Showing posts with label ಮೌನದ ಮಾತುಗಳು. Show all posts
Showing posts with label ಮೌನದ ಮಾತುಗಳು. Show all posts

Friday, 1 March 2013

ನಾನೊಂದು ಸಣ್ಣ ನೆಪವಷ್ಟೇ


ನಿನ್ನ ಕೈಯಿಂದ ಜಾರಿ ಬಿದ್ದು
ಮಣ್ಣ ಹಾಸುಹೊಕ್ಕಿ
ಮೊಳಕೆಯೊಡೆಯುವ ತೀವ್ರತೆಯಿಂದ
ಹಾಕಿದ ಅಷ್ಟು ಇಷ್ಟುನೀರಲ್ಲಿ 
ಮಿಂದು ಮೊಳೆತ
ಕ್ರಿಯಾಶೀಲ ಪ್ರತೀಕ
ಒಂದು ಬೀಜ ನಾನು

ಋತುಗಳ ಬೆಚ್ಚನೆಯ ಶಾಖಕ್ಕೆ
ಜಗವು ಕೊಟ್ಟ ಬಗೆಬಗೆಯ ರದ್ದಾಂತಕ್ಕೆ
ಸೋಲ್ಲದೇ ಬಿದ್ದು ಎದ್ದು
ಎದ್ದು ಬಿದ್ದು ಎಲೆಗಳ ಸಮೃದ್ಧಿಯಲ್ಲಿ
ಮರವಾಗಲು ಬಯಸಿ ನಿಂತ
ಮನೋಭಿಲಾಷೆಯ
ಒಂದು ಸಸಿ ನಾನು

ಕಾಲಚಕ್ರವ ಕೂಡಿ
ಬೆಳೆದೆ ದಿನೇ ದಿನೇ ನೋಡಿ
ಬೇರು ಕಾಂಡ ರೆಂಬೆ ಕೊಂಬೆ ಎಲೆಗಳ
ಸಮೃದ್ಧಿಯ ಹಣ್ಣಿನ ರಸಸ್ಥಿತಿಯಲ್ಲಿ
ಪರಮಾಭಿವ್ಯಕ್ತಿಯಾದ
ಒಂದು ಮರ ನಾನು

ಯಾರೋ ಚಪಲಕ್ಕೆ
ನನ್ನನ್ನೇ ಮೈಯೊಡ್ಡಿ
ನೀಡಿ ಹಣ್ಣುಗಳ
ಕಣ್ಮರೆಯಾಗಿಬಿಡುವಷ್ಟೇ ನನ್ನ ಬದುಕಲ್ಲ
ಕೊಡುವಾತ ಮನಸ್ಸಿನ
ಪ್ರಕಟಾಭಿವ್ಯಕ್ತಿಗೆ ಉದರತೆಯ ಮನೋಭಿಲಾಷೆಯ
ಕ್ರಿಯಾಶೀಲ ರಸಸ್ಥಿತಿಯ ಪರಮಾಭಿವ್ಯಕ್ತಿಗೆ
ವಿಶ್ವಸೃಷ್ಠಿಯ ನಾನೊಂದು ಸಣ್ಣ ನೆಪವಷ್ಟೇ!!!

-ಜೋವಿ

Read more!

Tuesday, 29 January 2013

ಹೊಸವರ್ಷದ ಆಚರಣೆ


ಮೊನ್ನೆ Newbilis ಎಂಬ ಪುಟ್ಟಿಯ ಹುಟ್ಟಿದ ದಿನದಾಚರಣೆಗೆ ಹೋಗಿದೆ. ಅವಳು ಹೊಸವರ್ಷದ ದಿನದಂದು ಹುಟ್ಟಿದ್ದರಿಂದ ಅವಳಿಗೆ Newbilis ಎಂದು ಹೆಸರಿಟ್ಟಿದ್ದರು. Newbilis ಎಂದರೆ ಹೊಸವರ್ಷ ಎಂದಾರ್ಥ. ಅವಳ ನೋಡಿ ಸೂರೆಗೊಂಡು ಬರೆದ ಸಾರವೇ ಸಾಲುಗಳು.

ಯಾರೋ ಕರೆದ
‘ಹೊಸವರ್ಷ ಪುಟ್ಟಿಯ ಹುಟ್ಟಿದಾಚರಣೆಗೆ
ಹೋದೆ ಒಲ್ಲದ ಮನಸ್ಸಿನಿಂದ
ಆಗಲೇ ಸೋಪಾಧಿಕವಾಗಿಬಿಟ್ಟಿದ್ದ
ಆಚರಣೆಗಳ ಬಗೆಗಿದ್ದ ಸಿಡುಕಿನಿಂದ

ಹೋಗಿದಾಕ್ಷಣ ಕಂಡಿದ್ದು
ಕೇಳದೆ ಕೂಡಿದು
ಪುಟ್ಟ ಮಗು 'ಹೊಸವರ್ಷ
ನವಿರಾದ ನಗು
ತೀವ್ರತೆಯ ಸೆಲೆಯಾಗಿದ್ದ  ಮಗು
ಯಾರೋದೋ ಕಟ್ಟುಪಾಡಿನ ಜಾಲ್ರಿ
ಸೂಸಿಗೆ ಸಿಗದ ಅವಳ ಹವಾಭಾವ
ನನ್ನ ನಿಖರ ಮಾತಿನ ಗಾಣದ ಎರೆಗೆ
ತುತ್ತಾಗಲು ನಿರಾಕರಿಸಿತ್ತಿದ್ದರೂ
 ಮಾತು ಕೈಬಿಡದೆ ಪ್ರಯತ್ನಿಸುತಿತ್ತು…

ಅವಳು ಮಾತ್ರ
ದಿಟ್ಟಿಸಿದಳು
ನಕ್ಕಳು..
ಏನನ್ನೋ ಪ್ರಶ್ನಿಸಿ ಬೆನ್ನೆಟ್ಟಿದಳು
ಕಂಡು ಹೊಸಬರ ಬೆಚ್ಚಿಬೆರಗಾದಳು
ಅಮ್ಮನ ಟಾರ್ಚಬೇಕೆಂದು ಹಠ ಹಿಡಿದು
ಕೊಟ್ಟಿದು ಬಿಸಾಡಿದಳು
ಬೇಡದು ಅಪ್ಪಿಕೊಂಡಳು
ಓಡಲು ಹೋಗಿ ಬಿದ್ದು ಎದ್ದಳು
ಎದ್ದು ಬಿದ್ದಳು
ಅಂಬೆಗಾಲಿಡುತ್ತಾ ಮನೆಯನೆಲ್ಲಾ ಸುತ್ತಾಡಿ
ಬಂದು ಕೂತಳು
ಕೂತು ಚೆಲ್ಲಾಡಿದಳು
ಬೆಲೆಯ ಹಂಗಿರಲಿಲ್ಲ ಅವಳಿಗೆ
ಅಂಟಿಕೊಳ್ಳುವ ದುರಾಸೆ ಅವಳಲ್ಲಿ ಹುಟ್ಟಿರಲಿಲ್ಲ
ನಾ ಗಂಡೆನ್ನಲಿಲ್ಲ
ನಾ ಹೆಣ್ಣೆನ್ನಲಿಲ್ಲ
ಜಗತ್ತಿನ ಬೇದವೆಂಬ ವ್ಯಾಕರಣ ಅವಳಿಗೆ ತಿಳಿದಿರಲಿಲ್ಲ
ಲಾಭನಷ್ಟಗಳನ್ನು ಪಕ್ಕಕಿಟ್ಟು
ಸಿಕ್ಕಿದು ಸಿಗದಿದ್ದ
ಪ್ರತಿ ಕ್ಷಣದ ಪ್ರತಿ ಕಣವನ್ನು
ಅಮ್ಮನ ಎದೆಹಾಲು ಹೀರಿದಂತೆ
ಅನುಭೋಗಿಸುತ್ತಾ ಕುಣಿದು ತೊದಲಿತ್ತಿದ್ದಳು
ಮಂದಹಾಸ
ಹೊಸತನ
ಪರಮಾನಂದಗಳ ಜೊತೆಯಾಗಿ

ಅವಳ ಅನನ್ಯಕ್ಕೆ
ನನ್ನ ಬರವಣಿಗೆಯ ಬಲೆ ಹಾಕಿ
ಬಂಧಿಸುತ್ತಿರುವ ನನ್ನ ಮನಸ ನೋಡಿ
ವಿಕೃತ್ತಗೊಂಡೆ.

