Wednesday, 14 November 2012

ತಾಯ್ನುಡಿ


ಬೆಂಗಳೂರಿನಂತಹ ಕಾಸ್ಮೊಪಾಲಿಟನ್ ನಗರಗಳಲ್ಲಿನ ತಾಯ್ತಂದೆಯರು ತಮ್ಮ ಮಗು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರೆ ಒಂದು ರೀತಿಯ ಪರಮಾನಂದ ಅನುಭವಿಸುತ್ತಾರೆ. ಅವರ ಮಕ್ಕಳು ತಮಗೆ ತಮ್ಮದೇ ತಾಯ್ನುಡಿ ಗೊತ್ತಿಲ್ಲ ಎಂದು ಬಲು ಹೆಮ್ಮೆಯಿಂದ ಹಾಗೂ ಯಾವುದೇ ಮುಜುಗರವಿಲ್ಲದೆ ಹೇಳುವುದನ್ನು ಕಂಡಾಗ ಅಥವಾ ನಾವು ಕನ್ನಡಾನ ಮನೇಲಷ್ಟೇ ಮಾತಾಡ್ತೀವಿ, ಓದೋಕೆ ಬರೆಯೋಕಂತೂ ಬರೊಲ್ಲ ಬಿಡಿ ಎಂದಾಗ ಪಿಚ್ಚೆನಿಸಿದರೂ ಕಠೋರ ಸತ್ಯವನ್ನು ಅರಗಿಸಿಕೊಳ್ಳದೇ ಇರಲಾಗದುಕೆಲ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ನೀತಿನಿಯಮಾವಳಿಗಳು ತಾಯ್ನುಡಿಯನ್ನು ಮಕ್ಕಳು ಉಪೇಕ್ಷಿಸುವುದಕ್ಕೆ ಪೂರಕವಾಗಿವೆ. ಮಕ್ಕಳು ಇಂಡಿಯನ್ ಭಾಷೆಗಳಲ್ಲಿ ಮಾತಾಡುತ್ತಿದ್ದರೆ ಐರೋಪ್ಯ ನುಡಿಯಾದ ಇಂಗ್ಲಿಷನ್ನು ಕಲಿಯುವುದಕ್ಕೆ ತೊಡಕಾಗುತ್ತದೆ ಎಂಬುದು ಶಿಕ್ಷಕರ ವಾದ. ಅವರ ವಾದ ಸರಿಯಾದುದೇ. ಏಕೆಂದರೆ ನಮ್ಮ ದೇಶದ ನುಡಿಗಳ ವಾಕ್ಯರಚನೆಗೂ ಐರೋಪ್ಯ ನುಡಿಗಳ ವಾಕ್ಯರಚನೆಗೂ ಅಗಾಧ ವ್ಯತ್ಯಾಸವಿದೆ. ಅಷ್ಟಕ್ಕೂ ಐರೋಪ್ಯ ಭಾಷೆಗಳಲ್ಲಿ ನುರಿತಿರಬೇಕಾದರೆ ಮನಸ್ಸು ನುಡಿಯಲ್ಲೇ ಯೋಚಿಸಬೇಕಾಗುತ್ತದೆ. ವಾಸ್ತವವಾಗಿ ನಾವು ನೀವೆಲ್ಲ ಏನು ಮಾತನಾಡಬೇಕು ಎಂಬುದನ್ನು ನಮ್ಮ ತಾಯ್ನುಡಿಯಲ್ಲಿ ಯೋಚಿಸಿ ಆಮೇಲೆ ಅದನ್ನು ಇಂಗ್ಲಿಷ್ ಮುಂತಾದ ಪರಕೀಯ ನುಡಿಗಳಲ್ಲಿ ವ್ಯಕ್ತಪಡಿಸುತ್ತೇವೆ. ತಾಯ್ನುಡಿಯನ್ನೇ ಇಂಗ್ಲಿಷ್ ಮಾಡಿಬಿಟ್ಟರೆ, ಇಂಗ್ಲಿಷಿನಲ್ಲೇ ಯೋಚಿಸಬಹುದಲ್ಲವೇ?

ವಾದವನ್ನು ವಿಶ್ಲೇಷಿಸುವ ಮುನ್ನ ತಾಯ್ನುಡಿ ಎಂದರೇನೆಂದು ತಿಳಿದುಕೊಳ್ಳೋಣ. ಒಂದು ಮಗು ತಾನು ಹುಟ್ಟಿದಾಗಿನಿಂದ ಬುದ್ದಿ ಬೆಳವಣಿಗೆಯಾಗುವವರೆಗೆ ತನ್ನ ಅಮ್ಮನಿಂದ, ತನ್ನ ಆಪ್ತರಿಂದ ಹಾಗೂ ಸುತ್ತಲಿನ ಪರಿಸರದಿಂದ ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ಗುರುತಿಸುತ್ತಾ, ನುಡಿಯನ್ನು ಕಲಿಯತೊಡಗುತ್ತದೆ ನುಡಿಯ ಮೂಲಕ ಸಿಹಿ-ಕಹಿ, ಬೇಕು-ಬೇಡ, ಇಷ್ಟಾನಿಷ್ಟ, ನೋವು-ನಲಿವು, ಬಿಸಿ-ತಂಪು ಮುಂತಾದವುಗಳನ್ನು ತಾನಾಗಿ ಅರಿತು ಬೌದ್ಧಿಕವಾಗಿ ಬೆಳೆಯತೊಡಗುತ್ತದೆ. ನುಡಿಕಲಿಕೆಯ ಪ್ರಾಥಮಿಕ ಹಂತದಿಂದ ಶಾಲಾ ಹಂತಕ್ಕೆ ಬಂದಾಗಲೂ ಕೂಡ ಅದು ತನಗೊದಗಿದ ಪ್ರಪ್ರಥಮ ನುಡಿಯಲ್ಲೇ ಯೋಚಿಸುತ್ತದೆ ಹಾಗೂ ಎದುರಾದ ವ್ಯಕ್ತಿಯೊಂದಿಗೆ ಸಂಭಾಷಿಸಲಾರಂಭಿಸುತ್ತದೆ. ಪ್ರಾಥಮಿಕ ಚಿಂತನಾ ನುಡಿಯನ್ನೇ ಮೂಲನುಡಿ, ಬೇರುನುಡಿ ಅಥವಾ ತಾಯ್ನುಡಿ ಎನ್ನುತ್ತೇವೆ.
ಒಂದು ಬುನಾದಿಯಲ್ಲಿ ನಾವು ಚಿಂತಿಸಿದಾಗ ಯಾರಾದರೂ ತಮ್ಮ ತಾಯ್ನುಡಿಯಲ್ಲಿ ಮಾತಾಡೋದಿಲ್ಲ ಎಂದರೆ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಕಡಿದುಕೊಳ್ಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಏಕೆಂದರೆ ನಮ್ಮ ಅನಿಸಿಕೆ, ನೋವು ನಲಿವು, ಪ್ರೀತಿ ಮಮತೆ ಇತ್ಯಾದಿಗಳನ್ನು ನಾವು ಆಂತರ್ಯದಿಂದ ಅಭಿವ್ಯಕ್ತಿಸಬೇಕಾದಲ್ಲಿ ಹೃದಯದ ಮಾತೇ ಮುಖ್ಯವಾಗುತ್ತದೆ ಹೊರತು ಇತರೆಲ್ಲ ಮಾತುಗಳು ಶುಷ್ಕವಾದ ಅಭಿನಯವಾಗುತ್ತದಷ್ಟೆ

ಆದರೂ ಕೆಲವರು ತಮ್ಮ ತಾಯ್ನುಡಿಗಿಂತಲೂ ತಾವು ವ್ಯವಹರಿಸುವ ನುಡಿಯಲ್ಲೇ ತಾದಾತ್ಮ್ಯ ಗಳಿಸಿಕೊಂಡು ಅದನ್ನೇ ತಮ್ಮ ಹೃದಯಕ್ಕೆ ಹತ್ತಿರಾಗಿಸಿಕೊಂಡಿರುತ್ತಾರೆ. ಅಯ್ಯಂಗಾರ, ತಿಗುಳ, ಸಂಕೇತಿ ಮುಂತಾದ ಜನಾಂಗದವರು ತಮ್ಮ ಮೂಲನುಡಿಗಿಂತಲೂ ಕನ್ನಡದಲ್ಲೇ ತಾದಾತ್ಮ್ಯ ಹೊಂದಿರುವುದನ್ನು ಕಂಡಿದ್ದೇವೆ. ಇನ್ನು ಕೆಲವರು ತಾಯ್ನಾಡಿನಿಂದ ಹೊರಗೆ ನೆಲೆಗೊಂಡು ಅಲ್ಲಿನವರನ್ನೇ ಮದುವೆಯಾಗಿ ಅಲ್ಲಿನ ನುಡಿಯನ್ನೇ ತಮ್ಮ ನುಡಿಯನ್ನಾಗಿ ಅಳವಡಿಸಿಕೊಂಡಿರುವುದನ್ನೂ ಕಂಡಿದ್ದೇವೆ. ನಿಟ್ಟಿನಲ್ಲಿ ಚಿಂತಿಸಿದಾಗ ತಾಯ್ನುಡಿಯು ವಂಶವಾಹಿಯಾಗಿ ಬರದೆ ಬಾಲ್ಯದ ನುಡಿಗಲಿಕೆಯ ಸಂದರ್ಭದಲ್ಲಿ ಹೆಚ್ಚಾಗಿ ಕಿವಿ ಮೇಲೆ ಬಿದ್ದ ನುಡಿಯೇ ತಾಯ್ನುಡಿ ಎಂದು ಭಾವಿಸಬೇಕಾಗುತ್ತದೆ. ಮಗು ಪದಸಂಪತ್ತನ್ನು ಪಡೆದು ಅದರಲ್ಲೇ ತನ್ನ ಭಾವನೆಗಳನ್ನು ಹೊರಹಾಕುತ್ತದೆ.

ಕೊಸರು: ಎಷ್ಟೇ ನುಡಿಗಳನ್ನು ರೂಢಿಸಿಕೊಂಡು ಎಷ್ಟೇ ನಿರರ್ಗಳವಾಗಿ ಮಾತನಾಡಿದರೂ ಮನುಷ್ಯನ ಸುಷುಪ್ತಿಯ ನುಡಿಯೇ ಬೇರೆಯಾಗಿರುತ್ತದೆ. ಅದು ಅಂತರಾತ್ಮಕ್ಕಷ್ಟೇ ಗೊತ್ತು. ಅದೇ ಮನುಷ್ಯನನ್ನು ನಿರಂತರ ಮುನ್ನಡೆಸುತ್ತದೆ. ನುಡಿಗೆ ಧ್ವನಿಯಿಲ್ಲ, ಲಿಪಿಯಿಲ್ಲ, ವ್ಯಾಕರಣವಂತೂ ಇಲ್ಲವೇ ಇಲ್ಲ. ಕಿವುಡ ಮೂಕರಿಗೂ ನುಡಿ ಗೊತ್ತು. ಆತ್ಮವಿದ್ದವರೆಲ್ಲ ನುಡಿಗೆ ಸ್ಪಂದಿಸುತ್ತಾರೆ.

-ಮರಿಜೋಸೆಫ್ 

ಕನ್ನಡ ಯಾರು ಓದುತ್ತಾರೆ ಬಿಡ್ರಿ ? ಇದು ಓದುತ್ತಿರೋದೇ ಅಲ್ವೇ????

"ಕನ್ನಡ ಯಾರು ಓದುತ್ತಾರೆ ಬಿಡ್ರಿ, ಈಗೀಗ ಕನ್ನಡ ಓದುವವರೇ ಇಲ್ಲಾ" ಎಂಬ ಮಾತುಗಳು ಬಹಳ ವರ್ಷದಿಂದ ಕೇಳುತ್ತಲೇ ಬರುತ್ತಿದೆ.ಆದರೆ ಅದೇ ಕನ್ನಡದಲ್ಲಿ ಯಾರು ಬರೆಯುತ್ತಾರೆ ಬಿಡ್ರಿ ಎನ್ನುವ ಮಾತು ಅಷ್ಟಾಗಿ ಕೇಳಿಬರುವುದಿಲ್ಲ.  ಅದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಓದುವವರಿಲ್ಲ ಎಂಬುವುದನ್ನು ನಂಬುವುದು ಸ್ವಲ್ಪ ಕಷ್ಟವೇ.ತುಂಬಾ ಓದುವವರನ್ನೇನೋ ನೋಡಿದ್ದೇನೆ, ಆದರೆ ಅಂಥವರನ್ನು ತುಂಬಾ ನೋಡಿಲ್ಲ. ಹಾಗೆಂದ ಮಾತ್ರಕ್ಕೆ ತುಂಬಾ ಓದಿಕೊಂಡಿರುವವರು ತುಂಬಾ ಇಲ್ಲಾ ಎಂದಲ್ಲ, ನಾನು ತುಂಬಾ ನೋಡಿಲ್ಲ ಎಂದೆ ಅಷ್ಟೇ. ಆದರೂ ತುಂಬಾ ಜನ ಕನ್ನಡ ಓದುತ್ತಿದ್ದಾರೆ ಎಂಬುದು ಮಾತ್ರ ನನಗೆ ಗ್ಯಾರಂಟಿ. ಈ ಮೇಲಿನ ಸಾಲುಗಳಲ್ಲಿ ’ತುಂಬಾ’ ಎಂಬ ಪದ ತುಂಬಾ ಕಡೆ ಬಳಕೆಯಾಗಿದ್ದಕ್ಕೆ ಕ್ಷಮೆಯಿರಲಿ. ಅಲ್ಲೆಲ್ಲಾ ’ಬಹಳ’ ಅಂಥ ಬಳಸಬಹುದಿತ್ತು ಆದರೆ ’ತುಂಬಾ’ ಅನ್ನೋದೆ ಯಾಕೋ ತುಂಬಾ ಆತ್ಮೀಯ. ಕನ್ನಡ ಇನ್ನೂ ಹಲವಾರು ಜನರು ಓದುತ್ತಿದ್ದಾರೆ ಎನುವುದಕ್ಕೆ ನನ್ನದೇ ಆದ ಕಾರಣಗೆಳಿವೆ. 

http://bangalore.citizenmatters.in/blogs/25-check-outs
ನಿಜ ಹೇಳಬೇಕೆಂದರೆ ನನ್ನ ಪರಿಚಯದ ಗೆಳೆಯರ ಬಳಗದಲ್ಲಿ, ಓದುವವರಿಗಿಂತ ಬರೆಯುವವರೇ ಹೆಚ್ಚು. ಹಾಗೆಂದರೆ ಆ ಬರೆಯುವ ಗೆಳೆಯರು ಓದುವುದಿಲ್ಲ ಎಂದಲ್ಲ ಅಥವಾ ಅವರು ಬರೆಯುವಷ್ಟು ಓದುವುದಿಲ್ಲ ಅಂತನೂ ಅಲ್ಲಾ. ಓದುವ ಗೆಳೆಯರಿಗಿಂತ ಬರೆಯುವ ಗೆಳೆಯರ ಹೆಚ್ಚಿನ ಸಂಖ್ಯೆ ಎಂಬುದಷ್ಟೇ ನನ್ನ ಉದ್ದೇಶ. ಈ ಗೆಳೆಯರು ಬರೆದಿದ್ದೆಲ್ಲಾ ಒಂದಷ್ಟು ಜನ ಓದುತ್ತಾರೆ ಎಂದುಕೊಂಡರೂ ಆ ಒಂದು ವೃತ್ತದಲ್ಲೇ ಸುಮಾರು ಓದುಗರು ಇದ್ದಾರೆ ಎಂದು ಖಾತ್ರಿಯಾಯಿತು. ಮೊದಲೇ ಹೇಳಿದಂತೆ ಓದುವವರನ್ನೂ ಅಷ್ಟಾಗಿ ವ್ಯಯಕ್ತಿಕವಾಗಿ ನೋಡಿಲ್ಲವಾದರೂ ಈ ಬರೆಯುವವರ ಸಂಖ್ಯೆಯ ಮೇಲೆ ಓದುವವರಿದ್ದಾರೆ ಎಂಬ ಗ್ಯಾರಂಟಿಯಿದೆ. ಮಿನಿಮಮ್ ಗ್ಯಾರಂಟಿ ಇಲ್ಲದಿದ್ದರೆ ಅವರಾದರೂ ಯಾಕೆ ಬರದಾರು? ಇನ್ನೂ, ನಾನು ಬರೆದಿದ್ದಕ್ಕೆ ಹೆಚ್ಚೇನು ಪ್ರತಿಕ್ರಿಯೆ ಬರುವುದಿಲ್ಲವಾದರಿಂದ ಅದೆಷ್ಟು ಜನ ನನ್ನ ಲೇಖನಗಳನ್ನು ಓದುತ್ತಾರೆ ಎಂಬುದರ ಬಗ್ಗೆ ನನಗೇ ಜಿಜ್ಞಾಸೆ ಇದೆ, ಹಾಸ್ಯ ಲೇಖನಗಳನ್ನು ಬರೆದಾಗ ಚೆನ್ನಾಗಿ ಬರೆಯುತ್ತೀರಾ ಎಂದು ಕೆಲವರು ಹಾಸ್ಯ ಮಾಡುವುದನ್ನು ಬಿಟ್ಟರೆ ಗಂಭೀರ ಲೇಖನಗಳನ್ನು ಯಾರು ಗಂಭೀರವಾಗಿ ಪರಗಣಿಸಿದ್ದು ಕಂಡಿಲ್ಲ. 

ಇನ್ನೂ "ಕನ್ನಡ ಯಾರು ಓದುತ್ತಾರೆ ಬಿಡ್ರಿ" ಎಂಬ ಮಾತಿಗೆ ಬಂದರೆ, ಕನ್ನಡ ಓದುವವರಿಲ್ಲದೆ ಅಷ್ಟೊಂದು ಪುಸ್ತಕಗಳು ಬರುತ್ತಿವೆಯೇ? ಅದರಲ್ಲೂ ಈಗಿನ ಕೆಲವು ಕನ್ನಡ ಲೇಖಕರು ಬರೆಯುತ್ತಿರುವ ವೇಗ ನೋಡಿದರೆ ಗಾಬರಿಯುಕ್ತ ಸಂತೋಷವಾಗುತ್ತದೆ. ಮಗದೊಮ್ಮೆ ಸಂತೋಷಭರಿತ ಗಾಬರಿಯಾಗುತ್ತದೆ.ನಮ್ಮ ಜೋಗಿ ಅವರನ್ನೇ ತೆಗೆದುಕೊಳ್ಳಿ, I mean ಉದಾಹರಣೆ ತೆಗೆದುಕೊಳ್ಳಿ. ಅಗಲೇ 27 ಪುಸ್ತಕಗಳಾಯಿತಂತೆ. ಅವರ ಅಪ್ಪಟ ಅಭಿಮಾನಿಯಾದ ನನ್ನಂತವನೇ ಇನ್ನೂ ಎಂಟೋ ಹತ್ತೋ ಓದಿರಬೇಕು ಅಷ್ಟರಲ್ಲಿ 27 ಅಂತೆ. ಅಬ್ಬಾ. ಇನ್ನೂ ರವಿ ಬೆಳೆಗೆರೆ ಅವರು ಬರೆಯುತ್ತಿರುವ ರಭಸ ನೋಡಿದರೆ ಹೇಗಪ್ಪ ಎಲ್ಲಾ ಓದಿ ಮುಗಿಸೋದು ಎನ್ನುವ ಗೊಂದಲ. ಇತರ ಲೇಖರರೂ ಏನೂ ಕಮ್ಮಿ ಇಲ್ಲ ಬಿಡಿ. ಮೊನ್ನೆ ಹಿರಿಯ ಗೆಳೆಯರೊಬ್ಬರ ತಮ್ಮ ಪುಸ್ತಕವೊಂದು ಕನ್ನಡ ಸರ್ಕಾರದ ಗ್ರಂಥಾಲಯ ಇಲಾಖೆಗೆ ಆಯ್ಕೆ ಆಯಿತೆಂದು ತಿಳಿಸಿ, ಅದನ್ನು ಅವರು ಪ್ರಕಟಿಸುವ ಪಟ್ಟಿಯಲ್ಲಿ ನೋಡಿ ಖಾತ್ರಿ ಮಾಡಕೊಳ್ಳಬೇಕೆಂದು ನನ್ನನ್ನು ವಿನಂತಿಸಿದರು. ಅಷ್ಟೇ ಅಲ್ವೇ? ಆಯ್ತು ಬಿಡಿ ಸಾರ್ ಎನ್ನುತ್ತಾ ಪಟ್ಟಿಯ ಲಿಂಕ್ ತೆರೆದು ನೋಡಿ ಗಾಬರಿ ಆಯಿತು, ಈ ವರ್ಷ ಆಯ್ಕೆಯಾದ ಪುಸ್ತಕ ಪಟ್ಟಿಯಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚು ಪುಸ್ತಕಗಳು. ಅಬ್ಬಾ ಎಷ್ಟು ಸಮೃದ್ಧವಾಗಿದೆ ನಮ್ಮ ಪುಸ್ತಕ ಪ್ರಪಂಚ. ಬರೆದ ಲೇಖಕರು, ಟೈಪ್ ಮಾಡಿದವರು, ಅದನ್ನು ಪ್ರಕಾಶಿಸಿದವರು, ಪ್ರೂಫ್ ನೋಡಿದವರು,ಪ್ರಿಂಟ್ ಮಾಡಿದವರು, ಬೈಂಡ್ ಮಾಡಿದವರು, ಆಯ್ಕೆ ಮಾಡಿದವರು, ನನ್ನಂತೆ ಪಟ್ಟಿ  ನೋಡಿ ಗಾಬರಿ ಬಿದ್ದವರು, ಆಯ್ಕೆಯಾದ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಜೋಡಿಸುವವರು, ಅದಕ್ಕೆ ಲೇಖಕರಿಗೆ ಚೆಕ್ ತಯಾರು ಮಾಡುವವರು, ಇವರೆಲ್ಲರ ಸಂಖ್ಯೆ ಏನು ಚಿಕ್ಕದೆ? ಅಬ್ಬಾ ಕನ್ನಡ ಪುಸ್ತಕ ಜಗತ್ತೇ ಎನಿಸಿತು!!!!!

