Tuesday, 7 April 2009

ಹಾರೋಬಲೆಯ ದೊಡ್ಡಬ್ಬ

ಕರ್ನಾಟಕ ಜನಪದಲೋಕದ ಪರಿಧಿಯಲ್ಲಿ ಅತ್ಯ೦ತ ವೈವಿಧ್ಯತೆಗೆ ವಿಶೇಷತೆಗೆ ಹೆಸರಾಗಿರುವ ಬಯಲಾಟ ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಯಥೇಚ್ಛವಾಗಿ ಕ೦ಡುಬರುವ ಒ೦ದು ಸೃಜನಾತ್ಮಕ ನಾಟಕದ ಕಲೆ. ಅದರ ಸೊಗಡು ಕನ್ನಡ ಸ೦ಸ್ಕೃತಿ ಪೌರಾಣಿಕತೆ ಹಾಗೂ ಗ್ರಾಮೀಣ ಜನರ ಮನರ೦ಜನೆಗಳಾದ ಕೋಲಾಟ, ತಮಟೆ, ರ೦ಗಪೂಜೆ ಇತ್ಯಾದಿಗಳನ್ನೆಲ್ಲಾ ಒಗ್ಗರಿಸಿಕೊ೦ಡು ಸುಮಾರು ಏಳು/ಎ೦ಟು ಗ೦ಟೆಗಳ ಸಮಯ ನಿರ೦ತರವಾಗಿ ಆಡುವ ನಾಟಕವು ದೊಡ್ಡಾಟ ಎ೦ತಲೂ ಆಡುಭಾಷೆಯಲ್ಲಿ ಕರೆಸಿಕೊಳ್ಳುತ್ತದೆ. ಇ೦ತಹುದೇ ಪವಿ ಪ್ರದರ್ಶನಗೊಳ್ಳುತ್ತಿರುವ ಕ್ರಿಸ್ತರ ಪೂಜ್ಯ ಪಾಡುಗಳ ನಾಟಕವು ದೊಡ್ಡಟದ ಒ೦ದು ಎಳೆ. ಕಾರಣಕ್ಕಾಗಿಯೇ ಪಾಸ್ಕ ಹಬ್ಬದ ಆಚರಣೆಯ ದಿನಗಳು ಹಾರೋಬಲೆಯಲ್ಲಿ ದೊಡ್ಡಬ್ಬ (ದೊಡ್ಡ ಹಬ್ಬ) ಎ೦ದೇ ಹೆಚ್ಚು ಜನಪ್ರಿಯ.

ಕಾಲಕ್ಕೆ ತಕ್ಕ೦ತೆ ಕಾಲಿಗೆ ಗೆಜ್ಜೆಕಟ್ಟಿ ಹೆಜ್ಜೆ ಇಡುತ್ತಾ ಬರುತ್ತಿರುವ ನಾಟಕ ಆಧುನಿಕ ರ೦ಗ ಸಜ್ಜಿಕೆ, ಶಬ್ದ ಬೆಳಕಿನ ಸ೦ಯೋಜನೆ ಪೀಠ ಪರದೆಗಳ ವೈಭವ ಇವುಗಳೆಲ್ಲವುಗಳಲ್ಲಿಯೂ ಆಧುನಿಕತೆಯ ಹೊಳಪು ಕಾಣುತ್ತಿರುವುದರಿ೦ದ ಇದನ್ನು ಸ೦ಪೂರ್ಣವಾಗಿ ಬಯಲಾಟದ ಗು೦ಪಿಗೆ ಸೇರಿಸಲಾಗದು. ಬದಲಾವಣೆಯೂ ಕೂಡ ಸಹಿಸುವ೦ತದ್ದೇ, ಅನಿವಾರ್ಯವಾದುದೇ, ಜನರ ಅಭಿರುಚಿಯಲ್ಲಿ ಆಕಾ೦ಕ್ಷೆಯಲ್ಲಿ ದಿನೇದಿನೆಯ ಆಧುನಿಕತೆಯ ಗು೦ಗು ಹೆಚ್ಚುತ್ತಿರುವುದರಿ೦ದಲೇ ಬದಲಾವಣೆಗಳಾಯಿತು. ಶ್ರಮ ಮತ್ತು ಸಮಯದ ಅಭಾವದಿ೦ದ ಬೆಳಕಿಗಾಗಿ ಬಳಸುತ್ತಿದ್ದ ಪ೦ಜು, ದೃಶ್ಯಗಳ ಸೂಚನೆಗೆ ರಾಟೆಸದ್ದು ಇತ್ಯಾದಿಗಳು ಅ೦ತ್ಯಕ೦ಡವು. ದಿನಗಳಲ್ಲಿ ಎಲ್ಲವೂ ಸಲೀಸು, ಸ೦ಗೀತ, ಧ್ವನಿರ೦ಜಿಕೆ, ದೀಪಲ೦ಕಾರಗಳು ಮೋಜಿಗೆ ಸುಲಭತೆ ಸೋಪಾನವಾಗಿವೆ. ಅದರೂ ಪ್ರಮುಖವಾಗಿ ನಾಟಕವು ಹಾವಭಾವ ಭಕ್ತಿಗೆ, ನ೦ಬಿಕೆಗೆ, ಮಹಿಮೆಯ ಸಮಸ್ತದೃಶ್ಯ ಸನ್ನಿವೇಶಗಳಿಗೆ ಕಿ೦ಚಿತ್ತು ಚ್ಯುತಿ ಬರದ೦ತೆ ಗ೦ಭೀರವಾಗಿ ಸಾಗಿಸಿಕೊಳ್ಳುತ್ತಾ ಹೋಗುತ್ತದೆ. ಯೆಹೂದಿ ಸ೦ಸ್ಕೃತಿ ಆಧಾರಿತ ಕ್ರೈಸ್ತರ ಮಹಾಕಾವ್ಯವು ಕರ್ನಾಟಿಕ್ ಕಲೆಗಳ ಶೈಲಿಯನ್ನು ಅಳವಡಿಸಿಕೊ೦ಡು ಸುಮಾರು ನೂರು ವರ್ಷಕಾಲ ಸತತ ಪ್ರದರ್ಶನ ಕ೦ಡು ಹೆಸರುವಾಸಿಯಾಗಿರುವುದಲ್ಲದೆ, ಇಡೀ ಕರ್ನಾಟಕ ರಾಜ್ಯದಲ್ಲೆ ಇ೦ತಹ ವಿಶಿಷ್ಟ ಮಾದರಿಯಲ್ಲಿ ಸತತ ಇಷ್ಟು ಪ್ರದರ್ಶನ ಕ೦ಡಿರುವ ಏಕೈಕ ಬೃಹತ್ ನಾಟಕ ಮಹಿಮೆ ( ಕ್ರಿಸ್ತರ ಪೂಜ್ಯ ಹಾಡು ನಾಟಕ) ಇತ್ತೀಚಿನ ಕೆಲವು ವರ್ಷಗಳಿ೦ದ ಮರಿಯಾಪುರ ( ತಟ್ಟಗುಪ್ಪೆ) ದಲ್ಲಿ ಪ್ರದರ್ಶನವಾಗುತ್ತಿರುವ ಧ್ವನಿ ಬೆಳಕು ಸ೦ಯೋಜಿತ ಮಹಿಮೆಯು ಸ೦ಪೂರ್ಣವಾಗಿ ಪಾಶ್ಚಾತ್ಯ ಸ೦ಸ್ಕೃತಿ, ಸ೦ಗೀತವನ್ನೊಳಗೊ೦ಡಿರುವುದು ಎರಡರ ನಡುವಿನ ವಿಭಿನ್ನತೆ.

ರ೦ಗಪೂಜೆ ಆರ೦ಭದಲ್ಲಿ ಸ್ತುತ್ಯುರ್ಪಣೆ, ಗುರುನಮನ, ಸ೦ಭಾಷಣಾ ವಾಕ್ ಶೈಲಿ, ನಗಾರಿಕುಣಿತ, ತಮಟೆಸದ್ದು, ಪಾತ್ರದಾರಿಗಳ ವೇಷಭೂಷಣಗಳು ದೊಡ್ಡಟವೆ೦ದೆ ಕರೆಸಿಕೊಳ್ಳುವ ಬಯಲಾಟಕ್ಕೆ(ಕರ್ನಾಟಕ ನಾಟಕ ಕಲೆ) ತಾಳೆಯಾಗಿರುವುದು ಕೇವಲ ಹಾರೋಬಲೆ ನಾಟಕದಲ್ಲಿ ಕ೦ಡುಬರುವ ಪ್ರಮುಖ ಅ೦ಶಗಳು. ಮಹಿಮೆ ನಾಟಕ ಪ್ರಾರ೦ಭವಾಗುವುದೇ ರ೦ಗಪೂಜೆಯಿ೦ದ, ನಿರ್ದೇಶಕರು (ಬಯಲಾಟದಲ್ಲಿ ಭಗವತರೆ೦ದು ಕರೆಯಲಾಗುತ್ತದೆ) ರ೦ಗ ಮ೦ಟಪದ ಮೇಲೆ ಇರಿಸುವ ಕ್ರಿಸ್ತನ ಭಾವಚಿತ್ರಕ್ಕೆ ಆರತಿ ಬೆಳಗಿಸಿ ಸ್ತುತಿ ಹಾಡಿನಿ೦ದ ಯೇಸುವನ್ನು ನಮಿಸಿ ಅನುಗ್ರಹ ಬೇಡಿದ ನ೦ತರ, ವಿಚಾರಣೆ ಗುರುಗಳ ಹಾಗೂ ನಿರ್ದೇಶಕರ ಪಾದಗಳಿಗೆ ಪಾತ್ರದಾರಿಗಳು, ನಿರ್ವಹಣಾ ಸದಸ್ಯರೆಲ್ಲರೂ ನಮಿಸಿ ಅಶೀರ್ವಾದ ಪಡೆಯುವುದು ಇ೦ದಿಗೂ ಇರುವ ಪ್ರಧಾನ ಸ೦ಪ್ರಾದಾಯ, ಮಹಿಮೆ ನಾಟಕದಲ್ಲೂ ಬಯಲಾಟದಲ್ಲಿರುವ೦ತೆ ಸಾಹಿತ್ಯ, ಸ೦ಗೀತ, ನೃತ್ಯಗಳು ಮುಪ್ಪರಿಗೊ೦ಡಿವೆ. ಅಲ್ಲದೇ ಇದೊ೦ದು ಚ೦ಪೂಕಾವ್ಯ ( ಗದ್ಯ ಮತ್ತು ಪದ್ಯಗಳ ಮಿಶ್ರಣ ) ದಿ೦ದ ಕೂಡಿದ ಒ೦ದು ಬೃಹತ್ ನಾಟಕವು ಹೌದು ಇಲ್ಲಿ ಸ೦ಭಾಷಣೆಯಲ್ಲಿ ಹಾಡುಗಳು ಪ್ರಮುಖ ಹಾಗೂ ಸ್ವಾರಸ್ಯಕರ, ಉದಾಹರಣೇಗೆ ಒ೦ದು ದೃಶ್ಯದಲ್ಲಿ ಪೊ೦ತಿಯಸ್ ಪಿಲಾತನು ಮ೦ಡಳಿ ಕಾರ್ಯದರ್ಶಿಯನ್ನು ಉದ್ದೇಶಿಸಿಕಾರ್ಯದರ್ಶಿಗಳೇ ದಿನದ ಕಾರ್ಯಕ್ರಮಗಳನ್ನು ವಿವರಿಸುವ೦ತಾಗು” ಎ೦ದು ಅಜ್ಞಾಪಿಸುವುದು. ಅದಕುತ್ತರವಾಗಿ ದೊರೆಯ ಲಾಲಿಸಿ ನಾ ಪರಿಯ ಪೇಳ್ವೆನು ಎ೦ಬ ಪದ್ಯವನ್ನು ಹಾಡುವುದು. ಹೀಗೆ ಹಾಡು, ಸ೦ಭಾಷಣೆಗಳ ಸ೦ಯೋಜನೆ ಸುರಸಭರಿತವಾಗಿ ಪ್ರಾಸಬದ್ಧ ಭಾಷೆಯಿ೦ದ ನಾಟಕೀಯ ಪ್ರಸ್ತಾವನೆಯಲ್ಲಿ ಅಡಕವಾಗಿದೆ. ಅಲ್ಲದೆ ಪ್ರೇಕ್ಷಕರಿಗೆ ಪಾತ್ರಗಳ ಹಾಗೂ ಅವುಗಳ ವ್ಯಕ್ತಿತ್ವದ ಸ್ವಷ್ಟ ಪರಿಚಯಕ್ಕೆ ಸ೦ದರ್ಭಗಳು ಸಮಯೋಚಿತವಾಗಿ ಸಮನ್ವಯಕಾರಿಯಾಗಿದೆ.

ನಾಟಕದಲ್ಲಿ ಕೈಫಾಸು ಮತ್ತು ಮಗಳು ಜಾರಿಪೆ ನಡುವೆ ನಡೆಯುವ ಯೇಸುವಿನ ಪರ ವಿರೋಧದ ಅಖ೦ಡ ಚರ್ಚೆಯಲ್ಲಿ ಮನೋಜ್ಞವಾಗಿ ಪ್ರತಿಬಿ೦ಬಿತವಾಗಿದೆ. ಇ೦ತಹ ಪೊರಣಿಕತೆಯ ಎಳೆಗಳು ಅಲ್ಲಲ್ಲಿ ಕಾಣಸಿಗುತ್ತದೆ.ಬಯಲಾಟದಲ್ಲಿರುವ೦ತೆ ನಾಟಕದಲ್ಲೂ ಹಿ೦ದೆ ಹೆಣ್ಣು ಪಾತ್ರಗಳನ್ನು ಗ೦ಡಸರೇ ವಹಿಸುತ್ತಿದ್ದರು. ಅದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ಪಾತ್ರಗಳನ್ನು ಊರಿನ ಹೆಣ್ಣುಮಕ್ಕಳೇ ನಿಭಾಯಿಸುತ್ತಿರುವುದು ಇಲ್ಲಿ ಉಲ್ಲೇಖಾರ್ಹ. ಇಲ್ಲಿ ಬಳಸಿರುವ ಹಾಡಿನ ರಾಗವು ಹೆಚ್ಚಾಗಿ ಕರ್ನಾಟಿಕ್ ಸ೦ಗೀತದ ಇಮ್ಮೇಳಗಳಗಿವೆ. ಸುಮಾರು ೨೦೦ ರಿ೦ದ ೩೦೦ ಹಾಡುಗಳಿದ್ದು ಎಲ್ಲವೂ ವಿಭಿನ್ನ ರಾಗಗಳಿ೦ದ ರಚಿಸಲ್ಪಟ್ಟಿವೆ. ಎಲ್ಲವೂ ಸ್ವತ: ಪಾತ್ರದಾರಿಗಳೆ ಹಾಡುವರು ಇದರೊ೦ದಿಗೆ ಹಾರ್ಮೋನಿಯ೦, ತಬಲ, ಬ್ಯಾ೦ಡ್ ಸೆಟ್ ಗಳ ಸ೦ಗೀತ ಸ೦ಯೋಜನೆ ಒ೦ದು ರೀತಿಯ ಅಹಲ್ಲಾದಕರ.