ಕೊನೆಗೆ,
ಪುಟ್ಟ ಹೊಸವರ್ಷಳನ್ನು ನೋಡಿ
ನನ್ನ ಕಟ್ಟುಪಾಡಿನ ಬದುಕಿಗೆ ಅವಳ ತೋರಿಸಿ
ನಾನೇ ಅವಳಾಗಿ
ಅವಳೇ ನಾನಾಗಿ
ವರ್ಷವಿರಲ್ಲಿ
ಇಡೀ ಬದುಕೇ ಅವಳಂತೆ ನಾನು ಕಳೆಯಬೇಕೆನುವಷ್ಟರಲ್ಲಿ
ಆಚರಣೆ ಮುಗಿಸಿ ಮರಳಿದೆ ನನ್ನ ಮನೆಗೆ
ಹೊಸತನವಿಲ್ಲದ ಯಾರೋದೋ ಕಟ್ಟುಪಾಡಿಗೊಳಪಟ್ಟ
ಮನೆಯೊಡೆಯನಿಲ್ಲದ ನನ್ನ  ದರ್ವೆಸಿ ಬದುಕಿಗೆ

ಜೋವಿ ಯೇ.
Read more!

Monday, 14 January 2013

ಹುಡುಗ ಸಿಬಿಯುಸ್…



ಮದುವೆಯ
ಸಮಾರಂಭದಲ್ಲಿ
ಇರುವುದೆಲ್ಲಾ ಸಗಡರ ಸಂಭ್ರಮ ಎಂಬ ನನ್ನ ಭ್ರಮೆಗೆ
ಸಿಕ್ಕಿಕಾಡಿದ್ದು ಹುಡುಗ ಸಿಬಿಯುಸ್ !!!

ವಯಸ್ಸನ್ನು ಮೀರಿದ ಹವಾಭಾವ
ಅಪ್ಪನ ಗಾಂಭಿರ್ಯದ ಒರಟು ಜೀವ
ಒಣ ಎಲೆಯ ಮುಖದ
ಏನನ್ನೋ ಸಾಲ ಕೇಳುವಂತಿದ್ದ ಆ ಹುಡುಗ
ಚಿಂತೆಬಾವಿಯ ಆಳಕಿಳಿದಿದ್ದ ಅವನ ಮನಸ್ಸು
ವಿಧಿಗೆ ಆಟಕ್ಕೆ ಬರಿದಾದಂತೆ ಅವನ ಕನಸ್ಸು
ದಿಕ್ದೆಸೆಗಳು ತಪ್ಪಿ ಕಂಗೆಟ್ಟವನಂತೆ
ಶಬ್ದದಾಚೆಗಿನ ಶೂನ್ಯದಲ್ಲಿ ಕರಗಿ ಹೋದವನಂತೆ ಕಂಡ
ಸಿಬಿಯುಸ್…

ತಮ್ಮನ ಕೈಗೆ ಕೈಯನಿಟ್ಟು
ನಡೆಯುತ್ತಿದ್ದ ಸಡಗರಕ್ಕೆ ಕೈಕೊಟ್ಟು
ಅಲ್ಲಿ ಇಲ್ಲಿ ಕೂತು ಕೇಳುತ್ತಿರುವುದನು ಕೂಡಿಟ್ಟು
ಹಸಿದ ಕಣ್ಣುಗಳಲ್ಲಿ ಕಾಣುವುದೆಲ್ಲಾವ ಹಿಡಿದಿಟ್ಟು
ಅವರನು ಇವರನು ದಿಟ್ಟಿಸುತ್ತಾ
ಏನೇನೋ ತನಗೆ ತಾನೆ ಹೇಳಿಕೊಳ್ಳುತ್ತಾ
ಕಂಡ ಜನಜಂಗುಳಿಯಲ್ಲಿ ಅಪರೂಪ ತಾತ್ವಿಕನಂತೆ

ಆಮೇಲೆ
ಅನಾಥ ಅವನೆಂದು ತಿಳಿದು
ನನ್ನ ಮನಸ್ಸು ದಿಟ್ಟಿಸಿ
ಕೇಳಿತು
ಸಮಾರಂಭದಲ್ಲಿ
ಅವನು ನೋಡುತ್ತಿರುವುದಾದರೂ ಏನು ಎಂದು…

ಅಮ್ಮಂದಿರ ಜತೆಗೆ ಆಟವಾಡುತ್ತಿದ್ದ ಮುದ್ದು ಮಕ್ಕಳ ನಗುವಿತ್ತು
ಸಂಭ್ರದಲ್ಲಿ ಮೈ ಮರೆತ ಕೊಟುಬೂಟಿನ ಜನರ ಕೂಗಾಟವಿತ್ತು
ಅಮಲಿನ ಅರ್ಭಟವಿತ್ತು
ಕದ್ದು ಇಣುಕುತ್ತಿದ್ದ ಹುಡುಗ ಹುಡಿಗಿಯರ ಮೈಮಾಟವಿತ್ತು
ಕಷ್ಟದಲ್ಲೂ ಸುಖದಲ್ಲೂ ಸದಾ ಜತೆಗಿರುವೆ ಎಂದೇಳುತ್ತಿದ್ದ ಜೋಡಿಗಳ ಕಂಗಳಲ್ಲಿ
ನಾಳಿನ ಭಯವಿತ್ತು
ಖರ್ಚಿನಲ್ಲಿ ಮುಳುಗಿದ ಮದುವೆಯ ಲೆಕ್ಕಚಾರವಿತ್ತು
ವೈಯಾರವಿತ್ತು..ವೈಭವವಿತ್ತು
ಆಲಂಕಾರ ತುಂಬಿ ತುಳುಕಿತ್ತು
ಮೃಷ್ಟಾನ ಭೋಜನದ ಸುವಾಸನೆಯಲ್ಲಿ
ಅಪ್ಪ ಅಮ್ಮರ ನಿಟ್ಟುಸಿರು
ನವದಂಪತಿಗಳ ಬಿಸಿ ಉಸಿರು ಹೆಪ್ಪುಗಟ್ಟಿ ನಿಂತಿತ್ತು