ಹಾಗೆಯೇ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಆದ ಅನುಭವ ಮರೆಯಲು ಸಾಧ್ಯವೇ? ಪುಸ್ತಕ ಮಳಿಗೆಗಳಲ್ಲಿ ಕಂಡ ಅಪಾರ ಜನ ಜಂಗುಳಿ ನೋಡಿ  ನನಗೆ ಉಬ್ಬಸ ಬಂದು ಬಿಟ್ಟಿತ್ತು. ಸಂತೋಷ ಆದಾಗ ಅನಂದ ಬಾಷ್ಪ ಬರುವುದು ಸರಿ, ಹೃದಯ ಉಕ್ಕಿ ಬರುವುದು ಇನ್ನೂ ಸರಿ, ಇದಾವುದು ಉಬ್ಬಸ ಅಂದುಕೊಂಡಿರಾ?ಪುಸ್ತಕ ಮಳಿಗೆಯಲ್ಲಿ ವ್ಯವಸ್ಥೆ ಏನೋ ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ನೆಲಕ್ಕೆ ಏನೂ ಹಾಸಿರಲಿಲ್ಲ, ಇಲ್ಲಾ ಹಾಸಿದ್ದು ಜನರ ಉತ್ಸಾಹಕ್ಕೆ ಚೆಲ್ಲಾಪಿಲ್ಲಿಯಾಗಿತ್ತೋ ಏನೋ. ಮಣ್ಣಿನ ನೆಲದಿಂದ ಏಳುತ್ತಿದ್ದ ಧೂಳಿಗೆ ತತ್ತರಿಸಿಹೋಗಿದ್ದೆ. "ಈ ಕನ್ನಡ ಮಣ್ಣಿನ ಘಮವೇ" ಅಂತದ್ದು ಅಂತ ವೇದಿಕೆಯಲ್ಲಿ ಸಾಹಿತಿಯೊಬ್ಬರು ಮಾಡುತ್ತಿದ್ದ ಭಾಷಣ ಕೇಳಿ ಮೊದಮೊದಲು ಒಂದೆರೆಡು ಸಾರಿ ದೀರ್ಘ್ಹವಾಗಿ ಉಸಿರೆಳೆದುಕೊಂಡೆ ನೋಡಿ, ಅದೆಲ್ಲಿತ್ತೋ ಕೆಮ್ಮು ನಾಭಿಯಿಂದ ಹೊರಟು ಬಾಯಿಂದ ಹೊರ ಹೊಮ್ಮುವಷ್ಟರಲ್ಲಿ ಕೈಯಲ್ಲಿದ್ದ ಡಿಸ್ಕೌಂಟಲ್ಲಿ ಪಡೆದ ಅಷ್ಟು ಪುಸ್ತಕಗಳು ನೆಲಕ್ಕೆ ಬಿದ್ದವು.ತೆಗೆದು ಕೊಳ್ಳೋಣ ಅಂತ ಬಗ್ಗಿದ್ದೇ ತಪ್ಪಾಗಿಹೋಯಿತು. ಹಿಂದೆ ಯಾರೋ ತಳ್ಳಿದ್ದಂತಾಯಿತು. ಮುಂದೆ ನನಗಿಂತ ಮುಂಚೆ ನೆಲಕ್ಕೆ ಬಿದ್ದವರು ಕೈಹಿಡಿದು ನೆಲಕ್ಕೆ ಎಳೆದುಕೊಂಡರು. ಪುಸ್ತಕ ಮಳಿಗೆಯೊಂದರ ಕ್ಯಾಶಿಯರ್ ಮುಂದೆ ಸಾಷ್ಟಾಂಗ ನಮಸ್ಕ್ರಾರ ಮಾಡಿದಾಯ್ತು. ಪಾಪ ಅವರಿಗೆ ಅವರ ಕಂಪ್ಯೂಟರಿನ ವಯರ್ ಎಲ್ಲೆ ಎಳೆದುಬಿಡುವೆನೋ ಎಂಬ ಗಾಬರಿ. "ಈ ಮಣ್ಣಿನ ಋಣ ಮರೆತರೆ ಅವನಿಗಿಂತ ನಿರ್ಭಾಗ್ಯ ಇನ್ಯಾರಿಲ್ಲ" ಎನ್ನುತ್ತಿದ್ದ ಭಾಷಣ ಸಾಹಿತಿಯ ಮಾತು ಬೇಡವೆಂದರೂ ಕೇಳಿಸುತ್ತಿತ್ತು. ಬಟ್ಟೆಗೆ ಅಂಟಿಕೊಂಡಿದ್ದ ಮಣ್ಣಿನ ಋಣವನ್ನು ನಿಧಾನವಾಗಿ ಒದರುತ್ತಾ ಏಳುತ್ತಿದ್ದಂತೆ ಆ ಮಳಿಗೆಯ ಓನರ್ ’ಇರಲಿ ಇರಲಿ ನಮಗ್ಯಾಕಪ್ಪ ನಮಸ್ಕ್ರಾರ’ ಎಂಬ ಮುಖ ಭಾವದಲ್ಲಿ ನನ್ನ ಭುಜ ಹಿಡಿದು ಎಬ್ಬಿಸಿದರು. "ಬುಕ್ಸ್ ಬುಕ್ಸ್ ಹುಷಾರೀ" ಅಂತ ಇನ್ಯಾರೋ ಅಂದರು. ’ಮುಗಿಬಿದ್ದು ಕನ್ನಡ ಪುಸ್ತಕ ಖರೀದಿಸಿದ ಕನ್ನಡ ಜನತೆ’ ಎಂಬ ಮಾರನೆಯ ದಿನದ ದಿನಪತ್ರಿಕೆಯ ಹೆಡ್ಡಿಂಗನ್ನು ನನ್ನ ನೋಡಿಯೇ ಬರೆದರೇನೋ? ಕನ್ನಡ ಪುಸ್ತಕ ಪ್ರಿಯರು ಇನ್ನೂ ಅಪಾರ ಸಂಖ್ಯೆಯಲ್ಲಿ ಇದ್ದಾರೆ ಎಂಬುದಕ್ಕೆ ಆ ದಿನವೇ ಸಾಕ್ಷಿ . ಕೆಲವೊಂದು ಸತ್ಯಗಳು ಎದ್ದಿರುವಾಗಿಂತಲೂ ಬಿದ್ದಾಗಲೇ ಅರಿವಾಗುವುದು. ಹಾಗೆ ಎದ್ದ ನಾನು ಈ ವಿಷಯದಲ್ಲಿ ಮತ್ತೆ ಬಿದ್ದಿಲ್ಲ. 

ಇನ್ನೂ ಗಾಂಧಿನಗರದ ಪುಸ್ತಕ ಮಳಿಗೆಯೊಂದಕ್ಕೆ ಹೋದಾಗ ಬೈಕ್ ಗೆ ಪಾರ್ಕಿಂಗ್ ಸಿಗಲಿಲ್ಲ. ಅಲ್ಲೇ ಪಕ್ಕದ ಹೋಟೆಲ್ಲಿನ ಜಾಗದಲ್ಲಿ ಪಾರ್ಕಿಂಗ್ ಸಿಕ್ಕಿತು. ಹಾಗದರೆ ಒಂದು ಹೋಟೆಲಿಗಿಂತ ಪುಸ್ತಕ ಮಳಿಗೆಗೆ ಹೆಚ್ಚು ಮಂದಿ ಹೋಗುತ್ತರೆಯೇ ಎಂಬ ಅನುಮಾನ ಕಾಡಲು ಶುರುವಾಯಿತು. ಇದು ಜ್ಞಾನದ ಹಸಿವು ಹೆಚ್ಚುತ್ತಿರುವ ಸಂಕೇತವೇ ಎಂಬ ಮತ್ತೊಂದು ಪ್ರಶ್ನೆ ಎದುರಾಯಿತು.Food for thought ಎಂದು ಕೊಂಡು ಮುಂದೆ ನಡೆದಾಗ ಎಲ್ಲರ ಮನೆಯಲ್ಲೂ ಹೆಂಡತಿಯೋ,ತಾಯಿಯೋ ಅಡುಗೆ ಮಾಡೇ ಮಾಡುತ್ತಾರೆ, ಅದೇ ಎಲ್ಲಾ ಮನೆಯಲ್ಲೂ ಹೆಂಡತಿ, ತಾಯಿ ಪುಸ್ತಕ ಬರೆಯುವುದಿಲ್ಲವಲ್ಲ ಎಂಬ ಉತ್ತರ ಹೊಳೆಯಿತು. ಮಾಡಿದ ಅಡುಗೆ ತಿನ್ನುವುದಲ್ಲದೇ ಹೆಂಡತಿ ಬರೆದದ್ದನ್ನು....... ಓಕೆ ಬೇಡ. ಬಿಡಿ.

ಕಳೆದ ವರ್ಷ ಸಮ್ಮೇಳನದಲ್ಲಿ ಖರೀದಿಸಿದ ಅಷ್ಟೂ ಪುಸ್ತಕಗಳಲ್ಲಿ ಹೆಚ್ಚಿನವನ್ನು ಇನ್ನೂ ಓದೇ ಇಲ್ಲಾ, ಸಮಯ ಸಿಕ್ಕಾಗ ಓದಬೇಕು ಎಂದುಕೊಳ್ಳುತ್ತಲೇ ತುಂಬಾ ಸಮಯವಾಗಿದೆ. ಓದಲು ಕುಳಿತಾಗ ಬರೆಯಬೇಕು ಅನಿಸುತ್ತದೆ, ಬರೆಯಬೇಕಾದಾಗ ಓದಬೇಕು ಅನ್ನಿಸುತ್ತದೆ. Atleast ಬರೆದದ್ದನ್ನೇ ಒಮ್ಮೆ ಓದಿಕೊಂಡರೆ, ಬರೆದಿದ್ದರಲ್ಲಿ ಇಷ್ಟೆಲ್ಲಾ ತಪ್ಪುಗಳಿರುತ್ತಿರಲಿಲ್ಲವೇನೋ? 


"ಕನ್ನಡ ಪುಸ್ತಕ ತಗೋತ್ತಾರೆ, ಆದ್ರೆ ಯಾರ್ ಓದ್ತಾರೆ ಬಿಡಿ" ಅನ್ನೋದು ಲೇಟಸ್ಟ್ ಮಾತು. ಏನಂತೀರ? 

ಕನ್ನಡ ಎನೆ ಕಿವಿ ನಿಮಿರುವುದು"


"ಕನ್ನಡ ಎನೆ ಮನ ಕುಣಿಯುವುದು
ಕನ್ನಡ ಎನೆ ಕಿವಿ ನಿಮಿರುವುದು"

ಇದು ಕುವೆಂಪು ಬರೆದ ಒಂದು ಕಾವ್ಯದ ಪ್ರಸಿದ್ಧ ಸಾಲು. ತಾವು ಪದ್ಯಗಳನ್ನು ಗೀಚುವ ಗೀಳಿಗೆ ಅಂಟಿಕೊಂಡಾಗ, ಇಂಗ್ಲೀಷ್ ನ ವ್ಯಾಮೋಹ ಅವರನ್ನು ಬಹಳವಾಗಿ ಅಪ್ಪಿಕೊಂಡಿತ್ತು. ಅಷ್ಟೆ ಏಕೆ ಮೊದಮೊದಲು ಕವನಗಳನ್ನು ಸಹ ಆಂಗ್ಲದಲ್ಲಿ ಬರೆದರು. ಒಂದು ಕವನ ಸಂಕಲನವಾಗಿ ಹೊರತಂದ್ದಿದರು. ಬಹುಷಃ ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಬದುಕುತ್ತಿದ್ದ ನಮ್ಮವರಿಗೆ ಎಲ್ಲೆಲ್ಲೂ ಇಂಗ್ಲೀಷ್ ನ ಭಾಷೆ, ಶೈಲಿ, ಉಡುಪು ಮತ್ತು ಅವರ ಸಂಸ್ಕೃತಿ ಆಕರ್ಷಿಸದೆ ಇದ್ದಿರಲಾರದು. ಇಂತಹ ಸಂದರ್ಭದಲ್ಲಿ ಕುವೆಂಪು ಆಂತಹ ಕುವೆಂಪುರವರಿಗೇ ಆ ಮೋಹ ವ್ಯಾಪಿಸಿತ್ತು ಕೂಡ.

ಕ್ರಮೇಣ ಕನ್ನಡದ ಬಗ್ಗೆ ಇರಬೇಕಾದ ಔನತ್ಯ, ಅಂತಃಕರಣ, ಕಾಳಜಿಯಂತಹ ಒಂದು ಹಿತನುಡಿಯಿಂದ ಮುಂದೆ ಕುವೆಂಪುರವರು ಕನ್ನಡದಲ್ಲಿ ಪ್ರಾರಂಭಿಸಿದ ತಮ್ಮ ಕಾವ್ಯಮಯ ಜೀವನ ಕನ್ನಡಕ್ಕೊಂದು ನೆಲೆಗಟ್ಟು ಕಟ್ಟಿಕೊಡುವಲಿ ಯಶಸ್ವಿಯಾಯಿತು. ಅಷ್ಟೆ ಏಕೆ ಕನ್ನಡವನ್ನು ಉತ್ಕೃಷ್ಟವಾಗಿ ಪ್ರೀತಿಸುವುದು ಅಂದರೆ ಏನು ಅನ್ನುವುದಕ್ಕೆ ಕುವೆಂಪುರವರ ಈ ಮೇಲಿನ ಕಾವ್ಯ ಸಾಲುಗಳು ಸಾಕು.

ಇದು ಕೇವಲ ಗುರುವಿನ ಹಿತನುಡಿಗೆ ಹುಟ್ಟಿದ ಲೇಪನವಲ್ಲ ಅಥವಾ ಕನ್ನಡ ಜನತೆಯಿಂದ ಮೆಚ್ಚುಗೆ ಪಡೆಯುವ ಸಲುವಾಗಿ ಬರೆದದ್ದಲ್ಲ. ತನ್ನ ಆಂತರ್ಯದಿಂದ ಉಕ್ಕಿ ಬರುವ ಕನ್ನಡದ ಮೇಲಿನ ಪ್ರೇಮದ ಸಿರಿ ಆ ಸಾಲುಗಳು. ಆ ಪ್ರೇಮದ ಫಲವೇ ಮುಂದೊಂದು ದಿನ ಕುವೆಂಪು ಎಂದರೆ "ಕನ್ನಡದ ಪ್ರತೀಕ" ಎನ್ನುವಷ್ಟು ನಾಡಿನ ಮನ ಮಿಡಿತಗಳಲ್ಲಿ ಧೃಡವಾಗಿಹೋದರು. ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ತಾವು ನೀಡಿದ ಸೇವೆಯಿಂದಿಡಿದು ಕನ್ನಡಕ್ಕೆ ಪ್ರಥಮ ಭಾರತೀಯ ಜ್ನಾನಪೀಠ ಪ್ರಶಸ್ತಿಯನ್ನು ದಕ್ಕಿಸಿಕೊಡುವವರೆಗೂ ಸಂಪೂರ್ಣ ನಾಡಿಗರಾಗಿ ದುಡಿದರು. ವೈಚಾರಿಕತೆಗೆ ಒತ್ತುಕೊಟ್ಟು ವಿಶ್ವಮಾನವರಾಗಿ ಎಂಬ ಸಂದೇಶವನು ನೀಡಿದ್ದು ಸಹ ಈ ಮಣ್ಣಿನ ಗುಣವನ್ನು ಅವಗಣಿಸಿಕೊಂಡಿದ್ದಾಗಲೇ. ಇಂತಹ ಚಿತ್ತಸಜ್ಜಿತವಾದ ಕನ್ನಡ ಪ್ರೇಮ ಹುಟ್ಟಿದು ಆಕಸ್ಮಿಕವಂತೂ ಖಂಡಿತ ಅಲ್ಲ, ಲಾಭಿಗಾಗಿ ಮತ್ತೂ ಅಲ್ಲ. ರನ್ನತ್ರಯರಿಂದ ಆದಿಯಾಗಿ ಕುಮಾರ ರಾಘವಾಂಕರ, ರಾಜ ವೀರಮಲ್ಲರ, ಅಕ್ಕ, ಸರ್ವ, ಕನಕ ಪುರಂದರದಾಸರುಗಳು ಹಾದುಹೋದ ಇತಿಹಾಸವನ್ನು ಪಠಿಸಿದ್ದರಿಂದ. ಜೊತೆಜೊತೆಯಲಿ ಮಹಾನ್ ಕನಸುಗಾರ ಸರ್ ವಿಶ್ವೇಶ್ವರಯ್ಯ, ಸೈದ್ಧಾಂತಿಕ ರಾಜಕಾರಿಣಿ ನಿಜಲಿಂಗಪ್ಪ, ಸಂಗೀತ ಸಾಮ್ರಾಜ್ನೆ ಗಂಗೂಬಾಯಿ ಹಾನಗಲ್ ನಾಟಕ ಬ್ರಹ್ಮ ಗುಬ್ಬಿವೀರಣ್ಣ ವೀಣೆಶೇಷಣ್ಣರಂತವರ, ಸಹಪಾಠಿಗಳಾದ ಪದಬ್ರಹ್ಮ ಬೇಂದ್ರೆ, ಕನ್ನಡದ ಆಸ್ತಿ ಮಾಸ್ತಿಯರಂತಹವರು ಮಾಡಿದ ಸಾಧನೆಗಳನ್ನು ಅವಲೋಕಿಸುವುದರ ಮೂಲಕ ಕನ್ನಡದ ಕಂಪನ್ನು ಅಸ್ವಾದಿಸಿದರು.

ಮಲೆನಾಡಿನ ಸೊಬಗಿಗೆ ಗಂಧದ ಪರಿಮಳಕ್ಕೆ ಸಹ್ಯಾದ್ರಿಯ ಸಾಲು ಬೆಟ್ಟದ ಶೃಂಗಾರಕ್ಕೆ ಕರಾವಳಿ ತೀರದ ಮೌನಕ್ಕೆ ಮನಸೋತರು. ಪಟ್ಟದಕಲ್ಲು ಐಹೊಳೆ ಅಜಂತ ಎಲ್ಲೊರದ ವಾಸ್ತುಶಿಲ್ಪದಲ್ಲಿನ ಉತ್ತಮಿಕೆ, ಹಂಪಿ ಹಳೆಬೀಡು, ಗೊಮ್ಮಟದಂತ ಅದ್ಭುತ ಕಲಾಕೆತ್ತನೆ, ಗೊಲ್ಗುಂಬಜ್: ಮೈಸೂರು ಅರಮನೆಗಳ ನಿರ್ಮಾಣಗಳನ್ನು ಆಧ್ಯಾತ್ಮಿಸಿದರು. ಮೌರ್ಯ ಕದಂಭಾದಿ, ಹೊಯ್ಸಳ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ನಮ್ಮ ನಾಡಿನ ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ನೀಡಿದ ಕೊಡುಗೆಗಳನ್ನು ಮಾನದಂಡವನ್ನಾಗಿಸಿಕೊಂಡು ಪರಿಶೀಲಿಸಿದರು. ಆಗುಂಬೆ ಜೋಗಿನ ಸಿರಿ ಸಕಲವನ್ನು ಧ್ಯಾನಿಸಿದರು.

ಒಟ್ಟಾರೆ ಕರ್ನಾಟಕದ ಸರ್ವಕಾಲಿಕ ಸಂಸ್ಕೃತಿಯನ್ನು ಮತ್ತು ಶ್ರೀಮಂತಿಕೆಯನ್ನು ಬಿಡಿಬಿಡಿಯಾಗಿ ಅಧ್ಯಯಿನಿಸಿ ಆಕರ್ಷಿತರಾದರು. ಕನ್ನಡಗ್ರಂಥಮಾಲಿಕೆಗಳಲ್ಲಿ ಶ್ಲೋಕ ವಚನಗಳಲಿ ಉಕ್ತಿಗಳಲಿ ಪವಡಿಸಿದರು. ಇದೆಲ್ಲದರ ಪ್ರಭಾವವೇ ಅದೊಂದು ದಿನ ಬರೆದ "ಕನ್ನಡ ಎನೆ ಮನ ಕುಣಿಯುವುದು ಕನ್ನಡ ಎನೆ ಕಿವಿ ನಿಮಿರುವುದು" ಎಂಬ ಅಭಿಮಾನದ ನುಡಿ.

ಆದರೆ ಪ್ರಸ್ತುತ ದಿನಗಳಲಿ ಕನ್ನಡವು ಅವನತಿಯ ದಾರಿ ತುಳಿದಿದೆ ಎಂಬ ಆತಂಕ, ಕಾಳಜಿ ಇರುವ ಮನಗಳನ್ನು ಕಾಡುತ್ತಿರುವುದು ಮಾತ್ರ ಸುಳ್ಳಲ್ಲ. ಕಾರಣ ಮಹಾನ್ ಚೇತನ ಕುವೆಂಪುರನ್ನು ಒಳಗೊಂಡು ಇನ್ನೂ ಆನೇಕ ಕರ್ನಾಟಕರತ್ನವರ್ಯರ ಆದರ್ಶಮಯ ಬದುಕನ್ನು ಈಗಿನ ತಾಂತ್ರಿಕ ಪೀಳಿಗೆ ಆಶ್ವಾದಿಸುವುದರಲ್ಲಿ ವಿಫಲವಾಗಿದೆ. ಎಲ್ಲರು ಕುವೆಂಪು, ಡಾ. ರಾಜ್ ಕುಮಾರ್ ಅಗುವುದು ಸಾಧ್ಯವಾಗದೇ ಇರಬಹುದು  ಕನಿಷ್ಟ ಪಕ್ಷ ನಮ್ಮ ತಾಯ್ನೆಲ ತಾಯ್ನಾಡಿನ ಬಗ್ಗೆ ಅಚಲ ವಿಶ್ವಾಸ, ನಿಶ್ಚಲ ಪ್ರೀತಿ ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ನಾಡಿನ ಇತಿಹಾಸ ಸಂಸ್ಕೃತಿ ಹೋರಾಟ ಚರಿತ್ರೆಗಳ ಮೇಲೆ ಬೆರಳಾಡಿಸಬೇಕಾಗಿದೆ. ಆಗ ಮಾತ್ರ "ಕನ್ನಡ ಎನೆ ಮನ ಕುಣಿಯುವುದು ಕನ್ನಡ ಎನೆ ಕಿವಿ ನಿಮಿರುವುದು" ಎಂಬ ಸಾಲಿಗೆ ಅರ್ಥಸಿಗುವುದು. ನಮ್ಮ ಕನ್ನಡ ಪ್ರೀತಿಗೆ ಪ್ರತಿಫಲ ದೊರೆಯುವುದು.

-ಸಂತೋಷ್.
!

ವಿಮೋಚನೆ


ಈ ಹಿಂದೆ ಪ್ರಕಟವಾಗಿದ್ದ ಕವಿತೆ, ಮರು ಓದಿಗೆ

ಹಲೋ ಅನು…
ವಿಮೋಚನೆ ಬಗ್ಗೆ ಮೂಡಿದ ಕೆಲವು ಸಾಲುಗಳು

ಬುದ್ಧ ಹೇಳಿದ,..
ಆಸೆಗಳಿಗೆ ತಳವಿಲ್ಲದಂತಾಗಲಿ
ನಿನ್ನ ಬದುಕಿನ ಪಾತ್ರೆ…
ಕಾಣುವುದು ಆಗ ಬದುಕು ವಿಮೋಚನೆಯ ಸವಿನಿದ್ರೆ

ಇನ್ನೊಬ್ಬ ಗುರು ಹೇಳಿದ,..
ಅಜ್ಞಾನದ ಕೋಣೆಯ ಬಿಟ್ಟು
ಜ್ಞಾನ ಕೋಣೆಯ ಕಡೆಗೆ ಗುರಿಯಿಟ್ಟು
ನಡೆದು ಸೇರುವುದೇ ವಿಮೋಚನೆಯ ಗುಟ್ಟು..

ವಿಮೋಚನೆಯ ಪ್ರತಿಪಾದಕ ದೈವಶಾಸ್ತ್ರಜ್ಞ ಹೇಳಿದ..
ಅಸಮಾನತೆ, ಶೋಷಣೆ ಜಗತ್ತು ಕೊನೆಗೊಂಡು
ಹೂಸ ಜಗತ್ತು ಸೃಷ್ಟಿಗೊಂಡು
ದೇವರಾಜ್ಯದ ಪ್ರತಿಬಿಂಬವಾಗುವುದೇ ವಿಮೋಚನೆಯ ಒಗಟ್ಟು..

ನಾನು ನನ್ನನೇ ಕೇಳಿದೆ…
ವಿಮೋಚನೆ ಎಂದರೇನು?
ನನ್ನ ಮರೆತು ಇನ್ನೊಬ್ಬನಿಗೆ ಸಹಾಯ ಹಸ್ತಚಾಚುವಾಗ..
ಭಯ ಮರೆತು ದಬ್ಬಾಳಿಕೆಯ ವಿರುದ್ಧ ದನಿ ಎತ್ತುವಾಗ
ಕಳವಳ ಬಿಟ್ಟು ಇನ್ನೊಬ್ಬನಲ್ಲಿ ವಿಶ್ವಾಸವಿರುಸುವಾಗ..
ಹೀಗೆ ಬದುಕಿನ ಪ್ರತಿಕ್ಷಣದ ದಂದ್ವದಲ್ಲಿ..
ಕೆಟ್ಟತನ ಬಳಲಿ ಸೋತು ತನ್ನಲ್ಲಿ
ಒಳ್ಳೆತನ ಗೆಲ್ಲುವುದೇ ವಿಮೋಚನೆ… ಅದೇ ನಿಸ್ವಾರ್ಥ.. ನ್ಯಾಯ…ವಿಶ್ವಾಸ… ಮಾನವೀಯತೆ
ಆದ್ದರಿಂದ ವಿಮೋಚನೆಂಬುವುದು….
ದೂರದ ಮಾತಲ್ಲ.. ತಲುಪುವ ಸ್ಥಳವಲ್ಲ
ಅದು ಪ್ರತಿಕ್ಷಣದ ಗೆಲ್ಲುವು..ಕ್ಷಣ ಹೆಜ್ಜೆಯ ಒಲವು…

ಜೋವಿ
Read more!

ಕ್ರಿಕೆಟ್ ಹಾಗೂ ನವೆಂಬರ್ 15

ಕರ್ನಾಟಕ ಹಾಗೂ ಕ್ರಿಕೆಟ್‌ಗೂ ಒ೦ದು ಅವಿನಾಭಾವ ಸಂಬಂಧ. ಅದು ಕೇವಲ ಕರ್ನಾಟಕದಿಂದ ಭಾರತವನ್ನು ಪ್ರತಿನಿಧಿಸಿದ ನಮ್ಮ ಕ್ರಿಕೆಟಿಗರ ಸಂಖ್ಯೆಗೆ ಮಾತ್ರ ಸೀಮಿತವಾಗಿಲ್ಲ. ಘೆನ್ತ್ಲೆಮೆನ್ಸ್ ಘಮೆ ಎಂದೇ ಕರೆಸಿಕೊಳ್ಳುವ ಈ ಆಟವನ್ನುನಿಜಕ್ಕೂ Gentlemenಗಳ ರೀತಿಯಲ್ಲಿ ಆಡಿದವರು ನಮ್ಮ ಕರ್ನಾಟಕದ ಆಟಗಾರರು. ಅಂತಹ ಆಟಗಾರರಲ್ಲಿ ಇಂದಿಗೂ ಇಡೀ ಕ್ರಿಕೆಟ್ ವಿಶ್ವವೇ ಪ್ರೀತಿಯಿಂದ ನೆನಸಿಕೊಳ್ಳುವ ಆಟಗಾರನೆಂದರೆ ನಮ್ಮ ಜಿ.ಆರ್.ವಿಶ್ವನಾಥ್, ಎಲ್ಲರ ಪ್ರೀತಿಯ ವಿಶಿ.  