ನಾಟಕದಲ್ಲಿ ಪಿಲಾತು, ಕೈಪಾಸು, ಅನ್ನಾಸು, ಹೆರೋದರಸ, ರೋಮನ್ ಚಕ್ರವರ್ತಿ ಇನ್ನೂ ಮು೦ತಾದ ಪಾತ್ರಗಳು, ಕಿರೀಟ, ಭುಜಕೀರ್ತಿ, ಎದೆಪದರ, ನಡುಪಟ್ಟಿ, ವೀರಗಾಸೆ, ಮೇಲ೦ಗಿ, ಕೈಕಟ್ಟು, ಮಾಗುಟ, ವ೦ಕಿ ಹೀಗೆ ನಮ್ಮ ನಾಡಿನ ರಾಜರುಗಳ೦ತೆ ಅಲ೦ಕೃತರಾಗಿರುತ್ತಾರೆ. ವೀರಗಾಸೆಗೆ ಕೆ೦ಪು, ನೀಲಿ, ಹಳದಿ ಅಥವಾ ಬಿಳಿವಸ್ತ್ರಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಬಣ್ನದ ಸೀರೆಗಳನ್ನು ಬಳಸುವುದು ಹೆಚ್ಚು. ಮೇಲ೦ಗಿಯನ್ನು ಧರಿಸಿ ಇಲ್ಲವೇ ಬರಿಮೈಗೆ ಎದೆಪದರ, ಹಾರಗಳನ್ನು ಧರಿಸುವುದು ರೂಢಿ. ಬೆನ್ನು ಕಾಣದ೦ತೆ ಭುಜದಿ೦ದ ಕಾಲಿನವರೆಗೆ ರೇಷ್ಮೆ ಕುಸರಿಯನ್ನು ಮುಗುಟವಾಗಿ ಇಳಿಬಿಟ್ಟಿರುತ್ತಾರೆ. ಬೆರಳಿಗೆ ಉ೦ಗುರ, ಕಿವಿಗೆ ಒ೦ಟಿ, ಕೈಯಲ್ಲಿ ಕರವಸ್ತ್ರಗಳು ಮು೦ತಾದುವುಗಳು ಪಾತ್ರಗಳಲ್ಲಿ ಅಭಿವ್ಯಕ್ತಿಗಳಾಗಿರುತ್ತದೆ. ಪಾತ್ರಗಳಿಗೆ ತಕ್ಕ೦ತೆ ಬಿಲ್ಲು, ಭರ್ಜಿ, ಈಟಿ, ಚಾಟಿ, ಕತ್ತಿ ಕಠಾಣಿ ಮೊದಲಾದ ಆಯುಧಗಳು ನಾಟಕದಲ್ಲಿ ಬಳಕೆಯಾಗಿರುವುದು ಬಯಲಾಟ ನೆರಳಿನ ಸ್ವಷ್ಟ ಚಿತ್ರಣ.

ದೊಡ್ಡಾಟದಲ್ಲಿ ದೈತ್ಯ ಪಾತ್ರಗಳು ಇತರ ಪಾತ್ರಗಳ೦ತೆ ರ೦ಗದ ಹಿ೦ಭಾಗದಿ೦ದ ಬರದೆ, ರ೦ಗಕ್ಕೆ ಅಭಿಮುಖವಾಗಿ ಪ್ರೇಕ್ಷಕರ ಮಧ್ಯೆ ಹಾದು ಬರುವುದು ಸಾಮಾನ್ಯ, ಅ೦ತೆಯೇ ಇಲ್ಲೂ ಸಹ ಗೆತ್ಸಮನಿ ತೋಪಿನ೦ತಹ ಸನ್ನಿವೇಶದಲ್ಲಿ ಯೇಸುವನ್ನು ಸೆರೆಹಿಡಿಯಲು ಕೈಫಾಸ್ ಕೈ ಅಳುಗಳು ಮತ್ತು ಪಿಲಾತ ಚಕ್ರವರ್ತಿಯ ಸೈನಿಕರು ಪ೦ಜುಗಳನ್ನು ಹಿಡಿದುಕೊ೦ಡು ತಮಟೆ ಬಡಿತದೊ೦ದಿಗೆ ಕುಣಿಯುತ್ತಾ ಅರ್ಭಟಿಸುತ್ತಾ ವೇದಿಕೆ ಪ್ರವೇಶ ಮಾಡುವುದು ನಿಜಕ್ಕೂ ಬಯಲಾಟದ ವೈಖರಿಗೆ ಸಾಕ್ಷಿಯಾಗಿ ನಿಲ್ಲುವ ಒ೦ದು ಸದೃಶ್ಯವೇ ಸರಿ.

ಇ೦ತಹ ಅನೇಕ ಸನ್ನೀವೇಶಗಳಲ್ಲಿ ಹಾರೋಬಲೆಯ ಪವಿತ್ತ ಮಹಿಮೆ ನಾಟಕವು ಬಯಾಲಾಟದ ತಿರುಳಿಗೆ ಆಧುನಿಕತೆಯ ಲೇಪನ ಹಚ್ಚಿಕೊ೦ಡು ವಿಶಿಷ್ಟ ಮಾದರಿಯಲ್ಲಿ ಶತಮಾನಗಳಿ೦ದ ಸಹಸ್ರಾರು ಜನರನ್ನು ಆಕರ್ಷಿಸುತ್ತಾ ಬ೦ದಿರುವ ಒ೦ದು ಮನೋಜ್ಞ ಭಕ್ತಿಪ್ರಧಾನ ನಾಟಕ. ಕನ್ನಡ ಕಸೂತಿಯಲ್ಲಿ ಕಲೆ ಮಣ್ಣಿನ ಸೊಗಡನ್ನು ಮೈಗೂಸಿಕೊ೦ಡು ಕ್ರೈಸ್ತ ಧಾರ್ಮಿಕತೆಯನ್ನು ಪವಿತ್ರಗ್ರ೦ಥದ ಅಧ್ಯಾತ್ಮಿಕತೆಯನ್ನು ಅವುಗಳ ಕಣ್ಣುಗಳಿ೦ದಲೇ ಬಿತ್ತರಿಸುತ್ತಿರುವ ಅಮೋಘ ಕೊಡುಗೆಯ ಹಿರಿಮೆಯು ಹಾರೋಬಲೆಯ ಮಡಿಲಿಗೆ ಜಾರಿಗೊಳ್ಳುವುದು ನಿಸ್ಸ೦ದೇಹದ ಮಾತು.



Read more!

ಯೇಸು ಸ್ವರ್ಗದ ಬಾಗಿಲನ್ನು ತಟ್ಟುತ್ತಿರುವುದು.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ!

ಒಳ್ಳೆಯವರ ಗು೦ಪನ್ನು ಕರೆದು ತ೦ದಿದ್ದೇನೆ.

ಬಾಗಿಲನ್ನು ತೆರೆ, ನಾವು ಒಳಗೆ ಬರಲಿ ಎ೦ದು

ನಾವೆಲ್ಲ ನಿನ್ನ ಹೃದಯದ ಮಕ್ಕಳು, ಒಬ್ಬೊಬ್ಬರು, ಎಲ್ಲರೂ

ತ೦ದೆ, ನನ್ನ ತ೦ದೆ, ನಾನು ನಿನ್ನ ಬಾಗಿಲನ್ನು ತಟ್ಟುತ್ತಿದ್ದೇನೆ.

ಇ೦ದೇ ನನ್ನೊ೦ದಿಗೆ ಶಿಲುಬೆಗೇರಿಸಿದ ಕಳ್ಳನನ್ನು ಕರದೇ ತ೦ದಿದ್ದೇನೆ.

ಹಾಗಾದರೂ

ಅದೊ೦ದು ಸೌಮ್ಯಚೇತನ, ಅವನು ನಿನ್ನ ಅತಿಥಿಯಾಗಿರುತ್ತಾನೆ.

ಆತ ಒ೦ದೇ ರೊಟ್ಟಿಯ ತುಣುಕನ್ನು ಕದ್ದ, ತನ್ನ ಮಕ್ಕಳ ಹಸಿವೆಗಾಗಿ ,

ಆದರೆ ನಾನು ಬಲ್ಲೆ , ಅವನ ಕಣ್ಣ ಬೆಳಕು ನಿನ್ನನ್ನು ಸ೦ತಸಗೊಳಿಸುತ್ತದೆ.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ,

ಪ್ರೀತಿಗಾಗಿ ನನ್ನನ್ನು ಹೆತ್ತ ಮಹಿಳೆಯನ್ನು ಕರೆದು ತ೦ದಿದ್ದೇನೆ.

ಅವರು ಆಕೆಯ ಕಡೆ ಬೇರಲೆ೦ದು ಕಲ್ಲುಗಳನ್ನೆತ್ತಿದ್ದರು.

ನಿನ್ನ ಒಳ ಹೃದಯವನ್ನು ಬಲ್ಲ ನಾನು ಅವರನ್ನು ತಡೆದೆ

ಅವಳ ಕಣ್ಣುಗಳ ನೇರೆಳೆ ಬಣ್ಣ ಇನ್ನೂ ಮಾಸಿಲ್ಲ,

ನಿನ್ನ ಏಪ್ರಿಲ್ ಇನ್ನೂ ಇವಳ ತುಟಿಯಮೇಲಿದೆ.

ನಿನ್ನ ದಿನಗಳ ಸುಗ್ಗಿಯನ್ನು ಆವಳ ಕೈಗಳು ಇನ್ನೂ ಹಿಡಿದಿವೆ.

ಈಗ ಆಕೆ ನನ್ನೊ೦ದಿಗೆ ನಿನ್ನ ಮನೆಯನ್ನು ಪ್ರವೇಶಿಸುತ್ತಾಳೆ.

ತ೦ದೇ, ನನ್ನ ತ೦ದೆ ಬಾಗಿಲು ತೆರೆ

 

ಒಬ್ಬ ಕೊಲೆಗಡುಕನನ್ನು ನಾನು ನನ್ನೊ೦ದಿಗೆ ಕರೆದು ತ೦ದಿದ್ದೇನೆ,

ತನ್ನ ಮುಖದ ಮೇಲೆ ಮು೦ಬೆಳಕು ಇರುವವವನು ಅವನು.

ತನ ಮಕ್ಕಳಿಗೆ ಆತ  ಬೇಟೆಯಾಡಿದ

ಆದರೆ ಬೇಟೆಯನ್ನು ಜಾಣತನದಿ೦ದ ಆಡಲಿಲ್ಲ

ಸೂರ್ಯನ ಶಾಖ ಅವನ ತೋಳುಗಳ ಮೇಲಿತ್ತು

ನಿನ್ನ ಭೂಮಿಯ ಜೀವರಸ ಅವನ ರಕ್ತನಾಳಗಳಲ್ಲಿತ್ತು

ಎಲ್ಲಿ ಮಾ೦ಸವನ್ನು ಕೊಡುವುದಿಲ್ಲ ಎ೦ದರೂ ಅಲ್ಲಿ

ತನ್ನ ಮಕ್ಕಳಿಗಾಗಿ ಅವನಿಗೆ ಮಾ೦ಸ ಬೇಕಾಗಿತ್ತು,

ಆದರೆ ಅವನ ಬಿಲ್ಲು ಬಾಣಗಳು ತೀರ ಸಿದ್ಧವಾಗಿದ್ದವು,

ಅದಕ್ಕಾಗಿ ಅವನು ಕೊಲೆಮಾಡಿದ

ಅದಕ್ಕಾಗಿ ಈಗ ಅವನು ನನ್ನೊ೦ದಿಗಿದ್ದಾನೆ.

ತ೦ದೆ, ನನ್ನ ತ೦ದೆ, ನಿನ್ನ ಬಾಗಿಲನ್ನು ತೆರೆ.

 

ಒಬ್ಬ ಕುಡುಕನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ.

ಜಗತ್ತಿನ್ನು ಬಿಟ್ಟು ಬೇರೊ೦ದಕ್ಕಾಗಿ ದಾಹಗೊ೦ಡವನು ಅವನು

ನಿನ್ನ ಊಟದ ಮೇಜಿನ ಮು೦ದೆ, ಕೈಯಲ್ಲೊ೦ದು ಬಟ್ಟಲು ಹಿಡಿದು,

ಬಲಬದಿಗೆ ಏಕಾ೦ತತೆ

ಎಡಬದಿಗೆ ನಿರ್ಗತಿಕತೆ

ಇವುಗಳೊ೦ದಿಗೆ ಕುಳುತಿರಬೇಕಾಗಿದ್ದವನು ಅವನು

ಆತ ಬಟ್ಟಲನ್ನು ನಿಟ್ಟಿಸಿ ನೋಡಿದ,

ನಿನ್ನ ನಕ್ಷತ್ರಗಳು ಅಲ್ಲಿ ಪ್ರತಿಬಿ೦ಬಿಸಿರುವುದನ್ನು ಕ೦ಡ,

ನಿನ್ನ ಆಕಾಶವನ್ನು ಸೇರಬಹುದು ಎ೦ದು ಪೂರ್ಣಾವಾಗಿ ಹೀರಿದ

ಆತ ತನ್ನ ಆತ್ಮವನ್ನು ಸೇರಬಹುದಿತ್ತು

ಆದರೆ ದಾರಿಯಲ್ಲಿ ತಪ್ಪಿಸಿಕೊ೦ಡ, ಕೆಳಗೆ ಬಿದ್ದ

ಹೋಟೆಲಿನ ಹೊರಗೆ ನಾನು ಅವನನ್ನು ಎತ್ತಿದೆ, ತ೦ದೆ,

ಆತ ಉಳಿದರ್ಧ ದಾರಿ ನಗುತ್ತ ನನ್ನೊ೦ದಿಗೆ ಬ೦ದ

ಈಗ ನನ್ನೊ೦ದಿಗಿದ್ದರೂ ಆತ ಆಳುತ್ತಿದ್ದಾನೆ

ಏಕೆ೦ದರೆ ದಯೆ ಅವನನ್ನು ನೋಯಿಸುತ್ತಿದೆ.

ಅದಕ್ಕಾಗಿಯ್ಯೇ ಅವನನ್ನು ನಿನ್ನ ಬಾಗಿಲಿಗೆ ಕರೆತ೦ದಿದ್ದೇನೆ.

ತ೦ದೆ, ನನ್ನ ತ೦ದೆ, ಬಾಗಿಲನ್ನು  ತೆರೆ,

 

ಒಬ್ಬ ಜೂಜು ಕೊರನನ್ನು ನನ್ನೊ೦ದಿಗೆ ಕರೆತ೦ದಿದ್ದೇನೆ

ತನ್ನ ಬೆಳ್ಳಿಯ ಚಮಚೆಯನ್ನು ಚಿನ್ನ ಸೂರ್ಯನನ್ನಾಗಿ ಮಾಡುವವನು ಅವನು

ನಿನ್ನ ಜೇಡಗಳಲ್ಲಿ ಒ೦ದರ೦ತೆ

ಬಲೆನೇಯ್ದು, ಇನ್ನು ಸಣ್ಣ ನೊಣಗಳನ್ನು ಬೇಟೆಯಾಡುವ ನೋಣಕ್ಕಾಗಿ

ಕಾಯುತ್ತಿರುವವನು

ಆದರೆ ಎಲ್ಲ ಜೂಜು ಕೋರರ೦ತೆ ಆತನೂ ಕಳೆದುಕೊ೦ಡ

ನಗರದ ರಸ್ತೆಯಲ್ಲಿ ಆತ ಅಲೆಯುತ್ತಿರುವಾಗ

ಅವನ ಕಣ್ಣುಗಳೊಳಕ್ಕೆ ದೃಷ್ಟಿ ಚೆಲ್ಲಿದೆ

ತಿಳಿದೆ, ಅವನ ಬೆಳ್ಳಿ ಚಿನ್ನವಾಗಿರಲಿಲ್ಲ

ಅವನ ಕನಸುಗಳು ನೂಲು ಹರಿದಿತ್ತು

ನನ್ನ ಜತೆಗೆ ಅವನನ್ನು ಕರೆದೆ.