ಹೀಗೆ
ಇವುಗಳಲ್ಲಿ
ಅವನು ನೋಡಬೇಕೆಂದಿರುವುದಾದರೂ ಏನು?
ಅವನ ಅಂತರಾಳಕ್ಕೆ ಕನ್ನಡಿ ಹಿಡಿಯಲು
ನನದಲ್ಲದ ಅವನ ಮನಸ್ಸನು ಮಾತಿಗಿಳಿಸಲು
ಅಕ್ಷರಗಳ ತಡಕಾಟದಲ್ಲಿ
ತೂಗಿ ಕೊಡುವ ಯಾರದೋ ಅಂಗಡಿಯಲ್ಲಿ
ಖರೀದಿಸಿದ ಅಕ್ಷರಗಳ ಮೊರೆಹೋಗಿ
ಕೊನೆಗೆ
ಭಗ್ನಗೊಂಡು ಹೇಳಿತ್ತು ಮನಸ್ಸು ಮಾಗಿ
“ಅವನ ಒಟ್ಟು ಭಾವಸಮುದ್ರವನ್ನು ತೂಗಿ
ತನ್ನ ಅಂಗೈನಲ್ಲಿ ಹಿಡಿದಿಡಲು ಹೆಣಗಾಡುತ್ತಿರುವ ಹುಚ್ಚ ತಾನೆಂದು…”
ಸುಮ್ಮನಾದೆ
ಹುಟ್ಟಿಸಿದ ದೇವರ ಬೈಯುತ್ತಾ....!!!
ಜೋವಿ ಯೇ.ಸ

Thursday, 27 December 2012

ಹೋಗಿ ಗೋದಲಿಯ ಕಡೆ ಮತ್ತೊಮ್ಮೆ…




ಗೋದಲಿ ಕಡೆ ಹೋಗಿದ್ದೀರಾ ಹೇಳಿ
ಹೋಗಿದೆಯಾದರೆ, ಅಲ್ಲಿ
ಹಾಲಿಲ್ಲದೆ ಅಳುವ ಕಂದನ ರೋಧನ ಕೇಳಿತೆ ಹೇಳಿ
ಚಳಿಗೆ ಬೆತ್ತಲೆಯಾಗಿರುವ ಕೊಳೆಗೇರಿಗಳ ಆಕ್ರಂದನ
ಕೇಳದಿದ್ದರೆ ! ನೋಡಿ
ನೀವು ಗೋದಲಿಯ ಕಡೆ ಹೋಗಲಿಲ್ಲ ಬಿಡಿ!

ಗೋದಲಿ ಕಡೆ ಹೋಗಿದ್ದೀರಾ ಹೇಳಿ
ಹೋಗಿದೆಯಾದರೆ ಅಲ್ಲಿ
ತುಳಿತ ಜನರ ಬೆಂದ ಮುಖಗಳು ಕಂಡಿತೆ ಹೇಳಿ
ಭಾರಕ್ಕೆ ಬೆಂಡಾಗಿರುವ ಬಾಗಿದ ಬೆನ್ನುಗಳ ಜೀವನ್ಮರಣ
ಕಾಣದಿದ್ದರೆ ! ನೋಡಿ
ನೀವು ಗೋದಲಿಯ ಕಡೆ ಹೋಗಲಿಲ್ಲ ಬಿಡಿ!

ಗೋದಲಿ ಕಡೆ ಹೋಗಿದ್ದೀರಾ ಹೇಳಿ
ಹೋಗಿದೆಯಾದರೆ ಅಲ್ಲಿ
ಗೊಲ್ಲರ ಆನಂದ ಅತಿಶಯ ಅನುಭವಕ್ಕೆ ಸಿಕ್ಕಿತ್ತೇ ಹೇಳಿ
ತುಳಿತಗೊಳಗಾದವರಿಗೆ ಕ್ರಿಸ್ತ ತಂದ ಭರವಸೆಯ ಹೊಂಗಿರಣ
ಸಿಕ್ಕದಿದ್ದರೆ ! ನೋಡಿ
ನೀವು ಗೋದಲಿಯ ಕಡೆ ಹೋಗಲಿಲ್ಲ ಬಿಡಿ!

ಹೋಗಿ, ಗೋದಲಿಯ ಕಡೆ ಮತ್ತೊಮ್ಮೆ
ಮಾರ್ಕೆಟ್ನ ಗಲ್ಲಾಟೆಗಳನ್ನೆಲ್ಲಾ ಬಿಟ್ಟು
ವಿಧಿಯಾಚರಣೆಗಳ ಪಕ್ಕಕಿಟ್ಟು
ಕಣ್ಣಾಯಿಸಿ ನಿಮ್ಮನೇ ಮರೆತು
ಪದವಿ ಬಿಟ್ಟು ಬಡ ದಾಸನಾದ ಕ್ರಿಸ್ತನ
ಬಡ ಗೋದಲಿಯಡೆ
ಕೂತು
ಭರವಸೆಯ ತುಂಬಿದ ಗೊಲ್ಲರ ಜೊತೆ ಬೆರೆತು.

ಹೋಗಿ, ಗೋದಲಿಯ ಕಡೆ ಮತ್ತೊಮ್ಮೆ

ಕ್ರಿಸ್ತ ಜಯಂತಿಯ ಶುಭಾಶಯಗಳು

ಪ್ರೀತಿಯಿಂದ
 ಜೋವಿ ಯೇ.ಸ
Read more!

Friday, 27 July 2012


ರವೀಂದ್ರನಾಥ ಠಾಕೂರರ ’ಗೀತಾಂಜಲಿ’ಯಿಂದ…

(ಫಾ. ಜೀವನ್ ಪ್ರಭು ಅನುವಾದಿಸಿರುವ ಸೌಹಾರ್ದ ಪುಸ್ತಕದಿಂದ)


ಅವನ ಸದ್ದಿಲ್ಲದ ಹೆಜ್ಜೆಗಳನ್ನು ಆಲಿಸಿದ್ದೀರಾ?
ಅವನು ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಪ್ರತಿಯೊಂದು ಕ್ಷಣದಲ್ಲಿ, ಪ್ರತಿಯೊಂದು ಯುಗದಲ್ಲಿ
ಪ್ರತಿಯೊಂದು ಹಗಲು ಇರುಳಿನಲ್ಲಿ ಅವನು ಬರುತ್ತಾನೆ
ಬರುತ್ತಾನೆ, ಎಂದೆಂದೂ ಬರುತ್ತಾನೆ.
ಅನೇಕ ಮನಃಸ್ಥಿತಿಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದೇನೆ ನಾನು,
ಆದರೆ ಅವುಗಳ ಸ್ವರಗಳೆಲ್ಲ ಘೋಷಿಸಿವೆ-
ಅವನು ಬರುತ್ತಾನೆ.. ಬರುತ್ತಾನೆ, ಎಂದೆಂದೂ ಬರುತ್ತಾನೆ.
ಬಿಸಿಲ ಚೈತ್ರ ಕಂಪಿನ ದಿನಗಳಲ್ಲಿ
ಅಡವಿದಾರಿಯಲ್ಲಿ ಅವನು ಬರುತ್ತಾನೆ
ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಶ್ರಾವಣದ ಇರುಳುಗಳು ಮಳೆ ಮಬ್ಬಿನಲ್ಲಿ
ಮೋಡಗಳ ಗುಡುಗಿದ ರಥದ ಮೇಲೆ
ಅವನು ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಪುಂಖಾನುಪುಂಖ ದುಃಖಗಳಲ್ಲಿ
ನನ್ನ ಎದೆಯನ್ನೊತ್ತುವುವು ಅವನ ಹೆಜ್ಜೆಗಳು
ನನ್ನ ಸಂತಸ ಹೊಳೆಯುವಂತೆ ಮಾಡುವುದು
ಅವನ ಪಾದಗಳ ಸ್ಪರ್ಶ..Read more!