ವಿಶ್ವನಾಥ್ ಎಂದಾಕ್ಷಣ ಅವರ ಸ್ಕ್ವೇರ್ ಕಟ್, ಡೆಲಿಕೆಟ್ ಕಟ್, ಡ್ರೈವ್‌ಗಳು ಎಷ್ಟು ಪ್ರಸಿದ್ಧವೋ ಅಂತೆಯೇ  ವಿನಯ, ಒಳ್ಳೆಯತನ ಹಾಗೂ ಕ್ರೀಡಾ ಮನೋಭಾವಕ್ಕೂ ವಿಶಿ ಅಷ್ಟೇ ಪ್ರಸಿದ್ಧರು. ಒಂದರ್ಥದಲ್ಲಿ ಇಡೀ ಕರ್ನಾಟಕ ಕ್ರಿಕೆಟಿನ, ಕ್ರಿಕೆಟ್ ಬಳಗದ ಸಾಂಸ್ಕೃತಿಕ ರಾಯಭಾರಿ ನಮ್ಮ ವಿಶಿ. ಅದೇ  ಪರಂಪರೆಯನ್ನು ಉಳಿಸಿಕೊಂಡು ಬಂದವರು ನಮ್ಮ ಕುಂಬ್ಳೆ, ಶ್ರೀನಾಥ್, ವೆಂಕಿ, ಡ್ರಾವಿಡ್‌ನಂಥವರು. ವಿಶ್ವನಾಥ್ ಆಡಿದ ರಾಜ್ಯದಿಂದ ಬಂದವರು ಎಂದ ಮೇಲೆ ವಿನಯ, ಕ್ರೀಡಾ ಮನೋಭಾವ ಇರಲೇಬೇಕು ಎಂದು ನಿರೀಕ್ಷಿಸುವಷ್ಟು ಪ್ರಸಿದ್ಧಿ ನಮ್ಮ ವಿಶಿಯದು.  ಇದೇ ಮನೋಭಾವದ, ಮನಸ್ಸಿನ ಆಟಗಾರ ಸಚಿನ್ ತೆಂಡೂಲ್ಕರ್. ವಿಶಿ ಹಾಗೂ ಸಚಿನ್  ಅಂತರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣ ಮಾಡಿದ್ದು ನವೆಂಬರ್ 15ರಂದೇ. ತನ್ನ ಅತ್ಯದ್ಭುತ ಕಲಾತ್ಮಕ ಆಟದಿಂದ ಆಪಾರ ಸಾಧನೆ, ದಾಖಲೆ, ಪ್ರೀತಿ ಗಳಿಸಿದ ಸಚಿನ್ ಪಾದಾರ್ಪಣೆ ಮಾಡಿದ 20 ವರ್ಷಗಳ ಹಿಂದೆ ಅಂದರೆ 1969 ರಲ್ಲಿ ಪ್ರಾರಂಭವಾದದ್ದು ವಿಶಿಯ ಕಾವ್ಯದಂಥ ಅಂತರಾಷ್ಟ್ರೀಯ ಕ್ರಿಕೆಟ್ ಜೀವನ. ಸಚಿನ್‌ನದು ಪಾಕಿಸ್ತಾನದ ಎದುರಾದರೆ, ವಿಶಿಯದು ಆಸ್ಟ್ರೇಲಿಯ ವಿರುದ್ಧ. ಕಾಕತಾಳಿಯವೋ ಅಥವಾ ದಿನದ ಮಹಿಮೆಯೋ, ಭಾರತ  ಕಂಡ ಇಬ್ಬರು ಮಹಾನ್ ಕಲಾತ್ಮಕ ಆಟಗಾರರು ಕ್ರಿಕೆಟಿಂದ ಜಗವನ್ನು ಬೆಳಗಿಸಲು ಪ್ರಾರಂಭಿಸಿದ್ದು ಒಂದೇ ದಿನ.

ಕ್ರಿಕೆಟ್ ಆಟವನ್ನು ಹೇಗೆ ಆಡಬೇಕು, ಮೈದಾನದ ಒಳಗೂ, ಹೊರಗೂ ಹೇಗೆ ನಡೆಸುಕೊಳ್ಳಬೇಕು ಎನ್ನುವುದಕ್ಕೆ ದೊಡ್ಡ ಮಾದರಿ ಈ ಇಬ್ಬರು ಕ್ರಿಕೆಟಿಗರು. 91 ಟೆಸ್ಟ್ ಹಾಗೂ 25 ಒಂದು ದಿನದ ಪಂದ್ಯಗಳನ್ನಾಡಿದ ವಿಶಿ, ಇತರರು ಕಷ್ಟ ಪಡುತ್ತಿದ್ದ, ತಿಣುಕಾಡುತ್ತಿದ್ದ ಪಿಚ್‌ಗಳಲ್ಲಿ ಲೀಲಾಜಲವಾಗಿ ಆಡುತ್ತಿದ್ದವರು. ವಿಶಿಯ ಆಟವನ್ನು ಕಣ್ಣಾರೆ ಕಂಡವರ ಬಣ್ಣನೆಯನ್ನು ಕೇಳುವುದೇ ಒಂದು ಸೊಗಸು. ಇನ್ನೂ ಸಚಿನ್ ಗಳಿಸಿರುವ ರನ್ನುಗಳು, ಮಾಡಿರುವ ಸಾಧನೆ, ದಾಖಲೆಗಳು ಎಲ್ಲರಿಗೂ ತಿಳಿದ ವಿಷಯವೇ. ಕೇವಲ 14 ಶತಕಗಳನ್ನು ಗಳಿಸಿದರೂ ವಿಶಿಯ ಆಟಕ್ಕೆ ವಿಶೇಷವಾದ ಮೆರಗು. 1978ರ ಸರಣಿಯಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ 124 ರನ್ನುಗಳ ಇನ್ನಿಂಗ್ಸನ್ನು ಭಾರತ ನೆಲದಲ್ಲಿ ಯಾವುದೇ ಆಟಗಾರ ಆಡಿದ  ಅತ್ತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದು ಪರಿಗಣಿಸಲಾಗುತ್ತದೆ. ತಮ್ಮ ಕ್ರೀಡಾ ಮನೋಭಾವಕ್ಕೆ ಹೆಸರಾದ ವಿಶಿ ಅಂಪೈರ್ ತೀರ್ಪುಗಳನ್ನು ಎಂದೂ ಪ್ರಶ್ನಿಸಿದವರಲ್ಲ. ಅಂಥಹ ವಿಶಿ ಅದೊಮ್ಮೆ ಅಂಪೈರ್ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳುವ ಘಟನೆ ನಡೆಯಿತು. ಅದು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ.  Golden Jubilee ಟೆಸ್ಟ್ ಎಂದೇ ಕರೆಸಿಕೊಂಡ ಪ್ರತಿಷ್ಟಿತ ಟೆಸ್ಟ್ ಪಂದ್ಯ. ಇಂಗ್ಲೆಂಡಿನ ಬಾಬ್ ಟೇಲರ್‌ಅನ್ನು ಅಂಪೈರ್ ತಪ್ಪಾಗಿ ಔಟ್ ಎಂದು ತೀರ್ಪು ಕೊಟ್ಟಾಗ, ನಾಯಕನಾಗಿದ್ದ ವಿಶ್ವನಾಥ್ ಅವರನ್ನು ವಾಪಸ್ ಕರೆಸಿದರು. ಮುಂದೆ ಇದೇ ಟೇಲರ್, ಬಾಥಮ್ ಜೊತೆ ಸೇರಿಕೊಂಡು ಪೇರಿಸಿದ ರನ್ನುಗಳಿಂದಾಗಿ ಭಾರತ ಆ ಟೆಸ್ಟ್‌ನ್ನು ಸೋಲಬೇಕಾಯಿತು. ಆದರೆ ವಿಶ್ವನಾಥ್ ಹಾಗೂ ಭಾರತ ಇಡೀ ಕ್ರಿಕೆಟ್ ವಿಶ್ವದ ಪ್ರೀತಿ ಹಾಗೂ ಗೌರವವನ್ನು ಗಳಿಸಿ ಆಗಿತ್ತು. 

ಪ್ರಾಯಶ: ಅಂಪೈರ್‌ಗಳ ಕೆಟ್ಟ ತೀರ್ಪಿಗೆ ಬಲಿಯಾದ ಸಂಖ್ಯೆಯಲ್ಲಿ ಸಹಾ ಸಚಿನ್‌ನದೇ ದಾಖಲೆ ಇರಬೇಕು. 90ರ ಆಸುಪಾಸಲ್ಲಿ ಓಟಾದ ಆಟಗಾರರಲ್ಲಿ ಸಹಾ ಸಚಿನ್‌ನದೇ ಅಗ್ರಸ್ಥಾನವಿರಬೇಕು. ಆದರೂ ಒಂದು ದಿನವಾದರೂ ಮೈದಾನದಲ್ಲಿ ತಮ್ಮ ಅಸಮಾಧಾನವನ್ನು ತೋರಿದವರಲ್ಲ ಸಚಿನ್. ಗಳಿಸಿದ ರನ್ನು, ಮಾಡಿದ ಸಾಧನೆಗಳನ್ನು ಮೀರಿ ಜನಮನಗಳಲ್ಲಿ ಭದ್ರವಾದ ಸ್ಥಾನಗಳನ್ನು ಪಡೆದಿರುವಕ್ಕೆ ಕಾರಣ ಇಂಥವುಗಳೇ. ತನ್ನ ಮೇಲೆ ಏನೇ ಅಪವಾದಗಳಿದ್ದರೂ ಅದಕ್ಕೆ ತಮ್ಮ ಬ್ಯಾಟ್‌ನಿಂದಲೇ ಉತ್ತರ ನೀಡುತ್ತಾ ಬಂದಿರುವ ಸಚಿನ್ ಈ ೨೦ ವರ್ಷಗಳಲ್ಲಿ ಬೆಳೆದು ಬಂದಿರುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು.  ತನ್ನ ಯಶಸ್ಸಿನ ಸಂತೋಷವನ್ನು ಹಂಚಿಕೊಳ್ಳಲು ತನ್ನೊಂದಿಗೆ ಕೋಟ್ಯಾಂತರ ಜನರಿರುವಾಗ ಅದಕ್ಕಿಂತ ದೊಡ್ಡ ಸಂತೋಷವೇನಿದೆ ಎಂದಿದ್ದಾರೆ ಸಚಿನ್. ಅಂತೆಯೇ ಅಂದಿನ ಕಾಲದಲ್ಲಿ ರಣಜಿ ಪಂದ್ಯಕ್ಕೇ ಸಾವಿರಾರು ಜನರನ್ನು ಕ್ರೀಡಾಂಗಣಕ್ಕೆ ಬರುವಂತೆ ಮಾಡುತ್ತಿದ್ದ  ವಿಶ್ವನಾಥ್‌ನಂಥ ಆಟಗಾರರು ಇಂದು ಅಪರೂಪ. ರಾಜ್ಯ, ದೇಶವನ್ನೂ ಮೀರಿ ಪ್ರೀತ್ಯಾದರಗಳನ್ನು ಗಳಿಸಿದ ವಿಶಿ, ಸಚಿನ್‌ರಂಥ ಆಟಗಾರರ ಸಂತತಿ ಇನ್ನಷ್ಟು ಹೆಚ್ಚಲಿ ಎಂದು ಹಾರೈಸೋಣ. ಇಂಥಹ ಮಹಾನ್ ಮಾನವೀಯ ಆಟಗಾರರ ಪಾದಾರ್ಪಣಕ್ಕೆ ವೇದಿಕೆಯಾದ ನವೆಂಬರ್ 15ರಂಥ ದಿನಗಳೂ ಕ್ರಿಕೆಟ್‌ನಲ್ಲಿ ಹೆಚ್ಚಲಿ.

- ಸವ್ಯಸಾಚಿ

Friday, 9 November 2012

ದಸರ - ಇದು ಆಸನ ಕಥನ

          ಡವಾಗಿಯಾದರೂ ಮೈಸೂರಿಗೆ ಹೋಗುವ ನಿರ್ಧಾರಮಾಡಿ ಹೋರಟೆಬಿಟ್ಟೆವು. 402ನೇ ದಸರದಲ್ಲಿ ಅಂತಿಂಥ ಯಾವ ವಿಶೇಷಗಳು ಮೇಳೈಸದಿರುವ ಸೂಚನೆ ಇದ್ದರೂ  ಬಲರಾಮನ ಬದಲಿಗೆ ಅರ್ಜುನ ಈ ಬಾರಿಯ ಅಂಬಾರಿ ಹೊರುತ್ತಾನೆ. ಆತ ದೈತ್ಯನಂತೆ ಬಲರಾಮನಿಂತ ಕೊಂಚ ಉದ್ದ ಮತ್ತು ತೂಕ ಉಳ್ಳವನಂತೆ. ಆದರೆ ಬಲುತುಂಟ, ಮುಂಗೋಪಿ ತನ್ನ ಹಳೇ ಮಾವುತನನ್ನೆ ಕೊಲೆ ಮಾಡಿದ ಕೊಲೆಪಾತಕ. ಇಂತಹ ಕಾರಣಗಳಿಂದಲೇ ದಸರೆ ಗಜಪಡೆಯಿಂದ ಡಿಬಾರ್ ಆಗಿದ್ದನಂತೆ. ಅನಿವಾರ್ಯವಾಗಿ ಈತನಿಗೆ ಅಂಬಾರಿ ಹೊರುವ ಅವಕಾಶ ಬಂದಿದೆ. ಬಲರಾಮ ಅಂಬಾರಿ ಹೊತ್ತುಹೋಗುವಾಗ ಆತನನ್ನು ಮುಟ್ಟಿ ಚಾಮುಂಡಿಯನ್ನು ನೆನೆಯುತ್ತಿದ್ದ ಜನ, ಈ ಬಾರಿ ಅಂಬಾರಿ ಹೊರುವ ಅರ್ಜುನನ ಬಳಿ ಸುಳಿಯಲು ಸಾದ್ಯವಿಲ್ಲ. ಅವನ ತಂಟೆ ತಕರಾರುಗಳು ಸಲ್ಲದಾದ್ದರಿಂದ ಅವನ ಸುತ್ತ ಪ್ಯಾರ ಮಿಲಿಟರಿ, ಬಂದೂಕುದಾರಿಗಳು, ಕಟ್ಟಿಹಾಕುವ ಬಿರಿಹಗ್ಗ, ಅವ್ವಳಿಕೆ ಚುಚ್ಚುಮದ್ದು ಇತ್ಯಾದಿಗಳ ಸಿದ್ಧ ಪಡೆ ಇರಲಿದೆಯಂತೆ ಎಂಬೆಲ್ಲ ಸುದ್ದಿ ಓದಿ ಈ ಬಾರಿಯ ಅಂಬಾರಿ ಮೆರವಣಿಗೆಯನ್ನು ನೇರವಾಗಿ ನೋಡಲೆಬೇಕೆಂದು ಕೌತುಕಿಸಿದ ಮನಸ್ಸು ನೆಚ್ಚಿನ ನಾಯಕನ ಚಲನಚಿತ್ರದ ಬಿಡುಗಡೆಗೆ ಕಾದಂತೆ ಆಗಿತ್ತು.

ಅಂತೂ ಇಂತೂ ನಮ್ಮ ನೆಂಟರಿಸ್ಥರೊಬ್ಬರ ಸಹಾಯದಿಂದ ಅಂಬಾರಿ ಹೋಗುವ ಹಾದಿಯ ಇಕ್ಕೆಲಗಳಲ್ಲಿ ಅದಾಗಲೇ ಕಿಕ್ಕಿರಿದು ತುಂಬಿದ್ದ ಜನರ ನಡುವೆ ಬೇಡುವಂತ ದೀನ  ಮುಖಮಾಡಿ ಸ್ವಲ್ಪ, ಸ್ವಲ್ಪ, ಸ್ವಲ್ಪ ಅನ್ನುತ್ತಲೆ ಸಾಕಾಗುವಷ್ಟು ಜಾಗ ಗಿಟ್ಟಿಸಿಕೊಂಡು ಕೂತುಬಿಟ್ಟೆವು. ಇದು ನಿಜಕ್ಕೂ ಹಿಮಾಲಯ ಹತ್ತಿ ಹಿರಿಹಿಗ್ಗುವ ಸಂತೋಷ. ಆದರೆ ಅಲ್ಲಿಂದಾಚೆಗಿನದೆ ಸಶೇಷ. ಡಬ್ಬದಲ್ಲಿ ಕೂತ ಗಿಫ್ಟುಗಳಂತೆ ಸುತ್ತಲು ಅಚ್ಚುಕಟ್ಟಾಗಿ ಪ್ಯಾಕ್ ಅಗಿತ್ತು. ಆಗ ಸಮಯ 1:30 ರ ಮಧ್ಯಾಹ್ನ. ಸಾಲು ಮರಗಳ ಮಧ್ಯೆ ಪ್ರಖರವಾದ ಬಿಸಿಲು. ಅಲ್ಲಿ ಕೂತವರನ್ನು ನೋಡಿ ಪಾಪ ಎಂದು ಮರುಕಪಟ್ಟುಕೊಳ್ಳುತ್ತಿದ್ದೆವು. ಅಲ್ಲಿದ್ದ ಎಲ್ಲರನ್ನು ಗಮನಿಸುವ ಗುರುತಿಸುವ ವ್ಯವದಾನ ನಮಗೆ. ಏಕೆಂದರೆ ಅಂಬಾರಿ ಆ ಸ್ಥಳಕ್ಕೆ ಬಂದು ತಲುಪಲು 4 ರ ತಿಳಿ ಸಂಜೆ ಆದೀತು ಎಂದು ತಿಳಿದವರು ಹೇಳುತ್ತಿದ್ದರು. ಪಕ್ಕದಲ್ಲಿ ಇದ್ದವರು ಪಕ್ಕದ ಮನೆಯವನಂತಾಗಿ ಹೋದ. ಅಲ್ಲೊಬ್ಬ ಇಲ್ಲೊಬ್ಬ ಇದ್ದ ವಿದೇಶಿಯರನ್ನು What? Where You? Mysore Good? ಎಂದೆಲ್ಲ ಮಾತನಾಡಿಸುತ್ತ ತಿಳಿದ ಇಂಗ್ಲೀಷ್ ಪದಗಳಲ್ಲೆ ಮೈಸೂರನ್ನು ವರ್ಣಿಸಿ ಹೇಳುತ್ತಿದ್ದ ಸ್ಥಳಿಯರ ಔದಾರ್ಯ ಮೆಚ್ಚಲೇಬೇಕು. ಊಟದ ಸಮೇತ ಊರ ಮುಂಚಿತವಾಗಿ ಬಂದಿದ್ದ ಹಲವರು ಪೊಟ್ಟಣ ತೆರೆದು ಊಟ, ಇಡ್ಲಿ, ಪಲಾವುಗಳನ್ನು ತಿನ್ನುತ್ತಿದ್ದರು. ಬೀಡಿ ಹಚ್ಚಿದವನು ಜನರಿಂದ ಉಗಿಸಿಕೊಂಡು ಹೊಗೆಯನ್ನು ಹೊರಬಿಡಲಾಗದೆ ಕಣ್ಣುಕಿವಿಯೆಲ್ಲ ಬಿಸಿಯಾಗುತಿದ್ದ ಅವನ ಹಾವಭಾವವೇ ಸಮಯ ಸಾಗಿಸಲಿಕ್ಕೊಂದು ಮೋಜು.  ಬುಟ್ಟಿವ್ಯಾಪಾರಿಗಳಿಂದ ಕಡ್ಲೆಕಾಯಿ, ಕಾರಬೆಳೆ, ಬಟಾಣಿ ಕೊಳ್ಳಲು ಕಾಸನ್ನು ಪಾಸು ಮಾಡುವಾಗಿನ ಜನರ ಸಹಕಾರಕ್ಕೆ ಸಲಾಮು ಹೊಡಿಯಲೆ ಬೇಕು. ಪಾಸು ಮಾಡುವಾಗ ಪುಸಕ್ಕನೆ ಕೈಜಾರಿದ ಒಂದು ರೂಪಾಯಿ ನಾಣ್ಯಕೊಸ್ಕರ ಕೂತವರ ತಳವನೆಲ್ಲ ತಡಕಾಡುವ ಗಾಬರಿ ಅವರ್ಣನೀಯ. ಇನ್ನು ಪ್ರಕೃತಿ ಕರೆದರತ್ತು ಮುಗಿದೆ ಹೋಯಿತು. ಆ ಸಂಕಷ್ಟಕರವಾದ ಸ್ವಂತ ವಿಷಯವನ್ನು ಯಾರೊಂದಿಗೆ ಹೇಳಿಕೊಳ್ಳಲಾದೀತು?. ಅಲ್ಲಿಗೆ ಎದುರುಬದಿಯಲ್ಲಿ ಬಿಸಿಲಿನಲ್ಲಿ ಕೂತವರನ್ನು ಕಂಡು "ಪಾಪ" ಎಂದು ಮರುಕಪಟ್ಟುಕೊಳ್ಳುತಿದ್ದುದನ್ನು ನಿಲ್ಲಿಸಿಬಿಟ್ಟೆವು.

