ ಸಂಗೀತದ ಪರಂಪರೆ ದೊಡ್ಡದು. ಚಿನ್ನುರವರ ಮುಂಚೆ ನೂರಾರು ಗೀತೆಗಳು ಬಂದಿವೆ. ಇನ್ನು ಅವರ ನಿಧನದ ನಂತರದ ವರ್ಷಗಳಲ್ಲಂತೂ ಕನ್ನಡ ಭಕ್ತಿ ಗೀತೆಗಳು ಮತ್ತಷ್ಟು ಸಮೃದ್ಧಿಯಾಗಿ ಬೆಳೆದು ನಿಂತಿದೆ. ಆದರೆ ದಶಕದ ಸೆಮಿನರಿ ಒಡನಾಟದಲ್ಲಿ, ಆ ಐದಾರು ವರ್ಷಗಳ ಕ್ರಿಯಾಶೀಲತೆಯಲ್ಲಿ, ಬೆರಳೆಣಿಕೆಯಷ್ಟು ಕ್ಯಾಸೆಟ್ಟುಗಳಲ್ಲಿ, ಕೆಲವೇ ಗೀತೆಗಳ ಸಂಯೋಜನೆಯಲ್ಲಿ, ಸುಂದರ ಕಂಠ ಸಿರಿಯಲ್ಲಿ ಚಿನ್ನು ಮೂಡಿಸಿದ ಭರವಸೆ, ಒತ್ತಿದ ಛಾಪು, ಉಳಿಸಿ ಹೋದ ಕೊರತೆ ಗಮನಾರ್ಹ. ಬ್ರದರ್ ಚಿನ್ನು ನವರ ಒಡನಾಟದಲ್ಲಿದ್ದ, ಬಲ್ಲ ಯಾರನ್ನು ಕೇಳಿದರೂ ಅದು ಸುಂದರ ನೆನಪುಗಳ ಮಂದಾರ, ಇನ್ನೂ ಇರಬೇಕಿತ್ತು ಎಂಬ ಏಕ ಅಭಿಪ್ರಾಯದ  ದುಃಖದ ಉದ್ಘಾರ.
 
90 ದಶಕ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳ ಧ್ವನಿ ಸುರಳಿಗಳ ಪರ್ವಕಾಲ. ಆದರೆ ಅದಕ್ಕೂ ಹಿಂದಿನ 80ದಶಕ ಒಂದು ವಿಶಿಷ್ಟ ಚಟುವಟಿಕೆ ಕಾಲ. ಹಿರಿಯರಾದ ಫಾದರ್ ಫೆಲಿಕ್ಸ್, ಫಾದರ್ ಮರಿಜೋ ತಮ್ಮ ಗಾನೆ ಸುಧೆ ಹರಿಸುತ್ತಾ ಪ್ಲೇಟ್, ಕ್ಯಾಸೆಟ್ಟುಗಳ ಮೂಲಕ ಮನೆ ಮನಗಳ ತಾಕತ್ತಿದ್ದರು. ಇತ್ತ ಕಿರಿಯರ ಪಡೆಯೊಂದು ಆ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸುವ ಭರವಸೆಯನ್ನು ಮೂಡಿಸಿದ್ದರು. ಆ ದಶಕದ ಎರಡನೆಯ ಭಾಗದಲ್ಲಂತೂ ಕನ್ನಡ ಕ್ರೈಸ್ತ ಸಾಂಸ್ಕೃತಿಕ ಲೋಕ ಭರಪೂರ ಕೊಯ್ಲನ್ನು ಕಂಡಿತು. ಚಸರಾ ಎಂಬ ತಾರೆ ಸಂಗೀತ ಲೋಕದಲ್ಲಿ ಉದಯಿಸಿ ಮಿನುಗಲು ಆರಂಭಿಸಿದರೆ, ವಿನ್ಸೆಂಟ್ , ಡೇವಿಡ್ ಮುಂತಾದವರ ಜನಧಾರೆ, ಗಾನವೃಂದ ಮಾತ್ರವಲ್ಲದೆ ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳತ್ತಲೂ  ಏರುಮುಖದಲ್ಲಿತ್ತು. ಸ ರಾ ಡಾಮನಿಕ್ ತಮ್ಮದೇ ಕ್ಯಾಸೆಟ್ಟುಗಳ ಮೂಲಕ ಸಣ್ಣ ಕಂಪನಗಳನ್ನು ಮೂಡಿಸುತ್ತಿದ್ದರು.