Wednesday, 27 June 2012


ಪ್ರವಾದಿಗಳನ್ನು ನೆನೆಯುತ್ತಾ…

ನೀ ಹೇಳಿದ ಸತ್ಯ..
ಅಸತ್ಯ ನನ್ನ ಬದುಕಿಗೆ ಕಸಿವಿಸಿಯ ಬೀಜಗಳಾದವು
ಹಿಂಸೆಯಿಂದ ನುಂಗುವ ಕಹಿ ಮಾತ್ರೆಗಳಾದವು…
ಮನಕೊರೆಯುವ ಉಳಿ ಸುತ್ತಿಗೆಗಳಾದವು
ನನ್ನ ಮಾತು ಕೃತಿಗಳನ್ನು ನಿರ್ದಯೆಯಿಂದ ತೂಗುವ ತಕ್ಕಡಿಗಳಾದವು
ನನ್ನ ಟೊಳ್ಳು ಹಂಬುತನಕ್ಕೆ ಹಿಡಿಯುವ ಕನ್ನಡಿಗಳಾದವು
ಕೊನೆಗೆ, ಅದು ಸಹಿಸಲಾಗದ ಉಗ್ರ ಹಿಂಸೆಯಾದಾಗ
ಸತ್ಯದ ಮೂಲ ನಿನ್ನನೇ..
ಸಮಾಧಿ ಮಾಡಿದೆ..ನಾನು
ಕೇವಲ ನನ್ನ ಕ್ಷಣಿಕ ಪರಿಹಾರಕ್ಕೆ..

ಜೋವಿ..
Read more!

Monday, 26 March 2012

ಹಾಗೆ ಸುಮ್ಮನೆ





ಕುಳಿತು ದಿಟ್ಟಿಸಿದೆ..
ಹೊಸ ಮನೆಯ ನಿರ್ಮಾಣಕ್ಕಾಗಿ
ಇದ್ದ ಹಳೆ ಮನೆಯ ಕೆಡುವ ಕಾರ್ಯ..
ಕ್ಷಣ ಮಾತ್ರದಲ್ಲಿ ಗೋಡೆಗಳು ನೆಲಕುರುಳಿದವು..
ಎಚ್ಚರಿಕೆಯಿಂದ ಜೋಡಿಸಿದ ಇಟ್ಟಿಗೆಗಳ ಸಾಲು ಸಾಲು ನೆಲಸಮವಾದವು
ಮೂಡಿದ ಸ್ಥಿತ ಮನಸ್ಸಿನ ವಿನ್ಯಾಸಗಳು ಕಾಣೆಯಾದವು
ಇದ್ದ ಮನೆ ಬುಲ್‍ಡೋಜರ್‍ ಬಾಯಿಗೆ ಮಣ್ಣಾಗಿ ಹೋಗಿತ್ತು

ಇನ್ನೊಂದು ಕಡೆ..
ಹೊಸ ಮನೆಯ ನಿರ್ಮಾಣ ಕಾರ್ಯ
ಎಚ್ಚರಿಕೆಯ ಜೋಡನೆ..
ಸ್ಥಿತ ಮನಸ್ಸಿನ ಯೋಜನೆ..
ಪ್ರತಿ ಸಾಲಿಗೆ ಅಳತೆಯ ಚಿಂತನೆ

ಆಗ ಮನಸ್ಸು ಹೇಳಿತು...
"ಹತ್ತಾರು ತಿಂಗಳ ಶ್ರಮದ ಕಟ್ಟಡ...
ಉರಳಲು ಬೇಕು ಕ್ಷಣ ಮಾತ್ರ..."

ಆಗ ಮನಸ್ಸಿನ ಕನ್ನಡಿಯಲ್ಲಿ ಅಜರುದ್ದೀನ್..ಆಶ್ವಿನಿ..ಯಡಿಯೂರಪ್ಪ
ಹೀಗೆ ನೂರಾರು ಮಂದಿ ಕಾಣಿಸತೊಡಗಿದರು..

ಜೋವಿ

Read more!

Thursday, 19 January 2012

ದೇಶದ ಶ್ರೇಷ್ಠತೆ


ಒಂದು ದೇಶ/ ರಾಜ್ಯವನ್ನು “ಶ್ರೇಷ್ಠ” ಎಂದು ನಿರ್ಧಾರಿಸುವುದಾದರೂ ಹೇಗೆ? ಒಂದು ದೇಶಕ್ಕೆ ಶ್ರೇಷ್ಠ ಎಂಬ ಪ್ರಮಾಣಪತ್ರವನ್ನು ಯಾವ ಆಧಾರದ ಮೇಲೆ ಕೊಡಬಹುದು? ಯಾವ ಲಕ್ಷಣಗಳು ಒಂದು ದೇಶವನ್ನು ಶ್ರೇಷ್ಠವಾಗಿಸುತ್ತದೆ?  ಒಟ್ಟಾರೆ...what makes a nation great? ದೇಶದ ಮಿಲಿಟರಿ ಬಲವೇ ಅಥವಾ ಆರ್ಥಿಕ ಅಭಿವೃದ್ಧಿಯೇ? ದೇಶದ ವೈಜ್ಞಾನಿಕ ಅವಿಷ್ಕಾರಗಳೇ.. ದೇಶವು ಗರ್ಭಕಟ್ಟಿಕೊಂಡಿರುವ ಅಗಾಧ ನೈಸರ್ಗಿಕ ಸಂಪತ್ತೇ? ಇವೆಲ್ಲಾವು ಶ್ರೇಷ್ಠತೆಯ ಮಾನದಂಡಗಳಾಗಿದ್ದರೆ… ಇಂದು ಅಮೇರಿಕಾ ಅಥವಾ ಇನ್ನಿತರ ದೇಶಗಳು  ಶ್ರೇಷ್ಠ ರಾಷ್ಟ್ರವಾಗಿರಬೇಕಾಗಿತ್ತು!  ನೈಸರ್ಗಿಕ ಸಂಪತ್ತು ದೇಶಕ್ಕೆ ಶ್ರೇಷ್ಠ ಎಂಬ ಅಂಕಪಟ್ಟಿಯನ್ನು ತಂದುಕೊಡುವುದಾಗಿದ್ದರೆ ಇಂದು ಎಷ್ಟೋ ಆಫ್ರಿಕಾ ದೇಶಗಳು ಶ್ರೇಷ್ಠವೆಂಬ ಹಣೆಪಟ್ಟಿ ಕಟ್ಟಿಕೊಂಡು ಅಭಿಮಾನದಿಂದ ಬೀಗಬಹುದಾಗಿತ್ತು. ಇನ್ನೊಂದು ಕಡೆ, ದೇಶದ ಸವಿಸ್ತಾರವಾದ ಪ್ರದೇಶವಾಗಲ್ಲಿ ಅಥವಾ ಜನಸಂಖ್ಯೆಯಾಗಲ್ಲಿ ದೇಶಕ್ಕೆ ಶ್ರೇಷ್ಠತೆಯನ್ನು ತಂದು ಕೊಡುತ್ತದೆ ಎಂಬುವುದು ಅಪ್ಪಿತಪ್ಪಿಯೂ ಒಪ್ಪಲಾಗದಂತಹ ಮಾತು. ದೇಶದ ಸಂಪತ್ತು, ಗಾತ್ರ ಅಥವಾ ಶಕ್ತಿ ಸಾಮರ್ಥ್ಯಗಳ ಸೇರುಗಳಿಂದ ದೇಶದ ಶ್ರೇಷ್ಠತೆಯನ್ನು ಎಂದಿಗೂ ಅಳೆಯಾಲಾಗುವುದಿಲ್ಲ. ಆಗದರೆ ದೇಶದ ಶ್ರೇಷ್ಠತೆ ಯಾವುದರಲ್ಲಿ ಅಡಗಿದೆ?