ಜಾತ್ರೆಯ ತುಂಬೆಲ್ಲ ಪೊಂ ಪೊಂ ಪೀಪಿಗಳದ್ದೆ ಸದ್ದು. ಪೋಲಿಸರದ್ದು ಕೇವಲ ವಾಕಿ ಅಂಡ್ ಟಾಕಿ. ಜಲಮಂಡಳಿಯ ಲಾರಿ, ಅಗ್ನಿಶಾಮಕ ಗಾಡಿ ಸೈರನ್ ಮಾಡಿ ನಮ್ಮನ್ನು ಆಗಾಗೇ ಕಿವಿಹಿಂಡಿ ಹೋಗುತ್ತಿದ್ದವು. ಎರಡುಮೂರು ಬಾರಿ ಆಂಬುಲೆನ್ಸ್ ಹೋದಾಗಲಂತೂ ಜನರು ಅಲೆ ಎದ್ದಂತೆ ಎದ್ದು ಕೂತರು. ಇಷ್ಟೆಲ್ಲದರ ಮಧ್ಯೆ NCC ಶಾಲಾಮಕ್ಕಳು ಓಡಿ ಬಂದು ರಸ್ತೆಯ ಬದಿಗಳಲ್ಲಿ ಸಾಲುಗಟ್ಟಿ ನಿಲ್ಲುವಾಗ ಆಂಬಾರಿಯೇ ಬಂತೆಂಬಂತೆ ಓ ಗುಟ್ಟಿದ್ದು ನಿತ್ರಾಣಿಗಳಿಗೆ ಪುನರ್ಶ್ಚೇತನದ ಅನುಭವ. ಅಷ್ತರಲ್ಲಾಗಲೆ. 4:30 ಕಳೆದಿದ್ದ ಸಮಯ. ನಂದಿಕಂಬದ ಗೆಜ್ಜೆಗಳು ಜಲ್ ಜಲ್ ಸದ್ದಿನೊಂದಿಗೆ ಬರತೊಡಗಿದವು. ಕೂತ್ತಿದ್ದ ಜನರು ತಾಳ್ಮೆಕಳೆದು ಎದ್ದು ನಿಲ್ಲಲು ಅವಣಿಸುತಿರುವಾಗ ಹಿಂದಿನಿಂದ ಏರುದನಿಯಲ್ಲಿ ಗದರಿಸಿ ಎಲ್ಲರನ್ನು ಕೂರಿಸಿ ಒಂದು ಒಪ್ಪಂದಕ್ಕೆ ಬರಲಾಯಿತು. "ಯಾರೂ ಸಹ ಎದ್ದು ನಿಲ್ಲುವಂತಿಲ್ಲ ಇದರಿಂದ ಹಿಂದೆ ಕುಳಿತಿರುವವರಿಗೆ ತೊಂದರೆಯಾಗುತ್ತದೆ" ಎಂದು ಈ ಒಪ್ಪಂದದ ಸಾರಾಂಶ. "ಅವರು ಮನುಷ್ಯರೆ" ಎಂಬ ಭಾವನಾತ್ಮಕ ಮಾತು ಈ ಒಪ್ಪಂದಕ್ಕೆ ಸ್ಪೂರ್ತಿ. ಹಲವು ಗಂಟೆಗಳಿಂದ ಕಾದಿದ್ದ ಆ ದಿವ್ಯ ಕ್ಷಣ ಬಂದೇಬಿಟ್ಟಿತು. 'ನಿಶಾನೆ ಆನೆ'ಯಾಗಿ ಬಹಳ ಮೆಚ್ಚುಗೆಗೆ ಪಾತ್ರನಾಗಿದ್ದ ಬಲರಾಮ ದಾಂಡಿಡುತ್ತಾ ಬಂದೆಬಿಟ್ಟ. ಕಣ್ಣು ಮನಸ್ಸೆಲ್ಲ ಒಮ್ಮೆಲೆ ಪುಳಕಿತವಾಗಿ ಹೋಯಿತು. ಹಿಂದಿಂದೆಯೇ ಗಜದಂಪತಿಗಳು, ಡೊಳ್ಳುಕುಣಿತ, ತೊಗಲುಗೊಂಬೆಧಾರಿಗಳು, ಕೃಷ್ಣನ ಸ್ವರೂಪಿ, ಯಕ್ಷಗಾನಿಗಳು, ನಗಾರಿ ತಮಟೆಗಳು ಎಲ್ಲವೂ ಹಾದುಹೋದವು. ಕತ್ತುಹಿಗ್ಗಿಸಿ ಕಾದ ಕಣ್ಣುಗಳಿಗೆ ಎಲ್ಲವನ್ನು ತುಂಬಿಸಿಕೊಳ್ಳುವ ಚಟುವಟಿಕೆ. ನೆರೆದವರೆಲ್ಲರ ಕೈಯಲ್ಲಿ ಮೊಬೈಲ್. ನೋಡಿ ಆನಂದಿಸುವುದಕ್ಕಿಂತ ಮೊಬೈಲ್ ನಲ್ಲಿ ಚಿತ್ರಿಕರಿಸುವ, ಪೋಟೊ ತೆಗೆಯುವ ವಿವಿಧ ಆಂಗಲ್ ನಲ್ಲಿ ಕ್ಲಿಕ್ಕಿಸುವ ಕ್ರಿಯಾತ್ಮಕತೆಯೆ ಜಾಸ್ತಿ ವ್ಯಕ್ಯವಾಗುತ್ತಿತು.
ಭವ್ಯ ಎನ್ನುವಂತ ಸ್ತಬ್ಧಚಿತ್ರಗಳು ಸಾಗಿ ಬಂದವು. ಒಂದಕ್ಕಿಂತ ಒಂದು ಸುಂದರ ಮತ್ತು ವಿಶಿಷ್ಟ.  ಯಾವ ಜಿಲ್ಲಾಪಂಚಾಯಿತಿಯದು ಹೆಚ್ಚು ಮನೋಹರ ಎಂದು ವರ್ಗೀಕರಿಸಲಾಗದಷ್ಟು ವಿಭಿನ್ನ. ಎಲ್ಲವೂ ಅಚ್ಚುಕಟ್ಟಾಗಿ ರೂಪತಳೆದಿರುವ ಕಲಾತ್ಮಕತೆ. ನಡುನಡುವೆ ಸಾಗುತ್ತಿದ್ದ ಕಲಾತಂಡದಿಂದ ಸೊಗಸಾದ ಕಲಾಪ್ರದರ್ಶನ ತಾಳ ಅದಬೆರೆತ ಮೇಳ. ಒಟ್ಟು ಇದ್ದ 37 ಸ್ತಬ್ಧಚಿತ್ರಗಳು ಸಾಗುವಷ್ಟರಲ್ಲಿ 5:30ರ ಸಂಜೆ. ಪೋಲಿಸ್ ಬ್ಯಾಂಡ್, ಅದರಿಂದೆ ಮೇಯರ್ ಕುದರೆ ಸವಾರಿ, ಅದರಿಂದೆ ಅಶ್ವದಳ, ಅದರಿಂದೆ ದೊಡ್ಡ ಮಿಲಿಟರಿ ಬೆಟಾಲಿಯನ್, ಅದರಿಂದೆ ಬಂದವನೆ ಗಾಂಬೀರ್ಯ ವದನ, ದೈತ್ಯರೂಪಿ, ಅಜಾನುಬಾಹು ಅರ್ಜುನ. ಅಕ್ಕಪಕ್ಕ ಗಜರಾಣಿರ ಮಧ್ಯೆ ಧಾವಿಸಿ ಬರುತ್ತಿದ್ದ. ಸ್ತಂಬೀಭೂತರಂತಾಗಿದ್ದ ಜನರು ಎಚ್ಚರಗೊಂಡವರಂತೆ ಎದ್ದು ನಿಂತು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡಿದರು. ಅವನ ರಾಜಕಳೆಯಿಂದ ಮೆರವಣಿಗೆಗೆ ಮೆರಗು ತಂದಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಹಲವರು ನಿಂತಲ್ಲೇ ತಾಯಿ ಚಾಮುಂಡಿಯನ್ನು ನೆನೆದು ಪುನೀತರಾದರು. ಚಾಮರ ದೂತ್ತೆಂದು ಬೀಸಿ ಹೊದಂತಾದ ಅನುಭವ. ಉಸಿರು ತುಂಬಿ ಬಂತು. ಸುರಕ್ಷತೆಯ ಸಲುವಾಗಿ ಒಂದು ದೊಡ್ಡ ಹಿಂಡೆ ಅವನ ಹಿಂದೆ ಇತ್ತು.
-ಸಂತೋಷ್ ಇಗ್ನೇಷಿಯಸ್,

 Read more!

Friday, 21 September 2012

"ಬಂದ್" ದಿತರಿಗೆ ಬಿಡುಗಡೆ......?

     ಹೋದ್ಯಾ ಪಿಶಾಚಿ ಆದ್ರೆ ಬಂದೆ ಗವಾಕ್ಷಿಲಿ ಅಂತ "ಬಂದ್" ಬಂದು ಮೂರುದಿನ ಆಗಿಲ್ಲ ಆಗಲೇ ಪುನಃ ಬಂದ್ ಅಂತ ಹೇಳ್ತಾರಲ್ಲ ಎಂದು ನನ್ನ ಗೆಳೆಯನೊಬ್ಬ ಸಿಡುಕಿದ. ಸಾಮಾನ್ಯವಾಗಿ ನಮಗೆ ರಜೆ, ತುರ್ತು ರಜೆಗಳು ಖುಷಿಕೊಡುತ್ತವೆ. ಆದರೆ ಇವನ ಈ ಮಾತಿನಿಂದ ಆಶ್ಚರ್ಯವಾಯಿತು. ನಿಜಕ್ಕೂ ಈ ಬಂದ್ ಎಂದರೆ ಏನು? ಏಕೆ? ಮತ್ತು ಹೇಗೆ? ಎಂದು ವಿಚಾರಮಂಥನ ಮಾಡಿದಾಗ ತಿಳಿದದು ಬಂದ್ ಒಂದು ಸಾಮೂಹಿಕ ಪ್ರತಿಭಟನೆ. ತಮ್ಮ ಕೆಲಸಕಾರ್ಯಗಳನ್ನು ಸೇವೆ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅವಿಧೇಯತೆಯನ್ನು ಪ್ರದರ್ಶಿಸುವ ರಾಜಕೀಯ ಪ್ರಕ್ರಿಯೆ. ಮೂಲತಃ ಪ್ರತಿಭಟನೆಯನ್ನು ಬಂದ್ ಹೆಸರಿನಲ್ಲಿ ಕರೆಯುವುದು ಭಾರತ ಹಾಗೂ ನೇಪಾಳದಲ್ಲಿ ರೂಢಿಯಲ್ಲಿದೆ. ಭಾರತಕ್ಕೂ ಬಂದ್ ಗು ಅವಿನಾಭಾವ ಸಂಬಂಧ. ಸಾಮಾನ್ಯವಾಗಿ ಆಡಳಿತ ಪಕ್ಷದ ನಿರ್ಣಯಗಳ ವಿರುದ್ಧ ವಿರೋಧಪಕ್ಷಗಳು ಸಾರುವ ಯುದ್ಧ. ದೇಶದಾದ್ಯಂತ ಕರೆಕೊಡುವ ಈ ಯುದ್ಧಕ್ಕೆ "ಭಾರತ್ ಬಂದ್" ಅಂತಲೇ ಕರೆಯುತ್ತಾರೆ.

         ಮೇ 31 ಕ್ಕೆ ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್ ಬಂದ್ ಆಚರಿಸಿದವು. ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಬಸ್ಸುಗಳು ಎರಡು ದಿನ ಬೀದಿಗಿಳಿಯದೇ ಬಂದ್ ಆಚರಿಸಿದವು.  ಅದಕ್ಕೂ ಮೊದಲು ಭಾರತದಾದ್ಯಂತ ಬ್ಯಾಂಕ್ ಗಳು ಎರಡು ದಿನ ವಹಿವಾಟು ಸ್ಥಗಿತಗೊಳಿಸಿ ಬಂದ್ ನಡೆಸಿತ್ತು. ಸೆಪ್ಟಂಬರ್ 20ರಂದು ಮತ್ತದೇ ಬಂದ್ ವಕ್ಕರಿಸಿದೆ. ಕಾವೇರಿ ವಿವಾದದಲ್ಲಿ ಕಾವೇರಿದ ಹಲವು ದಿನಗಳು ಬಂದ್ ಗೆ ಶರಣಾಗುತ್ತವೆ,. ಹೀಗೆ ಬಂದ್ ಮಾಡುವುದರಿಂದ ಸಾರ್ವಜನಿಕವಾಗಿ ನಮ್ಮ ಆಕ್ರೋಶವನ್ನು, ಒತ್ತಡ ಹೇರುವಂತ ತಂತ್ರವು ಪರಿಣಾಮಕಾರಿಯಾದದ್ದೆ. ಕೈಗೊಂಡ ನಿರ್ಧಾರಗಳ ಮುಂದಿನ ನಡೆಯು ಪರಿಶೀಲನೆಗೆ ಒಳಪಡಬೇಕು ಅಥವಾ ಮುಂದೆ ಎಂದಾದರೂ ಇಂತಹದೇ ವಿಷಯದಲ್ಲಿ ನಿರ್ಣಯಗಳಾಗುವಾಗ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಸೂಚಿಗಳಾಗಬೇಕು ಎಂಬ ಎಚ್ಚರಿಕೆಯ ಬಿಸಿ ಮುಟ್ಟಿಸುವುದು ಪ್ರಜಾಪ್ರಭುತ್ವದ ಬಹುದೊಡ್ಡ ಅಸ್ತ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಮಾಡಿದ್ದು ತಪ್ಪು ಎನಿಸಿದರೆ ಬಂದ್ ಗೆ ಕರೆಗೊಡುತ್ತೇವೆ. ನಮ್ಮ ತಪ್ಪನ್ನು ಮಾಫಿ ಮಾಡಿ ಎಂದು ಬಂದ್ ನಡೆಯುತ್ತದೆ. ಹೊಸತನಕ್ಕೊಂದು ಬಂದ್, ಹೆಸರೇ ಇಲ್ಲದಿರುವ ಕೆಲವು ಬಂದ್. ಇವ ಸೋತದ್ದಕ್ಕೆ ಒಂದು ಬಂದ್, ಅವ ಸತ್ತದಕ್ಕೆ ಒಂದು ಬಂದ್. ಬಂದ್ ಮೇಲೆ ಬಂದ್..!! ನಮ್ಮ ದೇಶದ ಸರ್ವೋಚ್ಚನ್ಯಾಯಲವು ಇಂತಹ ಬಂದ್ ಗಳನ್ನು ನಡೆಸಕೂಡದು ಎಂದು 1998ರಲ್ಲಿ ತಾಕೀತು ಮಾಡಿತ್ತು.  ಮತ್ತೆ 2004ರಲ್ಲಿ ಮುಂಬೈ ಬಾಂಬ್ ದಾಳಿ ವಿರೋಧಿಸಿ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ನಡೆಸಿದ ಬಂದ್ ಗೆ ನ್ಯಾಯಾಲಯ ತೀವ್ರ ಅಕ್ಷೇಪ ವ್ಯಕ್ತಪಡಿಸಿತ್ತು. ಈಗಲೂ ವರ್ಷಕ್ಕೆ 40 ರಿಂದ 50 ಭಾರಿ ಬಂದ್ ಆಚರಿಸುತ್ತದೆ ನಮ್ಮ ಪಶ್ಚಿಮ ಬಂಗಾಳ.

       ಇದೇ ಬಂದ್ ಗಳ ಅಡ್ಡಪಾರಿಣಾಮಗಳು ಜನಸಾಮಾನ್ಯರ ಕಾಲಿಗೆ ಬಂದು ಸುತ್ತಿಕೊಳ್ಳುತ್ತವೆ ಎಂದು ಯೋಚಿಸಿದ್ದೇವಾ? ಇಲ್ಲ. ನಮ್ಮಲ್ಲಿ ಆಕ್ರೋಶ ಮನೆಮಾಡಿರುವುದರಿಂದ ನಮ್ಮ ಮನೆ ಕಿಟಕಿಗಾಜು ಬಾಗಿಲುಗಳನ್ನು ದ್ವ 0ಸ ಮಾಡುತ್ತೇವೆಯೇ ಇಲ್ಲ ಅದರಬದಲು ಸರ್ಕಾರಿ ಕಛೇರಿಗಳ ಮೇಲೆ, ಸಾರ್ವಜನಿಕ ವಾಹನಗಳಿಗೆ ಕಲ್ಲು ತೂರಿ, ರಸ್ತೆ ಅಗೆದು, ಟಯರ್ ಸುಟ್ಟು, ಅಂಗಡೀಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಸಿಸಿ ಬಂದ್ ಆಚರಿಸುತ್ತೇವೆ. ಅಷ್ಟಕ್ಕೂ ಇಲ್ಲಿ ಸಾರ್ವಜನಿಕರು ಯಾರು? ಯಾವುದೋ ಪಕ್ಷ ಅಥವಾ ಸಂಘಟನೆಗಳು ಅಷ್ಟೇ. ಇವರ ಪ್ರತಿಷ್ಟೆಯನ್ನು ತೋರಿಸಲೊ, ಇವರ ಇರುವಿಕೆಯನ್ನು ಪ್ರದರ್ಶಿಸಲೊ ಹುಟ್ಟಿಕೊಳ್ಳುವ ಬಂದ್. ಇಂತಹ ಬಂದ್ ನಿಂದಾಗಿ ದೇಶಕ್ಕಾಗುವ ನಷ್ಟವಾದರೂ ಎಷ್ಟು ಗೊತ್ತೇ? ಬರೊಬರಿ 2500 ಸಾವಿರ ಕೋಟಿಯ ಅಂದಾಜು. ಅಂದರೆ ರಾಜ್ಯದಲ್ಲಿ ಬರ ಬಂದಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪರಿಹಾರಧನವಾಗಿ ಮೀಸಲಿಟ್ಟ ಹಣದ ಮೊತ್ತಕ್ಕೆ ಸಮ. ಇಷ್ಟು ದೊಡ್ಡ ಮೊತ್ತವನ್ನು ಮತ್ತೆ ಗಳಿಸಿಕೊಳ್ಳುಲೇಬೇಕಾದ ಸರ್ಕಾರ ತಮ್ಮ ನೀತಿ ನಿಯಮಾವಳಿಗಳನ್ನು ಮತ್ತಷ್ಟು ಕಠಿಣಗೊಳಿಸುತ್ತದೆ. ಅದು ಹೇಗೆ ಎಂದರೆ ತುಸು ಬೆಲೆ ಏರಿಕೆ, ತೆರಿಗೆ ಹೇರಿಕೆ, ಸೌಲಭ್ಯಗಳಲ್ಲಿ ಕಡಿತ, ಸಬ್ಸಿಡಿಗಳನ್ನು ಮೊಟಕುಮಾಡಿ ಪ್ರತಿಯೊಬ್ಬನ ಭುಜದ ಮೇಲೆ ಹೊರೆಹೊರೆಸಿಬಿಡುತ್ತಾರೆ. ಇದರ ಪರಿಣಾಮ ದೇಶದ GDPಯಲ್ಲಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ.  

           ಅರ್ಥವ್ಯವಸ್ಥೆಯಲ್ಲಿ GDP(Gross Domestic Product) ಎನ್ನುವುದು ಪ್ರತಿಯೊಬ್ಬ ಭಾರತಿಯನ ಸರಾಸರಿ ಜೀವನಮಟ್ಟವನ್ನು ಅಳೆಯುವ ಮಾಪನ. ಭಾರತದ ಆರ್ಥಿಕತೆಯ ಪ್ರಗತಿಯನ್ನು ಈ ಮಾಪನದ ಆಧಾರದಿಂದಲೇ ಗುರುತಿಸಲಾಗುವುದು. ದೇಶದಲ್ಲಿನ ಉತ್ಪನಗಳನ್ನು ಜನರ ಬೇಡಿಕೆಗೆ ತಕ್ಕಂತೆ ಬೆಲೆ ನಿಗದಿಮಾಡಿ ಅದರಿಂದ ಬರುವ ಆದಾಯ ನಡುವಣ ಲೆಕ್ಕಚಾರವೇ GDP. ಸಾಮಾನ್ಯರ ಭಾಷೆಯಲ್ಲಿ "ತಲಾದಾಯ" ಎಂತಲೂ ಕರೆದು ಸರಳೀಕರಿಸಿದ್ದಾರೆ. ಇಂತಹ GDP ಕಳೆದ ವರ್ಷದಿಂದ ಇಳಿಮುಖವಾಗುತಿದೆ. ಜಾಗತಿಕ ಆರ್ಥಿಕಾವಲಯದಲ್ಲಿ 120 ನೇ ಸ್ಥಾನದಲ್ಲಿದ್ದ ಭಾರತದ GDP ಈಗ 140ನೇ ಸ್ಥಾನಕ್ಕೆ ದೂಡಲ್ಪಟ್ಟಿರುವುದು ಶೋಚನೀಯ. ಇದರಿಂದ ರೂಪಾಯಿ ಮೌಲ್ಯವು ಕುಸಿತ ಕಂಡಿದೆ. ಇದೂ ಒಂದು ರೀತಿಯಲ್ಲಿ ಬರ (ಆರ್ಥಿಕ ಬರ). ಇದರ ಬಗ್ಗೆ ಸರ್ಕಾರ ಬಹು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿತ್ತಾದರೂ, ಬಂದ್ ನಂತಹ ಕ್ರಮದಿಂದ ದೇಶದ ಆರ್ಥವ್ಯವಸ್ಥೆಗೆ ಇನ್ನೂ ಹೊಡೆತ ಬೀಳುತ್ತದೆ ವಿನಃ ಮತ್ತೇನೂ ಇಲ್ಲ. ಪಾಳುಬಾವಿಗೆ ಬಿದ್ದವನ ಮೇಲೆ ಆಳಿಗೋಂದು ಕಲ್ಲು ಎನ್ನುವಂತೆ. ಬಂದ್ ಮಾಡುವುದರಿಂದ ಉತ್ಪನಗಳ ತಯಾರಿಕೆಯಲ್ಲಿ, ವಿವಿಧ ಸೇವೆ ಸುಧಾರಣೆಗಳಲ್ಲಿ, ವಹಿವಾಟುಗಳಲ್ಲಿ ತದನಂತರ ಆಧಾಯ ಗಳಿಕೆಗಳಲ್ಲಿ ತೊಂದರೆಯಾಗುವುದರಿಂದ ಬಂದ್ ದೇಶದ ಅಭಿವೃದ್ಧಿಗೆ ಮಾರಕವೇ ಸರಿ. ಇದರ ಬದಲು ಸಾಮಾಜಿಕ ಕಳಕಳಿ ಪ್ರದರ್ಶಿಸುವ ಬಂದ್ ಗಳು ಪ್ರಯೋಜನಕಾರಿ ಎಂದು ನನ್ನ ಅಭಿಪ್ರಾಯ. ಉದಾಹರಣೆಗೆ ಹತ್ತಿರವಿರುವ ಅಂಗಡಿಗೆ ನಡೆದೇ ಹೋಗುವುದು. ಸ್ವಂತ ವಾಹನ ಇದ್ದವರು ತಿಂಗಳಿಗೆ ಒಂದೆರಡುಸಲವಾದರು ಓಡಾಟಕ್ಕೆ ಸಾರ್ವಜನಿಕ ಬಸ್ಸುಗಳನ್ನು ಬಳಸುವುದು, ಒಬೋಬ್ಬರೇ ಓಡಾಡುವಾಗ ಕಾರಿಗಿಂತ ದ್ವಿಚಕ್ರ ವಾಹನ ಬಳಸುವುದರಿಂದ ಪೆಟ್ರೊಲ್ ಡೀಸೇಲಿನ ಉಳಿತಾಯ ಸಾಧ್ಯ. ವಿದ್ಯುತ್ ಚಕ್ತಿಯನ್ನು ಅವಶ್ಯವಿದ್ದಾಗ ಮಾತ್ರ ಬಳಸುವುದು, ಸಾಧ್ಯವಾದರೆ ಸೋಲಾರ್ (ಸೌರಶಕ್ತಿ) ಅಳವಡಿಸಿಕೊಳ್ಳುವುದು ಧನಾತ್ಮಕ ಅಂಶ. ಅಡುಗೆ ಅನಿಲದ ಬಳಕೆಯಲ್ಲಿ ತುಸು ಜಿಪುಣತವಿದ್ದರೆ ಒಳ್ಳೆಯದೇ. ಇದೆಲ್ಲ ನಮ್ಮ ದಿನ ಬಳಕೆಯ ಅಗತ್ಯತೆಗಳು ಮತ್ತು ನೈಸರ್ಗಿಕವಾಗಿ ಸಿಗುವಂತ ಸಂಪನ್ಮೂಲಗಳಾದರೂ ನಿಸರ್ಗ ಈ ಮನುಷ್ಯನ ಹೊಟ್ಟೆಬಾಕುತನವನ್ನು ನೀಗಿಸುವಲ್ಲಿ ದಿನೆದಿನೇ ದಣಿದುಹೋಗುತಿದೆ. ಮುಂದಿನ ದಿನಗಳಲ್ಲಿ ಈ ಸಂಪನ್ಮೂಲಗಳ ಕೊರತೆಯೂ ನಮಗೆ ತಟ್ಟದೆ ಇರದು. 

       ಮುಂದುವರೆದ ದೇಶಗಳು 'ಗ್ಲೋಬಲ್ ವಾರ್ಮಿಂಗ್' (ಉಷ್ಣಾಂಶದ ಕಾವು ಹೆಚ್ಕಳದಿಂದಾಗಿ ಜಗತ್ತು ವಿನಾಷದ ಅಂಚಿಗೆ ಹೋಗುತ್ತಿರುವ ಸುಳಿವು)  ತಗ್ಗಿಸುವಂತಹ ದೂರದೃಷ್ಟಿ ಇರುವ ಯೋಜನೆಗಳತ್ತ ಚಿತ್ತಹರಿಸುತ್ತಿದ್ದರೆ, ನಮ್ಮ ದೇಶದಲ್ಲಿ ನಾಳೆಯ ಯೋಚನೆಯೂ ನಮ್ಮಲ್ಲಿ ಸುಳಿಯುತ್ತಿಲ್ಲ. ಇವತ್ತಿನ ಆರ್ಥಿಕ ಅಂತಃಪತನಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಈ ಸಂದಿಗ್ಧ ಪರಿಸ್ಥಿತಿಯನ್ನು ಸಂಸತ್ತಿನಂತಹ ದಿವ್ಯ ಸನ್ನಿಧಿಯಲ್ಲಿ ಕುಳಿತು ಚರ್ಚಿಸಿ ಪರಿಹಾರ ಹುಡುಕಬೇಕಾದ ರಾಷ್ಟ್ರೀಯ ಪಕ್ಷಗಳು ಬಹಿಷ್ಕಾರ, ಪ್ರತಿಭಟನೆ, ಜಗಳಗಳಿಂದಾಗಿ ಕಾಲಹರಣ ಮಾಡಿದ್ದಲ್ಲದೇ ಬಂದ್ ಹೆಸರಿನಲ್ಲಿ ಭಾರತಕ್ಕೆ ಬೀಗ ಹಾಕಿ ಜನಸಾಮಾನ್ಯರನ್ನು ಹಾದಿ ತಪ್ಪಿಸುತ್ತಿವೆ. 