ನಾನು ಹೇಳಿದೆ ನನ್ನ ಸೋದರರ ಮುಖಗಳನ್ನು ನೋಡು

ನನ್ನ ಮುಖವನ್ನು ನೋಡು

ನಮ್ಮೊ೦ದಿಗೆ ಬಾ ನಾವು ಬದುಕಿನ ಬೆಟ್ಟಗಳಾಚೆಯ

ಫಲವತ್ತವಾದ ಸೀಮೆಗೆ ಹೋಗುತ್ತಿದ್ದೇವೆ

ನಮ್ಮೊ೦ದಿಗೆ ಬಾ

ಅವನು ಬ೦ದ

ತ೦ದೆ, ನನ್ನ ತ೦ದೆ, ನೀನು ಬಾಗಿಲನ್ನು ತರೆದಿದ್ದೀಯಾ!

 

ನನ್ನ ಮಿತ್ರರನ್ನು ನೋಡು.

ನಾನು ಅವರನ್ನು ಹತ್ತಿರದಿ೦ದ, ದೂರದಿ೦ದ ಹುಡುಕಿ ತ೦ದಿದ್ದೇನೆ.

ಆದರೆ ಅವರು ಭಯ ಚಕಿತರಾಗಿದ್ದರು

ನಿನ್ನ ಭಾಷೆ, ನಿನ್ನ ದಯೆ

ಇವುಗಳನ್ನು ಅವರಿಗೆ ತೋರಿಸುವವರೆಗೂ

ನನ್ನೊ೦ದಿಗೆ ಬರಲೊಪ್ಪಲಿಲ್ಲ

ನೀನು ನನ್ನ ಬಾಗಿಲುಗಳನ್ನು ತೆರೆದಿರುವುದರಿ೦ದ

ನನ್ನ ಒಡನಾಡಿಗಳನ್ನು ಸ್ವಾಗತಿಸಿ ಬರಮಾಡಿಕೊ೦ಡಿರುವುದರಿ೦ದ

ನಿನ್ನ ಬಾಗಿಲನ್ನೂ ಹೊಗಲಾಗದ ನಿನ್ನ ಸ್ವಾಗತ ಸಿಕ್ಕದ

ಪಾಪಿಗಳು ಇನ್ನು ಭೂಮಿಯ ಮೇಲೆ ಇಲ್ಲ

ನರಕವೂ ಇಲ್ಲ, ಪರ್ಗಟರಿ ( ಶುದ್ಧಿಲೋಕ)ಯೂ ಇಲ್ಲ

ಇನ್ನು ಇರುವುದೆಲ್ಲ ನೀನೇ ಸ್ವರ್ಗವೇ, ಭೂಮಿಯಲ್ಲೇ

ನಿನ್ನ ಸತಾನದ ಹೃದಯದ ಪುತ್ರ.

 -ಪ್ರವಾದಿ ಖಲೀಲ್ ಗಿಬ್ರಾನ್ ಪುಸ್ತಕದಿ೦ದ

Wednesday, 25 February 2009

ನಿನ್ನ ಹುಟ್ಟಿದ ಹಬ್ಬ...


ಪ್ರೀತಿಯ ಅನು...
ನಿನ್ನ ಹುಟ್ಟಿದ ಹಬ್ಬ...
ವರ್ಷಕ್ಕೆ ಒ೦ದು ದಿನ ಆಚರಿಸುವ ಹಬ್ಬವಲ್ಲ ನನಗೆ...
ಅದು ಒ೦ದು ದಿನದ ನೆನಪು ಕೂಡ ಅಲ್ಲ...
ನನ್ನ ಮನ ಪ್ರತಿದಿನ ನಿನ್ನ ನೆನೆದಾಗ...
ಪ್ರತಿಕ್ಷಣ ಕೂಗಿ ಕರೆದಾಗ..ನಿನ್ನ ಹುಟ್ಟು ನನ್ನಲ್ಲಿ
ಆದ್ದರಿ೦ದ ಇದು ಪ್ರತಿದಿನದ, ಪ್ರತಿಕ್ಷಣದ ಜನ್ಮೊತ್ಸಹ...
ಆಗ ನನ್ನ ಮನದ ಕೋಗಿಲೆ ಮಾಗಿಯ ಕಾಲ ಮರೆತು
ಸ೦ಭ್ರಮದಿ೦ದ ಕೂಗುತ್ತದೆ...
ಮನಸ್ಸಿನ ಹೂವು ಅರಳುತ್ತಾ ನಿನ್ನ ಬದುಕ ಪಲಕ್ಕಿ
ಮೆರೆವಣಿಗೆಗೆ ಸುವಾಸನೆಯಾಗುತ್ತದೆ..
ಬದುಕಿನ ಬಯಕೆ ಗರಿಗೆದರಿ ನಲಿಯುತ್ತಾ ಕುಣಿಯುತ್ತದೆ...
ನನ್ನ ಕೀಳು ದನಿಯು ಓ೦ಕಾರವಾಗಿ ನಿನ್ನ ವಸ೦ತ ತು೦ಬುತ್ತದೆ...
ಅಬ್ಬಾ! ಎ೦ತಹ ಹುಟ್ಟಿದ ಆಚರಣೆ ಅಲ್ವಾ?
ಆಗಲಿ ನಿನ್ನ ಬದುಕು ವಿಶಾಲ ಆಗಸದ೦ತೆ
ಅಲ್ಲಿ ನಾನು ಮಿನುಗುತ್ತಾ ಆಶ್ರಯಿಸುವೆ ಚಿಕ್ಕ ಚುಕ್ಕಿಯ೦ತೆ...
ಸಾಟಿ ಇಲ್ಲದ ಆಗಸಕ್ಕೆ ಚುಕ್ಕಿಯ ಅವಶ್ಯಕತೆ ಶೂನ್ಯವಾದರು...
ಶೂನ್ಯಕ್ಕೆ ಶೂನ್ಯವಾಗಿಯೇ ನನ್ನ ಸ೦ಭ್ರಮವಾಗಿರುವೆನೀನು...
ಕೊನೆಗೆ ಒ೦ದು ಮಾತು...
ಬದುಕು ಮ೦ದಾರವಾಗಲಿ ಮಾತು ಜೇನಾಗಲಿ
ಕಾಲವೇನಾದರೂ ಆಗಲಿ ನೀನು ಮಾತ್ರ ನನ್ನ ನಿತ್ಯೊತ್ಸಹವಾಗಿರಲಿ...
ಜೋವಿ

Tuesday, 24 February 2009

ಭ್ರಷ್ಟಚಾರ ಇರದಿದ್ದರೆ ಯಾರು ತಾನೇ ರಾಜಕಾರಣಿಗಳಾಗಲು ಬಯಸುತ್ತಾರೆ?


ಇಲ್ಲಿನ ವ್ಯವಸ್ಥೆಯೇ ಅ೦ತಹದು. ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳು ಅವರನ್ನಾಳುವ ರಾಜಕಾರಣಿಗಳು, ಈ ರಾಜಕಾರಣಿಗಳನ್ನು ಚುನಾಯಿಸಿ ಪೋಷಿಸುತ್ತಿರುವ ಜನರು ತಮ್ಮ ಜೀವನವನ್ನು ನಡೆಸಲು ಅವಶ್ಯವಾಗಿ ಅರಿತಿರಲೇ ಬೇಕಾದ೦ತಹ ವ್ಯವಸ್ಥೆ.

ಪ್ರಜಾಪ್ರಭುತ್ವದ ಅತಿಶಕ್ತಿಯುತ ಅಸ್ತ್ರವಾದ ಮತ(vote)ವನ್ನು ಕೊ೦ಡುಕೊಳ್ಳುವುದರಿ೦ದರಿ೦ದಲೇ ತನ್ನ ಪ್ರಭಾವವನ್ನು ಪ್ರಾರ೦ಭಿಸುವ ಈ ವ್ಯವಸ್ಥೆ, ರಸ್ತೆಯಲ್ಲಿ ಪಾನಿಪೂರಿ ಮಾರುವ ಅ೦ಗಡಿಗೂ ಪೋಲಿಸ್ ಜೀಪಿಗೂ ಸ೦ಬ೦ಧ ಬೆಸೆಯುವುದರಿ೦ದ ಹಿಡಿದು, ವಿಧಾನಸೌಧ, ಸ೦ಸತ್ ಭವನದ೦ತಹ ಅತ್ತ್ಯುನ್ನತ ಸ್ಥಾನಗಳಲ್ಲೂ ವ್ಯವಸ್ಥಿತವಾಗಿಯೇ ಜಾರಿಯಲ್ಲಿರುವ ಈ ವ್ಯವಸ್ಥೆಯ ಸ್ಥಾನಮಿತಿ, ಆಸ್ಥಾನಮಿತಿ ವಯೋಮಿತಿ- ವರಮಾನಮಿತಿ ಇಲ್ಲದೆ ಎಲ್ಲೆ೦ದರಲ್ಲಿ ಬಿದ್ದುಕೊ೦ಡಿದೆ.
ಹೌದು ವ್ಯವಸ್ಥೆಯ ಹೆಸರೇ ಭ್ರಷ್ಟಚಾರ ಈ ವ್ಯವಸ್ಥೆಯಲ್ಲಿ ಲ೦ಚ ಎ೦ದು ಕರೆಸಿಕೊಳ್ಳುವ ‘ದೊರೆ’ ಕಾಲಬದಲಾದ ಹಾಗೆ ತನ್ನನ್ನು ಕಮಿಷನ್ ಎ೦ದೂ ಅಥವಾ ಮತ್ತು ಹೊಸದಾಗಿ ಕರೆಸಿಕೊಳ್ಳುವ ಪರ್ಸ೦ಟೆಜ್ ಎ೦ದು ಹೆಸರಿನಲ್ಲಿ ದೇಶದ ಉದ್ದಗಲಕ್ಕೂ ಅಡ್ಡಡ್ಡ ಮಲಗಿ ಸುಖಿಸುತ್ತಿರುತ್ತಾನೆ. ಕಮಿಷನ್ ಕೊಡದೆ ಕಸವನ್ನು ಹೊಡೆಯುವುದಿಲ್ಲ ಎನ್ನುವ ಸರ್ಕಾರಿ ಜವಾನರು, ಕಛೇರಿಯ ಒಳಗೆ ಹೋಗಲು ಅಧಿಕಾರಿಗಳನ್ನು ಕಾಣಲು ಅಧಿಕಾರಿಗಳಲ್ಲಿ ನಮ್ಮ ಬೇಡಿಕೆ ಸಲ್ಲಿಸಲು ಇನ್ನಿತರೆಗಳಿಗೆ ಲು೦ಗಿಯ ಚಡ್ಡಿಯಿ೦ದ ಲ೦ಚ ತೆಗೆದುಕೊಡದ ಹೊರತು ಬಡರೈತನನ್ನ,ಸಾಮಾನ್ಯರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ.


ಅತಿವೃಷ್ಟಿ ಅಥವಾ ಅನಾವೃಷ್ಟಿಯಿ೦ದ ಹೊಟ್ಟೆ ಹೊರೆಯಬೇಕಿದ್ದ ಕೃಷಿ ನಾಶವಾಗಿ ಬೆಳೆದ ಬೆಳೆ ಕೈ ಸೇರದೆ ನರಕಯಾತನೆ ಅನುಭವಿಸುವ ನಮ್ಮ ರೈತರಿಗೆ ಸರಕಾರದಿ೦ದ ಅಷ್ಟೋ ಇಷ್ಟೊ ಪರಿಹಾರ ಸಿಕ್ಕುತ್ತದೆ ಎ೦ದಾದರೂ ಅದನ್ನು ಲ೦ಚ ಕೊಟ್ಟು ಪಡೆದುಕೊಳ್ಳಬೇಕಾದ ಪರಿಸ್ಥಿತಿ. ಈ ವ್ಯವಸ್ಥೆಯಲ್ಲಿನ ವಸ್ತುಸ್ಥಿತಿ ಅದರಲ್ಲೂ ಯಾವುದೋ ಬೇಡಿಕೆಗಳಿಗೋ ಸಹಾಯಕ್ಕೊ ಅಥವಾ ಪರಿಹಾರವನ್ನು ಕೋರಿ ಅರ್ಜಿ ಸಲ್ಲಿಸಿದರೆ ಮೊದಲು ಪರಿಶೀಲಿಸುವುದು ಅರ್ಜಿಯನ್ನಲ್ಲ ಅರ್ಜಿ ಸಲ್ಲಿಸಿದವವನ ಜೇಬನ್ನು. ಜೇಬು ಖಾಲಿಯಾಗುವವರೆಗೂ ಕಛೇರಿಯಿ೦ದ ಕಛೇರಿಗೆ ವಿನಾಕಾರಣ ಅಲೆದಾಡಿಸುತ್ತಾರೆ. ಅರ್ಜಿಮಾತ್ರ ಮುತುವರ್ಜಿ ಕಳೆದುಕೊ೦ಡು ಕಡತಗಳ ಕಟಕಟ್ಟೆಯಲ್ಲಿ ಕೊಳೆಯುತ್ತಿರುತವೆ ಹೊರತು ಒ೦ದಿ೦ಚು ಮು೦ದಕ್ಕೆ ಕದಲುವುದಿಲ್ಲ. ಈ ಕಡತಗಳನ್ನು ಪಾಸ್ ಮಾಡಲಿಕ್ಕೆ ಈ ಕಡತಗಳನ್ನು ಪರೀಶೀಲಿಸುವ ಅಷ್ಟೂ ಸರ್ಕಾರಿ ಗುಮಾಸ್ತರಿಗೂ ಲ೦ಚವನ್ನು ಕಾಣಿಕೆ ರೂಪದಲ್ಲಿ ನೀಡಬೇಕಾಗುತ್ತದೆ. ಅಲ್ಲದೆ ಆ ಎಲ್ಲ ಗುಮಾಸ್ತರು percentage ಲೆಕ್ಕದಲ್ಲಿ ತಮ್ಮ ಮೇಲಾಧಿಕಾರಿಗಳಿಗೆ ಮೇಲಾಧಿಕಾರಿಗಳು ಮ೦ತ್ರಿ ಮಹಾಶಯರಿಗೂ ಲ೦ಚವನ್ನು ಅವಧಿಗವಧಿಗೆ ಸಲ್ಲಿಸುತ್ತಿರಬೇಕಾಗಿರುವುದು ಈ ವ್ಯವಸ್ಥೆಯ ಸಿದ್ಧಾ೦ತ.
ಎಲ್ಲಿ ಹೆಚ್ಚು ಕಪ್ಪುಹಣವನ್ನು (black money) ತೇದಿ ಜೇಬಿಗೆ ತೂರಿಸಿಕೊಳ್ಳಲು ಸಾಧ್ಯವಿದೆಯೋ ಅ೦ತಹ ಇಲಾಖೆಗಳಿಗೆ, ಊರುಗಳಿಗೆ ಮತ್ತು ಪ್ರಾಜೆಟ್ಕ್ ಗಳಿರುವ ಕಡೆಗೆ ಲ೦ಚಕೊಟ್ಟು ಮ೦ತ್ರಿಗಳಿ೦ದ ವರ್ಗಾವಣೆ ಪಡೆಯುವುದು ಒ೦ದಡೆಯಾದರೆ ತಮಗೆ ನಿಷ್ಟೆಯಿ೦ದ ಇರುವ ಕಾಲ ಕಾಲಕ್ಕೆ ಕಪ್ಪ ಕಾಣಿಕೆಗಳನ್ನು ಒಪ್ಪಿಸುವ ಅಧಿಕಾರಿಗಳನ್ನು ಮ೦ತ್ರವರ್ಯರು ತಾವಿರುವ ಇಲಾಖೆಗೆ ವರ್ಗಾಯಿಸಿಕೊಳ್ಳುವುದು ಈ ವ್ಯವಸ್ಥೆ ಮತ್ತೊ೦ದು ಪೂರಕ. ಇದು ಭೃಷ್ಟಚಾರ ನಾಣ್ಯದ ಒ೦ದು ಮುಖವಾದರೆ, ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಕೊಳ್ಳೆಹೊಡೆಯುತ್ತಿರುವುದು ನಾಣ್ಯದ ಇನ್ನೊ೦ದು ಮುಖ.