ದೇಶವು ತನ್ನ ಪ್ರಜೆಗಳಲ್ಲಿ ಯಾವ ಮೌಲ್ಯವನ್ನು ಗುರುತಿಸಿ, ಅದಕ್ಕೆ ಮಾನ್ಯತೆ ಕೊಟ್ಟು ಉತ್ತೇಜಿಸಿತ್ತದೆಯೋ ಅದು ದೇಶದ ಔನ್ನತ್ಯ ಅಥವಾ ಘನತೆಗೆ ರುಜುವಾತು ಒದಗಿಸುತ್ತದೆ. ಆದುದರಿಂದ ದೇಶವು ಯಾವುದಕ್ಕೆ ಮಾನ್ಯತೆಯನ್ನು ಕೊಡುತ್ತದೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಸೂಕ್ತವೆನ್ನಿಸುತ್ತದೆ. ಭ್ರಷ್ಟಾಚಾರವೆಂಬ ಅನಿಷ್ಟಕ್ಕೆ ಮೂಗುದಾರ ಕಟ್ಟಿ ನಿಗ್ರಹಿಸದೆ, ಅದಕ್ಕೆ ಹುಲ್ಲು ಇಂಡಿ ಹಾಕಿ ಬಲಿಷ್ಠವಾಗಿಸುವ ದೇಶ ಎಂದಿಗೂ ಶ್ರೇಷ್ಠವೆಂದು ಕರೆಸಿಕೊಳ್ಳಲು ಸಾಧ್ಯವೇ ಇಲ್ಲ. ಸರ್ಕಾರದ ಆದ್ಯತೆ, ನಾಯಕರ ದೂರದೃಷ್ಟಿ, ಆದರ್ಶಮಯ ಜೀವನ, ದೇಶದ ಸಮಾಜಿಕ ಮತ್ತು ನ್ಯಾಯ ವ್ಯವಸ್ಥೆ, ಪೌರರಲ್ಲಿರಬೇಕಾದ ಪ್ರಾಮಾಣಿಕತೆ, ಬಡಬಗ್ಗರಿಗೆ ತೋರುವ ದಯೆ ದೇಶದ ಶ್ರೇಷ್ಠತೆಯನ್ನು ಸಾರಿ ಹೇಳುತ್ತವೆ. ಪ್ರಜೆಗಳಲ್ಲಿರಬೇಕಾದ ಸಂಯೋಜಿತ ವ್ಯಕ್ತಿತ್ವ, ಅವರು ಮೆಚ್ಚಿ ಅನುಮೋದಿಸುವ ಮತ್ತು ಉತ್ತೇಜಿಸುವ ಅಂಶಗಳು, ಮೌಲ್ಯಗಳು, ಆದರ್ಶಗಳು ಮಹತ್ವಾಂಕ್ಷೆಗಳು ಕೊನೆಗೆ ಅವರು ಬದುಕುವ ರೀತಿ ದೇಶದ ಶ್ರೇಷ್ಠತೆಯನ್ನು ದೃಢಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆಂಬುವುದು ಸೂರ್ಯನಷ್ಟೇ ಸತ್ಯ. ಒಂದು ಮಾತಿನಲ್ಲಿ ಹೇಳಬೇಕಾದರೆ ದೇಶದ ನ್ಯಾಯಪರತೆ/ಧರ್ಮಿಷ್ಠತೆ  ದೇಶವನ್ನು ಶ್ರೇಷ್ಠವನ್ನಾಗಿಸುತ್ತದೆ.

ದೇಶದ ಶ್ರೇಷ್ಠತೆಯ ಬಗ್ಗೆ ಮಾತನಾಡುತ್ತಾ, ಉತ್ತಮ ಸರ್ಕಾರ, ದೇಶಭಕ್ತಿ, ಪ್ರಜಾಪ್ರಭುತ್ವ, ಆದರ್ಶ ಮತ್ತು ನ್ಯಾಯಪರ ರಾಜಕೀಯ ನಾಯಕರುಗಳು ಮತ್ತು ರಾಜಕೀಯ ಪಕ್ಷಗಳು ಒಂದು ದೇಶಕ್ಕೆ ಶ್ರೇಷ್ಠತೆಯನ್ನು ತಂದುಕೊಡುವ ಕೆಲವೊಂದು ಸಾಧನಗಳೆಂದು ಕೆಲವರು ಪಟ್ಟಿಮಾಡುತ್ತಾರೆ. ಒಂದು ಉತ್ತಮ ಜವಾಬ್ದಾರಿಯುತ್ತ, ನ್ಯಾಯಪರ ನಿಷ್ಕಳಂಕ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಒಂದು ರಾಷ್ಟ್ರವನ್ನು ಶ್ರೇಷ್ಠ ರಾಷ್ಟ್ರವಾಗಿಸುವುದರಲ್ಲಿ ಅನುಮಾನವೇ ಇಲ್ಲ. Votebank politics ಬಗ್ಗೆ ತಲೆಕೆಡಿಸಿಕೊಳ್ಳದೆ, ಜನರ ಸರ್ವತೋಮುಖ ಅಭಿವೃದ್ಧಿಗೆ ತೊಡೆತಟ್ಟಿ ನಿಲ್ಲುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ರಾಷ್ಟ್ರಕ್ಕೆ ಶ್ರೇಷ್ಠತೆಯನ್ನು ತಂದುಕೊಡುವ ಪ್ರಮುಖ ಪಾತ್ರ ದಾರಿಗಳು. ಪ್ರಜೆಗಳ ಹಿತ, ರಕ್ಷಣೆ, ಅಭಿವೃದ್ಧಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ನಿರ್ಧಾರಗಳ, ಅದ್ಯತೆಗಳ ಮಾರ್ಗದರ್ಶಿಯಾಗಿರಬೇಕೇ ವಿನಃ ಈ ಪ್ರಕ್ರಿಯೆಯಲ್ಲಿ ಸ್ವಹಿತ ಎಂದೂ ನುಸುಳಬಾರದು. ಒಳ್ಳೆಯ ನಾಯಕತ್ವ ಉತ್ತಮ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಒಂದು ಅಂಶ. ದೂರದೃಷ್ಟಿ, ವಿವೇಕ, ಜ್ಞಾನ ತಿಳುವಳಿಕೆ ಮತ್ತು ಸಮಾನ್ಯ ಜ್ಞಾನ ನಾಯಕತ್ವದಲ್ಲಿ ಎದ್ದು ಕಾಣಬೇಕು. ನಾಯಕತ್ವದ ಪ್ರತಿಯೊಂದು ನಿರ್ಧಾರವು ದೇಶದ  ಮುನ್ನಡೆಗೆ  ಸಹಕಾರಿಯಾಗಬೇಕು. ದೇಶವನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯುವ ಇನ್ನೊಂದು ಅಂಶ ಪ್ರಜೆಗಳಲ್ಲಿರಬೇಕಾದ್ದ ದೇಶಭಕ್ತಿ. ದೇಶವನ್ನು ಪ್ರೀತಿಸಬೇಕು ಎಂಬ ಭಾವ. ಆ ಪ್ರೀತಿ ವಸ್ತುನಿಷ್ಠವಾಗಿದ್ದು, ಕೆಟ್ಟದನ್ನು ತೆಗಳುತ್ತಾ ಒಳೆಯದನ್ನು ಅನುಮೋದಿಸುವ ತರ್ಕಾಧಾರಿತ ಪ್ರೀತಿ ದೇಶಭಕ್ತಿ ಅದಾಗಿರಬೇಕು. ಸಮಾಜದಲ್ಲಿ ಒಡಕನ್ನು ಬಿತ್ತುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವ ಛಲ, ನ್ಯಾಯಪರ ಹೋರಾಟಗಳಿಗೆ ಸಾತ್ ನೀಡುವ ದೇಶಭಕ್ತಿ ಪ್ರಜೆಗಳಲ್ಲಿರಬೇಕು.