-ಸಂತೋಷ್ ಇಗ್ನೇಷಿಯಸ್
 Read more!

Friday, 14 September 2012

ಲಂಡನ್, ಒಲಂಪಿಕ್ಸ್ ಹಾಗೂ ಭಾರತ


ವೈವಿಧ್ಯಮಯವಾಗಿ ಆರಂಭಗೊಂಡ ೨೦೧೨ರ ಲಂಡನ್ ಒಲಂಪಿಕ್ಸ್ ಭರ್ಜರಿಯಾಗಿ ಮುಗಿದಿದೆ. ಮುಗಿದ ಒಲಂಪಿಕ್ಸ್ ಅನೇಕ ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳಲ್ಲಿ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ವಿಶ್ವದ ಅತ್ಯಂತ ಅಧುನಿಕ ನಗರಗಳಲ್ಲಿ ಒಂದಾದ ಲಂಡನ್, ಒಲಂಪಿಕ್ಸ್ ಕೂಟವನ್ನು ಹೇಗೆ ನಿಭಾಯಿಸಬಹುದು ಎಂಬ ಕುತೂಹಲದ ಪ್ರಶ್ನೆ ಕೂಟಕ್ಕೆ ಮುಂಚೆ ಎದ್ದಿತ್ತು. ಇದಕ್ಕೆ ಹಲವಾರು ಕಾರಣಗಳಿದ್ದವು. ಆದರೆ ಈ ಎಲ್ಲಾ ಕುತೂಹಲ, ಸಂಶಯ, ಅಡರು ತೊಡರುಗಳನ್ನು ಮೀರಿ ಲಂಡನ್ ನಗರ, ಒಲಂಪಿಕ್ ಸಂಸ್ಥೆ ಹಾಗೂ ಆಯೋಜಕರು ಅತ್ಯಂತ ಯಶಸ್ವಿ ಕ್ರೀಡಾ ಕೂಟವೊಂದನ್ನು ನಡೆಸಿಕೊಟ್ಟರು ಎಂದರೆ ತಪ್ಪಾಗಲಾರದು. ಒಲಂಪಿಕ್ಸ್ ಎಂದರೆ ಒಂದು ಕ್ರೀಡಾ ಕೂಟ, ಅದರಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಆಯಾಮಗಳೇನಿರುತ್ತವೆ? ಇದ್ದರೂ ಒಂದು ದೇಶ ಒಲಂಪಿಕ್ಸ್ ಕ್ರೀಡಾಕೂಟವನ್ನು ನಡೆಸುವಷ್ಟು ಆರ್ಥಿಕವಾಗಿ ಬಲಶಾಲಿಯೇ, ಸಮರ್ಥವೇ ಎಂಬದಷ್ಟೇ ಮುಖ್ಯ ಎಂಬ ಮಾತುಗಳು ಕೇಳಿ ಬರಬಹುದಾದರೂ, ವಿಷಯ ಅಷ್ಟೇನು ಸರಳವಲ್ಲ.


 ೨೦೦೮ ಚೀನಾದ ಒಲಂಪಿಕ್ಸ್ ಕೂಟವನ್ನೇ ಉದಾಹರಣೆಗೆ ತೆಗೆದುಕೊಂಡರೆ, ಅದು ನಡೆದದ್ದು ದೂರದ ಚೀನಾದಲ್ಲಾದರೂ ಅಲ್ಲಿನ ಕ್ರೀಡಾಂಗಣಗಳ ನಿರ್ಮಾಣಕ್ಕೆ ಬೇಕಾದ ಕಬ್ಬಿಣ ಭಾರತದಿಂದಲೂ ಸರಬರಾಜಾಯಿತು. ನಮ್ಮದೇ ಬಳ್ಳಾರಿಯ ಕಬ್ಬಿಣದ ಗಣಿಗಳಿಗೆ ಚಿನ್ನದ ಬೆಲೆ ಬಂದು, ಅವುಗಳಲ್ಲಿನ ಹಣ ಇಲ್ಲಿನ ರಾಜಕೀಯ ವ್ಯವಸ್ಥೆಯ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ಸಹಾ ನಮಗೆ ಗೊತ್ತೇ ಇದೆ.  ಮುಂದೆ ಏನಾಯಿತು ಎಂಬುದು ಇಲ್ಲಿ ಅಪ್ರಸ್ತತವಾದರೂ ಒಂದು ಒಲಂಪಿಕ್ಸ್‌ನ ಕದಂಬ ಬಾಹುಗಳು, ಪರಿಣಾಮಗಳು ಎಲ್ಲಿಯುವೆರೆಗೂ ಚಾಚಬಹುದು ಎಂಬುದಕ್ಕೆ ಇದು ಒಂದು ಚಿಕ್ಕ ಉದಾಹರಣೆ, ಈ ರೀತಿಯದು ಇನ್ನೆಷ್ಟೋ? ಆದರಿಂದಲೇ ಒಂದು ಜಾಗತಿಕ ಮಟ್ಟದ ಕ್ರೀಡಾ ಕೂಟಕ್ಕೆ ತನ್ನದೇ ಆದ ಅನೇಕ ಆಯಾಮಗಳಿರುತ್ತವೆ.  
  
೨೦೦೮ರ ಒಲಂಪಿಕ್ಸ್ ಆಯೋಜಿಸಿದ ಚೀನಾ ಅದನ್ನು  ಅತ್ಯಂತ ಯಶಸ್ವಿಯಾಗಿ ನಿರ್ವಯಿಸಿದ್ದು ಮಾತ್ರವಲ್ಲದೆ ವೈಭವಯುತವಾಗಿ ನಡೆಸಿಕೊಟ್ಟಿತು. ಜಾಗತಿಕ ಮಟ್ಟದ ಕೂಟವನ್ನು ಜಗವೇ ನಿಬ್ಬೆರಗಾಗಿ ನೊಡುವಂತ ಸಾಮರ್ಥ್ಯ, ಆರ್ಥಿಕ ಶಕ್ತಿ ಹಾಗೂ ಮಾನವ ಸಂಪನ್ಮೂಲ ತನಗಿದೆ ಎಂಬುದನ್ನು ತೋರಿಸಿಕೊಡುವ ವೇದಿಕೆಯನ್ನಾಗಿ ಬಳಸಿಕೊಂಡಿತು. ವಿಶ್ವದ ಆರ್ಥಿಕತೆಯಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ತಾನು ಎಲ್ಲಾ ರಂಗಗಳಲ್ಲೂ ಸಮರ್ಥ ಎನ್ನುವ ಸಂದೇಶವನ್ನು ಸಾರಿದ ಚೀನಾ ಒಲಂಪಿಕ್ಸ್ ಅಯೋಜಿಸುವ ವಿಷಯದಲ್ಲಿ ಒಂದು ಹೊಸ ಮಾನದಂಡವನ್ನು ನಿರ್ಮಿಸಿತು. ಚೀನಾದ ಒಲಂಪಿಕ್ಸ್ ಕ್ರೀಡಾಕೂಟ ಮುಂದೆ ಮುಂದಿನ ಯಾವುದೇ ಕೂಟ ಸಪ್ಪೆಯಾಗುವ ಅಪಾಯವಿತ್ತು ಮತ್ತು ಜನರು ಸಹಾ ಎಂದಿಗೂ ಅದನ್ನು ಚೀನಾ ಮುಂದೆ ಹೋಲಿಕೆ ಮಾಡುವ ಸಂಭವಗಳಿದ್ದವು.

ಇದು ಲಂಡನ್ ನಗರಕ್ಕೆ ಮೊದಲ ಸವಾಲಾಗಿದ್ದರೂ, ಅದು ಹೊರಗಿನ ಸವಾಲಾಗಿತ್ತು. ಆದರೆ ಅದಕ್ಕಿಂತಲೂ  ಹೆಚ್ಚಾಗಿ ತನ್ನದೇ ಆದ ಆಂತರಿಕ ಸಮಸ್ಯೆಗಳಿಂದ ನಡುವೆ ನರಳಿ, ತೊಳಲಾಡುತ್ತಿದ್ದ ಲಂಡನ್ ನಗರ ಅವುಗಳನ್ನು ಮೆಟ್ಟಿ ನಿಲ್ಲುವ ಸ್ಥೈರ್ಯ ತೋರಬೇಕಾಗಿತ್ತು. ಈ ನಾಲ್ಕು ವರುಷಗಳಲ್ಲಿ ಲಂಡನ್ ನಗರದ ಆಗುಹೋಗುಗಳಲ್ಲಿ ಹಲವಾರು ಬದಲಾವಣೆಗಳಾಗಿದ್ದವು. ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡ ಆರ್ಥಿಕ ದುಸ್ಥಿತಿಯಿಂದ ಬಳಲಿದ ಇತರ ಐರೋಪ ದೇಶಗಳಂತೆ ಯೂ.ಕೆ ಸಹಾ ಇನ್ನೂ ಚೇತರಿಕೆಯ ಹಾದಿಯಲ್ಲಿದ್ದು ಸಂಪೂರ್ಣವಾಗಿ ಎದ್ದು ನಿಂತಿಲ್ಲ. ಉದಾರ ಹಾಗೂ ಮುಕ್ತವಾದ ವಾತವರಣದಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯಿಂದಾಗಿ ಇಲ್ಲಿ ಬಂದು ನೆಲಸಿದ ವಲಸಿಗರ ಸಂಖ್ಯೆಯೂ ಹೆಚ್ಚು. ಅದರಲ್ಲೂ ಏಷ್ಯಾ ಖಂಡದ ಜನರಿಂದ ತುಂಬಿರುವ ಲಂಡನ್ ನಗರ, ಮೊದಲಿನಿಂದಲೂ ಇತರ ದೇಶದ ಜನರನ್ನು ತನ್ನತ್ತ ಮುಕ್ತವಾದ ಮನಸ್ಸಿನಿಂದ ಸೆಳೆಯುತ್ತಿದ್ದದ್ದು ಐತಿಹಾಸಿಕ ಸತ್ಯ.

ಆರ್ಥಿಕ ದುಸ್ಥಿಯ ನಂತರದ ವರ್ಷಗಳಲ್ಲಿಇದರ ಪರಿಣಾಮಗಳು ಲಂಡನ್ ನಗರದ ಮೇಲೆ ಕಾಣಿಸಿಕೊಂಡಿತು. ಒಂದೆಡೆ ತಮ್ಮ ಅಸ್ತಿತ್ವ, ಬೇರುಗಳನ್ನು ಕಳೆದುಕೊಳ್ಳುತ್ತಿರುವ ಭೀತಿ, ಕಾಳಜಿ ಅಲ್ಲಿನ ಸ್ಥಳೀಯರಲ್ಲಿ ಮನೆಮಾಡುತ್ತಿದ್ದಂತೆ ಭೂತಾಕಾರವಾಗಿ ಬೆಳೆದು ನಿಂತಿದ್ದು ನಿರುದ್ಯೋಗ ಸಮಸ್ಯೆ. ತಮ್ಮ ಉದ್ಯೋಗಗಳನ್ನು ವಲಸಿಗರು ಕಸಿದುಕೊಳ್ಳುತ್ತಿದ್ದರೆಂಬಾ ಭಾವ ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಸ್ಥಳೀಯರಲ್ಲಿ ಬೇರು ಬಿಟ್ಟಿತು. ಇಡೀ ದೇಶ ನಿರಾಶ ಭಾವದಲ್ಲಿ ಮುಳುಗಿ ಆತ್ಮವಿಶ್ವಾಸ ಕೊರತೆ ಎದ್ದು ಕಾಣುತ್ತಿತ್ತು. ಈ ಎಲ್ಲದರ ಹಿನ್ನಲೆಯಲ್ಲಿ ಒಲಂಪಿಕ್ಸ್ ಎಂಬ ಜಾಗತಿಕ ಮಟ್ಟದ ಕ್ರೀಡಾಕೂಟವನ್ನು ನಡೆಸಲು ಲಂಡನ್ ಸಮರ್ಥವೇ ಎಂಬ ಪ್ರಶ್ನೆಗಳು ಎದ್ದಿದ್ದವು. ಇವುಗಳ ಮಧ್ಯೆ ಕೂಟದ ಚಿಹ್ನೆ, ಪ್ರಮುಖ ಪ್ರಾಯೋಜಕರ ಬಗೆಗಿನ ಅಪಸ್ವರ ಮುಂತಾದ ಸಣ್ಣ ಪುಟ್ಟ ಅಡೆತಡೆಗಳೂ ಇದ್ದವು. ಅಷ್ಟು ಮಾತ್ರವಲ್ಲದೆ ೨೦೧೧ ರಲ್ಲಿ ಸಣ್ಣ ಕಾರಣವೊಂದಕ್ಕೆ ಪ್ರಾರಂಭವಾದ ಗಲಾಟೆ, ಗಲಭೆಯ ಸ್ವರೂಪ ಪಡೆದು ಒಂದು ವಾರದ ಕಾಲ ನಗರವನು ಅಲುಗಾಡಿಸಿದ್ದು, ಇಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳು ಏಳುವಂತೆ ಮಾಡಿತು.  

ಎಲ್ಲದಕ್ಕೂ ಉತ್ತರವೆಂಬಂತೆ ನಡೆದದ್ದು ೨೦೧೨ರ ಯಶಸ್ವಿ ಒಲಂಪಿಕ್ಸ್. ಕ್ರೀಡಾಕೂಟದ ಆರಂಭ ಸಮಾರಂಭದಲ್ಲೇ ಆಯೋಜಕರು ತಮ್ಮ ಮೊದಲ ಗೆಲುವನ್ನು ಕಂಡುಕೊಂಡರು ಎಂದರೆ ತಪ್ಪಾಗಲಾರದು. ಸ್ಲಮ್ ಡಾಗ್ ಮಿಲೇನಿಯರ್ ಖ್ಯಾತಿಯ ಚಿತ್ರ ನಿರ್ದೇಶಕ ಡ್ಯಾನಿ ಬಾಯ್ಲ್ ನೇತೃತ್ವದಲ್ಲಿ ನಡೆದ ಈ ಸಮಾರಂಭ ಯಾವುದೇ ರೀತಿಯಲ್ಲೂ ನಾಲ್ಕು ವರ್ಷದ ಹಿಂದಿನ ಚೀನಾ ಸಮಾರಂಭದ ಛಾಯೆಗೆ ಒಳಪಡದೆ, ಇಂಗ್ಲೆಂಡ್ ದೇಶದ ಸಂಸ್ಕೃತಿ, ಇತಿಹಾಸ, ಸ್ಥಳೀಯತೆ, ಬೆಳವಣಿಗೆಗಳ ಬಗೆ ಹೆಚ್ಚು ಒತ್ತು ನೀಡಿತು. ಇಡೀ ಇಂಗ್ಲೆಂಡ್ ದೇಶವೇ ಕ್ರೀಡಾಂಗಣದಲ್ಲಿ ಮರುರೂಪ ಮಡೆದಂತೆ ಭಾಸವಾಗಿ ಎಂಥಾ ಆಧುನಿಕತೆಗೂ ತನ್ನದೇ ಆದ ಬೇರು ಇದೆ ಎಂಬುದನ್ನು ಆಯೋಜಕರು ತೋರಿಸಿಕೊಟ್ಟರು. ಈ ಸಮಾರಂಭದ ಯಶಸ್ಸು ಇಡೀ ಕೂಟಕ್ಕೆ ಹೊಸ ಚೈತನ್ಯವನ್ನು ತಂದು ಕೊಟ್ಟಿತು ಎಂದರೆ ತಪ್ಪಾಗಲಾರದು. 

ನಂತರ ಆಯೋಜಕರು ಹಿಂದೆ ನೋಡುವ ಪ್ರಮೇಯವೇ ಬರಲಿಲ್ಲ. ಕೂಟ ಯಶಸ್ವಿಯಾಯಿತು. ಟಿ.ವಿ. ರೇಟಿಂಗ್‌ಗಳು ಗಗನಕ್ಕೇರಿದವು, ವ್ಯವಸ್ಥೆ ಅಚ್ಚುಕಟ್ಟಾಗಿತ್ತು, ಹೊಸ ದಾಖಲೆಗಳಾದವು, ಕ್ರೀಡಾ ಪಟುಗಳು ತಮ್ಮ ಎಂದಿನ ನೈಪುಣ್ಯ ಮೆರೆದರು.  ಜಮೈಕಾದ ಉಸೇನ್ ಬೋಲ್ಟ್ ಮಿಂಚಿನ ಸಂಚಾರ ಮೂಡಿಸಿದರೆ, ಅಮೆರಿಕಾ ತನ್ನ ಅಗ್ರಸ್ಥಾನವನ್ನು ಮತ್ತೆ ಭರ್ಜರಿಯಾಗೇ ಪಡೆದುಕೊಂಡಿತು. ನಮ್ಮ ಬೆಂಗಳೂರಿನಷ್ಟು ಸಣ್ಣ ಪುಟ್ಟ ದೇಶಗಳು ಸಹಾ ಪದಕ ಪಟ್ಟಿಯಲ್ಲಿ ಮಿಂಚಿದವು. ಚೀನಾದ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯದಿಂದ ಅಚ್ಚರಿ ಮೂಡಿಸಿದರೂ, ತನ್ನ ಕ್ರೀಡಾಪಟುಗಳನ್ನು ಚೀನಾ ತಯಾರು ಮಾಡುವ ರೀತಿಯ ಬಗ್ಗೆ ಸಣ್ಣ ಅಪಸ್ವಗಳು ಎದ್ದಿವೆ. ಅದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದವು ಎಂಬ ಮಾತುಗಳು ಸಹಾ ಕೇಳಿ ಬಂದಿವೆ. ಅದೇನೆ ವಿವಾದಗಳಿದ್ದರೂ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ತನ್ನದೇ ಆದ ವರ್ಚಸ್ಸಿದೆ, ಜನರ ಪ್ರೀತಿ ಇದೆ, ಇತಿಹಾಸವಿದೆ ಎಂಬ ಸತ್ಯವನ್ನು ಈ ಒಲಂಪಿಕ್ಸ್ ಮತ್ತೆ ನಿರೂಪಿಸಿದೆ. ಲಂಡನ್ ತನ್ನೆಲ್ಲಾ ಸಮಸ್ಯೆಗಳ ಮಧ್ಯೆಯೂ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿತು. ಕಾರ್ಯದೆಡೆಗೆ ನಿಷ್ಠೆ ಹಾಗೂ ಇಚ್ಛಾ ಶಕ್ತಿಯ ಮುಂದೆ ಎಂಥಾ ಸವಾಲುಗಳು ಸಹಾ ನಗಣ್ಯ ಎಂಬುದನ್ನು ಜಗಕ್ಕೆ ತೋರಿಸಿತು. ಕ್ರೀಡಾ ಕೂಟ ಯಶಸ್ವಿಯಾದ ಮಾತ್ರಕ್ಕೆ ಅದರ ಸಮಸ್ಯೆಗಳೆಲ್ಲಾ ಕಳೆಯಿತುಯೆಂದಲ್ಲ. ಆದರೆ ಇದರಿಂದ ದೇಶಕ್ಕೆ ದೊರಕಿದ ಆತ್ಮ ವಿಶ್ವಾಸ, ಸರಿದು ಹೋದ ನಿರಾಶ ಭಾವ ಮಾತ್ರ ಬೆಲೆ ಕಟ್ಟಲಾಗದು. ಮುಂದೆ ಅದು ಅಲ್ಲಿನ ಸರ್ಕಾರಕ್ಕೆ, ಆರ್ಥಿಕತೆಗೆ ಹೊಸ ಚೈತನ್ಯ ನೀಡಬಹುದು. 

ಇನ್ನೂ ಭಾರತದ ವಿಷಯಕ್ಕೆ ಬಂದರೆ, ಇದು ಅತ್ಯಂತ ಯಶಸ್ವಿ ಒಲಂಪಿಕ್ಸ್. ಪದಕಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚು. ಸಂತೋಷ. ಪದಕ ಗೆದ್ದವರು ಅಭಿನಂದನಾರ್ಹರು. ಇವರ ನಡುವೆ ಭಾರಿ ಭರವಸೆ ಮೂಡಿಸಿದ ಟೆನ್ನಿಸ್ ಹಾಗೂ ಹಾಕಿಯ ವೈಫಲ್ಯ ಭಾರತದ ಕ್ರೀಡಾ ವ್ಯವಸ್ಥೆ ಕನ್ನಡಿಯಾಗಿತ್ತು. ಒಂದು ಕಾಲದಲ್ಲಿ ರಾಜನಂತೆ ಮೆರೆದ ಹಾಕಿಯಲ್ಲಿ ಕೊನೆಯ ಸ್ಥಾನ. ಕಾರಣ ಆ ಕ್ರೀಡೆಯ  ನಿರ್ವಹಣೆಯಲ್ಲಿನ ಲೋಪ ದೋಷ, ಭ್ರಷ್ಟಚಾರ. ಇನ್ನೂ ಟೆನ್ನಿಸ್ ಬಳಲಿದ್ದು ಒಳಜಗಳದಿಂದ. ಈ ಎರಡು ಕಾರಣಗಳು ನಮ್ಮ ಕ್ರೀಡಾ ವ್ಯವಸ್ಥೆಯ ಪ್ರತಿಬಿಂಬವಲ್ಲದೆ ಏನು? 

ಕೊನೆಯಲ್ಲಿ, ತನ್ನದೇ ಸಮಸ್ಯೆಗಳಿಂದ ಬಳಲುತ್ತಲೇ, ತನ್ನ ಆತ್ಮಸ್ಥೈರ್ಯ, ಇಚ್ಛಾ ಶಕ್ತಿ, ನಿಷ್ಠೆ, ಸಂಘಟನಾ ಶಕ್ತಿಯಿಂದ ಗೆದ್ದ ಲಂಡನ್ನಿನ ಯಶಸ್ಸು ಭಾರತಕ್ಕೆ ಏಕೆ ಸಾಧ್ಯವಾಗುವುದಿಲ್ಲ? ಎಲ್ಲಾ ರೀತಿಯ ಶ್ರೀಮಂತ ಸಂಪನ್ಮೂಲದ ನಡುವೆಯೂ ಜಾಗತಿಕ ಮಟ್ಟದ ಕಾರ್ಯಗಳಲ್ಲಿ ಭಾರತ ಇನ್ನೂ ಹಿಂದುಳಿದಿರುವುದಾದರೂ ಏಕೆ? ಕಾಮನೆವೆಲ್ತ್ ಕೂಟದಲ್ಲಿ ಕಂಡು ಬಂದ ಅಷ್ಟು ಪ್ರಮಾಣದ ಭ್ರಷ್ಟಾಚಾರಕ್ಕೆ ಮುಂದಾದರೂ ಕೊನೆಯಿದೆಯೇ? ಊಟ, ಬಟ್ಟೆ, ಶಿಕ್ಷಣ, ಉದ್ಯೋಗವೆಂಬ ಮೂಲಭೂತ ಸಮಸ್ಯೆಗಳೇ ಸಾಕಷ್ಟಿರುವಾಗ ಒಲಂಪಿಕ್ಸ್ ರೀತಿಯ ಕೂಟವನ್ನು ನಡೆಸಲು ಬೇಕಾದ ಸಾಮರ್ಥ್ಯ ಭಾರತದ ಪಾಲಿಗೆ ನಿಜಕ್ಕೂ ಮರಿಚಿಕೆಯೇ? ನಮ್ಮ ರಾಜಕೀಯ ಇಚ್ಛಾಶಕ್ತಿ ಇಷ್ಟೊಂದು ದುರ್ಬಲವೇ? ಮುಂತಾದ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಭಾರತದ ಯುವ ಶಕ್ತಿ ಇದಕ್ಕೆ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ. ಆ ಸಮಯ ಬಲು ಬೇಗ ಬರಲಿದೆ ಎಂಬ ಭರವಸೆಯನ್ನು ಇಂಥಹ ಒಲಂಪಿಕ್ಸ್‌ಗಳು ತರುತ್ತಿರಲಿ.

- ಪ್ರಶಾಂತ್ ಇಗ್ನೇಷಿಯಸ್

Monday, 13 August 2012

ಸ್ವಾತಂತ್ರ್ಯೋತ್ಸವದ ಕನವರಿಕೆಯಲ್ಲಿ…!!!