ಇತ್ತ ಸೆಮನರಿಯಲ್ಲಿನ ಬ್ರದರುಗಳು, ಯಾಜಕ ದೀಕ್ಷೆಯ ಹೊಸಿಲಲ್ಲಿದ್ದವರು, ನವ ಯಾಜಕರೂ ಎಲ್ಲರೂ ಸೇರಿ ಉತ್ಸಾಹದ  ಹೊಸ ದಾರಿಯ ಅನ್ವೇಷಣೆಯಲ್ಲಿ ಕ್ರಿಯಾಶೀಲರಾಗಿದ್ದರು. ಅದರಲ್ಲಿ ಮಿಂಚು ತಾರೆಯಂತೆ ಮಿನುಗಿ ಮರೆಯಾದದ್ದು ಬ್ರದರ್ ಚಿನ್ನು. ಒಂದೆರೆಡು ತಿಂಗಳಲ್ಲಿ ಡೀಕನ್ ಆಗಬೇಕಿತಷ್ಟೇ. ಫಾ.ಜೆ ಅಂತೋಣಪ್ಪ ಹಾಗೂ ಫಾ.ಲೂರ್ದಪ್ಪನವರ ಗುರು ದೀಕ್ಷೆಯ ಸ್ಮರಣಾರ್ಥ ಬಂದ ’ಅಭಿಷೇಕ’  ಪ್ರಾಯಶ: ಅವರು ತೊಡಗಿಸಿಕೊಂಡ ಕೊನೆಯ ಧ್ವನಿಸುರಳಿ. ಅದರಲ್ಲಂತೂ ಸುಮಧುರ, ಅರ್ಥಗರ್ಭಿತ ಮಾತ್ರವಲ್ಲದೆ ಸೂಪರ್ ಹಿಟ್ ಹಾಡುಗಳ ತೋರಣವೇ ಇತ್ತು.’ನಡೆಸು ಎನ್ನ ಸೇವಕ ಪ್ರಭು’, ತಗ್ಗಿ ನಡೆಯಬೇಕು ಮನುಜ’ ಬಂದೆನು ಇಂದು ತಂದೆಯ ನೆನೆದು’, ಧ್ಯಾನಿಸು’ ವಾರ್ತೆ ಕೇಳಿ ಧ್ಯಾನ ಮಾಡಿ ’ ಜಗಜ್ಯೋತಿ ಯೇಸು’ ಎಲ್ಲವೂ ಒಂದಕ್ಕಿಂತ ಒಂದು ಮೀರಿಸುವಂತ ಹಾಡುಗಳೇ.

ಬ್ರದರ್ ಚಿನ್ನುರವರ ಬಗ್ಗೆ ಗೊತ್ತಿಲ್ಲದ ಓದುಗರಿಗೆ ಅವರನ್ನು ಪರಿಚಯಿಸಬೇಕಾದದು ಅವರ ಹಾಡುಗಳಿಂದಲೇ.  ಎಂಬತ್ತರ ದಶಕದ ಕೊನೆಯ ಭಾಗದಲ್ಲಿ  ಹೊರ ಬಂದ ಅರ್ಪಣ, ಚೇತನ, ಪಾದುವ ಪುಷ್ಪ, ಅಭಿಷೇಕ, ಮೃತ್ಯುಂಜಯ  ಮುಂತಾದ ಕ್ರೈಸ್ತ ಭಕ್ತಿ ಗೀತೆಗಳ ಧ್ವನಿಸುರುಳಿಗಳಲ್ಲಿನ ಅತ್ಯಂತ ಸುಮಧುರ ಹಾಡುಗಳ ರಚನಾಕಾರರು ಅವರು. ಸಂಗೀತ ರಚನೆ ಜೊತೆಗೆ ಕೆಲವೊಂದಕ್ಕೆ ತಾವೇ ಸಾಹಿತ್ಯ ರಚಿಸಿ, ಕಂಠವನ್ನೂ ಒದಗಿಸಿದ ಮಹಾನ್ ಪ್ರತಿಭೆ ಬ್ರದರ್ ಚಿನ್ನಪ್ಪ. ತಮ್ಮ ಮಧುರವಾದ ಕಂಠ ಸಿರಿಯಲ್ಲಿ ಹಾಡಿಗೆ ಹಾಗೂ ಸಾಹಿತ್ಯಕ್ಕೆ ಬೇಕಾದ ಭಾವಾರ್ಥಗಳನ್ನು ಸಮರ್ಥವಾಗಿ ತಂದವರು.

ಒಂದು ಹಾಡಿಗೆ ಇರಬೇಕಾದ ಎಲ್ಲ ಗುಣಗಳನ್ನು ಒಳಗೊಂಡ ಗೀತೆಗಳನ್ನು ಅತ್ಯಂತ ಅಲ್ಪ ಸಮಯದಲ್ಲಿ ಅತ್ಯಂತ ಯಶಸ್ವಿಯಾಗಿ ಕೇಳುಗರ ಮನಮುಟ್ಟಿಸಿದ ಹೆಗ್ಗಳಿಕೆ ಅವರದು. ಚಿನ್ನುರವರ ಹಾಡುಗಳಲ್ಲಿನ ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ ಸಾಹಿತ್ಯ ಒದಗಿಸಿದವರ ಪಟ್ಟಿ. ಅಂದಿನ ಸಮಯದ ಅನೇಕ ಬ್ರದರ್ ಗಳು ಈ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದರು. ಅವರೆಲ್ಲಾ ಮುಂದೆ ಹಾಡುಗಳ ಕಾವ್ಯ ರಚನೆಯಲ್ಲಿ ತೊಡಗಿಕೊಂಡದ್ದು ವಿರಳವೇ.
ಹಾಡುಗಳ ವಿಶೇಷತೆಯ ಬಗ್ಗೆ ಹೇಳುವದಕ್ಕಿಂತ ಹಾಡುಗಳನ್ನು ಕೇಳುವುದೇ ಲೇಸು. ಸರಳವೆನಿಸುವ, ಎಲ್ಲರಿಗೂ ಸುಲಭವಾಗಿ ಮುಟ್ಟುವ, ದೇವಾಲಯದಲ್ಲಿ ಹಾಡಬಹುದಾದ, ಹಿಂದೆ ಬಂದ ಹಾಡುಗಳಿಗಿಂತ ತುಸು ಭಿನ್ನವಾಗಿ, ಮುಂದೆ ಬಂದ ಹಾಡುಗಳಿಗಿಂತ ಹೆಚ್ಚಾಗಿ ಬೈಬಲ್ ವಾಕ್ಯಗಳನ್ನೇ ನೆಚ್ಚಿಕೊಂಡ ಹಾಡುಗಳಿವು.