ನಮ್ಮ ದೇಶದ ವಾಸ್ತವವನ್ನು ಅವಲೋಕಿಸಿ ನೋಡಿ, ಭ್ರಷ್ಟಾಚಾರ ಒಪ್ಪಿಗೊಂಡ ಮೌಲ್ಯವಾಗಿಬಿಟ್ಟಿದೆ. ಭ್ರಷ್ಟಾಚಾರವು ಕೆಟ್ಟದೆಂದು ನಮಗೆ ಅಪ್ಪಿತಪ್ಪಿಯೂ ಅನಿಸುವುದಿಲ್ಲ. ಭ್ರಷ್ಟ ರಾಜಕೀಯ ಪಕ್ಷಗಳನ್ನೇ ಪುನ: ಪುನ: ಆರಿಸಿ ಅಧಿಕಾರಕ್ಕೆ ತರುತ್ತೇವೆ. ನಮ್ಮ ಕಾರ್ಯಸಾಧನೆಗೆ ಭ್ರಷ್ಟ ಮಾರ್ಗಗಳನ್ನೇ ಕೈಗೊಳ್ಳುತ್ತೇವೆ. ಇನ್ನೊಂದು ಕಡೆ, ಅಧಿಕಾರ ದಾಹಕ್ಕಾಗಿ ಸಮಾಜವನ್ನು ಜಾತಿ, ಮತ ಮತ್ತು ಭಾಷಾಧಾರಗಳ ಮೇಲೆ ನುಚ್ಚುನೂರು ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ದೇಶ ಹಿತ ಬೇಡವಾದ ಮೌಲ್ಯವಾಗಿಬಿಟ್ಟಿದೆ. ನಾವಂತೂ ಈ ರಾಜಕೀಯ ಪಕ್ಷಗಳ ಗುಲಾಮರಾಗಿಬಿಟ್ಟಿದ್ದೇವೆ. ಅವರು ಹರಡುತ್ತಿರುವ ದ್ವೇಷ ಪ್ರಚೋದಕ ಸಿದ್ಧಾಂತಗಳನ್ನು ನಾವು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಿದ್ದೇವೆ. ಅದನ್ನೇ ದೇಶಭಕ್ತಿ ಎಂದು ಸಹ ನಂಬಿಬಿಟ್ಟಿದ್ದೇವೆ. Votebank ಲೆಕ್ಕಚಾರ ಇಂದು ಸರ್ಕಾರಗಳ ಪ್ರತಿಯೊಂದು ನಿರ್ಧಾರಗಳನ್ನು ಆಧ್ಯತೆಗಳನ್ನು ಡ್ರೈವ್ ಮಾಡುತ್ತಿದೆ. ಬಡವರ ಮೇಲೆ ಇರಬೇಕಾದ ಕಾಳಜಿ ಮಾಯವಾಗಿಬಿಟ್ಟಿದೆ. ಸರ್ಕಾರಗಳ ಕೆಲವೊಂದು ಧೋರಣೆ, ಕಾರ್ಯನೀತಿ ಬಡವರ, ತುಳಿಯ್ಪಟ್ಟವರ ರೈತರ ನಿದ್ದೆಗೆಡಿಸುತ್ತಿದೆ. ಬಡವರನ್ನು ನಿರ್ಗತಿಕರನ್ನು ತುಚ್ಛವಾಗಿ ಕಾಣಲಾಗುತ್ತಿದೆ. ಅನ್ಯಾಯ ಮತ್ತು ಶೋಷಣೆಗಳ ವಿರುದ್ಧ ಹೋರಾಡುವ ನೆಪದಲ್ಲಿ ಹಿಂಸೆಗೆ ಮೊರೆಹೋಗಿರುವ ಕೆಲವೊಂದು ಗುಂಪುಗಳು ಇಂದು ಶೋಷಿಸುವ ಗುಂಪುಗಳಾಗಿ ಮಾರ್ಪಟ್ಟಿವೆ. ಈ ಪರಿಸ್ಥಿತಿಯಲ್ಲಿ ನಮ್ಮ ದೇಶವನ್ನು ಶ್ರೇಷ್ಠವೆಂದು ಕರೆಯಬಹುದೇ?..ಅಥವಾ ನಮ್ಮ ದೇಶಗೆ ಶ್ರೇಷ್ಠತೆಯೆಂಬ ಪಟ್ಟ ಸಿಗಬಹುದೇ? …ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಇದರ ಬಗ್ಗೆ ಯೋಚಿಸುವುದು ಸೂಕ್ತವೆನ್ನಿಸುತ್ತದೆ.

ಈ ಸಂದರ್ಭದಲ್ಲಿ ಖಲೀಲ್ ಗಿಬ್ರಾನ್ ರವರ the builders of bridges ಅಂದ್ರೆ ಸೇತುವೆಯ ಕಟ್ಟುವವರು ಎಂಬ ಕತೆ ನೆನಪಿಗೆ ಬರುತ್ತಿದೆ. ಅಸ್ಸಿ ನದಿ ಸಮುದ್ರವನ್ನು ಸೇರಲು ಹೋಗುವ ಸ್ಥಳದಲ್ಲಿ ನಗರದ ಎರಡು ಭಾಗಗಳನ್ನು ಹತ್ತಿರ ತರುವುದಕ್ಕೆ ಎಂದು ಒಂದು ಸೇತುವೆ ಕಟ್ಟಿದ್ದರು. ಅದಕ್ಕೆ ಬೇಕಾದ ದೊಡ್ಡ ದೊಡ್ಡ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳ ಮೇಲೆ ಹೊರಿಸಿ ತರಿಸಿದರು. ಸೇತುವೆ ಮುಗಿದ ಮೇಲೆ ಅರಾಬಿಕ್ ಮತ್ತು ಅರಾಮೆಯಿಕ್ ಭಾಷೆಗಳಲ್ಲಿ ’ಎರಡನೆಯ ಅಂಟಿಯೋರಸ್ ದೊರೆ ಕಟ್ಟಿಸಿದ’ ಎಂದು ಒಂದು ಕಂಬದ ಮೇಲೆ ಕೆತ್ತಿದರು: ಒಂದು ಸಂಜೆ ಹುಚ್ಚನಂತೆ ತೋರುವ ಒಬ್ಬ ಯುವಕ ಈ ಕಂಬದ ಮೇಲೆ ಇದ್ದಲಿನ ಚೂರಿನಲ್ಲಿ ಬರೆದ: ’ಈ ಸೇತುವೆಯ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳು ತಂದವು. ಈ ಸೇತುವೆಯ ಮೇಲೆ ಒಡಾಡುವಾಗ ನೀವು ಈ ಸೇತುಯನ್ನು ಕಟ್ಟಿದ ಆಂಟಿಯಕನ ಹೇಸರಗತ್ತೆಗಳ ಬೆನ್ನಿನ ಮೇಲೆ ಸವಾರಿ ಮಾಡುತ್ತಿದ್ದೇರಿ’. ಅದನ್ನು ನೋಡಿದ ಕೆಲವರು ನಕ್ಕರು. ಕೆಲವರು ಅಶ್ಚರ್ಯಪಟ್ಟರು. ಕೆಲವರು ಹೇಳಿದರು: ’ಇದನ್ನು ಮಾಡಿದವರು ಯಾರು ಎಂದು ನಮಗೆ ಗೊತ್ತು. ಆತನಿಗ ಸ್ವಲ್ಪ ಹುಚ್ಚಲ್ಲವೆ?’. ಆದರೆ ಒಂದು ಹೇಸರಗತ್ತೆ ನಗುತ್ತಾ ಮತ್ತೊಂದಕ್ಕೆ ಹೇಳಿತು: ಹೌದು ಆ ಕಲ್ಲುಗಳನ್ನು ಹೊತ್ತವರು ನಾವು. ನಿನಗೆ ನೆನಪಿಲ್ಲವೆ? ಆದರೂ ಇವತ್ತಿಗೂ ಎಲ್ಲರೂ ಹೇಳುವುದು ಸೇತುವೆ ಕಟ್ಟಿದವನು ದೊರೆ ಆಂಟಿಯೋರಸ್ ಎಂದೇ!.