ಕೃಪೆ: ಗೂಗಲ್ ಇಮೇಜ್
ಮತ್ತೊಂದು ಸ್ವಾತಂತ್ರ್ಯೋತ್ಸವಕ್ಕೆ ನಮ್ಮ ದೇಶ ಅತೀ ಉತ್ಸುಕತೆಯಿಂದ ಸಜ್ಜುಗೊಳ್ಳುತ್ತಿದೆ. ಈ ಒಂದು ಆಚರಣೆಯನ್ನು ಸ್ಮರಣೀಯಗೊಳಿಸಲು ಹತ್ತು ಹಲವಾರು ಕಾರ್ಯಕ್ರಮಗಳು, ಸ್ಪರ್ಧೆಗಳು ಆಚರಣೆಯ ಪಟ್ಟಿಯನ್ನು ಸೇರಿಕೊಂಡಿವೆ. ನಮ್ಮ ಶಾಲಾಮಕ್ಕಳಂತೂ ಪೆರೇಡು ಪ್ರದರ್ಶನದ ತಾಲೀಮಿನ ಭರಾಟೆಯಲ್ಲಿ ಕಳೆದುಹೋಗಿಬಿಟ್ಟಿದ್ದಾರೆ. ವರ್ಷಕ್ಕೊಮ್ಮೆ ಎಂಬಂತೆ ನಮ್ಮ ಸರ್ಕಾರಿ ಕಟ್ಟಡಗಳು ಸ್ಪಚ್ಛಗೊಂಡು ಮದುವಣಿಗಿತ್ತಿಯಾಗಿ ಕಂಗೊಳಿಸುತ್ತಾ ತ್ರಿವರ್ಣ ಧ್ವಜಾರೋಣದ ಸಿಂದೂರಕ್ಕೆ ಕಾತರದಿಂದ ಕಾದು ಕುಳಿತ್ತಿವೆ. ಇನ್ನೊಂದು ಕಡೆ, ಆಚರಣೆಯ ಕೇಂದ್ರಬಿಂದು ದೆಹಲಿಯ ಕೆಂಪುಕೋಟೆ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸಮಸ್ಯೆಗಳು ಹಾಗು ಪ್ರಗತಿ ಯೋಜನೆಗಳನ್ನು ಸಾರುವ ಪ್ರಧಾನ ಮಂತ್ರಿಯ ನಿಸ್ಸತ್ತ್ವದ ಭಾಷಣಕ್ಕೆ ಮತ್ತು ರಂಗು ರಂಗಿನ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಜಾತಕ ಪಕ್ಷಿಯಂತೆ ಕಾದು ಕುಳಿತ್ತಿದೆ.  ತ್ರಿವರ್ಣದ ರಾಷ್ಟ್ರಧ್ವಜಗಳಂತೂ ಟ್ರಾಫಿಕ್ ಮತ್ತು ಮಳಿಗೆಗಳಲ್ಲಿ ಭರಾಟೆಯಿಂದ ಮಾರಾಟವಾಗುತ್ತಿವೆ. ಪುಷ್ಪ ಪ್ರದರ್ಶನ,,, ಕೇಕ್ ಪ್ರದರ್ಶನ, ಗಾಳಿಪಟಗಳ ಹಾರಾಟ ಹೀಗೆ ಪ್ರದರ್ಶನಗಳ ಮೇಲೆ ಪ್ರದರ್ಶನಗಳು ನಗರಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತಿವೆ. ಶಾಪಿಂಗ್ ಮಾಲ್‍ಗಳಂತೂ ತನ್ನಡೆ ಜನರನ್ನು ಆಕರ್ಷಿಸಿ ವ್ಯವಹಾರ ಕುದ್ರಿಸಿಕೊಳ್ಳಲು ಕಳ್ಳ ದೇಶಪ್ರೇಮವನ್ನು ನಿರ್ಭೀತಿಯಾಗಿ ತೋರ್ಪಡಿಸುತ್ತಿದ್ದರೆ ಭಾರತೀಯರಾದ ನಾವು ರಾಷ್ಟೀಯ ರಜಾದಿನವಾಗಿರುವ ಆಗಸ್ಟ್ ೧೫ಕ್ಕೆ ವಾಚ್‍ಮ್ಯಾನ್ ಬೆಳಗ್ಗಿನ ಜಾವಕ್ಕೆ ಕಾಯುವಂತೆ ಹೊಂಚು ಹಾಕುತ್ತಿದ್ದೇವೆ.
ಹೌದು ಬ್ರಿಟಿಷರ ಕಪಿಮುಷ್ಠಿಯಿಂದ ಸ್ವಾತಂತ್ರ್ಯವನ್ನು ಪಡೆದ ಐತಿಹಾಸಿಕ ಘಟನೆಯ ಆಚರಣೆ ಉತ್ತಮವಾದುದೆ, ಅವಶ್ಯಕವಾದುದೆ. ಆದರೆ, ಈ ಒಂದು ಆಚರಣೆ ಯಾಂತ್ರಿಕವಾಗಬಾರದು, ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಒಂದಾಗಬಾರದು. ಮಜಮಾಡಲು ಸಿಕ್ಕ ಒಂದು ದಿನದ ಸರ್ಕಾರಿ ರಜೆಯಾಗಬಾರದು. ಸ್ವಾತಂತ್ರವನ್ನು ದೊರಕಿಸಿಕೊಳ್ಳಲು ರಾಷ್ಟ್ರ ತುಳಿದ ಹಾದಿಯನ್ನು ನಮಲ್ಲಿ ನೆನಪಿಸಬೇಕು, ಸ್ವಾತಂತ್ರ್ಯ ದೊರಕಿಸಿಕೊಳ್ಳುವ ಹಾದಿಯಲ್ಲಿ ಮಡಿದ ಹುತಾತ್ಮ ಯೋಧರನ್ನು ಹೋರಾಟಗಾರರನ್ನು ನೆನಪಿಸಬೇಕು. ಸ್ವಾತಂತ್ರ್ಯ ದಕ್ಕಿಸಿಕೊಳ್ಳಲು ಅವರೆಲ್ಲರನ್ನು ಪ್ರೇರಪಿಸಿದ ಕಿಚ್ಚು ನಮ್ಮಲ್ಲಿ ತುಂಬಿಸಬೇಕು. ದೇಶಕ್ಕೆ ಅವರು ಕಂಡ ಕನಸ್ಸುಗಳು ನಮ್ಮದಾಗಿಸಬೇಕು. ಜತೆಗೆ ನಮ್ಮ ಇಂದಿನ ಪರಿಸ್ಥಿತಿಯಲ್ಲಿ ನಿಜವಾಗಲೂ ನಾವು ಸ್ವಾತಂತ್ರ್ಯರೇ? ಸ್ವಾಂತಂತ್ರ್ಯವನ್ನು ಅನುಭವಿಸಲು ಯೋಗ್ಯರೇ?  ಅಷ್ಟೆಲ್ಲ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯದ ಬೆಲೆ ನಮಗಿವತ್ತು ಗೊತ್ತಿದೆಯೆ? ದಕ್ಕಿದ ಸ್ವಾತಂತ್ರ್ಯವನ್ನು ಜವಾಬ್ದಾರಿಯನ್ನು ಅನುಭವಿಸುತ್ತಿದ್ದೇವೆಯೇ? ಹೀಗೆ ಪ್ರಶ್ನೆಗಳನ್ನು ನಮ್ಮ ಮುಂದಿಡಬೇಕು. ಏಕೆಂದರೆ ಸ್ವಾತಂತ್ರ್ಯ ಪಡೆಯುವುದರ ಜತೆಗೆ ಜವಾಬ್ದಾರಿಯನ್ನು ಸಹ ಪಡೆದುಕೊಂಡಿದ್ದೇವೆ. ಸ್ವಾತಂತ್ರ್ಯವೂ ಒಂದು ಹಕ್ಕು ಮಾತ್ರವಲ್ಲದೆ ಜವಾಬ್ದಾರಿಯು ಹೌದು. ಈ ರೀತಿಯ ಪರಿಶೋಧನೆ, ಆತ್ಮಾವಲೋಕನ ನಮ್ಮ ಆಚರಣೆಯ ಅವಿಭಾಜ್ಯವಾಗದಿದ್ದರೆ, ನಮ್ಮ ಆಚರಣೆ ಬದಲಾವಣೆಯನ್ನು ತರದ, ನಿರುತ್ಸಾಹದ ಅರ್ಥಹೀನ ಆಚರಣೆಯಾಗಿ ಬಿಡುತ್ತದೆ.
ಇಂದಿನ ವಾಸ್ತವದಲ್ಲಿ ಈ ರೀತಿಯ ಆತ್ಮಾವಲೋಕನದ ಕ್ರಿಯೆ ಅತ್ಯಾವಶ್ಯಕವಾಗಿ ಬೇಕಾದುದ್ದೇ. ಏಕೆಂದರೆ ಇರಬೇಕಾದ ಜವಾಬ್ದಾರಿ ನಮ್ಮಲ್ಲಿ ಕಾಣುತ್ತಿಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ಮಗುವಿನ ಕೈಗೆ ಕತ್ತಿ ಕೊಟ್ಟಂತಾಗಿದೆ. ಕಡುಬಡತನ, ರೈತರ ಆತ್ಮಹತ್ಯೆಗಳು, ದೇಶದ ಮೂಲೆ ಮೂಲೆಗಳಲ್ಲಿ ಮೌಲ್ಯವಾಗಿಬಿಟ್ಟಿರುವ ಭ್ರಷ್ಟಚಾರವೆಂಬ ಅನಿಷ್ಟ ಪಿಡುಗು, ಜಾತಿ, ಧರ್ಮಗಳ ಆಧಾರಗಳ ಮೇಲೆ ಒಡೆದೋಗಿರುವ ಸಮಾಜ, ಜಾತಿ ರಾಜಕಾರಣ, ಭ್ರಷ್ಟ ರಾಜಕಾರಣಿಗಳು, ನಕ್ಸಲ್ ಸಮಸ್ಯೆ, ಅಗಿಂದಾಗ್ಗೆ ನಡೆಯುವ ಮತೀಯ ಗಲಭೆಗಳು, ತಾತ್ವಿಕ ಮತ್ತು ಸೈದಾಂತಿಕ ನೆಲೆಗಳನ್ನು ಕಳೆದುಕೊಂಡು ಕೇವಲ ಅಧಿಕಾರಕ್ಕಾಗಿ ಹಾತೊರೆಯುವ ರಾಜಕೀಯ ಪಕ್ಷಗಳು, ಭಯೋತ್ಪಾದನೆ, ಅಸಮಾನತೆ, ಜಾತಿ ಧ್ರುವೀಕರಣ ಹೀಗೆ ಒಂದೇ ಎರಡೇ ನೂರಾರು ಜಟಿಲ ಸಮಸ್ಯೆಗಳಿಂದ ನಮ್ಮ ದೇಶ ತುಂಬಿಹೋಗಿದೆ. ಅಸ್ಸಾಂನಲ್ಲಿ ನಡೆದ ಬೋಡೋ ಮೂಲನಿವಾಸಿಗಳು ಮತ್ತು ಮುಸ್ಲಿಂ ವಲಸಿಗರ ನಡುವಿನ ಹಿಂಸಾಚಾರ, ಸಂಸ್ಕೃತಿಯ ಸಂಕ್ಷರಣೆಯ ನೆಪದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ರಾಜಕೀಯ ಬೋನಿಗೆ ಬಿದ್ದ `ಅಣ್ಣ ಚಳವಳಿ’, ಸ್ಪಷ್ಟತೆಯಿಲ್ಲದ ರಾಮ್‍ದೇವ್ ಯೋಗಿಯ ನಿರಶನ, ಮಳೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಪರ್ಜನ್ಯ ಪೂಜೆ ಮಾಡಿದ ಮೂರ್ಖ ಸರ್ಕಾರ, ದಿನಕ್ಕೊಂದೆಬಂತೆ ಹೊರ ಬರುತ್ತಿರುವ ಭ್ರಷ್ಟಚಾರ, ಸರ್ಕಾರದ ದುರಾಡಳಿತ..ಹೀಗೆ ಇತೀಚಿನ ಬ್ರೆಕಿಂಗ್ ನ್ಯೂಸ್‍ಗಳು, ಮುಂದೆ ಸಂಭವಿಸಲಿರುವ ಅದೋಗತಿಯನ್ನು ಸ್ಪಷ್ಟಪಡಿಸುವ ಎಚ್ಚರಿಕೆಯಗಂಟೆಗಳಾಗಿವೆ.
ಈ ಒಂದು ವಾಸ್ತವದ ಗ್ರಹಿಕೆ ನಮ್ಮ ಮುಂದಿನ ಕಾರ್ಯ ಸಂಕಲ್ಪಕ್ಕೆ ಅತ್ಯಗತ್ಯ. ಇಲ್ಲದೇ ಹೋದರೆ, ಪ್ರಧಾನಿ ಕೈಗೊಂಡಿರುವ ’ಎಲ್ಲರಿಗೂ ಮೊಬೈಲ್’ ಎಂಬ ಟೊಳ್ಳು ಕಾರ್ಯಕ್ರಮವೂ, ಹಾದಿ ತಪ್ಪಿದ ಅಣ್ಣ ಚಳುವಳಿಯೋ ಅಥವಾ ರಾಮ್‍ದೇವ್ ಯೋಗಿಯ ಕಾಮಿಡಿ ಶೋಗಳಂತಾಗಿಬಿಡುತ್ತದೆ ನಮ್ಮ ಆಚರಣೆ.  ಕೊನೆಗೆ, ರವೀಂದ್ರನಾಥ ಠಾಕೂರರ ಕವಿತೆಯೊಂದಿಗೆ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧಗೊಳೋಣ.
ಎಲ್ಲಿ ಮನಸ್ಸು ನಿರ್ಭಯವೋ, ಶಿರ ಎತ್ತರಕ್ಕೆ ನಿಮಿರಿ ನಿಂತಿದೆಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲ್ಲಿ ನನ್ನ ನಾಡು
ಎಲ್ಲಿ ಜ್ಞಾನ ಸ್ವತಂತ್ರವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲ್ಲಿ ನನ್ನ ನಾಡು
ಎಲ್ಲಿ ಜಗತ್ತು ಸಂಕುಚಿತವಾದ ಮನೆಗೋಡೆಗಳಿಂದ ಒಡೆದು
ಚೂರುಚೂರಾಗಿಲ್ಲವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ ಎಚ್ಚರಗೊಳ್ಳಲ್ಲಿ ನನ್ನ ನಾಡು
ಎಲ್ಲಿ ಮನಸ್ಸನ್ನು ನೀನು ಸತತ ವಿಸ್ತರಣಶೀಲ ವಿಚಾರ ಕ್ರಿಯೆಗಳಿಗೆ
ಮುನ್ನಡೆಸುತ್ತೀಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲ್ಲಿ ನನ್ನ ನಾಡು
-ಜೋವಿ
Read more!

Saturday, 4 August 2012


ಪ್ರೀತಿಯ ಅನು..
ಹತ್ತಾರು ದಿನಗಳಿಂದ ಕಾಡುತ್ತಿದ್ದ ಈ ಕತೆ.. ಅಕ್ಷರ ರೂಪ ಪಡೆದು ನಿನ್ನ ಸೇರಿದೆ. ಈ ಕತೆಗೆ ಶಿರ್ಷಿಕೆ ಕೊಡಲು ಸಹ ನನ್ನಿಂದಾಗಲಿಲ್ಲ. ಕತೆಯನ್ನು ಓದಿ ನೀನೇ ಒಂದು ಟೈಟಲ್ ತಿಳಿಸು.
ಇಂತಿ ನಿನ್ನ
ಜೋವಿ

ನನ್ನ ಹೆಸರು ಮಹಿಮೆ ದಾಸ್‍ ಅಂತಿದ್ದರೂ ನನ್ನ ಅವ್ವ ಅಪ್ಪ ಕರೆಯುತ್ತಿದಿದ್ದು ”ಮಹಿಮೆ” ಅಂತ. ನನ್ನ ಹೆಸ್ರಲ್ಲಿ ಯಾವ ಮಹಿಮೆ ಕಂಡರೂ ಗೊತ್ತಿಲ್ಲ .. ಕಾಲಕ್ರಮೇಣ ಮಹಿಮೆ  ನಾಪತ್ತೆಯಾಗಿ ಮೈಮೆ ಆಗಿತ್ತು. ಎಮ್ಮೆ ಆಗಿಲ್ಲವೆಂಬುವುದೇ ನನ್ನ ತೃಪ್ತಿ. ನಾಲ್ಕು ಮಕ್ಕಳಲ್ಲಿ ನಾನೇ ಕೊನೆಯವನು. ನನ್ನ ಅಣ್ಣಂದಿರು ಹಾಗು ಅಕ್ಕ ಶಾಲೆಯ ಮೆಟ್ಟಿಲೇರಿರಲಿಲ್ಲ. ನಾನು ಮಾತ್ರ ನನ್ನ ಅವ್ವಳನ್ನು ಕಾಡಿ ಬೇಡಿ ಶಾಲೆಗೆ ಸೇರಿಕೊಂಡಿದ್ದೆ. ಯಾವ ದೇವ್ರು ನನ್ನ ಅವ್ವ ಅಪ್ಪರಿಗೆ ಬುದ್ಧಿ ಕೊಟ್ರೋ ಗೊತ್ತಿಲ್ಲ ನನ್ನ ಬೇಡಿಕೆಯನ್ನು ಮನ್ನಿಸಿ ನನ್ನನ್ನು ಅವರು ಶಾಲೆಗೆ ಹಚ್ಚಿದ್ದರು. ಜತೆಗೆ ನಮ್ಮ ಊರಿನ ಕನ್ಯಾಸ್ತ್ರಿಗಳು ನನಗೆ ಅಗತ್ಯವಾಗಿದ್ದ ಪುಸ್ತಕಗಳನ್ನು, ಯೂನಿಫ಼ಾರ್ಮ ಬಟ್ಟೆಗಳನ್ನು ಉಚಿತವಾಗಿ ಕೊಟ್ಟು ಶಾಲೆಯ ಫೀಜು ಅವರೇ ತುಂಬಿಸಿ ನನ್ನನ್ನು ಓದಿಸುತ್ತಿದ್ದರು. ದೇವರು ಮನುಷ್ಯನಾಗುತ್ತಾನೆ ಎಂದು ಹೇಳುವುದು ಈ ಜನರಿಂದಲೇ ಏನೋ! ಅವರ ಪ್ರತಿಮೆಗಳು ನನ್ನ ಹೃದಯದಲ್ಲಿ ಭದ್ರವಾಗಿ ಅನಾವರಣಗೊಂಡಿಬಿಟ್ಟಿತ್ತು. ಇವರ ಸಹಾಯ ಹಸ್ತದ ಜತೆಗೆ ನನ್ನ ಎದೆಯಲ್ಲಿ ಕುದಿಯುತ್ತಿದ್ದ ಶಾಲೆ ಕಲಿಯಬೇಕೆಂಬ ಆಸೆಯ ಬೆಂಕಿ, ಶಾಲೆಗೆ ನಮಸ್ಕಾರ ಹೇಳುವ ನನ್ನ ಧೈರ್ಯವನ್ನು ಎಂದೂ ಭಸ್ಮಮಾಡಿಬಿಟ್ಟಿತ್ತು. ನನ್ನ ಜನರ ಹುಡುಗರು ಮಾತ್ರ ಶಾಲೆಯನ್ನು ಕಂಡರೆ ನೂರು ಮೈಲಿ ದೂರ ಓಡುತ್ತಿದ್ದರು. ಯವುದೋ ದೆವ್ವ ಅವರನ್ನು ಬೆನೆಟ್ಟಿ ಓಡಿಸಿಕೊಂಡು ಹೋದಂತೆ.

 ಹೌದು ನನ್ನ ಜನರೆಂದರೆ ಯಾರು? ಊರಿನಲ್ಲಿ ಜನ ಹೊಲೆಯರು ಅಂತ ಕರೆಯಲ್ಪಟ್ಟವರೆ ನನ್ನ ಜನ. ಇನ್ನೊಂದು ಪಂಗಡದ ಜನರನ್ನು ಮಾದಿಗರೆನ್ನುತ್ತಿದ್ದರು. ಏಕೆ ಈ ರೀತಿ ನಮ್ಮನ್ನು ಕರೆಯುತ್ತಾರೆಂದು ನನಗೆ ಗೊತ್ತಿಲ್ಲ. ಅವ್ವಳನ್ನು ಕೇಳಿ ಕೇಳಿ ಸುಸ್ತಾಗಿ ಕೊನೆಗೆ ಅದರ ಸಹವಾಸವೇ ಬಿಟ್ಟುಬಿಟ್ಟಿದೆ. ಅಪ್ಪನ ಬಳಿ ಈ ರೀತಿಯ ಪ್ರಶ್ನೆಗಳನ್ನು ಕೇಳೋ ಹಾಗಿಲ್ಲ. ಅವನು ಗೌಡರ ಮನೆಯಲ್ಲಿ ಸಂಬಳಕ್ಕಿದ್ದ ಕಾರಣ ಅವನು ಮನೆಗೆ ಬರುತ್ತಿದ್ದೆ ಅಪರೂಪ. ಬೆಳಿಗ್ಗೆ ಅಷ್ಟೋತ್ಕೆ ನಾಗಮ್ಮ ಹೋಟೆಲ್‍ನಲ್ಲಿದ್ರೆ, ಸಂಜೆ ಸರಾಯಿ ಅಂಗಡಿಗೆ ಸೇರಿಬಿಡುತ್ತಿದ್ದ. ಕುಡಿತ ಜಾಸ್ತಿಯಾದ್ರೆ.. ಬೀದಿಯನ್ನೇ ಮನೆಮಾಡಿಕೊಳ್ಳುಬಿಡುತ್ತಿದ್ದ. ಎಷ್ಟೋ ಸಲ ಅವ್ವ ಮತ್ತು ನಾನು ಕುಡಿದು ಚಿತ್ತಾಗಿ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಅಪ್ಪನನ್ನು ಮನೆಗೆ ಹೊತ್ತು ತಂದು ಮಲಗಿಸುವಷ್ಟ್ರಲ್ಲಿ ಸಾಕುಸಾಕಾಗಿ ಹೋಗಿಬಿಡುತ್ತಿತ್ತು. ಇದು ಒಂದು ತರದ ಯಮಯಾತನೆಯಾಗಿತ್ತು ನನಗೆ. ಯಾಕೆ ನನ್ನ ಅಪ್ಪ ಗಂಟ್ಲು ತುಂಬ ಕುಡಿಯುತ್ತಿದ್ನೋ ಗೊತ್ತಿಲ್ಲ?

ನಾನು ಹೊಲೆಯ ಎಂದು ಖುಷಿಯಾಗುತ್ತಿದ್ದುದು SC/ST ವಿದ್ಯಾರ್ಥಿಗಳು ಅಫೀಸ್‍ಗೆ ಬಂದು ಸ್ಕಾಲರ್‌ಷಿಪ್ ಹಣ ತೆಗೆದುಕೊಳ್ಳಿ ಎಂಬ ನೋಟಿಸ್ ತರಗತಿಗಳಲ್ಲಿ ಓದುವಾಗ ಮಾತ್ರ. ಬಾಕಿ ಸಮಯದಲ್ಲಿ ಯಾಕಪ್ಪ ನಾನು ಈ ಜಾತಿಯಲ್ಲಿ ಹುಟ್ಟಿದೆ ಎಂದು ಬೇಸರವಾಗುತ್ತಿತ್ತು. ಇದಕ್ಕೆ ನಮ್ಮ ಜಾತಿ ಕಾರಣವಾಗಿರಲಿಲ್ಲ. ಊರಿನ ಜನರು ನಮ್ಮನ್ನು ಕಾಣುತ್ತಿದ್ದ ರೀತಿ. ನಮ್ಮ ಮನೆಗಳು ಊರಿನ ಮೂಲೆಯಲಿದ್ದವು. ಅವು ಮನೆಯ ಕೋಣೆಯ ಮೂಲೆಯಲ್ಲಿ ಪರಕೆಯಿದ್ದಂತೆ. ನಮ್ಮ ಮನೆಗಳ ಮುಂದೆ ಮತ್ತು ಅಕ್ಕಪಕ್ಕಗಳಲ್ಲಿ ಮೇಲ್ವರ್ಗ ಜನರ ತಿಪ್ಪೆಗಳ ಗುಡ್ಡೆಗಳು ಸಾಲಾಗಿರುತ್ತಿದ್ದವು. ಇದ್ದರಿಂದ ಹಸುಕೊಟ್ಟಿಗೆಯಲ್ಲಿ ಜೀವಿಸುವ ಅನುಭವವಾಗುತ್ತಿತ್ತು ನನಗೆ. ಜತೆಗೆ ನಮ್ಮ ಮನೆಗಳಲ್ಲಿ ಶೌಚಾಲಯಗಳಿರದ ಕಾರಣ ನಮ್ಮ ಚಿಕ್ಕ ಮಕ್ಕಳು ಮನೆಯ ಮುಂದೆ ಕಕ್ಕಸು ಮಾಡಿ ನಮ್ಮ ಕೇರಿಯನ್ನೇ ಹೊಲಸೆಬಿಸಿಬಿಡುತ್ತಿದ್ದರು. ಮೇಲ್ವರ್ಗ ಜನರು ನಮ್ಮ ಕೇರಿಗೆ ಬರುತ್ತಿದ್ದೆ ಅಪರೂಪ. ಅಪ್ಪಿತಪ್ಪಿ ನಮ್ಮ ಕೇರಿಗೆ ಬಂದರೆ ಮೂಗು ಮುಚ್ಚಿಕೊಳ್ಳುತ್ತಿದ್ದರು. ಇವರ ವರ್ತನೆ ಒಂದು ತರಹ ತಾವೇ ಹೂಸು ಬಿಟ್ಟು ಮೂಗು ಮುಚ್ಚಿಕೊಳ್ಳುವಂತ್ತಿರುತಿತ್ತು.