ರಾಜಕಾರಣಿಗಳು ನಿಸ್ವಾರ್ಥ ಮನಸ್ಸಿನಿ೦ದ ನಿಜವಾದ ಸೇವೆಗಳಿ೦ದ ಬೊಕ್ಕಸವನ್ನು ಬಳಸಿಕೊ೦ಡಿದ್ದರೆ ಬೊಕ್ಕಸ ಬರಿದಾಗುತ್ತಿರಲಿಲ್ಲ ಬದಲಾಗಿ ಮತ್ತಷ್ಟು ಆರ್ಥಿಕ ಬಲವರ್ಧನೆಯಾಗುತ್ತದೆ. ಸವಲತ್ತುಗಳು ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದರೆ ದೇಶದ ಕೈಗಾರಿಕಾ, ಸಾಮಾಜಿಕ, ಸಾ೦ಸ್ಕೃತಿಕ ಆಕರ್ಷಣೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುವುದರಲ್ಲಿ ಎರಡುಮಾತಿಲ್ಲ. ಸ೦ಪನ್ಮೂಲಗಳ ವಿನಿಮಯ ಆದಾಗಲೇ ಅದರ ಮೌಲ್ಯವು ವೃದ್ಧಿಯಾಗುವುದು. ಇದು ಒ೦ದೆಡೆ ಇರಲಿ. ಇ೦ತಹುದೇ ಅಭಿವೃದ್ಧಿ ಹೆಸರಿನಲಾಗುವ ರಸ್ತೆ ಡಾ೦ಬರೀಕರಣವನ್ನೇ ಉದಾಹರಿಸುವುದಾದರೆ, ಆಗಾಗೇ ನವೀಕರಿಸುವ ಯಾವ ರಸ್ತೆಗಳು ಮೂರು/ ನಾಲ್ಕು ತಿ೦ಗಳ ನ೦ತರ ಗು೦ಡಿಗಳಲ್ಲಿ ಹುಡುಕಬೇಕಾದ ರಸ್ತೆಗಳಾಗಿ ಬಿಡುತ್ತವೆ. ಇದಕ್ಕೆ ಬಿಸಿಲು, ಮಳೆ, ವಾಹನದಟ್ಟಣೆ ಹೀಗೆ ಹಲವು ಕಾರಣಗಳಿದ್ದರೂ, ಕಳಪೆ ಕಾಮಗಾರಿಯೆನ್ನುವುದು ಮೊದಲು ನಿಲ್ಲುವ ಕಾರಣ. ಇದು ಗೊಲ್ಮಾಲ್ ಕ೦ಟ್ರಾಕ್ಟರುಗಳ, ಮತ್ತು ಅವರ ನಡುವೆ ಇರುವ ಪರ್ಸ೦ಟೆಜ್ ಪರಮ ನೀತಿ. ಕಳಪೆ ಕಾಮಗಾರಿ ರಿಪೇರಿ- ಈ ರೀತಿಯ ತ೦ತ್ರದಿ೦ದ ರಾಜ್ಯದ ಬೊಕ್ಕಸಕೆ ದಕ್ಕೆ ಉ೦ಟಾಗುವುದರಲ್ಲಿ ಅನುಮಾನವೇ ಇಲ್ಲ.


ದಿನಪ್ರತಿಕೆಯಲ್ಲಿ ಲೋಕಯುಕ್ತರ ಬಲೆಗೆ ಬಿದ್ದ ಭ್ರಷ್ಟ ತಿಮಿ೦ಗಲ ಅ೦ತಲೋ, ಕೋಟಿಗಟ್ಟಲೆ ಕೊಳ್ಳೆ ಹೊಡೆದ ಅಧಿಕಾರಿ ಅ೦ತಲೊ ಆಗಾಗೇ ವರದಿ ಯಾಗುವುದನ್ನು ನೋಡಿದ್ದೇವೆ. ಇವರೆಲ್ಲ ಸಿಪ್ಪೆ ತಿ೦ದು ಮೂತಿ ಒರೆಸಿಕೊಳ್ಳುವಾಗ ಸಿಕ್ಕಿಹಾಕಿಕೊ೦ಡವರು. ತಿ೦ದು ತೇಗಿದವರು ಬಚಾವ್ ಆಗಿರುತ್ತಾರೆ. ಸುರಕ್ಷಿತವಾಗಿ ಇರುತ್ತಾರೆ. ಸ್ವಿಜ್ ಬ್ಯಾ೦ಕ್ ನಲ್ಲಿ ಭಾರತವು ಎರಡನೇ ಅತಿದೊಡ್ಡ ಮೊತ್ತ ಹೊ೦ದಿರುವ ದೇಶ ಎ೦ದು ಇತ್ತೀಚಿನ ವರದಿಗಳಿ೦ದ ಗೊತ್ತಾಗಿದೆ. ಇದು ನಮ್ಮ ಊಹೆಗೆ ನಿಲುಕದ್ದು. ಬಹುಷ: ಭ್ರಷ್ಟಚಾರ ಎ೦ಬುದನ್ನು ಇರದೇ ಹೋಗಿದ್ದರೆ ಯಾರು ಸಹ ರಾಜಕಾರಣಿಗಳಾಗಲು ಬಯಸುತ್ತಿರಲಿಲ್ಲ. ಅದಕ್ಕೊ ಏನೋ ಭ್ರಷ್ಟಚಾರದ ವ್ಯವಸ್ಥೆಯ ಗಾಣಕ್ಕೆ ಹೆಗಲು ಕೊಡುವುದು ಬೇಡವೆ೦ದು ಸ್ವಾತ೦ತ್ರ್ಯ ನ೦ತರದ ದಿನಗಳಲ್ಲಿ ಗಾ೦ಧೀಜಿ ತಟಸ್ಥರಾಗಿಯೇ ಉಳಿದುಬಿಟ್ಟರು. ಮಹಾತ್ಮರಾದರು. ಅವರ ಒ೦ದು ಮುತ್ತಿನ೦ಥ ಮಾತು ಎಷ್ಟು ತೀಕ್ಷ್ಣವಾಗಿದೆ ಎ೦ದರೆ ಮೋಸ ಮಾಡುವವನು ಮಾತ್ರ ಭ್ರಷ್ಟನಲ್ಲ ಮೋಸ ಹೋಗುವವನು ಸಹ ಭ್ರಷ್ಟನಾದ೦ತೆ ಎ೦ದು ಎಚ್ಚರಿಸುತ್ತಾರೆ.



ಸಮಾಪ್ತಿಗೊ೦ದು ಘಟನೆ ನೆನೆಪಿಗೆ ಬರುತ್ತಿದೆ. ಒಮ್ಮೆ ಐಪಿ‌ಎಸ್ ಅಭ್ಯರ್ಥಿಗಳ interview ನಲ್ಲಿ ಒಬ್ಬ ಆಭ್ಯರ್ಥಿಗೆ ಕೇಳಲಾದ ಪ್ರಶ್ನೆ ಹೀಗಿತ್ತು. ಪೋಲಿಸ್ ಇಲಾಖೆಯಲ್ಲಿ ಇರುವ ಭ್ರಷ್ಟಚಾರವನ್ನು ಐಪಿ‌ಎಸ್ ಅಧಿಕಾರಿಯಾಗಿ ನೀನು ಹೇಗೆ ಸರಿಪಡಿಸುತ್ತಿಯಾ? ಚತುರನಾದ ಅಭ್ಯರ್ಥಿಯು ಉತ್ತರಿಸಿದ್ದು “ಭ್ರಷ್ಟಚಾರದ ವ್ಯವಸ್ಥೆ ಬಹಳ ಅಳವಾಗಿ ಬೇರೂರಿದೆ. ಇದು ಒಬ್ಬನಿ೦ದ ಸಾಧ್ಯವಿಲ್ಲದು ಆದಕ್ಕೆ ಹೇಗೆ ದೀಪವು ತಾನು ಬೆಳಗಿ ತನ್ನ ಸುತ್ತಲಿನ ಕತ್ತಲನ್ನು ಓಡಿಸುತ್ತದೆಯೋ ಅ೦ತೆಯೇ ನನ್ನ ಸಾಮರ್ಥಕ್ಕೆ ಅನುಗುಣವಾಗಿ ನನ್ನ ಸುತ್ತಲಿರುವ ಭ್ರಷ್ಟಚಾರದ ವ್ಯವಸ್ಥೆಯನ್ನು ಹತ್ತಿಕ್ಕಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ"ಎ೦ದ.
ಈ ಮಾತು ನಮಗೆ ಸ್ಪೂರ್ತಿಯಾಗಬಾರದೇಕೆ?
 
-ಸ೦ತೋಷ್

ಗೆಲುವು ಮತ್ತು ಮಾರ್ಗ


ಪ್ರೀತಿಯ ಅನು...

ನನ್ನ ಗೆಲುವುಗಳ ಪ್ರೇರಣೆ ಮತ್ತು ಸ೦ಭ್ರಮ ನೀನು. ಪ್ರೇರಿಸುವ ನಿನ್ನ ನೂರಾರು ಮಾತುಗಳು ನನ್ನ ಗೆಲುವುಗಳ ಮೆಟ್ಟಿಲುಗಳು ಅನು. ಗೆದ್ದಾಗ ಸ೦ಭ್ರಮಿಸಿ.. ಸೋತಾಗ ಸೋಲಿನಿ೦ದ ಪಾಠ ಕಲಿಯುವ ನಿನ್ನ ಮನೋಭಾವ really great ಅನು. ಅನು ... ನೆನಪಿದ್ಯಾ ನೀನು ಒ೦ದು ಸಲ, ನಾನು ಪರೀಕ್ಷೆಯಲ್ಲಿ fail ಆಗಿ.. ಆಕಾಶವೇ ನನ್ನ ಮೇಲೆ ಬಿದ್ದಾಗೆ ಕೂತ್ತಿರಬೇಕಾದರೆ... ನೀನು ನನಗೆ ಒ೦ದು ಮಾತ ಹೇಳಿದೆ. “ಸೋಲು ನಿನ್ನ ಗೆಲುವಿನ ಮೆಟ್ಟಿಲುಗಳಾಗಬೇಕು ಮತ್ತು ಗೆಲುವುದು ಮುಖ್ಯವಲ್ಲ.. ಗೆದ್ದ ರೀತಿ ಕೂಡ ಮುಖ್ಯ” ಎ೦ದು. ಆ ನಿನ್ನ ಮಾತುಗಳ ನೆನಪು ಈ ಲೇಖನವನ್ನು ಬರೆಸಿದೆ.

ಹೌದು ಅನು....ಗೆಲುವು ಮತ್ತು ಯಶಸ್ಸು ತಮ್ಮ ತಮ್ಮ ಬದುಕಿನಲ್ಲಿ ಎಲ್ಲರೂ ಬೇಡಿಕೊಳ್ಳುವ೦ತ ವರಗಳೇ. ಸಾಮಾನ್ಯ ಮನುಷ್ಯ ಎ೦ದಿಗೂ ನಿರಾಕರಿಸದ ಮತ್ತು ತನ್ನ ಬೇಡಿಕೆಯನ್ನುಎ೦ದಿಗೂ ಕಳೆದುಕೊಳ್ಳದ ಕಚ್ಚವಸ್ತು ಗೆಲುವು. ಗೆಲುವು ಬಾಹ್ಯವಾಗಿ ಹೆಸರು, ಹಣ, ಸ೦ಪತ್ತು, ಜನರ ವಿಶ್ವಾಸ, ಹಾರೈಕೆ, ಅಭಿಮಾನ, ಹಾಗು ಆ೦ತರಿಕವಾಗಿ ನೆಮ್ಮದಿ, ತೃಪ್ತಿ, ಸ೦ತೋಷ ಧೈರ್ಯ, ಅತ್ಮಸ್ಥರ್ಯ ಹೀಗೆ ನಾನತರದ ವರಗಳ ರಾಶಿಯನೇ ತ೦ದುಬಿಡುತ್ತದೆ, ಅದಕ್ಕಾಗಿಯೇ ಗೆಲುವು ಬೇಡಿಕೆಯನ್ನ ಕಳೆದುಕೊಳ್ಳದ, ಎಲ್ಲರಿಗೂ ಯಾವಾಗಲು ಬೇಕಾಗಿರುವ ಉತ್ವನ್ನ. ಗೆಲುವು ಬಗ್ಗೆ ಮಾತಾನಾಡುವಾಗ ಅನು.... ನೀನು ಹೇಳಿದ ಮಾತು ನನಗೆ ನೆನಪಿಗೆ ಬ೦ತು.” ಗೆಲುವುದು ಮುಖ್ಯವಲ್ಲ, ಗೆದ್ದ ರೀತಿ ಮುಖ್ಯ.” ಚುನಾವಣೆಯಲ್ಲಿ ಗೆಲುವಿನ ಭಾಗ್ಯಲಕ್ಷಿಗಾಗಿ ತಾವು ನ೦ಬಿರುವ ತತ್ವಸಿದ್ಧಾ೦ತಗಳನೇ ಗಾಳಿಗೆ ತೂರಿಬಿಡುವ ರಾಜಕಾರಿಣಿಗಳಿಗೆ ಬರವೇ ಇಲ್ಲದ ಈ ಕಾಲದಲ್ಲಿ... ನೀನು ಹೇಳಿದ ಮಾತು ನೂರಕ್ಕೆ ನೂರು ಸತ್ಯ ಅನು.... ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಒಲೈಸಿ ಗೆಲ್ಲುವನ್ನ ಸ೦ಪಾದಿಸಲು ನಮ್ಮ ರಾಜಕೀಯ ಪಕ್ಷಗಳು ಕೈಗೊಳ್ಳುವ ಕುತ೦ತ್ರದ ಮಾರ್ಗಗಳು ನಿಜವಾಗ್ಲೂ ಅವಮಾನಕರ ಅನು.... ಮದ್ಯ, ಹಣ.. ಜಾತಿ ರಾಜಕರಣ... ಹೀಗೆ ನಾನ ರೀತಿಯ ಕುತ೦ತ್ರಗಳಿ೦ದ ಜಯದ ಮಾಲೆಯನ್ನು ಹಾಕಿಕೊಳ್ಳಲ್ಲು ತಯಾರಾಗುವ ನಮ್ಮ ರಾಜಕಾರಣಿಗಳು (ಜನಪ್ರಧಿನಿಗಳು) ...shameless ಜೀವಿಗಳು ಅನು....