ಬ್ರದರ್ ಚಿನ್ನು ಜನಿಸಿದ್ದು 1961ರ ಏಪ್ರಿಲ್ 25ರಂದು. ಕೊಳ್ಳೇಗಾಲ ತಾಲೂಕಿನ ಪ್ರಕಾಶ್ ಪಾಳ್ಯ ಹುಟ್ಟಿದ ಊರು. ತಂದೆ ಮುತ್ತುಸ್ವಾಮಿ ಹಾಗೂ ತಾಯಿ ಪ್ರೆಸಿಲಮ್ಮ ದಂಪತಿಗಳ ನಾಲ್ಕನೆಯ ಮಗನಾಗಿ ಜನಿಸಿದ ಅವರು ಮೈಸೂರಿನ ಫಿಲೋಮಿನಾಸ್ ನಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿದರು. ಮುಂದೆ ಕಮನಹಳ್ಳಿಯಲ್ಲಿದ್ದ ತಮ್ಮ ಅಣ್ಣಂದಿರಾದ ಸೆಲ್ವರಾಜ್ ಹಾಗೂ ಪ್ರಕಾಶ್ ರವರೊಂದಿಗೆ ಇದ್ದ ಚಿನ್ನು, ನಂತರ ಕಮ್ಮನಹಳ್ಳಿ ಧರ್ಮಕೇಂದ್ರಕ್ಕೆ ಬಂದ ಫಾ.ತೋಮಸ್ ರವರ ಬಳಿ ದೇವಾಲಯದ ಕಾರ್ಯಗಳಲ್ಲಿ ಸಹಾಯಕರಾಗಿದ್ದರು. ಅವರ ಮಾರ್ಗದರ್ಶನದಲ್ಲೇ ಮೈಸೂರಿನ ಮೈನರ್ ಸೆಮನರಿಗೆ ಸಹ ಸೇರಿದರು. ಸೆಮಿನರಿಯಲ್ಲಿ ಸಾಂಸ್ಕೃತಿಕವಾಗಿ ತೊಡಗಿಕೊಂಡು ಬಂದು ಸಂಗೀತ ಕೃಷಿಯಲ್ಲಿ ಬೆಳೆದು ಬಂದರು.         

ಪ್ರತಿ ತಪಸ್ಸು ಕಾಲದಲ್ಲಿ ಅವರೇ ರಚಿಸಿ ಹಾಡಿರುವ ಶಿರ ಬಾಗಿಹೆ’ ’ಕರೆ ಚಾಚಿಹೆ’, ನಾ ಕಂಡೆ ಶಿಲುಬೆಯಲ್ಲಿ’ ಹಾಡು ನೆನಪಿಗೆ ಬರುತ್ತದೆ.’ಮೃತ್ಯುಂಜಯ’ ಕ್ಯಾಸೆಟ್ಟಿನ ಅವರ ಹಾಡುಗಳು ಇಂದಿಗೂ ಪಾಸ್ಕ ಕಾಲದಲ್ಲಿ ಚಾಲ್ತಿಯಲ್ಲಿವೆ. ’ರಟ್ಟಾಗದ ಗುಟ್ಟಿಲ್ಲ ಕೇಳೋ ಮನುಜ’, ’ಪ್ರೀತಿಸು ನೀ ಮಾನವ’, ’ಕಾದಿದೆ ಹೃದಯವು ಜೀವ ಜಲಕ್ಕೆ’, ಸತ್ಯ ಪ್ರೀತಿ ತ್ಯಾಗ ಪ್ರೇಮವು’, ’ಬಂದೆನು ಇಂದು ತಂದೆಯ ನೆನೆದು’ ’ಮಾತೆಯೆ ಮರಿಯೇ ಮೋಕ್ಷ ರಾಣಿಯೇ’ ಹಾಡುಗಳು ಇಂದಿಗೂ ಹೊಸತೆನಿಸುತ್ತದೆ.

ಏಪ್ರಿಲ್ ಅವರ ಹುಟ್ಟು ಹಾಗೂ ಸಾವು ಎರಡೂ ಸಂಭವಿಸಿದ ತಿಂಗಳು. ಸರಿಯಾಗಿ 30 ವರ್ಷಗಳ ಹಿಂದೆ ಮರೆಯಾದ ಗಾನವೇ ಮೈತಳೆದಂಥ ಜೀವವೊಂದಕ್ಕೆ ಅವರ ಹಾಡುಗಳ ನೆನಪಿನ ಮೂಲಕವೇ ಒಂದು ಸಣ್ಣ ಶ್ರದ್ಧಾಂಜಲಿ ಸಲ್ಲಿಸುವ ಬಯಕೆ ಇಷ್ಟು ದೊಡ್ಡ ಲೇಖನವಾಗಿದೆ. ಈ ಬಯಕೆಗೆ ಮಾಹಿತಿಗಳನ್ನು ಒದಗಿಸಿ ಸಹಾಯ ಮಾಡಿದ ಫಾ.ವಿಲ್ಲಿಯಂ ಪ್ಯಾಟ್ರಿಕ್, ಚಿನ್ನು ಸೋದರರಾದ ಶ್ರೀ.ಸೆಲ್ವರಾಜ್, ಶ್ರೀ.ಲೂಕಾಸ್ ರವರಿಗೆ ನಾನು ಅಭಾರಿ.