ಹೌದು, ನಮ್ಮ ದೇಶವನ್ನು ಕಟ್ಟಿ ಬೆಳಸಿದವರು ಮತ್ತು ಬೆಳಸಬೇಕಾದವರು ಜನಸಮಾನ್ಯರಾದ ನಾವು ನೀವು. ನಮ್ಮ ದೇಶವನ್ನು ಶ್ರೇಷ್ಠತೆಯ ಬೆಳಕಿಗೆ ಕರೆದೊಯುವವರು ನಾವೇ. ಅದ್ದರಿಂದ ನಾವು ಮೆಚ್ಚಿ ಅನುಮೋದಿಸುವ ಮತ್ತು ಉತ್ತೇಜಿಸುವ ಅಂಶಗಳು, ಮೌಲ್ಯಗಳು, ಆದರ್ಶಗಳು ಮಹತ್ವಾಂಕ್ಷೆಗಳು ಕೊನೆಗೆ ನಾವು ಬದುಕುವ ರೀತಿಯು ನ್ಯಾಯಪರತೆ ಧರ್ಮಿಷ್ಠತೆಯಿಂದಿದ್ದು ನಮ್ಮ ದೇಶವನ್ನು ಶ್ರೇಷ್ಠವಾಗಿಸಲಿ ಎಂಬ ಮನೋಭಾವ ನಮ್ಮದಾಗಲಿ. 

-ಜೋವಿ

Tuesday, 7 April 2009

ಯೇಸು ಸ್ವರ್ಗದ ಬಾಗಿಲನ್ನು ತಟ್ಟುತ್ತಿರುವುದು.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ!

ಒಳ್ಳೆಯವರ ಗು೦ಪನ್ನು ಕರೆದು ತ೦ದಿದ್ದೇನೆ.

ಬಾಗಿಲನ್ನು ತೆರೆ, ನಾವು ಒಳಗೆ ಬರಲಿ ಎ೦ದು

ನಾವೆಲ್ಲ ನಿನ್ನ ಹೃದಯದ ಮಕ್ಕಳು, ಒಬ್ಬೊಬ್ಬರು, ಎಲ್ಲರೂ

ತ೦ದೆ, ನನ್ನ ತ೦ದೆ, ನಾನು ನಿನ್ನ ಬಾಗಿಲನ್ನು ತಟ್ಟುತ್ತಿದ್ದೇನೆ.

ಇ೦ದೇ ನನ್ನೊ೦ದಿಗೆ ಶಿಲುಬೆಗೇರಿಸಿದ ಕಳ್ಳನನ್ನು ಕರದೇ ತ೦ದಿದ್ದೇನೆ.

ಹಾಗಾದರೂ

ಅದೊ೦ದು ಸೌಮ್ಯಚೇತನ, ಅವನು ನಿನ್ನ ಅತಿಥಿಯಾಗಿರುತ್ತಾನೆ.

ಆತ ಒ೦ದೇ ರೊಟ್ಟಿಯ ತುಣುಕನ್ನು ಕದ್ದ, ತನ್ನ ಮಕ್ಕಳ ಹಸಿವೆಗಾಗಿ ,

ಆದರೆ ನಾನು ಬಲ್ಲೆ , ಅವನ ಕಣ್ಣ ಬೆಳಕು ನಿನ್ನನ್ನು ಸ೦ತಸಗೊಳಿಸುತ್ತದೆ.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ,

ಪ್ರೀತಿಗಾಗಿ ನನ್ನನ್ನು ಹೆತ್ತ ಮಹಿಳೆಯನ್ನು ಕರೆದು ತ೦ದಿದ್ದೇನೆ.

ಅವರು ಆಕೆಯ ಕಡೆ ಬೇರಲೆ೦ದು ಕಲ್ಲುಗಳನ್ನೆತ್ತಿದ್ದರು.

ನಿನ್ನ ಒಳ ಹೃದಯವನ್ನು ಬಲ್ಲ ನಾನು ಅವರನ್ನು ತಡೆದೆ

ಅವಳ ಕಣ್ಣುಗಳ ನೇರೆಳೆ ಬಣ್ಣ ಇನ್ನೂ ಮಾಸಿಲ್ಲ,

ನಿನ್ನ ಏಪ್ರಿಲ್ ಇನ್ನೂ ಇವಳ ತುಟಿಯಮೇಲಿದೆ.

ನಿನ್ನ ದಿನಗಳ ಸುಗ್ಗಿಯನ್ನು ಆವಳ ಕೈಗಳು ಇನ್ನೂ ಹಿಡಿದಿವೆ.

ಈಗ ಆಕೆ ನನ್ನೊ೦ದಿಗೆ ನಿನ್ನ ಮನೆಯನ್ನು ಪ್ರವೇಶಿಸುತ್ತಾಳೆ.

ತ೦ದೇ, ನನ್ನ ತ೦ದೆ ಬಾಗಿಲು ತೆರೆ

 

ಒಬ್ಬ ಕೊಲೆಗಡುಕನನ್ನು ನಾನು ನನ್ನೊ೦ದಿಗೆ ಕರೆದು ತ೦ದಿದ್ದೇನೆ,

ತನ್ನ ಮುಖದ ಮೇಲೆ ಮು೦ಬೆಳಕು ಇರುವವವನು ಅವನು.

ತನ ಮಕ್ಕಳಿಗೆ ಆತ  ಬೇಟೆಯಾಡಿದ

ಆದರೆ ಬೇಟೆಯನ್ನು ಜಾಣತನದಿ೦ದ ಆಡಲಿಲ್ಲ

ಸೂರ್ಯನ ಶಾಖ ಅವನ ತೋಳುಗಳ ಮೇಲಿತ್ತು

ನಿನ್ನ ಭೂಮಿಯ ಜೀವರಸ ಅವನ ರಕ್ತನಾಳಗಳಲ್ಲಿತ್ತು

ಎಲ್ಲಿ ಮಾ೦ಸವನ್ನು ಕೊಡುವುದಿಲ್ಲ ಎ೦ದರೂ ಅಲ್ಲಿ

ತನ್ನ ಮಕ್ಕಳಿಗಾಗಿ ಅವನಿಗೆ ಮಾ೦ಸ ಬೇಕಾಗಿತ್ತು,

ಆದರೆ ಅವನ ಬಿಲ್ಲು ಬಾಣಗಳು ತೀರ ಸಿದ್ಧವಾಗಿದ್ದವು,

ಅದಕ್ಕಾಗಿ ಅವನು ಕೊಲೆಮಾಡಿದ

ಅದಕ್ಕಾಗಿ ಈಗ ಅವನು ನನ್ನೊ೦ದಿಗಿದ್ದಾನೆ.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ.