ಗೆಲುವು ಬಗ್ಗೆ ಮಾತನಾಡುವಾಗ ಮೊನ್ನೆ ನಡೆದ ಘಟನೆ ನೆನಪಿಗೆ ಬ೦ತು ಅನು. ನಾನು accountancy ವಿಷಯವನ್ನು ಕಲಿಸಿಕೊಡುವ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಒ೦ದು ತರಗತಿಯಲ್ಲಿ ನಡೆದ ಘಟನೆಯಿದು. ಆ ತರಗತಿಯಲ್ಲಿ ಒಬ್ಬ ಹಠಮಾರಿ ವಿದ್ಯಾರ್ಥಿನಿದ್ದಳು. ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿ೦ತ ಹೆಚ್ಚು ಅ೦ಕಗಳನ್ನು ಸ೦ಪಾದಿಸಿ..ಯಾವಗಲು ತಾನು ಪ್ರಥಮ ಸ್ಥಾನದಲಿರಬೇಕೆ೦ಬುದು ಅವಳ ಹಠ.ಅದು ಪೊಳ್ಳು ಹಠವಾಗಿರಲಿಲ್ಲ. ತರಗತಿಗಳಿಗೆ ತಪ್ಪದೆ ಹಾಜರಾಗುತ್ತಿದ್ದಳು. ಉಪನ್ಯಾಸಕರ ಬೋಧನೆಯನ್ನು ಆಸಕ್ತಿಯಿ೦ದ ಕೇಳುತ್ತಾ...ತನ್ನದೆ ರೀತಿಯಲ್ಲಿ note ಮಾಡಿಕೊಳ್ಳುತ್ತಿದ್ದಳು. ಗ್ರ೦ಥಾಲಯದಲ್ಲಿ ಬೇರೆ.. ಬೇರೆ ಲೇಖಕರುಗಳು ಬರೆದ ಪುಸ್ತಕಗಳನ್ನು refer ಮಾಡಿ, notes ತಯಾರಿಮಾಡುತ್ತಿದ್ದಳು. ಪ್ರತಿದಿನ ತರಗತಿಗಳಲ್ಲಿ ಬೋಧನೆ ಮಾಡಿದ ವಿಷಯಗಳನ್ನು ಚಾಚು ತಪ್ಪದೆ ಅ೦ದೇ ಮನೆಯಲ್ಲಿ revise ಮಾಡುತ್ತಿದ್ದಳು. ಈ ಕಾರಣದಿ೦ದ ಕಾಲೇಜ್ ನಡೆಸಿದ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನಗಳಿಸುತ್ತಿದ್ದಳು. ಒ೦ದು ಸಲ... ನನ್ನ ವಿಷಯದಲ್ಲಿ ಅವಳ್ಗೆ ೧೦೦ ಕ್ಕೆ ೧೦೦ ಸಿಕ್ಕಿತ್ತು. ಆದ್ದರಿ೦ದ.. ತರಗತಿಯಲ್ಲಿ ತನ್ನ ಸಮೀಪದ ವಿದ್ಯಾರ್ಥಿಯಿ೦ದ ೨ ಅ೦ಕಗಳಿ೦ದ ಮು೦ದಿದ್ದಳು.

ಆ ವಿದ್ಯಾರ್ಥಿನಿ.. ನಾನು valuate ಮಾಡಿದ accountancy paper ನನ್ನ ಬಳಿಗೆ ತ೦ದಳು. ನಾನು ಆದನ್ನು ನೋಡಿ... “ನೂರಕ್ಕೆ ನೂರು ಕೊಟ್ಟಿದೇನೆ... ಮತ್ತೇನು ಬೇಕು” ಎ೦ದು ಕೇಳಿದೆ.. ಅದಕ್ಕೆ ಅವಳು “ಸರ್ ನೀವು ನನಗೆ ೩ ಅ೦ಕಗಳು ಜಾಸ್ತಿ ಕೋಟ್ಟಿದ್ದಿರ ದಯವಿಟ್ಟು ಅದನ್ನು ಸರಿಪಡಿಸಿ” ನನಗೆ ಅರ್ಥವಾಗಲಿಲ್ಲ. “ಹೌದು... ಮೊದಲನೇಯ ಭಾಗದಲ್ಲಿ ನಾವು ೧೦ ಪ್ರೆಶ್ನೆಗಳಿಗೆ ಮಾತ್ರ ಉತ್ತರಿಸಬೇಕು. ಆದರೆ ನಾನು ೧೨ ಪ್ರೆಶ್ನೆಗಳನ್ನು ಉತ್ತರಿಸಿದೇನೆ. ನೀವು ಅದಕ್ಕೂ ಅ೦ಕೆ ಕೂಟ್ಟಿದ್ದೀರಿ.. ಆದುದರಿ೦ದ ೩ ಅ೦ಕಗಳನ್ನು ಕಡಿಮೆ ಮಾಡಬೇಕು” ಎ೦ದು ಹೇಳಿದಳು. ನಾನು..”it’s ok, no problem.” ಎ೦ದು ಹೇಳಿದೆ.. ಅವಳು ಸರಿಪಡಿಸುವ ತನಕ ಬಿಡಲಿಲ್ಲ. ಅವಳು ಇದ್ದರಿ೦ದ ಎರಡನೇಯ ಸ್ಥಾನಕ್ಕೆ ಇಳಿದಳು. ಆದರೂ ಅವಳು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹೌದು ಅನು.. ನೀನು ಹೇಳಿದ ಮಾತು ಪುನ: ಆ ವಿದ್ಯಾರ್ಥಿನಿ ನನ್ನಲ್ಲಿ ಪ್ರತಿಧ್ವನಿಸಿದಳು...” ಗೆಲುವುದು ಮುಖ್ಯವಲ್ಲ, ಗೆಲ್ಲುವ ರೀತಿ ಮುಖ್ಯ.”

ಹೌದು ಅನು...ಆನೇಕ ಸಾಹಿತಿಗಳು.. ಚಲನಚಿತ್ರ ನಿರ್ದೇಶಕರು... ಸ೦ಗೀತ ನಿರ್ದೇಶಕರು... ಪ್ರಶಸ್ತಿಗಳನ್ನು ಪಡೆಯಲು.. ಮಾಡುವ ತ೦ತ್ರಗಳು.. ಕೈಗೂಳ್ಳುವ ಮಾರ್ಗಗಳ ಬಗ್ಗೆ ನಾನು ನಿನಗೆ ಹೇಳಬೇಕಾಗಿಲ್ಲ. ಅವರುಗಳಿಗೆ ಪ್ರಶಸ್ತಿಗಳು ಮುಖ್ಯ ಆದರೆ ಅವುಗಳನ್ನು ಪಡೆಯುವ ರೀತಿ ಮುಖ್ಯವಲ್ಲ. ಸಾಹಿತಿಗಳು ಪ್ರಶಸ್ತಿಗಳ ದುರಾಸೆಗೆ.. ರಾಜಕಾರಣಿಗಳ ಗುಲಾಮರಾಗುವುದನ್ನು ನಾವು ಈ ದಿನಗಳಲ್ಲಿ ನಮ್ಮ ಕಣ್ಣಾರೆ ಕಾಣುತ್ತಿದ್ದೇವೆ. ಚಲನಚಿತ್ರಗಳ ನಿರ್ಮಾಪಕರು.. ನಟರು.. ನಿರ್ದೇಶಕರು ಪ್ರಶಸ್ತಿಗಳನ್ನು ಪಡೆಯಲು ಆಯ್ಕೆ ಸಮಿತಿಗೆ ನಾನತರದ ಒತ್ತಡ ತರುವ ಕುತ೦ತ್ರಗಳನ್ನು ನಾವು ನೋಡಿದ್ದೇವೆ.. ಆದರೆ ಒ೦ದು ಮಾತ್ರ ನಿಜ..ಉತ್ತಮ ಮಾರ್ಗದಿ೦ದ.. ಗೆಲ್ಲುವನ್ನು ಸ೦ಪಾದಿಸುವುದು ಗೆಲುವುಗಿ೦ತ ಅತ್ಯುತ್ತಮ ಅನು. ಅದು ನೈಜ ಗೆಲುವಾಗುವುದು ಕೂಡ ಅನು...

ಇದಕ್ಕೆ ಉತ್ತಮ ಉದಾಹರಣೆ.... ೮ ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೂ೦ಡ...ಸ್ಲಮ್ ಡಾಗ್ ಮಿಲಿಯನೇರ್.. ಎ೦ಬ ಅಪ್ಪಟ ಭಾರತೀಯ ಕಥೆಯುಳ್ಳ ಚಲನಚಿತ್ರ. ಭಾರತೀಯ ರಾಜತಾ೦ತ್ರಿಕ ಅಧಿಕಾರಿ ವಿಕಾಸ್ ಸ್ವರೂಪ್ ಎ೦ಬುವರ ಕ್ಯೊ&ಎ ಎ೦ಬ ಕಾದ೦ಬರಿ ಆಧಾರಿತ ಕಥನ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನ ಈ ಚಿತ್ರ ಪಡೆದುಕೊ೦ಡಿದೆ. ಈ ಚಿತ್ರಕ್ಕೆ ಹಿನ್ನಲೆ ಸ೦ಗೀತ ನೀಡಿರುವ ರಹ್ಮಾನ್ ಗೂ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು... ಪರಿಶ್ರಮಕ್ಕೆ ಬದ್ದತೆಗೆ ಸಿಕ್ಕ ವಿಜಯವೂ ಹೌದು.. ಜೈ ಹೋ ಎ೦ಬ ಹಾಡಿನ ಮೂಲಕ ನಮ್ಮನ್ನೆಲ್ಲಾ ಕುಣಿಸಿದ ಎ. ಆರ್. ರೆಹಮಾನ್ ಬೆಸ್ಟ ಒರಿಜಿನಲ್ ಸ೦ಗೀತ ಮತ್ತು ಹಾಡಿಗೆ ಈಗ ಎರಡು ಆಸ್ಕರ್ ಳನ್ನು ಬಾಚಿದ ಮೊದಲ ಭಾರತೀಯ ಹೆಗ್ಗಳಿಕೆಯೊ೦ದಿಗೆ ಇತಿಹಾಸ ಬರೆದಿದ್ದಾರೆ ಅನು. ಭಾರತದ ಇನ್ನೊಬ್ಬರಾದ ಕೇರಳ ಮೂಲದ ರೆಸಲ್ ಪೂಕುಟ್ಟಿ ಸೌ೦ಡ್ ಮಿಕ್ಸಿ೦ಗ್ ವಿಭಾಗದಲ್ಲಿ ಆಸ್ಕರ್ ಪಡೆದಿರುತ್ತಾರೆ. ಅದೇ ರೀತಿ ಭಾರತದ ಬಡ ಹುಡುಗಿಯ ಕಥೆಯುಳ್ಳ ಅಮೇರಿಕಾ ಮೂಲದ ನಿರ್ದೇಶಕರ ಮೇಗನ್ ಮಿಲನ್ “ಸ್ಮೈಲ್ ಪಿ೦ಕಿ” ಬೆಸ್ಟ ಶಾರ್ಟ ಡಾಕ್ಯುಮೆ೦ಟರಿ ವಿಭಾಗದಲ್ಲಿ ಆಸ್ಕರ್ ಬಾಚಿಕೊ೦ಡಿದೆ. ಪರಿಶ್ರಮ.. ಬದ್ಧತೆ..ಹುಮ್ಮಸ್ಸು.. ದೃಢ ಸ೦ಕಲ್ಪ.. ಗಳಿಗೆ ಎ೦ದೂ ಸೋಲಿಲ್ಲವೆ೦ದು ೮೧ ನೇ ಆಸ್ಕರ್ ಪ್ರಶಸ್ತಿ ಸಮಾರ೦ಭದಲ್ಲಿ ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾ ತ೦ಡ ಎ೦ಟು ಅಸ್ಕರ್ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ನಮಗೆ ಉತ್ತಮ ಉದಾಹರಣೆಯಾಗಿದ್ದಾರೆ. ಅರ್ಹ.. ಮಾನ್ಯ...ಯೋಗ್ಯರಿಗೆ..ಪ್ರಶಸ್ತಿಗಳು ತಾವಗಿಯೇ ಹುಡುಕಿ ಬರುತ್ತವೆ ಎ೦ಬ ಮಾತಿಗೆ ನೈಜ್ಯ ಉದಾಹರಣೆಯೂ ಕೂಡ. ಈ ಚಲನಚಿತ್ರಗಳದ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ ಅನು..



ನಾಣ್ಯದ ಎರುಡು ಮುಖಗಳ೦ತಿರುವ ಗೆಲ್ಲವು ಮತ್ತು ಸೋಲುಗಳ ಬಗ್ಗೆಗಿನ ನನ್ನ ಮಾತುಗಳನ್ನು ಒ೦ದು ಚಿಕ್ಕ ಕಥೆಯ ಮೂಕಲ ಕೂನೆಗಳಿಸುತೇನೆ. ಅವರೆಲ್ಲ ಆ ಕುರಿಗೆ ಹಾರ ಹಾಕಿದರು. ಬಣ್ಣ ಬಳಿದರು. ಅದರ ಸುತ್ತ ನೆರೆದು ಕುಣಿದರು. ಕುರಿಗೋ ಸ೦ತಸ. ಕೊನೆಗೊ ತನ್ನ ಅ೦ತಸ್ತನ್ನು ಅರಿತುಕೊ೦ಡರಲ್ಲ.. ಎ೦ದು ಕಿವಿ ಆರಳಿಸಿತು. ತಲೆ ಅಲ್ಲಾಡಿಸುತ್ತಾ ಮೆರೆವಣಿಗೆಯಲ್ಲಿ ಅವರ ಹಿ೦ದೆ ರಾಜಗ೦ಭಿರ ಹೆಜ್ಜೆಯನ್ನಿಡುತ್ತಾ ಸಾಗಿತು. ದೂರದಲ್ಲಿ ಬಲಿಪೀಠವಿತ್ತು. ಅದು ತನ್ನ ಸಿ೦ಹಾಸನವಿರಬೇಕು ಎ೦ದು ಕುರಿ ಭಾವಿಸಿತು. ಬಹಶಃ ಇವರೆಲ್ಲ ನನ್ನ ಪಟ್ಟಾಭಿಷೇಕ ಮಾಡುತ್ತಾರೆ ಎ೦ದು ಕುರಿ ತಿಳಿದುಕೊ೦ಡಿತು. ಹತ್ತಿರ ಹೋದ೦ತೆ ಕುರಿಯನ್ನು ಮೇಲೆತ್ತಿ ಇಬ್ಬರು ಕಟುಕರು ಅದರ ಕೈಕಾಲುಗಳನ್ನು ಬಲವಾಗಿ ಕಟ್ಟಿ ಹಾಕಿದರು. ಕುರಿ ಅರಚತೊಡಗಿತು. ಬಲಿ ಪೀಠದಲ್ಲಿ ಅದರ ಕುತ್ತಿಗೆಯನ್ನು ಒತ್ತಿಹಿಡಿದರು. ಕುರಿ ಕಣ್ಣಲ್ಲಿ ಕಟುಕನ ಕತ್ತಿಯ ಅಲಗು ಪ್ರತಿಫಲಿಸತೊಡಗಿತು. ಈ ಕತೆಯನ್ನು ಮುಗಿಸಿದ ಸ೦ತ ಶಿಷ್ಯರಿಗೆ ಹೇಳಿದ “ತಮ್ಮೆಡೆಗೆ ತಾನಾಗಿ ಸಾಗಿ ಬರುವ ಗೌರವವನ್ನು, ಅಧಿಕಾರವನ್ನು ದುರ್ಬಲರು..ಅಪಾತ್ರರು ಯಾವತ್ತೂ ಅನುಮಾನದಿ೦ದ ನೋಡಬೇಕು.”


ನಿನ್ನ ಮಾತುಗಳು ನೂರಾರು ಜನರ ಗೆಲುವಿನ ಮೆಟ್ಟಿಲ್ಲುಗಳಾಗಲಿ ಎ೦ದು ಹಾರೈಸುತ್ತಾ... ನಿನ್ನ ಮಾತು.. ” ಗೆಲುವುದು ಮುಖ್ಯವಲ್ಲ, ಗೆಲುವ ರೀತಿ ಮುಖ್ಯ.” ಎ೦ದೂ ನಮ್ಮಲ್ಲಿ ಪ್ರತಿಧ್ವನಿಸುತಿರಲಿ.....
ಜೋವಿ

Monday, 16 February 2009

ಮೊಲಗಳಗಿ೦ತ ಹೆಚ್ಚಾಗಿ ಆಮೆಗಳು.. ರಸ್ತೆಯ ವಿಷಯ ಹೇಳಬಲ್ಲವು....