ಇಷ್ಟು ವರ್ಷಗಳಲ್ಲಿ ಅವರ ಒಂದು ಸಣ್ಣ ಫೋಟೋ ಕೂಡ ನೋಡದೆ ಅವರ ಹಾಡುಗಳು, ಅವರ ಉತ್ಸಾಹಭರಿತ ಕಂಠವನ್ನು ಮೆಚ್ಚುತ್ತಾ ಬಂದ ನನಗೆ ಈ ಒಂದು ಬರಹ ವಿಷಾದದ ಭಾರವನ್ನು ತುಸು ಇಳಿಸಿಕೊಂಡ ಅನುಭವ.  ಪ್ರಕಟಿಸಲು ಸರಿಯಾದ  ಫೋಟೊಗಳೂ ಇರದಂಥ ಸಂದರ್ಭದಲ್ಲಿ ಇವರ ಹಾಡುಗಳೇ ಇವರ ನೆನಪುಗಳನ್ನು ಜೀವಂತವಾಗಿಸಿವೆ. 




Tuesday, 18 November 2014

ದೇವರ ವಿಳಂಬಗಳು ದೇವರ ನಿರಾಕರಣೆಗಳಲ್ಲ - ರಾಹುಲ್ ಡ್ರಾವಿಡ್

2013ರ ಮಧ್ಯ ಭಾಗದಲ್ಲಿ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿಟ್ಸ್ ಪಿಲಾನಿ ವಿಧ್ಯಾರ್ಥಿಗಳ ಪದವಿ ಸ್ವೀಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಕ್ರಿಕೆಟ್ ಪಟು ರಾಹುಲ್ ಡ್ರಾವಿಡ್ ಮಾಡಿದ ಭಾಷಣ ಅಪಾರ ಮೆಚ್ಚುಗೆಯನ್ನು ಪಡೆಯಿತು. ಗುರಿಯನ್ನು ಹಿಡಿದು ಸಾಗುವ ಯುವ ಮನಸ್ಸುಗಳು ಪಡೆಯಬೇಕಾದ ಸ್ಪೂರ್ತಿ, ತೋರಬೇಕಾದ ಸಹನೆ, ಶ್ರಮ ಹಾಗೂ ದೇವರು ಹಾಗೂ ತಮ್ಮ ಸಾಮರ್ಥ್ಯದ ಬಗ್ಗೆ ಇಟುಕೊಳ್ಳಬೇಕಾದ ವಿಶ್ವಾಸದ ಬಗ್ಗೆ ಸುವಿಸ್ತಾರವಾಗಿ ಮಾತನಾಡಿದ್ದಾರೆ. ಉಪಯೋಗವಾಗಬಹುದು ಎಂಬ ಆಶಯದೊಂದಿಗೆ ಸರಳವಾಗಿ ಕನ್ನಡಕ್ಕೆ ತರುವ ಒಂದು ಪ್ರಯತ್ನ 
- ಪ್ರಶಾಂತ್ ಇಗ್ನೇಶಿಯಸ್
----------------------------------------------------------------------------------------------------------------------------

ಪದವಿ ಸ್ವೀಕಾರದ ದಿನದಂದು ನಿಮ್ಮೆಲ್ಲರ ನಡುವೆ ನಿಂತು ಮಾತನಾಡುವುದು ನಿಜಕ್ಕೂ ನನಗೆ ದೊಡ್ಡ ಗೌರವ ಹಾಗೂ ಅನಂದದ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆಯೊಂದಿಗೆ ದೇಶದ ಪ್ರಗತಿಯಲ್ಲಿ ತನ್ನದೆ ಆದ ಕೊಡುಗೆಯನ್ನು ನೀಡುತ್ತಿರುವ  ಬಿಟ್ಸ್ ನಂಥ ಸಂಸ್ಥೆಗೆ ಭೇಟಿ ಕೊಡುವುದು ನನ್ನನ್ನು ವಿನೀತನನ್ನಾಗಿಸಿದೆ. ಸಂಸ್ಥೆಯಲ್ಲಿ ಪ್ರವೇಶ ಪಡೆಯ ಬೇಕಾದರೆ ಗಣಿತ ಹಾಗೂ ಭೌತ ವಿಜ್ಞಾನದಲ್ಲಿ  (Physics) ಕನಿಷ್ಟ 75 ಅಂಕ ಪಡೆದಿರಬೇಕು ಎಂಬ ಮಾಹಿತಿ ಇದೆ. ಆದರೆ ಆರ್ಹತೆ ಇಲ್ಲಿ ಬರುವ ಮುಖ್ಯ ಆತಿಥಿಗಳಿಗೆ ಅನ್ವಯಿಸುವುದಿಲ್ಲ ಎಂಬುದು ಸಮಾಧಾನಕರ ವಿಷಯ. ಮಟ್ಟಿಗೆ ನಾನಿಂದು ಅದೃಷ್ಟಶಾಲಿ.

ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಕಳೆದ ಒಂದುವರೆ ವರ್ಷವು ಆತ್ಮಾವಲೋಕನದ ಅತ್ತ್ಯುತ್ತಮವಾದ ಕಾಲವಾಗಿದ್ದೂ, ನನ್ನ ವೃತ್ತಿ ಜೀವನವನ್ನು ಹಿಂದುರುಗಿ ನೋಡುವ ಸದವಕಾಶವನ್ನು ನೀಡಿದೆಹಿಂದಿರುಗಿ ನೋಡಿದಾಗ, ಕ್ರಿಕೆಟ್ ನನ್ನನ್ನು ಮತ್ತಷ್ಟು ಉತ್ತಮ ಹಾಗೂ ಪರಿಪೂರ್ಣ ವ್ಯಕ್ತಿಯನ್ನಾಗಿಯೂ, ನನ್ನ ವ್ಯಕ್ತಿತ್ವಕ್ಕೆ ಪಕ್ವತೆಯನ್ನೂ, ಯಶಸ್ಸು ಹಾಗೂ ಸೋಲನ್ನು ನೋಡುವ ವೇದಿಕೆಯನ್ನು ಒದಗಿಸಿ, ಅದರಿಂದ ಕಲಿಯುತ್ತ ಎರಡನ್ನೂ  ಜೀವನದ ಅಂಗವಾಗಿ ತೆಗೆದುಕೊಳ್ಳುವದನ್ನು ಕಲಿಸಿದೆ. ಯಶಸ್ಸನ್ನು ಹೇಗೆ ಸಾಧಿಸಬಹುದು ಎಂಬ ಪ್ರಶ್ನೆಯನ್ನು ನನಗೆ ಹಲವಾರು ಬಾರಿ ಕೇಳಲಾಗಿದೆಪ್ರಾಮಾಣಿಕವಾಗಿ ಹೇಳಬೇಕಾದರೆ ಯಶಸ್ಸನ್ನು ಸಾಧಿಸಲು ಲಕ್ಷಾಂತರ ದಾರಿಗಳಿವೆ ಹಾಗೂ ಯಾವುದು ಸರಿ ಎಂಬುದನ್ನು ಹೇಳಲು ನಾನ್ಯಾರು? ಇಲ್ಲಿರುವ ಪ್ರತಿಯೊಬ್ಬನೂ ತನ್ನದೇ ಆದ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ನಿಮ್ಮ ಮುಂದೆ ಮಾತನಾಡುವ ಅವಕಾಶ ಸಿಕ್ಕಿರುವ ಸಂದರ್ಭದಲ್ಲಿ ನನ್ನದೇ ಜೀವನ ಪಯಣದ ಕೆಲವೊಂದು ಕಥೆಗಳನ್ನು ಹೇಳುತ್ತಾ ಅದು ನಿಮ್ಮಲ್ಲಿ ಪ್ರತಿಧ್ವನಿಸಬಹುದು ಎಂಬ ಆಶಯ ನನ್ನದಾಗಿದೆ.

ಒಬ್ಬ ಸಾಧರಣ ಮಧ್ಯಮ ವರ್ಗದ ಹುಡುಗನೊಬ್ಬನನ್ನು ಕಲ್ಪಿಸಿಕೊಳ್ಳಿ. ಹುಡುಗ ನಾನಾಗಿದ್ದೆ. ಒಂದಷ್ಟು ಭಿನ್ನವಾದದ್ದೇನೆಂದರೆ ನನ್ನ ಮಾವ ಸಿ.ಕೆ. ನಾಯ್ಡು ಅವರೊಟ್ಟಿಗೆ ಕ್ರಿಕೆಟ್ ಆಡಿದವರು ಹಾಗೂ ನನ್ನ ತಂದೆ ತಮ್ಮ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದರು . ಕ್ರಿಕೆಟ್ ಎಂಬುದು ಅವರ ಗೀಳಾಗಿತ್ತು. ಮನೆಯಲ್ಲಿ ರೇಡಿಯೋ ಕಾಮೆಂಟ್ರಿ ಸದಾ ಓಡುತ್ತಿತ್ತು ಹಾಗೂ ಅದು ಅಂತರರಾಷ್ಟ್ರೀಯವಾಗಿರಲಿ, ದೇಶಿಯ ಕ್ರಿಕೆಟ್ ಪಂದ್ಯವಾಗಿರಲಿ, ಪ್ರತಿಯೊಂದು ಕ್ರಿಕೆಟ್ ಪಂದ್ಯವನ್ನೂ ನನ್ನ ತಂದೆ ಆಸಕ್ತಿಯಿಂದ ಅನುಸರಿಸುತ್ತಿದ್ದರು, ಕೇಳುತ್ತಿದ್ದರುನನ್ನನ್ನು ಹಾಗೂ ನನ್ನ ತಮ್ಮನನ್ನು ಅವಕಾಶ ಸಿಕ್ಕಾಗಲೆಲ್ಲಾ ಕ್ರೀಡಾಂಗಣಕ್ಕೆ ಕರೆದು ಹೋಗುವುದನ್ನು ತಪ್ಪಿಸುತ್ತಿರಲಿಲ್ಲ.

ಅವರ ಪ್ರಕಾರ ಸಮಯವನ್ನು ಅದಕ್ಕಿಂತ ಉತ್ತಮವಾಗಿ ಬಳಸಲು ಸಾಧ್ಯವಿರಲಿಲ್ಲ. ಒಬ್ಬ ಬಾಲಕನಾಗಿ ನನ್ನ ತಂದೆ ನನಗೆ ಅರಾಧ್ಯ ದೈವವಾಗಿದ್ದರಿಂದ ಅವರು ಅಷ್ಟು ಮೆಚ್ಚುತ್ತಿದ್ದ ಕ್ರೀಡೆಯ ಬಗ್ಗೆ ಸಹಜವಾದ ಕುತೂಹಲ ಬೆಳೆಯುತ್ತಾ ಸಾಗಿತು. ಕ್ರಿಕೆಟನ್ನು ನೋಡುತ್ತಾ ಬೆಳೆಯುತ್ತ , ಮನೆಯ ಮುಂದೆ ಆಡುತ್ತಾ ಹೆಚ್ಚು ಸಮಯ ಕಳೆದಂತೆ ಕುತೂಹಲ ಆಸಕ್ತಿಯಾಗಿ ಬೆಳೆಯಲಾರಂಭಿಸಿತು. ಸ್ವಲ್ಪ ಸಮಯದಲ್ಲೇ ಆಸಕ್ತಿ ಅಮರಮಿತವಾದ ಪ್ರೀತಿಗೆ ತಿರುಗಿತು. ನನಗೆ ನೆನಪಿರುವಂತೆ ಒಂದು ಘಟ್ಟದಲ್ಲಿ ನಾನು ಏನಾಗಬೇಕೆಂಬ ಭಾವನೆ ನನ್ನ ಅಂತರಾಳದಲ್ಲಿ ರೂಪ ತಳೆಯಲು ಪ್ರಾರಂಭಿಸಿತು. ದ್ರಾವಿಡ್ ಕುಂಟುಂಬದಲ್ಲಿನ ನನ್ನ ಜನನ ಆಕಸ್ಮಿಕವಲ್ಲವೆಂಬ ಭಾವನೆ ಮೂಡಲಾರಂಭಿಸಿತು.ಕೆಲವೊಮ್ಮ ಸ್ಪೂರ್ತಿ ನಮ್ಮ ಮುಂದೆಯೇ ನಮ್ಮನ್ನು ದಿಟ್ಟಿಸಿ ನೋಡುತ್ತಿರುತ್ತದೆ.