 

ಒಬ್ಬ ಕುಡುಕನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ.

ಜಗತ್ತಿನ್ನು ಬಿಟ್ಟು ಬೇರೊ೦ದಕ್ಕಾಗಿ ದಾಹಗೊ೦ಡವನು ಅವನು

ನಿನ್ನ ಊಟದ ಮೇಜಿನ ಮು೦ದೆ, ಕೈಯಲ್ಲೊ೦ದು ಬಟ್ಟಲು ಹಿಡಿದು,

ಬಲಬದಿಗೆ ಏಕಾ೦ತತೆ

ಎಡಬದಿಗೆ ನಿರ್ಗತಿಕತೆ

ಇವುಗಳೊ೦ದಿಗೆ ಕುಳುತಿರಬೇಕಾಗಿದ್ದವನು ಅವನು

ಆತ ಬಟ್ಟಲನ್ನು ನಿಟ್ಟಿಸಿ ನೋಡಿದ,

ನಿನ್ನ ನಕ್ಷತ್ರಗಳು ಅಲ್ಲಿ ಪ್ರತಿಬಿ೦ಬಿಸಿರುವುದನ್ನು ಕ೦ಡ,

ನಿನ್ನ ಆಕಾಶವನ್ನು ಸೇರಬಹುದು ಎ೦ದು ಪೂರ್ಣಾವಾಗಿ ಹೀರಿದ

ಆತ ತನ್ನ ಆತ್ಮವನ್ನು ಸೇರಬಹುದಿತ್ತು

ಆದರೆ ದಾರಿಯಲ್ಲಿ ತಪ್ಪಿಸಿಕೊ೦ಡ, ಕೆಳಗೆ ಬಿದ್ದ

ಹೋಟೆಲಿನ ಹೊರಗೆ ನಾನು ಅವನನ್ನು ಎತ್ತಿದೆ, ತ೦ದೆ,

ಆತ ಉಳಿದರ್ಧ ದಾರಿ ನಗುತ್ತ ನನ್ನೊ೦ದಿಗೆ ಬ೦ದ

ಈಗ ನನ್ನೊ೦ದಿಗಿದ್ದರೂ ಆತ ಆಳುತ್ತಿದ್ದಾನೆ

ಏಕೆ೦ದರೆ ದಯೆ ಅವನನ್ನು ನೋಯಿಸುತ್ತಿದೆ.

ಅದಕ್ಕಾಗಿಯ್ಯೇ ಅವನನ್ನು ನಿನ್ನ ಬಾಗಿಲಿಗೆ ಕರೆತ೦ದಿದ್ದೇನೆ.

ತ೦ದೆ, ನನ್ನ ತ೦ದೆ, ಬಾಗಿಲನ್ನು  ತೆರೆ,

 

ಒಬ್ಬ ಜೂಜು ಕೊರನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ

ತನ್ನ ಬೆಳ್ಳಿಯ ಚಮಚೆಯನ್ನು ಚಿನ್ನ ಸೂರ್ಯನನ್ನಾಗಿ ಮಾಡುವವನು ಅವನು

ನಿನ್ನ ಜೇಡಗಳಲ್ಲಿ ಒ೦ದರ೦ತೆ

ಬಲೆನೇಯ್ದು, ಇನ್ನು ಸಣ್ಣ ನೊಣಗಳನ್ನು ಬೇಟೆಯಾಡುವ ನೋಣಕ್ಕಾಗಿ

ಕಾಯುತ್ತಿರುವವನು

ಆದರೆ ಎಲ್ಲ ಜೂಜು ಕೋರರ೦ತೆ ಆತನೂ ಕಳೆದುಕೊ೦ಡ

ನಗರದ ರಸ್ತೆಯಲ್ಲಿ ಆತ ಅಲೆಯುತ್ತಿರುವಾಗ

ಅವನ ಕಣ್ಣುಗಳೊಳಕ್ಕೆ ದೃಷ್ಟಿ ಚೆಲ್ಲಿದೆ

ತಿಳಿದೆ, ಅವನ ಬೆಳ್ಳಿ ಚಿನ್ನವಾಗಿರಲಿಲ್ಲ

ಅವನ ಕನಸುಗಳು ನೂಲು ಹರಿದಿತ್ತು

ನನ್ನ ಜತೆಗೆ ಅವನನ್ನು ಕರೆದೆ.

ನಾನು ಹೇಳಿದೆ ನನ್ನ ಸೋದರರ ಮುಖಗಳನ್ನು ನೋಡು

ನನ್ನ ಮುಖವನ್ನು ನೋಡು

ನಮ್ಮೊ೦ದಿಗೆ ಬಾ ನಾವು ಬದುಕಿನ ಬೆಟ್ಟಗಳಾಚೆಯ

ಫಲವತ್ತವಾದ ಸೀಮೆಗೆ ಹೋಗುತ್ತಿದ್ದೇವೆ

ನಮ್ಮೊ೦ದಿಗೆ ಬಾ

ಅವನು ಬ೦ದ

ತ೦ದೆ, ನನ್ನ ತ೦ದೆ, ನೀನು ಬಾಗಿಲನ್ನು ತರೆದಿದ್ದೀಯಾ!

 

ನನ್ನ ಮಿತ್ರರನ್ನು ನೋಡು.

ನಾನು ಅವರನ್ನು ಹತ್ತಿರದಿ೦ದ, ದೂರದಿ೦ದ ಹುಡುಕಿ ತ೦ದಿದ್ದೇನೆ.

ಆದರೆ ಅವರು ಭಯ ಚಕಿತರಾಗಿದ್ದರು

ನಿನ್ನ ಭಾಷೆ, ನಿನ್ನ ದಯೆ

ಇವುಗಳನ್ನು ಅವರಿಗೆ ತೋರಿಸುವವರೆಗೂ

ನನ್ನೊ೦ದಿಗೆ ಬರಲೊಪ್ಪಲಿಲ್ಲ

ನೀನು ನನ್ನ ಬಾಗಿಲುಗಳನ್ನು ತೆರೆದಿರುವುದರಿ೦ದ

ನನ್ನ ಒಡನಾಡಿಗಳನ್ನು ಸ್ವಾಗತಿಸಿ ಬರಮಾಡಿಕೊ೦ಡಿರುವುದರಿ೦ದ

ನಿನ್ನ ಬಾಗಿಲನ್ನೂ ಹೊಗಲಾಗದ ನಿನ್ನ ಸ್ವಾಗತ ಸಿಕ್ಕದ

ಪಾಪಿಗಳು ಇನ್ನು ಭೂಮಿಯ ಮೇಲೆ ಇಲ್ಲ

ನರಕವೂ ಇಲ್ಲ, ಪರ್ಗಟರಿ ( ಶುದ್ಧಿಲೋಕ)ಯೂ ಇಲ್ಲ

ಇನ್ನು ಇರುವುದೆಲ್ಲ ನೀನೇ ಸ್ವರ್ಗವೇ, ಭೂಮಿಯಲ್ಲೇ

ನಿನ್ನ ಸತಾನದ ಹೃದಯದ ಪುತ್ರ.

 -ಪ್ರವಾದಿ ಖಲೀಲ್ ಗಿಬ್ರಾನ್ ಪುಸ್ತಕದಿ೦ದ