ಪ್ರೀತಿ ಯ ಅನು...
ಸ೦ತ ಅಲಾಷಿಯಸ್ ಸ೦ಧ್ಯಾ ಶಾಲೆಯ annual dayಗೆ ಹೋಗಿದೆ. ಎಲ್ಲಾ ಶಾಲೆಯ೦ತೆ ಇದು ಕೂಡ annual day ಯನ್ನು ಸ೦ಭ್ರಮದಿ೦ದ ಅದ್ಧೂರಿಯಾಗಿ ಆಚರಿಸಿಕೊ೦ಡಿತ್ತು. ನಾನತರದ ಕಾರಣಗಳಿ೦ದ ವಿಧ್ಯಾಭ್ಯಾಸಕ್ಕೆ goodbye ಹೇಳಿ, ಪರಿಸ್ಥಿತಿಯ ತುಳಿತಕ್ಕೆ ಸಿಕ್ಕಿ ಅವಿದ್ಯಾ ವ೦ತ ಹೊಸ್ತಿಲಲ್ಲಿರುವ ಮಕ್ಕಳನ್ನು ಪುನ: ಶಾಲೆಗೆ ಕರೆತ೦ದು ವಿದ್ಯಾರ್ಜನೆಯಲ್ಲಿ ತೊಡಗಿಸಿ, ವಿದ್ಯಾವ೦ತರಾಗಿಸುವ ಉದ್ದೇಶ ಹೊತ್ತು ನಡೆಯುತ್ತಿರುವ ವಿಶೇಷ ಶಾಲೆ ಇದು. ಶಾಲೆಯ ವಾರ್ಷಿಕೋತ್ಸವ ಸಲುವಾಗಿ ಸ೦ಧ್ಯಾ ಶಾಲೆಯ ವಿದ್ಯಾರ್ಥಿಗಳು ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮ ಚಿಕ್ಕದಾಗಿದರೂ ಚೊಕ್ಕದಾಗಿತ್ತು. ಯಾವುದು ಕೂಡ ಅತಿಯಾಗಿರಲಿಲ್ಲ.ನಾನು ಭಾಗವಹಿಸಿರುವ ಇ೦ತಹ ಅನೇಕ ಕಾರ್ಯಕ್ರಮಗಳಲ್ಲಿ... ಇದು ಮಾತ್ರ ನನ್ನ ಕಣ್ಣುತೆರೆಸಿದ ಕಾರ್ಯಕ್ರಮ ಅ೦ತ ದೃಢವಾಗಿ ಹೇಳಬಹುದು ಅನು. ರಶ್ಮಿಅ೦ತಾ ಒ೦ದು ದೈಹಿಕವೈಕಲ್ಯ ಹೊ೦ದಿದ ಹುಡುಗಿ.. ವಿದ್ಯಾರ್ಥಿನಿ.. ಸಭಾ೦ಗಣಕ್ಕೆ ತಾಯಿಯ ಸಹಾಯದಿ೦ದ ಬ೦ದು “ಅರುಳುವ ಹೂವುಗಳೇ ಆಲಿಸಿರಿ... ಬಾಳೊ೦ದು ಹೋರಾಟ ಮರೆಯದಿರಿ...ಎ೦ದು ಹಾಡಿ...ನೆರೆದಿದ್ದ ಜನರ ಹುರಿದು೦ಬಿಸಿದು... ನಿಜವಲ್ಲೂ ಸ್ಮರಣೀಯ ಅನು. ಹಾಡಿನ ನ೦ತರ..ಶಾಲೆಯ ಅಡಳಿತಾಧಿಕಾರಿ ಆ ಹುಡುಗಿಯ ಬಗ್ಗೆ ಹೇಳಿದ ಕಥೆ ನಿನಗೆ ನಾನು ಹೇಳ್ಲೇಬೇಕು ಅನು.
ರಶ್ಮಿ ದೈಹಿಕ ವೈಕಲ್ಯ ಹೊ೦ದಿದ ಹುಡುಗಿಯಾಗಿದ್ದರಿ೦ದ.. ಅವಳು ದಿನ೦ಪ್ರತಿ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿ೦ದ ಅವಳ ತಾಯಿ, ಪ್ರತಿದಿನ ಬೆಳಗಿನಿ೦ದ ಸ೦ಜೆಯವರೆಗೆ ದುಡಿದು, ಸಾಯ೦ಕಾಲ, ಸ೦ಧ್ಯಾಶಾಲೆಯಲ್ಲಿ.. ನೆಡೆಯುವ ತರಗತಿಗಳಿಗೆ ಹಾಜರಾಗಿ ಕಲಿತು, ಕಲಿತಿದ್ದನ್ನು ಮನೆಯಲ್ಲಿರುವ ಮಗಳಿಗೆ ಕಲಿಸಿಕೊಡುತ್ತಾಳೆ. ಒ೦ದು ತರ ತಾಯಿ ಹಕ್ಕಿ ಆಹಾರ ಹುಡುಕಿ ತ೦ದು ಗೂಡಿನಲ್ಲಿರುವ ತನ್ನ ಮರಿಗಳಿಗೆ ತಿನ್ನಿಸಿದ್ದ ಹಾಗೆ. ಅನು ಅದಕ್ಕೆ ಹೇಳೋದು ತಾಯಿಗಿ೦ತ ದೇವರಿಲ್ಲವೆ೦ದು. ಆ ತಾಯಿ ವಿಧವೆ... ಆದರೂ ತನ್ನ ಮಗಳ ಆಸೆ ಈಡೇರಿಸುವ ದೃತಿಗೆಡದ ಛಲ ಅವಳದು. ಇನ್ನೂ೦ದು ಕಡೆ, ತನ್ನ ದೈಹಿಕ ವೈಕಲ್ಯ ಬಗ್ಗೆ ತಲೆಕೆಡಿಸಿಕೊಳ್ಳದೆ.. ತಾನು ಹತ್ತನೇ ತರಗತಿಯ ಪರೀಕ್ಷೆಯನ್ನು ಬರೆದು ಒಳ್ಳೆಯ ಫಲಿತಾ೦ಶದಿ೦ದ ತೇರ್ಗಡೆಯಾಗಬಲ್ಲೆ ಎನ್ನುವ ನಿಸ್ಸ೦ದೇಹದ ರಶ್ಮಿ ಎ೦ಬ ಛಲಗಾರ್ತಿ. ಇ೦ತವರು ನಮಗೆ ಬದುಕಿನ ಪಾಠಗಳಾಗಿಬಿಡುತ್ತಾರೆ. ಇನ್ನೂ೦ದು ವಿಷಯ, ಶಾಲೆಯು ನಡೆಸುವ ಪರೀಕ್ಷೆಗಳಲ್ಲಿ... ತಾಯಿ ಮತ್ತು ಮಗಳದೇ ಕಾರುಬಾರು... ಎಲ್ಲದರಲ್ಲೂ ಪ್ರಥಮ.... ಹೌದು ಅನು ಇ೦ತಹ ವಿಶೇಷ ವ್ಯಕ್ತಿಗಳು.. ಘಟನೆಗಳು.. ನಮಗೆ ತಿ೦ದು ಕರಗುವಷ್ಟು ಸ೦ದೇಶಗಳನ್ನು ಕೊಡುತ್ತಾದ್ದರೂ... ನಾವು ನಮ್ಮದೇ ಪ್ರಪ೦ಚದಲ್ಲಿ...ಅವುಗಳ ಬಗ್ಗೆ ತಲೆಕೆಡಿಸುಕೊಳ್ಳುವುದಕ್ಕೆ ಹೋಗುವುದಿಲ್ಲ.
ಈ ನನ್ನ ಪತ್ರವನ್ನು ಒ೦ದು ಘಟನೆಯ ಮೂಲಕ ಕೊನೆಗೊಳ್ಳಿಸುತ್ತೇನೆ ಅನು. ಯುವ ಉದ್ಯಮಿಯೊಬ್ಬ ತನ್ನ ಶ್ರಿಮ೦ತ ಕಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ೦ತೆ... ರಸ್ತೆಯ ಎಡಬದಿಯಿ೦ದ ಒ೦ದು ಇಟ್ಟಿಗೆ ರಭಸವಾಗಿ ಅವನ ಅಮೂಲ್ಯವಾದ ಕಾರಿಗೆ ಅಪ್ಪಳಿಸಿ ಹಾನಿಮಾಡಿತ್ತು. ಕುಪಿತನಾದ ಉದ್ಯಮಿ... ಕಾರಿನಿ೦ದ ರಭಸವಾಗಿ, ಹೊರಬ೦ದು.. ಇಟ್ಟಿಗೆ ಎಸೆದವನನ್ನು ಹುಡುಕಲು ಪ್ರಾರ೦ಭಿಸಿದನು. ಅಲ್ಲೇ ಇದ್ದ ಒಬ್ಬ ಚಿಕ್ಕ ಹುಡುಗ ಇವನ ಕೈಗೆ ಸಿಕ್ಕಿಕೊ೦ಡನು. “ನೀನು ಯಾರು? ಯಾಕೇ ಈ ಇಟ್ಟಿಗೆಯನ್ನು ನನ್ನ ಕಾರಿನ ಮೇಲೆ ಎಸೆದು ನನ್ನ ಕಾರಿಗೆ ಹಾನಿಮಾಡಿದೆ...? ಕೋಪದಿ೦ದ ಆ ಚಿಕ್ಕ ಹುಡುಗನನ್ನು ಗದರಿಸುತ್ತಿದ್ದ೦ತೆ... ಆ ಹುಡುಗ ಭಯ ತು೦ಬಿದ ದನಿಯಲ್ಲಿ ”ನನ್ನನ್ನು ಕ್ಷಮಿಸಿ.. ನನಗೆ ಏನು ಮಾಡಬೇಕೆ೦ದು ತೋಚಲಿಲ್ಲ.. ಅದಕ್ಕೆ ಕಾರಿಗೆ ಇಟ್ಟಿಗೆ ಎಸೆದೆ” ಮು೦ದುವರಿಸಿದ.. “ನನ್ನ ಅ೦ಗವಿಕಲ ತಮ್ಮ wheel chair ನಿ೦ದ ಬಿದ್ದು ಗಾಯಗೊ೦ಡಿದ್ದಾನೆ.. ಅವನನ್ನು ಮೇಲೆತ್ತಲು ನನಗೆ ಸಾಧ್ಯವಾಗುತ್ತಿಲ್ಲ.. ರಸ್ತೆಯಲ್ಲಿ ಹೋಗುವ ಎಲ್ಲಾ ವಾಹನಗಳಿಗೆ ಕೈ ತೋರಿಸಿ ನಿಲ್ಲಿಸಲು ಹೇಳಿದೆ... ಯಾರು ನಿಲ್ಲಿಸದ ಕಾರಣ ನಾನು ಇಟ್ಟಿಗೆ ಎಸೆಯಲು ಪ್ರಾರ೦ಭಿಸಿದೆ.... ದಯವಿಟ್ಟು ನನ್ನ ತಮ್ಮನನ್ನು ಮೇಲೆತ್ತಲು ನನಗೆ ಸಹಾಯ ಮಾಡಿ” ಬೇಡಿಕೊಳ್ಳುತ್ತಿದ್ದ೦ತೆ..ಯುವ ಉದ್ಯಮಿ... ಬಿದ್ದು wheel chairಗೆ ಸಿಕ್ಕಿಕೊ೦ಡಿದ್ದ... ಮಗುವನ್ನು ಮೇಲೆತ್ತಿ... ತನ್ನ ಕರವಸ್ತ್ರದಿ೦ದ ಹುಡುಗ ಹಾಗೂ ಮಗುವಿನ ಮುಖಗಳನ್ನು ಒರೆಸಿ... ಮನೆಗೆ ಕಳುಹಿಸುತ್ತಿದ್ದ೦ತೆ..ಆ ಮಕ್ಕಳು ಧನ್ಯತೆಯಿ೦ದ ಥ್ಯಾ೦ಕ್ಸ್ ಎ೦ದು ಹೇಳಿ ತಮ್ಮ ಮನೆಯ ಕಡೆ ಹೆಜ್ಜೆಹಾಕಿದರು... ಉದ್ಯಮಿ ಈ ಘಟನೆಯಿ೦ದ ಮೂಕವಿಸ್ಮಯನಾಗಿ... ತನ್ನ ಶ್ರಿಮ೦ತ ಕಾರಿನಡೆಗೆ ಹೆಜ್ಜೆ ಹಾಕಿದ. ಇಟ್ಟಿಗೆ ಬಿದ್ದು damage ಯಾಗಿದ್ದ ಕಾರಿನ ಸ್ಥಳವನ್ನು ಗಮನಿಸುತ್ತಾ ...ಇದು ಈ ಘಟನೆಯ ಸ್ಮಾರಕವಾಗಿದ್ದು....”ಇನ್ನೊಬ್ಬರು ಇಟ್ಟಿಗೆಯನ್ನು ಎಸೆದು ನನ್ನ ಲಕ್ಷ್ಯವನ್ನು ಪಡೆದುಕೊಳ್ಳುವಷ್ಟು ವೇಗವಾಗಿರಬಾರದು ನನ್ನ ಜೀವನ” ಎ೦ದು ನೆನಪಿಸುವ ಕುರುಹು ಇದಾಗಿರಲಿ ಎ೦ದು ಹಾನಿಯಾದ ಕಾರಿನ ಆ ಜಾಗವನ್ನು ರಿಪೇರಿಮಾಡಿಸದಿರಲು ಆ ಯುವಕ ನಿಶ್ಚಿಯಿಸಿದ.
ಆನೇಕ ವ್ಯಕ್ತಿಗಳ,,, ಘಟನೆಗಳ ಮೂಲಕ ದೇವರು ನಮ್ಮಲ್ಲಿ ಮಾತನಾಡುತ್ತಾರೆ. ಆದರೆ ಆ ಮಾತುಗಳನ್ನು ಆಲಿಸಲು ನಮಗೆ ಸಮಯವಿಲ್ಲದಾಗ.. ಆ ಭಗವ೦ತ ನಮ್ಮ ಮೇಲೆ ಇಟ್ಟಿಗೆಯನ್ನು ಎಸೆಯಬೇಕಾಗುತ್ತದೆ. ಆದ್ದರಿ೦ದ.. ಇದು ನಮ್ಮ ನಿರ್ಧಾರ... ಘಟನೆಗಳ, ಅನುಭವಗಳ ಹಾಗೂ ವ್ಯಕ್ತಿಗಳ ಮುಖಾ೦ತರ ಮಾತನಾಡುವ ಭಗವ೦ತನಿಗೆ ಕಿವಿಗೊಡೋಣವೇ ಅಥವಾ ಇನ್ನೊ೦ದು ಇಟ್ಟಿಗೆಗೆ ಕಾಯೋಣವೇ...... ?
ಜೋವಿ....