ನನ್ನ ಶಾಲ ದಿನಗಳಲ್ಲಿ ನನ್ನದೇ ಆದ ಕ್ರಿಕೆಟ್ ಲೋಕದೊಳಗೆ ಹೆಚ್ಚು ಹೆಚ್ಚು ಹೋಗಲಾರಂಭಿಸಿದೆ. ಅಂತರ ಶಾಲಾ ಟೋರ್ನಿಗಳನ್ನು ಗೆಲ್ಲುವುದು ವಿಶ್ವ ಕಪ್ಪನ್ನೇ ಗೆದ್ದಂತ ಅನುಭವ ನೀಡುತ್ತಿತ್ತು. ಶಾಲೆ ಹಾಗೂ ರಾಜ್ಯ ತಂಡಗಳ ನಾಯಕತ್ವ ವಹಿಸುವುದೇ ದೊಡ್ಡ ಗುರಿಯಾಗಲಾರಂಭಿಸಿತು. ಅದರೂ, ಶಾಲ ದಿನದಲ್ಲಿನ ಅದೊಂದು ಆಸಕ್ತಿದಾಯಕ ಕಥೆಯೊಂದನ್ನು ನಿಮಗೆ ಹೇಳಲೇ ಬೇಕು. ನನ್ನ ಕ್ರಿಕೆಟ್ ಪ್ರೇಮದ ನಡುವೆಯೇ , ನನ್ನ ತಂದೆ ತಾಯಿಗೆ ಅಂದಿನ ಇತರ ಪೋಷಕರಂತೆಯೇ ಆತಂಕ, ಅನುಮಾನಗಳು ಶುರುವಾದವು. ಕೇವಲ ಕ್ರಿಕೆಟ್ಟನ್ನೇ ಯೋಚಿಸಿಕೊಂಡರೆ ಮುಂದೇ ಹೇಗೆ ಎಂಬ ಸಣ್ಣ ಭಯವದು.

ನಾನು 8ನೇ ತರಗತಿಯಲ್ಲಿದ್ದಾಗ, ನನ್ನ ಶಾಲೆಯ ಮುಖ್ಯೋಪಾಧ್ಯರಾದ ಫಾದರ್ ಕೊಹಿಲೋ ಬಳಿ ಬಂದು ತಮ್ಮ ಕಳವಳವನ್ನು ಹೇಳಿಕೊಂಡರು. ನಾನಾಗಲೇ 15 ವರ್ಷದೊಳಗಿನ ತಂಡಕ್ಕೆ  ಸತತ ಎರಡನೆಯ ಬಾರಿಗೆ ಆಯ್ಕೆಯಾಗಿದ್ದೂ, ಪಂದ್ಯಗಳು ಇತರ ರಾಜ್ಯಗಳಲ್ಲಿ ಹಾಗೂ ನಮ್ಮ ಶಾಲೆಯ ಪರೀಕ್ಷೆಗಳ ಸಮಯದಲ್ಲೇ ನಡೆಯುತ್ತಿದ್ದವು. ನನ್ನ ತಂದೆ ತಾಯಿಗಳು ನಮ್ಮ ಮುಖ್ಯೋಪಾಧ್ಯಾರ ಮುಂದೆ ವಿನಮ್ರವಾಗಿಯೇ ನನ್ನ ಕ್ರಿಕೆಟ್ ನನ್ನ ಶಿಕ್ಷಣದ ದಾರಿಗೆ ಹಾಗೂ ನನ್ನ ಶಾಲೆಯ ಹಾಜರಾತಿಗೆ ತೊಡಕಾಗಬಹುದೆಂಬ  ಶಂಕೆ ವ್ಯಕ್ತಪಡಿಸುತ್ತಾ, ಕ್ರಿಕೆಟ್ ಸರಣಿಗೆ  ಕಳುಹಿಸದೇ ಇರುವ ನಿರ್ಧಾರವನ್ನು ತಿಳಿಸಿದರು. ಅಂತೆಯೇ ಅವರ ಮುಂದಿನ ಸಲಹೆಯನ್ನೂ ಕೇಳಿದರು. ಎಲ್ಲವನ್ನೂ ಸಹನೆಯಿಂದ ಕೇಳಿಸಿಕೊಂಡ ಫಾದರ್ ಕೊಹಿಲೋ, “ನಿಮ್ಮ ಮಗನ ಶಿಕ್ಷಣದ ವಿಷಯ ನನಗೆ ಬಿಟ್ಟು ಅವನನ್ನು ಕ್ರಿಕೆಟ್ ಆಡಲು ಬಿಡಿ, ಒಂದು ದೊಡ್ಡ ಸಾಹಸಕ್ಕೆ ಅವನು ಮುಂದಾಗಿದ್ದಾನೆ, ನಾವು ಅವನನ್ನು ಬೆಂಬಲಿಸೋಣಎಂದರು. ನಾನಂದು ಕೋಣೆಯಲ್ಲಿ ಸಂತೋಷದಿಂದ ಜಿಗಿದೆ ಎಂಬ ನೆನಪು ಇದೆ. ಅಂದೇನಾದರೂ ನನ್ನ ಮುಖ್ಯೋಪಾಧ್ಯಾಯರು ನನ್ನ ಪೋಷಕರ ಮಾತಿಗೆ ಒಪ್ಪಿದ್ದರೆ, ನಾನು ವೃತ್ತಿ ಕ್ರಿಕೆಟ್ ಆಡುವುದನ್ನು ಬಿಟ್ಟು, ಒಳ್ಳೆಯ ಅಂಕಗಳೊಂದಿಗೆ ಇನ್ಯಾವುದೋ ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತಿದ್ದೆ. ಒಮ್ಮೊಮ್ಮೆ ಬಯಸದ ಕಡೆಗಳಿಂದ ಬರುವ ಬೆಂಬಲವೇ ನಮಗೆ ದೊಡ್ಡ ತಿರುವಾಗುತ್ತದೆ ಎಂಬುದನ್ನು ನಾನು ಅಂದು ಅರಿತುಕೊಂಡೆ.