ನಮ್ಮ ಜನ ಶಾಲೆಗೆ ಹೋಗೋದೇ ಹೆಚ್ಚು. ಹೋದವರು ಯಾರು ೧೦ನೇ ತರಗತಿಯ ಲಕ್ಷ್ಮಣರೇಖೆಯನ್ನು ದಾಟುತ್ತಿರಲಿಲ್ಲ. ಅಪ್ಪಿ ತಪ್ಪಿ ೧೦ನೇ ತರಗತಿಯನ್ನು ಮುಟ್ಟಿದರೂ ಮುಂದಿನ ವಿದ್ಯಾಭ್ಯಾಸಕ್ಕೆ ಮನಸ್ಸು ಮಾಡುತ್ತಿರಲಿಲ್ಲ. ನನ್ನ ಜನರಿಗೆ ಶಾಲೆ ಎನ್ನುವುದು ಜೀರ್ಣಿಸಿಕೊಳ್ಳಲಾಗದ ಊಟವಾಗಿರುತ್ತಿತ್ತು. ನಮ್ಮ ತಂದೆ ತಾಯಿಗಳಿಗೂ ತಮ್ಮ ಮಕ್ಕಳು ಶಾಲೆಗೆ ಹೋಗುವುದು ಬೇಡವಾಗಿತ್ತು. “ನೀನ್ ಶಾಲೆಗೋಗಿ ತಂದ್ ಹಾಕೋದ್ ಅಷ್ಟ್ರಲ್ಲೇ ಇದೆ. ತಿಕ ಮುಚ್ಕೊಂಡು ಸಂಬ್ಳಕ್ಕೆ ಸೇರಿಕೋ” ಎಂಬುವುದು ಅವರ ಮಾತಾಗಿತ್ತು. ಆದರೂ ಸಿಸ್ಟರ್ಸ್ ಮತ್ತು ಪಾದ್ರಿಗಳ ಒತ್ತಾಯಕ್ಕೆ ಅರೆಮನಸ್ಸಿನಿಂದ ಮಕ್ಕಳನ್ನು ಶಾಲೆಗೆ ದಾಖಲಿಸುತ್ತಿದ್ದರು. ಇಂತಹ ಪರಿಸ್ಥಿತಿಯನ್ನು ಮೆಟ್ಟಿ ವಿದ್ಯಾವಂತನಾದವರು ತೀರಾ ಕಡಿಮೆ.

ಶಾಲೆಯಲ್ಲೂ ವಿದ್ಯಾರ್ಥಿಗಳಿರಲಿ ನಮ್ಮ ಕೆಲ ಟೀಚರ್ಸ್‍ಗಳು ಸಹ ನಮ್ಮನ್ನು ಕೀಳಾಗಿ ನೋಡುತ್ತಿದ್ದರು. ನೀವು ಹೊಲೆಯರು ನಿಮಗ್ಯಾಕೆ ವಿದ್ಯಾಭ್ಯಾಸ? ನಿಮ್ಮ ತಲೆಗೆ ವಿದ್ಯೆ ಹತ್ತೋದಿಲ್ಲ. ನೀವು ಕೂಲಿ ಮಾಡುವುದಕ್ಕೇ ಲಾಯಕು… ಕೆಲ ಟೀಚರ್ಸ್‍ಗಳಿಲ್ಲಿದ ನಮ್ಮ ಬಗ್ಗೆಗಿನ ಪೂರ್ವಗ್ರಹಿಕೆ ಇದಾಗಿತ್ತು. ನೀವು ಕೊಳಕರು… ದುರ್ನಾತವೆಂದು ನಮ್ಮ ಬಳಿಗೆ ಬಂದಾಗ ಮೂಗು ಮುಚ್ಚಿಕೊಳ್ಳುತ್ತಿದ್ದರು. ಅಪ್ಪಿತಪ್ಪಿಯೂ ನಮ್ಮನ್ನು ತಮ್ಮ ಹತ್ತಿರಕ್ಕೆಸೇರಿಸಿಕೊಳ್ಳುತ್ತಿರಲಿಲ್ಲ. ನಮ್ಮ ಉಕ್ತಲೇಖನಗಳನ್ನು ಬೇರೆ ವಿದ್ಯಾರ್ಥಿಗಳಿಂದಲೇ ಪರಿಶೀಲಿಸಿ ತಿದ್ದಿತೀಡುತ್ತಿದ್ದರು. ಹೌದು ನಾವು ಕೂಡ ಸ್ನಾನ ಮಾಡಿಕೊಳ್ಳುತ್ತಿದ್ದೇ ವಾರಕೊಮ್ಮೆ. ಕೆಲವೊಮ್ಮೆ ಅದೂ ಇಲ್ಲ. ಹೊಟ್ಟೆಗೆ ಸರಿಯಾಗಿ ಊಟ ಸಿಗುವುದೇ ಕಷ್ಟವಾಗಿರಬೇಕಾದರೆ.. ನಮಗೆಲ್ಲಿ ಬಾಚಣಿಗೆ, ಎಣ್ಣೆ ಪೌಡರ್ ಸಿಗಬೇಕು? ಶಾಲೆಗೆ ಧರಿಸಲು ಯೋಗ್ಯವಾದ ಬಟ್ಟೆಗಳೆಂದರೆ ವರ್ಷದ ಪ್ರಾರಂಭದಲ್ಲಿ ಕೊಡುತ್ತಿದ್ದ ಯುನಿಫ಼ಾರ್ಮ ಬಟ್ಟೆಗಳು. ನಮ್ಮ ಮಿತಿಮೀರಿದ ಉಪಯೋಗದಿಂದ ಅವುಗಳು ಸಹ ತ್ಯಾಪೆಗಳಿಂದ ತುಂಬಿಹೋಗುತ್ತಿದ್ದವು.

ನಮ್ಮ ಮನೆಗಳು ಚಿಕ್ಕದಾಗಿದ್ದವು. ಮನೆಗಳೆನ್ನುವುದಕ್ಕಿಂತ ಗೂಡುಗಳೆಂದರೆ ಎಷ್ಟೋ ವಾಸಿ. ಅದು ಯಾವುದೋ ಪುಣ್ಯವತಿ ಸಿಸ್ಟರ್ ಕಟ್ಟಿಸಿಕೊಟ್ಟ ಮನೆಗಳಂತೆ. ಸಿಮೆಂಟ್ ಕಾಣದ ಮಣ್ಣಿನ ಮನೆಗೆಳು. ಮನೆಗಳಿಗೆ ಇದುದ್ದು ಎರಡೇ ಕೋಣೆಗಳು. ಮಧ್ಯದ ದೊಡ್ಡದೊಂದು ಕೋಣೆ ಮತ್ತು ಚಿಕ್ಕ ಅಡಿಗೆ ಮನೆ. ಸಾಮಾನ್ಯವಾಗಿ ನಮ್ಮ ಮನೆಗಳಿಗೆ ಇರುತ್ತಿದ್ದು ಒಂದು ಕಿಟಕಿ ಹಾಗು ಒಂದ್ ಬಾಗಿಲು. ಗಾಳಿ ಬೆಳಕು ಸಹ ನಮ್ಮ ಮನೆಗಳ ಮೇಲೆ ಅಸ್ಪೃಶ್ಯತೆ ಸಾಧಿಸುತ್ತಿತೋ ಎನೋ,!! ಅವು ನಮ್ಮ ಮನೆಗಳನ್ನು ಪ್ರವೇಶಿಸುತ್ತಿರಲಿಲ್ಲ. ಪ್ರವೇಶಿಸಲು ಸರಿಯಾದ ಬಾಗಿಲು ಕಿಟಕಿಗಳಿದ್ದರೆ ತಾನೆ! ಈ ಕಾರಣದಿಂದ ನಮ್ಮ ಮನೆಗಳು ಕತ್ತಲ ಗುಹೆಗಳಂತಿದ್ದವು. ಕೆಲವರ ಮನೆಗಳಲ್ಲಿ ಮಾತ್ರ ವಿದ್ಯುತ್ತಿನ ದೀಪಗಳಿದ್ದವು. ಅದು ಸರ್ಕಾರದ ಭಾಗ್ಯಜ್ಯೋತಿಯ ಯೋಜನೆ ಫಲದಿಂದ.

ಶಾಲೆಯ ಸ್ವಚ್ಛತೆಯ ಕೆಲಸದಲ್ಲಿ ನಮ್ಮ ಜಾತಿಯ ಹುಡುಗರದೇ ಮೇಲುಗೈ. ಮನೆಯಲ್ಲಿ ಮಾಡುತ್ತಿದ್ದ ಕೆಲಸಗಳಿಗೆ ಹೋಲಿಸಿ ನೋಡಿದರೆ ಶಾಲೆಯ ಸ್ವಚ್ಛತೆಯ ಕೆಲಸ ಅಷ್ಟಕಷ್ಟೇ. ಆಟಗಳಲ್ಲಿ ಕೂಡ ನಾವು ಮುಂದು. ಈ ಕಾರಣದಿಂದ ಇತರ ಹುಡುಗರು ನಮ್ಮನ್ನು ಆಟವಾಡಲು ಉಪಯೋಗಿಸಿಕೊಳ್ಳುತ್ತಿದ್ದರು. ಶಾಲೆ ಪ್ರಾರಂಭವಾಗುವ ಮುಂಚೆ ಒಂದು ಸುತ್ತಿನ ಆಟ ಮುಗಿದರೆ, ಇನ್ನೊಂದು ಮಧ್ಯಾಹ್ನ ಊಟದ ಸಮಯಕ್ಕೆ. ಜೂಟಾಟ, ಪೋಲಿಚೆಂಡ್, ಮರದಕೋತಿ ..ನಾವು ಆಡುತ್ತಿದ್ದ ಆಟಗಳು. ಹೀಗೆ ಒಂದು ಮಧ್ಯಾಹ್ನ ತುಂಬಾ ಆಟವಾಡಿದ ಕಾರಣ ನಮಗೆಲ್ಲಾ ಸಿಕ್ಕಾಪಟ್ಟೆ ಬಾಯಾರಿಕೆಯಾಗಿತ್ತು. ಬಾಯಾರಿಕೆಯನ್ನು ತಣಿಸಿಕೊಳ್ಳಲು ನಾವು ಯಾವಾಗಲೂ ಹೋಗುತ್ತಿದ್ದ ಅಂತೋಣಿಯ ಮನೆಗೆ ಹೋದೆವು. ಅಂತೋಣಿಯ ಮನೆ ಶಾಲೆಯ ಪಕ್ಕದಲ್ಲಿತ್ತು. ಮನೆಯನ್ನು ತಲುಪಿದಾಕ್ಷಣ ನಮಗಾಗಿಯೇ ಇರಿಸಿದ ಪ್ರತ್ಯೇಕ ಲೋಟಗಳಿಗೆ ಹುಡುಕಾಡಿದೆವು. ಆ ದಿನ ನಮ್ಮ ಲೋಟಗಳು ಕಾಣೆಯಾಗಿದ್ದವು. ನೀರುನ್ನು ನೀಡುತ್ತಿದ್ದ ಅಂತೋಣಿ ಅವರ ಲೋಟಗಳಲ್ಲೇ ನಮಗೆ ನೀರುನ್ನು ಕೊಡಲು ಬಂದಾಗ, ಅವನ ತಾಯಿ ’ಅವ್ರ ಕೈಗೆ ಲೋಟ ಕೊಡಬೇಡ… “ಬೇಕಾದ್ರೆ… ಚೊಂಬಿನಿಂದ ಅವರ ಕೈಗೆ  ಮೇಲಿಂದ ನೀರು ಹಾಕು ಬೊಗಸೆಯಲ್ಲಿ ಕುಡಿಯಲ್ಲಿ” ಎಂದು ಅಂತೋಣಿಯನ್ನು ಬೈದರು. ನನಗೆ ಬೇಸರವಾಯ್ತು. ಒಂದು ತರ, ಬೆಕ್ಕಿನ ಮುಂದೆ ಇಲಿಗೆ ಬೇಸರವಾದಂತೆ. ಸುಮ್ಮನಾದೆ. ನನ್ನ ಎರುಡು ಕೈಗಳನ್ನು ಜೋಡಿಸಿ ಬೊಗಸೆ ಮಾಡಿ ಮೇಲಿನಿಂದ ಸುರಿದ ನೀರನ್ನು ಕುಡಿದು ಶಾಲೆಗೆ ಹೊರಟೆ.

ಆ ದಿನ  ಶಾಲೆಯಲ್ಲಿ ಪಾಠ ಕೇಳಲು ಸಾಧ್ಯವಾಗಲಿಲ್ಲ. ನಮ್ಮನ್ನು ಏಕೆ ಜನರು ತುಚ್ಛವಾಗಿ ಕಾಣುತ್ತಾರೆ ಎಂಬ ಪ್ರಶ್ನೆ ಕಾಡಲು ಪ್ರಾರಂಭಿಸಿತ್ತು. ಪ್ರಶ್ನೆಗಳ ಮೇಲೆ ಪ್ರಶ್ನೆಗಳು ನನ್ನಲ್ಲಿ ಹುಟ್ಟಿ ಉತ್ತರಕ್ಕೆ ಕಾಯುತ್ತಿದ್ದವು. ಇನ್ನೊಂದು ಕಡೆ, ಊರಿನಲ್ಲಿ ನಡೆಯುವ ಅಸ್ಪೃಶ್ಯತೆಯ ಒಂದೊಂದೆ ಇಣುಕು ಕಣ್ಣ ಮುಂದೆ ಪ್ರತ್ಯಕ್ಷವಾಗಲು ಪ್ರಾರಂಭಿಸಿತ್ತು. ಊರಿನಲ್ಲಿ ನಡೆಯುವ ಬೇಡದೆಲೆಯಲ್ಲಿ ನಮಗಾಗಿಯೇ ಒಂದು ಪ್ರತ್ಯೇಕ ಜಾಗವಿರುತ್ತಿತ್ತು. ಯಾವುದೇ ಕಾರಣಕ್ಕೂ ನಾವು ಮೇಲ್ಜಾತಿಯವರು ಅಡುಗೆ ಮಾಡುವ ಸ್ಥಳಕ್ಕೆ ಹೋಗುವಂತಿರಲಿಲ್ಲ. ಅವರು ಉಪಯೋಗಿಸುತ್ತಿದ್ದ ಪಾತ್ರೆಗಳನ್ನು ನಾವು ಮುಟ್ಟುವಂತಿರಲಿಲ್ಲ. ಸೌಹಾರ್ದತ್ವ, ಸಮಾನತೆ, ಸಹೋದರತ್ವ ಬೆಳೆಸುವ ಉದ್ದೇಶದಿಂದ ಪ್ರಾರಂಭಗೊಂಡ ಇಂತಹ ಬೇಡುದೆಲೆಗಳಲೇ ನಮ್ಮನ್ನು ಪ್ರತ್ಯೇಕವಾಗಿಸುವುದನ್ನು ಕಂಡು ಮನಸ್ಸು ರೋಸಿಹೋಗುತ್ತಿತ್ತು. ಅಸ್ಪೃಶ್ಯತೆಯೆಂಬ ಭೂತ ಸತ್ತ ಹೆಣವನ್ನು ಸಹ ಬಿಡುತ್ತಿರಲಿಲ್ಲ. ನಮ್ಮ ಜನರ ಸತ್ತಾ ದೇಹವನ್ನು ಹೂಳಲು ಸಹ ಸಮಾಧಿಯಲ್ಲಿ ಪ್ರತ್ಯೇಕ ಸ್ಥಳವಿತ್ತು. ಮೇಲ್ಜಾತಿಯರು ಉಪಯೋಗಿಸುತ್ತಿದ್ದ ಬಾವಿಯಿಂದ ನಾವು ನೀರು ಸೇದುವಂತಿರಲಿಲ್ಲ. ಒಟ್ಟಾರೆ, ನಮ್ಮ ಬದುಕು ಅಮಾನವೀಯವಾಗಿತ್ತು.

ನಮಗೆ ಭಾನುವಾರಗಳಲ್ಲಿ ನಡೆಯುತ್ತಿದ್ದ ಧರ್ಮೋಪದೇಶದಲ್ಲಿ ನಮ್ಮ ಟೀಚರ್ಸ ’ ನಾವು ದೇವರ ಪ್ರತಿರೂಪ, ದೇವರ ನಮ್ಮನ್ನೆಲ್ಲರನ್ನೂ ಸಮಾನರಾಗಿ ತನ್ನ ರೂಪದಲ್ಲಿ ಸೃಷ್ಟಿಸಿದ್ದಾನೆ..” ಎಂದು ಹೇಳುವಾಗ,,, ನನ್ನ ಹೃದಯ ಬೆಂಕಿಯಾಗುತಿತ್ತು. ಪಾದ್ರಿಗಳು ಪೂಜೆಯ ಸಮಯದಲ್ಲಿ ಬೋಧಿಸುತ್ತಿದ್ದು ಕೂಡ ನನಗೆ ಅರ್ಥಹೀನವಾಗಿ ಕಾಣುತ್ತಿತ್ತು. ಅದ್ದರಿಂದ ಬಲಿಪೂಜೆ ಹೋಗಲು ನಿಲ್ಲಿಸಿಬಿಟ್ಟು ಸಿಸ್ಟರ್ಸ್ ಮತ್ತು ಪಾದ್ರಿಗಳ ಕಣ್ಣುಗಳಲ್ಲಿ ಕೆಟ್ಟ ಹುಡುಗನಾದೆ. ನಾಸ್ತಿಕ ಎಂಬ ಗೌರಕ್ಕೆ ಪಾತ್ರನಾದೆ. ಹೌದು ಎಲ್ಲರೂ ಸಮಾನರು ಎಂದು ಸಾರುವ ಕೈಸ್ತಧರ್ಮದಲ್ಲಿ ಈ ರೀತಿಯ ಜಾತಿಪದ್ಧತಿ ಇರುವುದು ನಿಮಗೆ ನಂಬಲಾಸಾಧ್ಯವಾಗಬಹುದು. ಆದರೆ ಇದು ಸತ್ಯ. ಹೀಗೆ ನಾವು ಕಲಿಯುತ್ತಿದ್ದ ಪಾಠಗಳು, ಪಾಲಿಸುತ್ತಿದ್ದ ಧರ್ಮಚರಣೆಗಳು ನಮ್ಮ ಬದುಕಿನ ವಾಸ್ತವ ಒಂದೊಂದು ಸಂಬಂಧವಿಲ್ಲದಂತೆ ನಡೆಯುತ್ತಿದ್ದವು. ಆದ್ದರಿಂದ ಎಲ್ಲವೂ ನನಗೆ ಅರ್ಥಹೀನವಾಗಿ ಕಾಣುತ್ತಿತ್ತು. ನನಗೆ ಮಾತ್ರವಲ್ಲ ನನ್ನ ಜನರಿಗೂ ಕೂಡ. ಆದ್ದರಿಂದ ನನ್ನ ಜನರಿಗೆ ಧಾರ್ಮಿಕ ವಿಧಿಯಾಚರಣೆಗಳಲ್ಲಿ ಎಳ್ಳಷ್ಟೂ ಆಸಕ್ತಿಯಿರಲಿಲ್ಲ. ಅವರು ಕೂಡ ಬಲಿಪೂಜೆಗಳಿಗೆ ಹೋಗುತ್ತಿದ್ದೇ ಅಪರೂಪ.