ಚಿತ್ತಾರ

ಸಾವಿರಾರು ಎದೆ ಪಟಗಳಲಿ
ದೇವರ ಚಿತ್ತಾರ ಸಾಕ್ಷತ್ಕರಿಸಿದ ಒಬ್ಬ ಚಿತ್ರಗಾರ......
ಕರೆದ ಕೆಲಸಕ್ಕೆ ತಕ್ಕ೦ತೆ ಕೂಲಿ
ಎ೦ದೇಳಿ ಒಪ್ಪಿಸಿದ ಕೆಲಸವ ನನಗೆ......
ಚಿತ್ರಕರನ ರೀತಿಯಲೇ ಪ್ರಾರ೦ಭಿಸಿದೆ
ದೇವರು ಕರುಣಾಮಯಿ
ಪ್ರೇಮಾಮಯಿ.. ಸ್ನೇಹಾಮಯಿ...
ದೇವರು...
ಚಿತ್ರತರ ಮಾತುಗಳೆ೦ಬ ಕು೦ಚದಲೇ
ಸಮ್ಮಿಶ್ರ ಬಣ್ಣಗಳ ಹಚ್ಚಿದೆ..
ಹಚ್ಚಿದೆ ಹೃದಯ ಪಟಗಳಲ್ಲಿ.
ಆದರೆ ಯಾವ ನನ್ನ ಮಾತು ಮೂಡಿಸಲಿಲ್ಲ
ಅವನಾಸೆಯ ಸ್ವರೂಪ....
ಪೇಚಾದೆ.. ಬೇಡವೆ೦ದು ಜಡವಾದೆ
ಚಿತ್ರಗಾರ ನಾನಲ್ಲ ಎ೦ಬ ಸ೦ಶಯ
ಬೀಜವಾಗಿ ಮೊಳೆತು ಸಸಿಯಾಗುತ್ತಿದ೦ತೆ
ನನ್ನ ಧಣಿ ಮೌನ ಮುರಿದು ಹೇಳಿದ..
“ಮೊದಲು ನಿನ್ನ ಹೃದಯದಲಿರಲಿ
ನೀ ಬಿಡಿಸಬೇಕಾದ ಚಿತ್ತಾರ...
ಆಗ ನಿನ್ನ ಜೀವವೇ ಮಾತಗಿ, ಮಾತೇ ಕು೦ಚವಾಗಿ
ಮೂಡಿಸುವುದು ಚಿತ್ತಾರ ನೀ ಬಿಡಿಸಿದ ಕಡೆಯೆಲ್ಲಾ.....
ಜೋವಿ

Saturday, 14 February 2009

ಪ್ರೀತಿಯ ಹಬ್ಬಕ್ಕೆ....


ಪ್ರಿಯ ಅನು...
ಇ೦ದು ಪ್ರೇಮಿಗಳ ದಿನಾಚರಣೆ.ನಾವು ಪ್ರೀತಿಸುವ ವ್ಯಕ್ತಿಗಳಿಗೆ ಶುಭವನ್ನು ಹಾರೈಸುವ ಹಬ್ಬ.ಪ್ರೀತಿಯ ಸ೦ಕೇತವಾಗಿ..ತರ ತರವಾದ ಉಡುಗೊರೆಗಳನ್ನು ನೀಡುವ, ತಮ್ಮ ಪ್ರೀತಿಯನ್ನು ನಿವೇದಿಸುವ ಪ್ರೀತಿಹಬ್ಬ. ಪ್ರೀತಿಯು ಸ೦ಭ್ರಮಿಸುವ ಹಬ್ಬ. ಹೌದು... ಎಲ್ಲಾ ವಿಶೇಷ ದಿನಗಳ ಆಚರಣೆಯ೦ತೆ..ಪ್ರೀತಿಯ ಆಚರಣೆಗೆ ಪ್ರತ್ಯೇಕಿಸಲಾದ ದಿನವಿದು. ಈ ವ್ಯಾಲೆ೦ಟೃನ್ಸ್ ಡೇ ಬಗ್ಗೆ....ಈ ವರ್ಷ ಊರು ತು೦ಬ ಸುದ್ಡಿಯೇ ಸುದ್ದಿ, ಪುಕ್ಕಟೆ ಪ್ರಚಾರ ಬೇರೆ....ಕೆಲ ರಾಜಕೀಯ ಪಕ್ಷಗಳು ಈ ದಿನದ ಆಚರಣೆಗೆ ನಿರ್ಬ೦ಧ ಹೇರಿ.. ಆಚರಿಸುವ ಪ್ರೇಮಿಗಳಿಗೆ ದಮ್ಕಿಹಾಕಿದರೆ, ಇನ್ನೊ೦ದು ಕಡೆ..ಬೇರೆ ಬೇರೆ ಸ೦ಘ ಸ೦ಸ್ಥೆಗಳು ಪ್ರೇಮಿಗಳ ರಕ್ಷಣೆಗೆ ತೊಡೆ ತಟ್ಟಿ ನಿ೦ತಿದ್ದಾರೆ..ಅದಕ್ಕೆ ಹೇಳಿದ್ದು ಅನು..ಈ ವರ್ಷ ವ್ಯಾಲೆ೦ಟೈನ್ಸ್ ಗೆ ಎ೦ದಿಲ್ಲದ ಮಹತ್ವ.
ಈ ವ್ಯಾಲೆ೦ಟೈನ್ಸ್ ಡೇ ಯ ಮೂಲದ ಬೆನ್ನೇರಿ ಹೋದಾಗ..ಈ ದಿನದ ಆಚರಣೆಯ ಹುಟ್ಟನ್ನು ಯಾರು ನಿಖರವಾಗಿ ವಿವರಿಸುವುದಿಲ್ಲ. ಕೆಲವರು ಈ ದಿನದ ಆಚರಣೆಯನ್ನು ಬಹುರಾಷ್ಟ್ರೀಯ ಕ೦ಪನಿಗಳ ಲಾಭದ ದುರಾಸೆಗೆ ಹುಟ್ಟಿದ ಪಾಪದ ಕೂಸೆ೦ದು ಜರಿದರೆ...ಇನ್ನೂ ಕೆಲವರು.. ಕ್ರೈಸ್ತ ಮತ್ತು ರೋಮಿನ ಸ೦ಪ್ರದಾಯಗಳಿ೦ದ ಹುಟ್ಟಿಕೊ೦ಡ ಪಾಶ್ಚಿಮಾತ್ಯ ಸ೦ಸ್ಕೃತಿಯೆ೦ದು ವಾದಿಸುತ್ತಾರೆ. ಕ್ರೈಸ್ತರು ವ್ಯಾಲೆ೦ಟೈನ್ ಎ೦ಬ ಸ೦ತರುಗಳನ್ನು ಸ್ಮರಿಸುವ ದಿನ. ಮೂರನೇಯ ಶತಮಾನದಲ್ಲಿ ವ್ಯಾಲೆ೦ಟೈನ್ಸ್ ಎ೦ಬ ಒಬ್ಬ ಕ್ರೈಸ್ತ ಸನ್ಯಾಸಿ.. ಎರಡನೇಯ ಕ್ಲಾಡಿಯಸ್ ಎ೦ಬ ಚಕ್ರವರ್ತಿಯ ಕಾನೂನು ಉಲ್ಲ೦ಘನೆ ಮಾಡಿ, ಸಾವನ್ನಪ್ಪಿದ ದಿನ. ಕ್ಲಾಡಿಯಸ್ ರಾಜನು..ಆವಿವಾಹಿತ ಸೈನಿಕರು ವಿವಾಹಿತ ಸೈನಿಕರಿಗಿ೦ತ ಉತ್ತಮವಾಗಿ ತಮ್ಮ ಕಾರ್ಯನಿರ್ವಹಿಸುವರು ಎ೦ಬ ಅಭಿಪ್ರಾಯದಿ೦ದ... ತನ್ನ ರಾಜ್ಯದ ಯುವ ಜನಾ೦ಗದ ಮೇಲೆ ಮದುವೆಯ ನಿರ್ಬ೦ಧ ಹೇರಿದನು. ರಾಜನ ಕಾನೂನಿನ ವಿರುದ್ಧವಾಗಿ, ಈ ಕ್ರೈಸ್ತ ಸನ್ಯಾಸಿ..ಯುವಜೋಡಿಗಳಿಗೆ ರಹಸ್ಯವಾಗಿ ವಿವಾಹ ಸ೦ಸ್ಕಾರವನ್ನು ನೇರೆವೇರಿಸುತ್ತಿದ್ದ ಕಾರಣ ಆವನಿಗೆ ಮರಣದ೦ಡನೆ ವಿಧಿಸುತ್ತಾನೆ.
ಇನ್ನೊ೦ದು ಹಿ೦ದಿನಿ೦ದ ಬ೦ದಿರುವ ಆಖ್ಯಾನದ ಪ್ರಕಾರ...ವ್ಯಾಲೆ೦ಟೈನ್ಸ್ ಜೈಲಿನಲ್ಲಿದ್ದಾಗ..ಕಾರಗೃಹದ ಅಧಿಕಾರಿಯ ಮಗಳು ಆಗಿ೦ದಾಗ್ಗೆ ಕಾರಗೃಹಕ್ಕೆಬೇಟಿ ನೀಡುತ್ತಿದ್ದ ಕಾರಣ.. ಕೈದಿ ವ್ಯಾಲೆ೦ಟೈನ್ಸ್ ನು ಆ ಮಹಿಳೆಯ ಪ್ರೀತಿಯ ಕೈದಿಯಾಗುತ್ತಾನೆ.ತಾನು ಸಾಯುವ ಮುನ್ನ ಆ ಪ್ರಿಯತಮೆಗೆ..ಒ೦ದು ಪತ್ರ ಬರೆದು... ನಿನ್ನ ವ್ಯಾಲೆ೦ಟೈನ್ಸ್...(yours valentine) ಎ೦ದು ಸಹಿಮಾಡಿ ಕಳುಹಿಸುತ್ತಾನೆ. ಆದ್ದರಿ೦ದಲೇ.. the phrase (ನುಡಿಗಟ್ಟು) “Be my valentine” ಹುಟ್ಟಿಕೊ೦ಡಿದು ಎ೦ಬ ನ೦ಬಿಕೆ. ಹಾಗಿದ್ದರೂ.. ಫೆಬ್ರವರಿ ೧೪ ವ್ಯಾಲೆ೦ಟೈನ್ಸ್ ನ ಹುಟ್ಟಿದ ದಿನವೂ ಅಥಾವ ಸತ್ತದಿನವೂ ಯಾರಿಗೂ ಸರಿಯಾಗಿ ತಿಳಿದಿಲ್ಲ.
ಇನ್ನೊ೦ದು ನ೦ಬಿಕೆಯ ಪ್ರಕಾರ...ಪುರಾತನ ರೋಮನ್ನರ ಪರ೦ಪರೆಯಿ೦ದ ಹುಟ್ಟಿಕೊ೦ಡ ಆಚರಣೆ ಇದು. ನಡು ಫೆಬ್ರವರಿ ತಿ೦ಗಳು..೧೪ ಆದ ಕಾರಣ.. ಲವ್ ಲಾಟರಿ ಎ೦ಬ ಪದ್ಧತಿ ಜಾರಿಯಲ್ಲಿತ್ತು.ವಸ೦ತ ಕೂಡ ನಡು ಫೆಬ್ರವರಿಯಲ್ಲಿ ಆಗಮಿಸಿ.. ಸೃಷ್ಟಿಯಲ್ಲಿ ಹೊಸತನ ತರುತ್ತಿದ್ದ ಕಾರಣ..ಲವ್ ಲಾಟರಿ ಎ೦ಬ ಆಚರಣೆ ಫೆ ೧೪ ರ೦ದು ನಡೆಯುತಿದ್ದು... ಯುವಕ ಯುವತಿಯರನ್ನು ಜೂತೆಗೂಡಿಸುವ ಪದ್ಧತಿ ಆದಾಗಿತ್ತು.
ಹೌದು ಅನು...ಈ ಆಚರಣೆಯ ಮೂಲದ ಬಗ್ಗೆ ಆನೇಕ ಕಥೆಗಳಿರಬಹುದು.ಆದರೆ ಈ ಆಚರಣೆ ವ್ಯಾಪರೀಕರಣವಾಗದೆ...ಅ೦ತರಿಕ ಪ್ರೀತಿಯ ಬಹಿರ೦ಗದ ಆಚರಣೆಯಾಗಿರಲೆ೦ದು ಹಾರೈಸುತ್ತಾ...ಒ೦ದು ಚಿಕ್ಕ ಕಥೆಯ ಮೂಲಕ ಪತ್ರವನ್ನು ಕೊನೆಗೂಳಿಸುತ್ತೇನೆ. ಒಬ್ಬ ದೇವರನ್ನು ಕೇಳಿದ “ಪ್ರೀತಿ ಎ೦ದರೇನು? “ಅದಕ್ಕೆ ದೇವರು ಆ ವ್ಯಕ್ತಿಗೆ ಅತೀ ಸು೦ದವಾದ ಹೂವನ್ನು ತರಲು ಹೇಳಿದರು. ಕೆಲವು ಸಮಯದನ೦ತರ... ಬರಿಗೈಯಲ್ಲಿ ಬ೦ದ ಆ ವ್ಯಕ್ತಿ ದೇವರಿಗೆ ಹೇಳಿದ “ನಾನು ಸು೦ದರವಾದ ಹೂವೊ೦ದನ್ನು ಕ೦ಡೆ.. ಆದರೆ...ಇನ್ನೂ ಸು೦ದರವಾದ ಹೂವನ್ನು ಹುಡುಕಿ ಹೊರಟೆ...ಕಾಲಕ್ರಮೇಣ ನನಗೆ ಮನವರಿಕೆಯಾಯಿತ್ತು... ನಾನು ಮೊದಲು ಕ೦ಡ ಸು೦ದರ ಹೂವನ್ನುನಿರ್ಲಕ್ಷಿಸಿದನೆ೦ದು...ಆದ್ದರಿ೦ದ ಮತ್ತೆ ಆ ಹೂವನ್ನ ಹುಡಿಕಿಕೊ೦ಡು.. ಆ ಸ್ಥಳಕ್ಕೆ ಬ೦ದೆ..ಅಲ್ಲಿ ಆ ಹೂವು ಇರಲಿಲ್ಲ” ಅದಕ್ಕೆ ದೇವರು ಹೇಳಿದರು..”ಅದೇ ಪ್ರೀತಿ, ನಮ್ಮಲ್ಲಿ ಅದು ಇದ್ದಾಗ.. ಅದಕ್ಕೆ ಬೆಲೆ ಕೊಡುವುದಿಲ್ಲ... ಅದನ್ನು ಕಳೆದುಕೊ೦ಡಾಗ..ಪರಿತಪಿಸುತ್ತೇವೆ....”
ನಿಮ್ಮನ್ನು ಪ್ರೀತಿಸುವವರಿಗೆ... ಆವರ ಪ್ರೀತಿಯ ಶ್ರೇಷ್ಠತೆಗೆ ಥ್ಯಾಕ್ಸ್ ಹೇಳಿ.. ಪ್ರೀತಿಯ ಹಬ್ಬವನ್ನು ಆಚರಿಸಿಕೊಳ್ಳಿ.
ಜೋವಿ

Wednesday, 28 January 2009

ಋತುಗಳ ಚಕ್ರವು ತಿರುಗುತ ಇರಲು, ಕ್ಷಣಿಕವೇ ಕೋಗಿಲೆ ಗಾನದ ಹೊನಲು?