ಗೆಳೆಯರಿಂದ ನೋಟ್ಸ್ ಗಳನ್ನು ತೆಗೆದುಕೊಂಡು , ಕೊನೆಯ ಸಮಯದಲ್ಲಿ ಅವಸವಸರವಾಗಿ ಶಾಲಾ ಹಾಗೂ ಕಾಲೇಜು ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಾ, ಕ್ರಿಕೆಟ್ ಆಟಗಾರನಾಗಿ ಬೆಳೆಯುತ್ತಾ ಬಂದೆ. ಸಮಯದಲ್ಲಿ ಅನೇಕ ಲೀಗ್ ಹಾಗೂ ಕಿರಿಯ ಟೋರ್ನಿಗಳನ್ನು ಪುಟಿದೇಳುವ ಪಿಚ್ಚುಗಳ ಮೇಲೆ ಆಡುತ್ತಿದ್ದೆವು. ದೇಶದ ಉದ್ದಗಲ್ಲಕ್ಕೂ ರೈಲುಗಳಲ್ಲಿ ಪ್ರಯಾಣ ಮಾಡುತ್ತಾ, ಒಂದೇ ಕೋಣೆಯಲ್ಲಿ 5,6 ಜನ ಇರುತ್ತಿದ್ದೆವು. ಇಡೀ ದೇಶವನ್ನು ಹಾಗೂ ವೈವಿಧ್ಯಮಯ ಜನವನ್ನು ನೋಡುವ ಒಳ್ಳೆಯ ಅವಕಾಶ ನಮಗೆ ಸಿಕ್ಕಿತು. ಕಠಿಣ ಅಭ್ಯಾಸ ಹಾಗೂ ಕಿರಿಯರ ಸರಣಿಗಳಲ್ಲಿನ ನನ್ನ ಸಾಧನೆಯಿಂದಾಗಿ ರಾಜ್ಯಕ್ಕೆ ಆಡುವ ಅವಕಾಶವೂ ದೊರಕಿತು. ಅದು ನನಗೆ ಅರಿವಾಗುವ ಮೊದಲೇ ಕರ್ನಾಟಕ ರಾಜ್ಯಕ್ಕೆ ರಣಜಿ ಪಂದ್ಯಗಳನ್ನೂ ಸಹಾ ಆಡಲು ಪ್ರಾರಂಭಿಸಿದ್ದೆ. ನನಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿಯೇ ಬಳಸಿಕೊಂಡೆ ಮತ್ತು ಅತ್ತ್ಯುತ್ತಮ ಎನ್ನಬಹುದಾದ ಬೌಲರ್ ಹಾಗೂ ಎಸೆತಗಳನ್ನು ಎದುರಿಸುವ ಅವಕಾಶವೂ ರಾಷ್ಟ್ರೀಯ ಪಂದ್ಯಗಳಲ್ಲೇ ದೊರಕಿತು.