ಹೀಗೆ ಒಂದು ದಿನ ಕೂಲಿಗೆ ಹೋಗಿದ್ದ ನನ್ನ ಅವ್ವ ತನ್ನೊಡನೆ ಮನೆಯ ಬೀಗದ ಕೀಲಿಯನ್ನು ಸಹ ಎತ್ತಿಕೊಂಡು ಹೋಗಿಬಿಟ್ಟಿದರಿಂದ ಮಧ್ಯಾಹ್ನ ಊಟಕ್ಕೆ ಪರದಾಡಬೇಕಾಯ್ತು. ಎಂದಿನಂತೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಬಂದಿದ್ದರಿಂದ ಮಳೆಗಾಲದಲ್ಲಿ ವಟರ್‍ಗುಟ್ಟುವ ಕಪ್ಪಯಂತೆ ನನ್ನ ಹೊಟ್ಟೆ ವಟರ್ ವಟರ್ ಎಂದು ಸದ್ದು ಮಾಡಲಾರಂಭಿಸಿತ್ತು. ಖಾಲಿ ಹೊಟ್ಟೆಯನ್ನು ಸುಮ್ಮನಿರಿಸಲು ಏನದರೂ ಮಾಡಲೇ ಬೇಕಾಯ್ತು. ಹೂಟ್ಟೆ ತುಂಬ ನೀರು ಕುಡಿದೆ. ಆದರೂ ನನ್ನ ಹೊಟ್ಟೆ ಸುಮ್ಮನಾಗಲಿಲ್ಲ. ಕೊನೆಗೆ ಅವ್ವಳ ಬಳಿಯಿಂದ ಕೀಲಿ ತಂದು ಊಟಮಾಡಲು ನಿರ್ಧಾರಿಸಿದೆ. ನಿರ್ಧಾರದಂತೆ ಹೊಲಕ್ಕೆ ಹೋಗಿ ಕೀಲಿ ತಂದು ಊಟ ಮಾಡಿ ಬರುವಷ್ಟರಲ್ಲಿ ಸ್ಪಲ್ಪ ತಡವಾಗಿತ್ತು. ಅವಸರದಲ್ಲೇ ಶಾಲೆಯ ಕಡೆಗೆ ಓಡ ತೊಡಗಿದೆ. ಶಾಲೆಯ ಗೇಟಿನ ಹತ್ತಿರ ಬಂದಾಗ ಸಿಕ್ಕಪಟ್ಟೆ ಬಾಯಾರಿಕೆಯಾಗಿ ನನ್ನ ಬಾಯಿ ಪೂರ್ತಿ ಒಣಗಿತ್ತು. ಅಭ್ಯಾಸದಂತೆ ಶಾಲೆಯ ಪಕ್ಕದಲ್ಲೇ ಇದ್ದ ಅಂತೋಣಿಯ ಮನೆಗೆ ನೀರು ಕುಡಿಯಲು ಹೋದೆ. ಮನೆಯ ಮುಂದಿನ ಕೋಣೆಯನ್ನು ತಲುಪುತ್ತಿದಂತೆ, ಅಂತೋಣಿಯ ತಾಯಿ ಸುಸ್ತಾಗಿ ನೆಲದ ಮೇಲೆ ಕುಸಿದು ಬೀಳುವುದನ್ನು ಕಂಡು ತಬ್ಬಿಬಾದೆ. ಮನೆಯಲ್ಲಿ ಕೂಡ ಯಾರು ಇರಲಿಲ್ಲ. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವರಿಗೆ ನೀರು ತಂದು ಕುಡಿಸಬೇಕಾ? ಬೇಡವಾ? ವಿಪರೀತ ಇಕ್ಕಟ್ಟಿಗೆ ಸಿಕ್ಕಿಕೊಂಡೆ.  ಇದರ ನಡುವೆ, ಅವತ್ತು ಅಂತೋಣಿ ನನಗೆ ಅವನ ಲೋಟದಲ್ಲಿ ನೀರು ಕೊಡಲು ಬಂದಾಗ.. ’ಅವ್ರ ಕೈಗೆ ಲೋಟ ಕೊಡಬೇಡ.. “ ಎಂದು ಈ ತಾಯಿ ಬೈದ ಪ್ರಸಂಗವೂ ಕೂಡ ನನ್ನ ಮನಸ್ಸಿನಲ್ಲಿ ನುಸುಳಿಯಾರಂಭಿಸಿತ್ತು. ಏನು ಮಾಡುವುದೆಂದು ತೋಚದೆ ಕೊನೆಗೆ, ಧೈರ್ಯಮಾಡಿ ಮನೆಯ ಒಳಗೆ ಹೋಗಿ ನೀರು ತಂದು ಅವರ ಮುಖದ ಮೇಲೆ ನೀರನ್ನು ಚಿಮುಕಿಸಿ, ಕುಡಿಸಿ ಅವರನ್ನು  ಕುರ್ಚಿಯ ಮೇಲೆ ಕೂರಿಸಿದೆ. ಸಾವಕಾಶವಾಗಿ ಚೇತರಿಕೊಳ್ಳುತ್ತಿದ್ದ ಅಂತೋಣಿಯ ತಾಯಿಯ ಕಣ್ಣುಗಳು ಒಮ್ಮೆಲೇ ನನ್ನನ್ನು ನೋಡಲಾರಂಭಿಸಿದವು. ಅವಳ ಕಣ್ಣುಗಳು ಒಂದು ಕ್ಷಣಕಾಲ ಅಕ್ಕಪಕ್ಕ ತಿರುಗದೆ ನನ್ನ ಮೇಲೆ ನಿಶ್ಚಲವಾಗಿ ನೆಟ್ಟಿತ್ತು. ಸಿಟ್ಟುಕೊಂಡ ನೋಟವೋ? ಆಭಾರಿಯಾದ ನೋಟವೋ? ಗೊತ್ತಗಲಿಲ್ಲ. ಕಳ್ಳವಳ್ಳಗೊಂಡೆ.  ಈ ನೋಟದ ಅರ್ಥವಾದರೂ ಏನು? ಎಂಬ ಪ್ರಶ್ನೆ ನನ್ನನ್ನು ಕಾಡಲಾಂಭಿಸಿತ್ತು. ಒಟ್ಟಿನಲ್ಲಿ ಅವರ ನೋಟ ತೀಕ್ಷ್ಣವಾದ ಅಸಾಧರಣ ನೋಟವಾಗಿತ್ತು. ನೋಟದ ವಿಶ್ಲೇಷಣೆಯ ಗುಂಗಿನಲ್ಲೇ ಶಾಲೆ ಸೇರಿ ತಲೆ ತಗ್ಗಿಸಿ ತರಗತಿಯ ಬಾಗಿಲ ಬಳಿ ನಿಂತೆ. ತಗ್ಗಿ ಬಗ್ಗಿ ನಿಲ್ಲುವುದು ರಕ್ತಗತವಾಗಿಬಿಟ್ಟಿರುವ ನನಗೆ ತಗ್ಗಿ ನಿಲ್ಲಲು ಕಷ್ಟವಾಗಲಿಲ್ಲ . ಪೂಜೆಗೆ ಕರಡಿ ಬಿಟ್ಟಂತೆ ಬಂದ ನನ್ನನ್ನು ಟೀಚರ್ ಗುರಾಯಿಸಿ. …”ಈ… ಜನಗಳೇ ಹೀಗೆ… ಇವರನ್ನು ಯಾಕಾಗಿ ಶಾಲೆಗೆ ಸೇರಿಸ್ತಾರೋ…ಎಂದು ರಾಗ ಎತ್ತುತ್ತಿದಂತೆ.. ಟೀಚರ್‍ನನ್ನೇ ಸುಟ್ಟು ಭಸ್ಮಮಾಡುವಷ್ಟ ಕೋಪ ನನ್ನ ಮನಸ್ಸನು ತುಂಬಿತ್ತು. ಆದರೂ ಮರು ಮಾತನಾಡದೇ.. ಬಾಲ ಅಲ್ಲಾಡಿಸಿಕೊಂಡು ಯಜಮಾನನ ಮಾತು ಕೇಳುವ ನಾಯಿಯಂತೆ, ನಾನು ಕೂರುತ್ತಿದ್ದ ಸ್ಥಳದ ಕಡೆ ತಲೆ ತಗ್ಗಿಸಿಯೇ ಹೆಜ್ಜೆ ಹಾಕಿದೆ. ತರಗತಿಯಲ್ಲಿ ಎಲ್ಲರ ಕಣ್ಣು ನನ್ನ ಮೇಲೆ ನಾಟಿತ್ತು. ಮುಜುಗರದಿಂದಲೇ ನನ್ನ ಸ್ಥಳದಲ್ಲಿ ಕೂತು ಪಾಠ ಕೇಳಲು ಪ್ರಯತ್ನಿಸಲು ಪ್ರಾರಂಭಿಸಿದೆ…ಆದರೂ ಅಂತೋಣಿ ತಾಯಿಯ ನೋಟದ ಅರ್ಥವಾದರೂ ಏನು? ಎಂಬ ಪ್ರಶ್ನೆ ಉತ್ತರಕ್ಕಾಗಿ ಪೀಡಿಸತೊಡಗಿತ್ತು………….!!!


ಜೋವಿ
Read more!

Monday, 30 July 2012

ಉಳುವ ಯೋಗಿಯ ನೋಡಲ್ಲಿ


ಡಕಲು ದೇಹ ನಡಕಲು ನಡಿಗೆಯಲ್ಲಿ ನಡೆದು ಬಂದ ಈ ದೇಶಕ್ಕೆ ಅಷ್ಟಿಷ್ಟು ಗಟ್ಟಿಯಾಗಿ ನಿಲ್ಲಲು ಆಸರೆಯಾದುದು "ಬೆನ್ನೆಲುಬು". ಒಬ್ಬ ಮನುಷ್ಯನ ಒರಟುತನಕ್ಕೆ, ಗಡಸುತನಕ್ಕೆ ಅವನ ತಾಕತ್ತಿಗೆ ಬೆನ್ನೆಲುಬು ಸಾಕ್ಷಿಯಾಗಿ ನಿಲ್ಲುವಂಥದ್ದು. ನಾನು ಈಗಾಗಲೇ "ಈ ದೇಶಕ್ಕೆ" ಎಂದು ಬರೆದುಬಿಟ್ಟಿದ್ದೇನೆ. ಇದು ದೇಹಕ್ಕೋ, ದೇಶಕ್ಕೋ ಎಂಬ ಗೊಂದಲ ಮೂಡಿದ್ದರೆ ನೀವು ಸರಿಯಾದ ಧಾಟಿಯಲ್ಲೇ ಯೋಚಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ. ಇಲ್ಲಿ ದೇಶದ ಬೆನ್ನೆಲುಬಿನ ಬಗ್ಗೆಯೇ ಹೇಳಲು ಹೊರಟ್ಟಿದ್ದೇನೆ. 

ಈ ದೇಶದ ಬೆನ್ನೆಲುಬು ರೈತ ಎಂದು ಅದಾವ ಧೀರೊದ್ಧಾತ ಉದ್ಘರಿಸಿದನೋ?!!.. ಗೊತ್ತಿಲ್ಲ. ಉದ್ದುದಗಲ ದೇಶ ಕೃಷಿಯನ್ನೇ ಪ್ರಧಾನವಾಗಿ ನೆಚ್ಚಿಕೊಂಡು ಉಸಿರಾಡುತ್ತಾ ಹೆಸರೇಳುತ್ತ ಬಂದಿರುವುದೆ ಇದಕ್ಕೆ ಸಾಕ್ಷಿ. ಆದರೆ ಈಗಿನ ಪೀಳಿಗೆ ಕೃಷಿಯಂತಹ ಕ್ಲಿಷ್ಟ ಕೆಲಸವನ್ನು ದೂರವಿಟ್ಟು ಬೇರೆ ಬೇರೆ ಉದ್ಯೋಗವನ್ನು ಹರಸಿ ಹೋಗುತಿರುವುದರಿಂದ ರೈತವರ್ಗ ಶೇಕಡವಾರಿನಲ್ಲಿ ಕ್ಷೀಣಿಸುತಿದೆ. ರೈತ ದೇಶದಲ್ಲಿ "ಬೆನ್ನೆಲುಬಿನಂತಹ" ಪ್ರಧಾನ ಸ್ಠಾನವನ್ನು ಕಳೆದುಕೊಳ್ಳುತ್ತಿದ್ದಾನೆಯೆ? ಎಂಬ ಪ್ರಶ್ನೆ ಮೂಡುತಿದೆ. ಆ ಸ್ಠಾನವನ್ನು ತುಂಬಬಲ್ಲ ಇತರೆ ಉದ್ದಿಮೆಗಳು ನಮ್ಮ ದೇಶವನ್ನು ನಿಧಾನವಾಗಿ ಆವರಿಸುತ್ತಿವೆಯಾದರು ಕೃಷಿಯೇ ಇಂದಿಗೂ ದೇಶದ ಪ್ರಧಾನ ಉದ್ದಿಮೆ. ರೈತರೆ ಅದರ ಬೆನ್ನೆಲುಬು ಅನ್ನುವುದು ಮಾತ್ರ ಸಾರ್ವತ್ರಿಕ.  

 ಜಾಗತೀಕರಣ, ಉದಾರೀಕರಣ, ಖಾಸಗಿಕರಣಗಳಂಥ ನೀತಿಗಳು ಜಾರಿಯಾದದ್ದೇ ತಡ ಇತರೆ ಎಲ್ಲ ಉದ್ಧಿಮೆಗಳಿಂದ ಆದಾಯವೂ ಹೆಚ್ಚು, ಲಾಭವೂ ಹೆಚ್ಚು. ಅದರ ಫಲವಾಗಿ ಬೆಲೆ ಏರಿಕೆಯೂ ಹೆಚ್ಚಾಗಿದೆ. ವಾಸಕ್ಕೆ ಅಗತ್ಯವಾಗಿರುವ ಯಾವ ವಸ್ತುವೇ ಆಗಲಿ, ಆಹಾರ ತಿಂಡಿ-ತಿನಿಸುಗಳೇ ಆಗಲಿ ವಿಪರೀತ ಎನುವಷ್ಟು ಬೆಲೆ ಏರಿಕೆಯಾಗಿದೆ. ಕೃಷಿ ಉದ್ದಿಮೆಯಲ್ಲಿ ಅಕ್ಕಿ ಬೇಳೆ ತರಕಾರಿಯಂತಹ ದಿನ ಬಳಕೆಗಳು ಕೈಗೆಟುಕದ ಬೆಲೆ ಮುಟ್ಟಿದೆ. ವಿಧಿಯಿಲ್ಲದೆ ಕೊಂಡುಕೊಳ್ಳಲೇಬೇಕು. ಇಂತಹ ಸ್ಥಿತಿಯಲ್ಲಿ ಇವನ್ನೆಲ್ಲ ಬೆಳೆದ ರೈತ ಇದರ ಬಹುಪಾಲು ಲಾಭಪಡೆದು ಶ್ರೀಮಂತವರ್ಗದವನಾಗಬೇಕಿತ್ತು; ದೊಡ್ಡ ಉದ್ಧಿಮೆಯಾಗಿ ಬೆನ್ನೆಲುಬು ಎಂಬ ಪಟ್ಟದ ಜೊತೆಗೆ ತಲೆ, ಭುಜ, ತೊಳು, ಸೊಂಟದಾದಿಯಾಗಿ ಎಲ್ಲ  ಬಿರುದನ್ನು ಪಡೆಯಬೇಕಿತ್ತು ಕೃಷಿ;  ಆದರೆ ಅದದ್ದೇನು! ಕೀಟಗಳಂಥ ಮಧ್ಯವರ್ತಿಗಳಿಂದ ನೆಲಕಚ್ಚುತ್ತಾಹೋಯಿತು. ಒಂದು ರೀತಿಯಲ್ಲಿ ಮಧ್ಯವರ್ತಿಗಳಿಂದ ಮೋಸಕ್ಕೊಳಗಾದ ಉದ್ದಿಮೆಯಾಗಿಬಿಟ್ಟಿದೆ. ಅತ್ತ ಮಾರುಕಟ್ಟೆಯ ಬೆಲೆಯೂ ಇಲ್ಲದೇ ಬೆಂಬಲಬೆಲೆಯೂ ಸಿಗದೆ ಕುಸಿಯುತ್ತಿದ್ದಾನೆ ರೈತ.
         ಎಲ್ಲರ ಸ್ಥಿತಿಯಲ್ಲೂ ಉತ್ತಮದತ್ತ ಬದಲಾವಣೆಗಳು ಕಾಣಿಸುತಿರುವಾಗ ನಿಸ್ವಾರ್ಥ ರೈತನ ಸ್ಥಿತಿ ಮಾತ್ರ ಹಾಗೆ ಇದೆ. ಕಾರಣ ಸಾಮಾನ್ಯ ಅಕ್ಕಿಯ ಬೆಲೆ 30 ರಿಂದ 50 ಇರುವಾಗ ಅದರ ಉತ್ಪಾದಕ ರೈತನಿಗೆ ಸಿಗುವುದು ಕೇವಲ 8 ರಿಂದ 12 ರೂ. ಮಾತ್ರ. ಅಂದರೆ ಇದರ ನಾಲ್ಕು ಪಟ್ಟು ಲಾಭ ಬಂಡವಾಳಶಾಹಿಗೆ, ವ್ಯಾಪಾರಸ್ಥರಿಗೆ ಮತ್ತು ಮಧ್ಯವರ್ತಿಗಳಿಗೆ ಸೇರುತ್ತಿದೆ. ಉತ್ತು, ನಾಟಿಮಾಡಿ, ನಾಲ್ಕೈದು ತಿಂಗಳು ನೀರುಣಿಸಿ, ಕ್ರೀಮಿ ಕೀಟ ರೋಗಗಳಿಂದ ಕಾಪಾಡಿ ನಿದ್ದೆಗೆಟ್ಟು ಬೆಳೆ ತೆಗೆದರೆ ಕಡೆಗೆ ತಾನೂ ನೆಮ್ಮದಿಯಾಗಿ ಅನ್ನ ತಿನ್ನಲಾಗದ ಪರಿಸ್ಥಿತಿ. ಒಂದು ಮೂಟೆ ಮನೆ ಮನೆಮಂದಿಗಾಗಲಿ ಎಂದು ಮಾರದೆ ಉಳಿಸಿಕೊಂಡರೆ, ಮಾರಿದ್ದರಿಂದ ಬಂದ ಹಣ ಖರ್ಚನ್ನು ಸರಿದೂಗಿಸುವುದಿಲ್ಲವಲ್ಲ ಎಂಬ ಆತಂಕ. ಇತ್ತ ದೊಡ್ಡ ಪಟ್ಟಣಗಳಲ್ಲಿ "ಮಾಲ್" ಗಳ ಸಂಸ್ಕೃತಿ ಹೆಚ್ಚುತಿದೆ. ಇಂತಹ ಮಾಲುಗಳಲ್ಲಿ ಒಂದು ಪೊಪ್‌ಕಾನ್ ಪೊಟ್ಟಣವನ್ನು ಕೊಂಡುಕೊಂಡರೆ 80 ರಿಂದ 100 ರೂ. ಇದನ್ನು ತಯಾರಿಸಲೊ ನಾಲ್ಕು ಹಿಡಿ ಮೆಕ್ಕೆಜೋಳ ಬಳಸಿದ್ದರೆ ಹೆಚ್ಚು. ಆ ನಾಲ್ಕು ಹಿಡಿ ಮೆಕ್ಕೆ ಜೋಳವನ್ನು ಉತ್ಪಾದಕ ರೈತನಿಂದ ಖರೀದಿಸುವಾಗ ಒಂದೋ ಎರಡೊ ರೂಪಾಯಿ ಕೊಟ್ಟಿರುತ್ತಾರೆ ಅಷ್ಟೇ.  ಇದಕ್ಕೊಂದು ತಾಜಾ ಉದಾಹರಣೆ; ಇತ್ತೀಚೆಗೆ ಮಧ್ಯವರ್ತಿಗಳೊಬ್ಬರು ನಮ್ಮ ಊರಿನಲ್ಲಿ ತೆಂಗಿನಕಾಯಿಯನ್ನು ಒಂದಕ್ಕೆ 3 ರೂಗೆ ಕೊಂಡುಕೊಂಡರು. ಆದರೆ ಬೆಂಗಳೂರಿನಲ್ಲಿ ಆ ತೆಂಗಿನಕಾಯಿಗೆ 10 ರಿಂದ 15 ರೂ. ಬೆಲೆಯಿದೆ. ತಮಾಷೆ ಏನೆಂದರೆ ಹತ್ತು ವರ್ಷದ ಹಿಂದೆಯೂ ರೈತರಿಂದ ತೆಂಗಿನಕಾಯಿ ಒಂದಕ್ಕೆ 3 ರೂ ಕೊಟ್ಟು ಖರೀದಿಸುತಿದ್ದರು. ರೈತರನನ್ನು ಈಗಲೂ ಅಮಾಯಕನನ್ನಾಗಿ ಇರಿಸಿದ್ದಾರೆ ಮಧ್ಯವರ್ತಿಗಳು. ಎಳನೀರಿನ ವ್ಯಾಪಾರದಲ್ಲೂ ಇದೆ ದೊರಣೆ. ಇದ್ಯಾವುದರ ಅಂದಾಜು ಲೆಕ್ಕಾಚಾರ ತಿಳಿದಿಲ್ಲದ ರೈತ ಮಾತ್ರ ತನ್ನ ಬೆನ್ನೆಲುಬನ್ನು ಹುರಿಮಾಡಿಕೊಂಡು ತಲೆ ಬಗ್ಗಿಸಿ ದುಡಿಯುತ್ತಲೇ ಇದ್ದಾನೆ.
ದೇಶದಲ್ಲಿ ಜಾಗತಿಕರಣ ಉದಾರೀಕರಣ ಯಾವುದೆ ಬಂದರೂ ರೈತಾರ ಉದ್ದಾರ ಮಾತ್ರ ಸಾಧ್ಯವಿಲ್ಲ ಎಂಬ ವ್ಯಾಕರಣ ಗೊತ್ತೆಯಿದೆ. ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿನ ಬಿಗುಮಾನದಿಂದ ಸರ್ಕಾರ ಸ್ಥಿರವಾಗಿಲ್ಲ; ರಾಷ್ಟ್ರಪತಿಯ ಆಯ್ಕೆಯಲ್ಲಿ ವಿವಿಧ ರಾಜಕೀಯ ಪಕ್ಷದ ದೊಂಬರಾಟ ನಡೆಯಿತ್ತಲ್ಲ; ಲಂಡನ್ ಒಲಂಪಿಕ್‌ನಲ್ಲಿ ಕ್ರೀಡಾಳುಗಳಿಗೆ ಲೈಂಗಿಕ ಸುರಕ್ಷಿತೆಗಾಗಿ ನಿರೋದ್ ಗಳನ್ನು ಇನ್ನಿಲ್ಲದಂತೆ ಹಂಚಿದ್ದಾರಲ್ಲ; ಕಾರ್ಗಿಲ್ ಯುದ್ಧ ಗೆದ್ದು ಜುಲೈ ಗೆ 13 ನೇ ವರ್ಷದ ವಿಜಯೋತ್ಸವ ಆಚರಿಸಿದೇವಲ್ಲ; ರಾಜೇಶ್ ಖನ್ನನ ಸಾವು ಅವನ ಮಹಿಳಾ ಅಭಿಮಾನಿಗಳಿಗೆ ಹೃದಯವಿದ್ರಾವಕ ಗಳಿಗೆ ಎಂದು ಟಿವಿ ಚಾನೆಲುಗಳು ಬಿತ್ತರಿಸಿದ್ದವಲ್ಲ; ಅಸ್ಸಾಂ ನಲ್ಲಿ ಎರಡು ಸಮುದಾಯದ ನಡುವೆ ಹತ್ತಿ ಉರಿದ ಭೀಕರ ಕಾಳಗ ಆನೇಕರನ್ನು ಆಹುತಿ ತೆಗೆದುಕೊಂಡಿತ್ತಲ್ಲ...... ಇವ್ಯಾವುದರ ಮೇಲೂ ಬೇರೆ ಉದ್ದಿಮೆಗಳಂತೆ ರೈತನು ಲಾಭ ನಷ್ಟಕ್ಕೆ ತಕ್ಕಡಿ ಹಿಡಿಯುವುದಿಲ್ಲ. ತಾನು ಬೆಳೆದ ಬೆಳೆಗೆ ತಕ್ಕಡಿ ಹಿಡಿಯುವಾಗಲೂ ಕೊಟ್ಟ ಕ್ರಯಕ್ಕೆ ಇಟ್ಟು ತೃಪ್ತನಾಗುತ್ತಾನೆ ರೈತ. ಈ ವರ್ಷ ಕರ್ನಾಟಕದಲ್ಲಿ ಬರದ ಛಾಯೆ ಹೆಚ್ಚಾಗಿಯೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಹೊಣೆಮಾಡಿ, ಪರಹಾರಕೊಡಿ ಅಥವಾ ಸಾಲಮನ್ನಾ ಮಾಡಿ ಎಂದು ಬೊಬ್ಬೆಯಿಟ್ಟು ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳುವ ಜಾಣಕೋರನಲ್ಲ. ಅಷ್ಟಿಷ್ಟು ಮಳೆಯಾದರೆ ಸಾಕು ನೇಗಿಲು ಹೊತ್ತು ಹೊಲವನ್ನು ಉಳುವುದೇ ಧರ್ಮ ಎಂದು ಕಚ್ಚೆ ಬಿಗಿ ಮಾಡಿ ಹೋರಟುಬಿಡುತಾನೆ.


ಇದೆಲ್ಲ ನೋಡುತ್ತಿದ್ದರೆ ರಾಷ್ಟ್ರಕವಿ ಕುವೆಂಪುರವರು "ನೇಗಿಲ ಯೋಗಿ" ಶೀರ್ಷಿಕೆಯಡಿ ರೈತನ ಮೇಲೆ ಬರೆದ ಕಾವ್ಯ ಸರ್ವಕಾಲಕ್ಕೂ ಒಪ್ಪುತ್ತಿದೆ. "ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ ಹಾರಲಿ ಗದ್ದುಗೆ ಮುಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೇ ಇಲ್ಲ" ಎನ್ನುವಾಗ ಅವರನೊಮ್ಮೆ ನೋಡಬೇಕೆನಿಸುವುದಿಲ್ಲವೇ?..!


                                                                                                         -ಸಂತೋಷ್.ಇ

Friday, 27 July 2012


ರವೀಂದ್ರನಾಥ ಠಾಕೂರರ ’ಗೀತಾಂಜಲಿ’ಯಿಂದ…

(ಫಾ. ಜೀವನ್ ಪ್ರಭು ಅನುವಾದಿಸಿರುವ ಸೌಹಾರ್ದ ಪುಸ್ತಕದಿಂದ)


ಅವನ ಸದ್ದಿಲ್ಲದ ಹೆಜ್ಜೆಗಳನ್ನು ಆಲಿಸಿದ್ದೀರಾ?
ಅವನು ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಪ್ರತಿಯೊಂದು ಕ್ಷಣದಲ್ಲಿ, ಪ್ರತಿಯೊಂದು ಯುಗದಲ್ಲಿ
ಪ್ರತಿಯೊಂದು ಹಗಲು ಇರುಳಿನಲ್ಲಿ ಅವನು ಬರುತ್ತಾನೆ
ಬರುತ್ತಾನೆ, ಎಂದೆಂದೂ ಬರುತ್ತಾನೆ.
ಅನೇಕ ಮನಃಸ್ಥಿತಿಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದೇನೆ ನಾನು,
ಆದರೆ ಅವುಗಳ ಸ್ವರಗಳೆಲ್ಲ ಘೋಷಿಸಿವೆ-
ಅವನು ಬರುತ್ತಾನೆ.. ಬರುತ್ತಾನೆ, ಎಂದೆಂದೂ ಬರುತ್ತಾನೆ.
ಬಿಸಿಲ ಚೈತ್ರ ಕಂಪಿನ ದಿನಗಳಲ್ಲಿ
ಅಡವಿದಾರಿಯಲ್ಲಿ ಅವನು ಬರುತ್ತಾನೆ
ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಶ್ರಾವಣದ ಇರುಳುಗಳು ಮಳೆ ಮಬ್ಬಿನಲ್ಲಿ
ಮೋಡಗಳ ಗುಡುಗಿದ ರಥದ ಮೇಲೆ
ಅವನು ಬರುತ್ತಾನೆ, ಬರುತ್ತಾನೆ, ಎಂದೆಂದೂ ಬರುತ್ತಾನೆ.
ಪುಂಖಾನುಪುಂಖ ದುಃಖಗಳಲ್ಲಿ
ನನ್ನ ಎದೆಯನ್ನೊತ್ತುವುವು ಅವನ ಹೆಜ್ಜೆಗಳು
ನನ್ನ ಸಂತಸ ಹೊಳೆಯುವಂತೆ ಮಾಡುವುದು
ಅವನ ಪಾದಗಳ ಸ್ಪರ್ಶ..Read more!