 ಅಂತರರಾಷ್ಟ್ರೀಯ ವೇಗದ ಬೌಲರಗಳನ್ನು ಎದುರಿಸುವ ಅವಕಾಶ ಅಷ್ಟಾಗಿ ಸಿಗದ ಕಾರಣ ನನ್ನದೇ ಆದ ಭಿನ್ನವಾದ ತಯಾರಿಗಳನ್ನು ಮಾಡುವ ನಿರ್ಧಾರ ಮಾಡಿದೆ. ನನ್ನ ಸಹಾ ಆಟಗಾರರಿಗೆ ೧೫ ಗಜಗಳಷ್ಟು ದೂರದಿಂದ ನೀರಲ್ಲಿ ನೆನಸಿದ ಟೆನಿಸ್ ಬಾಲನ್ನು ಎಸೆಯಲು ವಿನಂತಿಸುತ್ತಿದ್ದೆ. ಮೂಲಕ ಅತ್ತ್ಯುತ್ತಮ ವೇಗದ  ಬೌಲರ್ ಗಳನ್ನು ಎದುರಿಸುವ ಕೃತಕ ಸನ್ನಿವೇಶವನ್ನು ಸೃಷ್ಟಿಸಿಕೊಂಡು ಅದಕ್ಕೆ ತಯಾರಾದೆ. ನನ್ನ ತಯಾರಿಯನ್ನು ಅಚ್ಚರಿ ಹಾಗೂ ಗೊಂದಲಗೊಂಡ ಕಣ್ಣುಗಳು ಗಮನಿಸಿದವು ಮತ್ತು ಅನೇಕರಿಗೆ ಇದು ಸಮಯ ವ್ಯರ್ಥ ಕಸರತ್ತಾಗಿತ್ತು. ಆದರೆ ನನಗೆ ಮಾತ್ರ ಇದು ಅವಶ್ಯಕವಾದ ತಯಾರಿಯಾಗಿತ್ತು. ಅಷ್ಟರಲ್ಲಾಗಲೇ ರಾಷ್ಟ್ರೀಯ ತಂಡದಲ್ಲಿನ್ನ ಸಂಭವನೀಯರ ಪಟ್ಟಿಯಲ್ಲಿ ನನ್ನ ಹೆಸರು ಕೇಳಿ ಬರುತ್ತಿತ್ತು. ಭಾರತ ೧೯ ವರ್ಷದೊಳಗಿನವರ ತಂಡಕ್ಕೆ ನಾಯಕನೂ ಆಗಿದ್ದೆ. ಎಲ್ಲೇ ಹೋದರೂ, “ಭಾರತ ತಂಡದಲ್ಲಿ ಆಡುವುದು ಯಾವಾಗ”? ಎಂಬ ಪ್ರಶ್ನೆ ಎದುರಾಗುತ್ತಿತ್ತು. ಅದು ನನ್ನ  ನಿಯಂತ್ರಣದಲ್ಲಿ ಇರದ ಸಂಗತಿಯಾದರೂ ನನ್ನ ಜೀವನ ಹಾಗೂ ಆಟದ ಮೇಲೆ ಪ್ರಶ್ನೆ ಪ್ರಭಾವ ಬೀರಲಾರಂಭಿಸಿತು. ನಾನು ದೇಶಕ್ಕೆ ಆಡುವ ಮೊದಲು ಆಗಾಗಲೇ ಐದು ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದೆ. ಇದರಿಂದ  ನಿಧಾನವಾಗಿ ಹತಾಶೆಗೊಳಗಾದೆ. ನನಗಿನ್ನೂ ನೆನಪಿದೆ, ನನ್ನ ಕೈನಟಿಕ್ ಹೋಂಡ ಬೈಕಿನ ಮೇಲೊಂದು ಬರಹ ಅಂಟಿಸಿಕೊಂಡೆ. ದೇವರ ವಿಳಂಬಗಳು ದೇವರ ನಿರಾಕರಣೆಗಳಲ್ಲಎಂಬರ್ಥದ ಸ್ಟಿಕರ್ ಅದು. ಪ್ರತಿದಿನ ನನ್ನ ಕ್ರಿಕೆಟ್ ಕಿಟ್ ಅನ್ನು ಬೈಕಿನ ಮೇಲೆ ಇಟ್ಟು ಅದನ್ನು ಪ್ರಾರಂಭಿಸುವಾಗಲೆಲ್ಲಾ ನೆನಪಿಸುವಂತೆ ಹಾಗೂ ಭರವಸೆ, ವಿಶ್ವಾಸ  ಕಳೆದು ಕೊಳ್ಳದಂತೆ ನೆನಪಿಸಲು ಅದನ್ನು ಅಂಟಿಸಿಕೊಂಡಿದ್ದೆ.

ಈಗ ಹಿಂದಿರುಗಿ ನೋಡಿದಾಗದೇಶೀಯ ಕ್ರಿಕೆಟ್ ನನಗೆ ನೀಡಿದ ಕೊನೆಯ ಪಾಠಗಳು ಇಲ್ಲದಿದ್ದರೆ, ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ನನಗೆ ಲಭಿಸಿದ ಯಶಸ್ಸಿಗೆ ನಾನು ಸಿದ್ಧನಾಗಿರುತ್ತಿರಲಿಲ್ಲ ಎನಿಸುತ್ತದೆ. ಸ್ಪಿನ್, ವೇಗ, ಸುಲಭದ, ಕಷ್ಟದ ಯಾವುದೇ ಪರಿಸ್ಥಿತಿಗೂ ನಾನು ಸಿದ್ಧನಿದ್ದೆರಣಜಿಯಲ್ಲಿ ನನಗೆ ಅನುಭವಿ ಸ್ಪಿನ್ನರ್ ಗಳನ್ನು ಎದುರಿಸಲು ಸಿಕ್ಕ ಅವಕಾಶ ವಾರ್ನ್ , ಮುರಳೀಧರನ್ ರಂತವರನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯಕವಾಯಿತುಟಿನ್ನಿಸ್ ಬಾಲುಗಳಲ್ಲಿ ನಾನು ಮಾಡಿದ ಅಭ್ಯಾಸ ವ್ಯರ್ಥವಾಗದೆ, ಮ್ಯಾಕ್ ಗ್ರಾತ್, ಅಕ್ರಮ್ ಹಾಗೂ ಡೋನಲ್ಡ್ ರವರನ್ನು ಕಷ್ಟದ ಪಿಚ್ ಗಳಲ್ಲಿ ಎದುರಿಸಲು ಸಹಾಯಕ್ಕೆ ಬಂತು. ಯುವಕರನ್ನು ಮಾತನಾಡಿಸುವಾಗ, ನನ್ನ ಜೀವನದ ಹಂತವನ್ನು ಮೋಹಕವಾದ ಚೈನೀಸ್ ಬಿದಿರಿಗೆ ಹೋಲಿಸಲು ಇಷ್ಟ ಪಡುತ್ತೇನೆ.
(ಮುಂದುವರಿಯುತ್ತದೆ)