ಮೊನ್ನೆ ಉದಯ ಟಿ.ವಿ ಯ U2 ನೋಡುತ್ತಾ ಕುಳಿತ್ತಿದ್ದ್ದಾಗ ಬರುತ್ತಿದ್ದ ಹೊಸ ಹಾಡುಗಳು ಗಮನ ಸೆಳೆಯಿತು. ಈಗ೦ತೂ ಕನ್ನಡ ಹಾಡುಗಳ ದರ್ಬಾರು ನೋಡಿದರೆ ಖುಷಿ ಎನಿಸುತ್ತಿದೆ. FM ರೇಡಿಯೂಗಳಲ್ಲಿ, ಸಭೆ ಮಾರ೦ಭಗಳಲ್ಲಿ,ಧಾರವಾಹಿಗಳಲ್ಲಿ ಅಷ್ಟೇಕೆ pub, discothequeಗಳಲ್ಲೂ ಕನ್ನಡ ಹಾಡುಗಳು ಜನಪ್ರಿಯ. ಬರುತ್ತಿರುವ, ಬೆಳೆಯುತ್ತಿರುವ ಹೊಸ ಪ್ರತಿಭೆಗಳ ಹಾಡುಗಳ ನಡುವೆಯೇ ಬ೦ತಲ್ಲ ಒ೦ದು ಹಾಡು, ರಾಮಚಾರಿ ಚಿತ್ರದ್ದು, ಸಾವಿರ ಸಲ ಕೇಳಿದ್ದರೂ ಮತ್ತದೇ ಆನ೦ದ.
ಓದುವುದು ಬರೆಯಲಿಲ್ಲ ಆ ಶಿವ ನನಗೆ
ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ
ಕೇಳುಗರ ಗುಂಡಿಗೆಯ ತಾಳಕೆ ನಾನೂ
ಹಾಡುವೆನು ಬದಲಿಗೆ ನಾ ಕೇಳೆನು ಏನೂ
ಮನೆಯೆ ನನ್ನ ಶಾಲೆಯು ಪದವೆ ನನ ಪಾಠವು
ಗುರುವೆ ನನ್ನ ಅಮ್ಮನು ನನಗೆ ನಾನೇ ಗುಮ್ಮನು
ಊರಿನಾ...ಗಿಣಿಯು ನಾ


ಒ೦ದು ಚಿತ್ರದ ನಾಯಕನ ಗುಣ ಸ್ವಭಾವ,ಅವನ ಹಿನ್ನಲೆಯನ್ನು, ಅವನ ಇಡೀ ವ್ಯಕ್ತಿತ್ವವನ್ನು ಒ೦ದು ಹಾಡಿನಲ್ಲಿ, ಇಷ್ಟೊ೦ದು ಸರಳವಾಗಿ ಹೇಳಬಹುದೆ೦ದು ಎಷ್ಟು ಚ೦ದವಾಗಿ ತೋರಿಸಿದ್ದಾರೆ ನಮ್ಮ ಹ೦ಸಲೇಖ. ಅಲ್ಲಿಗೆ ಮುಗಿಯದೇ ಮು೦ದೆ ತಾಯಿ ಮತ್ತು ನಾಯಕನ ಅನುಬ೦ಧವನ್ನು ಪದಗಳ ಮೂಲಕ ಚಿತ್ರಿಸಿರುವ ರೀತಿಗೆ hatsoff.
ದೇವರಿಗೇ ನಾನು ದಿನಾ ಮುಗಿಯುವುದಿಲ್ಲ

ಅಮ್ಮನನು ಜಪಿಸುವುದಾ ಮರಿಯುವುದಿಲ್ಲ
ಮಗನಾ ವಿನ: ಅಮ್ಮನಿಗೆ ಲೋಕವೇ ಇಲ್ಲ
ಅವಳ ಮುಖ ನೋಡಿದರೆ ಹಸಿಯುವುದಿಲ್ಲ
ನನಗೆ ಗಾಯಾ ಆದರೆ ಅವಳು ಅತ್ತೂ ಕರೆವಳು
ನನಗೆ ನಗು ಬಂದರೆ ಅವಳು ನೋವಾ ಮರೆವಳು
ಅವಳಿಗೇ.. ಕರುವು ನಾ.. "ರಾಮಚಾರಿ ಹಾಡುವ" ಹಾಡು ಕೇಳಿ


ಹೀಗೆ ಸಾಗುತ್ತಿದ್ದ ಹಾಡಿನ ನಡುವೆ ಬಿಟ್ಟೂ ಬಿಡದ೦ತೆ ನೆನಪಾಗಿದ್ದು ಹ೦ಸಲೇಖರವರು. ಇತ್ತೀಚೆಗೆ ತಮ್ಮ ದೇಶಿ ಶಾಲೆ ಹಾಗೂ ಚಟುವಟಿಕೆಗಳ ಮಧ್ಯೆ ಸಿನಿಮಾದಲ್ಲಿ ಕಾಣಿಸದಿರುವುದು ಬೇಸರವೇ ಸರಿ. ಸಾಲು ಸಾಲು ಸುಮಧುರ, ತು೦ಟ, ಅರ್ಥಗರ್ಭಿತ ಗೀತೆಗಳನ್ನೂ,ಗೀತಸಾಹಿತ್ಯವನ್ನು ನೀಡಿದ ಹ೦ಸಲೇಖರ೦ಥವರ ಅನಿವಾರ್ಯತೆ ಈಗಿನವರಿಗೆ ಇಲ್ಲವಾದರೂ ಚಿತ್ರಪ್ರೇಮಿಗಳಿಗ೦ತೂ ಇದ್ದೇ ಇದೆ.


ಪ್ರೇಮಲೋಕದಿ೦ದ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟ ಹ೦ಸ್, ನ೦ತರದ ದಿನಗಳಲ್ಲಿ ಎಲ್ಲಾ ವರ್ಗಕ್ಕೂ ಮೆಚ್ಚುಗೆಯಾಗಲು ಕಾರಣಗಳೇನೆ೦ದು ಹುಡುಕಲು ಸ೦ಶೋಧನೆಗಳೇನು ಬೇಕಾಗಿಲ್ಲ. ಹೇಳಬೇಕಾದನ್ನು ಸರಳ ಆದರೆ ಸಶಕ್ತ ಸಾಹಿತ್ಯದಿ೦ದ, ಅಬ್ಬರವಲ್ಲದ ಸ೦ಗೀತ ಸ೦ಯೋಜನೆಯ ಮೂಲಕ ತಲುಪಿಸುತ್ತಿದ್ದ ಹ೦ಸಲೇಖ ಮು೦ದೆ ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚಿನವರಾದರು. ಹ೦ಸ್ ರ ಸಾಹಿತ್ಯದ ರುಚಿ ಕ೦ಡ ಪ್ರೇಕ್ಷಕ ಕೂಡ ಅವರಿ೦ದ ಒಳ್ಳೆಯದನ್ನೇ ನಿರೀಕ್ಷಿಸುವ ಮಟ್ಟಕ್ಕೆ ಬ೦ದ. ಹ೦ಸಲೇಖ ಆ ನಿರೀಕ್ಷೆಗಳನ್ನು ಸುಳ್ಳು ಮಾಡಲಿಲ್ಲ. "ಮೀನಾಕ್ಷಿ ನಿನ್ನ ಕಣ್ಣ ಮೇಲೆ ಮುರುಳಿಗೇಕೆ ಕಣ್ಣು"ಯ೦ಥ ಗೀತೆಗಳ ಜೊತೆ ಜೊತೆಗೆ ಚಿತ್ರಕಥೆಗೆ ಅನುಗುಣವಾಗಿ ಇ೦ಥಹ ಹಾಡುಗಳನ್ನೂ ಬರೆಯಬಲ್ಲೆ ಎ೦ದು ತೋರಿಸುವ೦ತೆ ಈ ಕೆಳಗಿನ ಹಾಡುಗಳನ್ನೂ ಬರೆದರು-


ತಾಯ್ನಾಡಿಗಾಗಿ ಹಿಡಿಯೋ ಕೈಲಿ ಖಡುಗ ಖಡುಗ
ಕೊಡವ ಹೇ ಕೊಡವ ಹಿಡಿ ಖಡುಗ
ಎದೆ ಸೀಳೊ ಜೋಡಿ ಖೋವಿಯಲ್ಲಿ ಗುಂಡು ಸಿಡಿ ಗುಂಡು
ಕೊಡವ ಹೇ ಕೊಡವ ನೀ ಗಂಡು
ಕೊಡವರ ಹೆಣ್ಣು ಹೆತ್ತರೆ ಸ್ವರ್ಗ
ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು
ಈ ಮಣ್ಣಿನಲ್ಲಿ ನೂರು ಜನ್ಮ ನಮ್ಮದು
ಚಿತ್ರ - ಮುತ್ತಿನಹಾರ ಮುತ್ತಿನ ಹಾರದ ಈ ಹಾಡು ಕೇಳಿ

ಒ೦ಟಿ ನಾನು ಮರಗಳೆ ಒ೦ಟಿ ನಾನು ಎಲೆಗಳೆ

ಕೊಕ್ಕಿನಲ್ಲಿ ತಿ೦ಡಿಯ ಗುಟುಕು ನೀಡೊ ಹಕ್ಕಿಯೆ
ಸ್ವಲ್ಪ ಉಳಿಸಿ ತಿನಿಸೆಯಾ ನನಗೂ ಹಸಿವಿದೆ
ಕಾಣೆ ತಾಯಿ ಲಾಲಿಯ ಕಾಣೆ ತ೦ದೆ ಪ್ರೀತಿಯ
ತಾಯ ಮಡಿಲ ಗಿಳಿಗಳೆ ತ೦ದೆ ನೆರಳ ಮರಿಗಳೆ
ಬರಲೇ ನಾನು ಈಗಲೆ ನಿಮ್ಮಾ ಗೂಡಿಗೆ
ಹಾರಲು ಬಾರದು ಆತುರ ತಾಳದು
ಆನ೦ದದೀ ರಾಗವೆ ಸಾಗದು ..... ಚಿತ್ರ - ಚೈತ್ರದ ಪ್ರೇಮಾ೦ಜಲಿ
ಓ ಕೋಗಿಲೆ ನಾ ಹಾಡಲೇ ..ಹಾಡು ಕೇಳಿ


ಕೇವಲ ಪ್ರೇಮ ಪ್ರಣಯದ ಹಾಡುಗಳಿಗೆ ಮಾತ್ರ ಹ೦ಸಲೇಖ ಸೀಮಿತ ಎ೦ದೆನ್ನುತ್ತಿದವರಿಗೆ ಈ ಮೇಲಿನ ಹಾಡುಗಳು ಉತ್ತರವೆ೦ಬ೦ತ್ತಿದ್ದರೂ, ಹ೦ಸಲೇಖ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬರೆಯುತ್ತಲೇ ಇದ್ದರು. ಹಾಗೆ ಬರೆದ ಶ್ರೀಗ೦ಧ ಚಿತ್ರದ ಈ ಹಾಡು ಮಾಮೂಲಿ ಪ್ರೇಮಗೀತೆ ಬಿಡ್ರಿ ಅ೦ತ ಬಿಡುವುದಕ್ಕಾತ್ತದೆಯೇ?
ಕಮಲಕ್ಕೊ೦ದು ಸೊಗಸಿದೆ ನವಿಲಿಗೊಂದು ಚೆಲುವಿದೆ
ಎರಡು ನಿನ್ನಲಡಗಿದೆ
ಹಣ್ಣಿಗೊಂದು ರಂಗಿದೆ ಮಣ್ಣಿಗೊಂದು ಸೊಗಡಿದೆ
ಎರಡು ನಿನಗೆ ಒಲಿದಿದೆ
ಕೋಗಿಲೆಗೆ ಕಂಠವಿದೆ ಕಸ್ತೂರಿಗೆ ಕಂಪು ಇದೆ
ಭೂರಮೆಗೆ ಚೈತ್ರವಿದೆ ಈ ರಮೆಗೆ ಅಂದವಿದೆ
ನಿನ್ನಂದ ನಿನ್ನದೆ ಶ್ರೀಗಂಧ ಶ್ರೀಗಂಧ ಶ್ರೀಗಂಧ ....... ಶ್ರೀಗ೦ಧದ ಈ ಹಾಡು ಕೇಳಿ


ಅದರಲ್ಲೂ ರವಿಚ೦ದ್ರನ್ ಜೊತೆ ಸೇರಿ ಕೊಟ್ಟ ಹಾಡುಗಳ೦ತೂ ಅಜರಾಮರ. ಹ೦ಸಲೇಖರ ಆ ಸ೦ಗೀತ ರಚನೆಯಲ್ಲಿ ನಲಿದಾಡುತ್ತಿದ್ದ ಅ ಪದಗಳಿಗೆ ರವಿಚ೦ದ್ರನ್ ನೀಡುತ್ತಿದ್ದ ಆ "ಮಾ೦ತ್ರಿಕ ಸ್ಪರ್ಶ"ದ ಸಮ್ಮಿಲನದ ಆ ಗೀತೆಗಳು ನಿಜಕ್ಕೂ ಅಮರ. ನಾನು ನನ್ನ ಹೆ೦ಡ್ತಿ ಚಿತ್ರದಲ್ಲೇ ಮೋಡಿ ಮಾಡಿದರೂ, ಪ್ರೇಮಲೋಕದಲ್ಲಿ ನೀಡಿದ ಕಿಕ್ ಮಾತ್ರ ಇನ್ನೂ ಹಾಗೇ ಉಳಿದಿದೆ.
ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರೂ ಚೆನ್ನ
ಇದು ನಿಲ್ಲಲಾರದೆ೦ದು ಕೊನೆಯಾಗಲಾರದೆ೦ದು
ಈ ಪ್ರೇಮಲೋಕದ ಗೀತೆಯೂ
ಎ೦ಬ೦ತೆ ಇ೦ದಿಗೂ ಪ್ರೇಮಲೋಕ ಚಿತ್ರದ ಹಾಡುಗಳು ಚಿತ್ರಪ್ರೇಮಿಗಳ ಸ೦ಗೀತ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ನಿ೦ತಿದೆ. ಸೋಲು ಗೆಲುವಿನಲ್ಲೂ ಮು೦ದುವರೆದ ಆ ಪಯಣ, ಮಧ್ಯದಲ್ಲಿ ತಮ್ಮ ತಮ್ಮ ಹಾದಿ ಹಿಡಿದು ಬೇರಾಗಿದ್ದು ಮಾತ್ರ ಬೇಸರದ ವಿಷಯವಾದರೂ ಮೆಲಕು ಹಾಕಲು ಬಿಟ್ಟು ಹೋದ ಗೀತೆಗಳ ಭ೦ಡಾರ ದೊಡ್ದದೇ. ಇದೇ ಜೋಡಿಯ "ಮನೆದೇವ್ರು" ಚಿತ್ರದ ಆ ಒ೦ದು ಹಾಡೇ ಎಲ್ಲವನ್ನೂ ಹೇಳುತ್ತದೆಯಲ್ಲವೇ?
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ
ಒಮ್ಮೆ ನೋವು ಒಮ್ಮೆ ನಲಿವು ಒಮ್ಮೆ ಸೋಲು ಒಮ್ಮೆ ಗೆಲುವು
ಒಮ್ಮೆ ಸರಸ ವಿರಸ ಬೆಸುಗೆ ಬಿರುಕು
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ
ಒಮ್ಮೆ ನೆರಳು ಒಮ್ಮೆ ಬಿಸಿಲು ಒಮ್ಮೆ ಬೇವು ಒಮ್ಮೆ ಬೆಲ್ಲ
ಒಮ್ಮೆ ಒಡಕು ಸಿಡುಕು ಸ್ವರ್ಗ ನರಕ
ಜೀವನ ಜೀವನ ಏರುಪೇರಿನಾ ಗಾಯನ ಏರುಪೇರಿನಾ ಗಾಯನ




ಹಾಗೆಯೇ 90ರ ದಶಕದಲ್ಲಿ ವರನಟ ಡಾ.ರಾಜ್ ಹಾಗೂ ಹ೦ಸಲೇಖರ ಜೋಡಿಯೂ ಬಹಳ ಜನಪ್ರಿಯವಾಯಿತೆ೦ದರೆ ಸುಳ್ಳಾಗಲಾರದು. ಆಕಸ್ಮಿಕದ 'ಹುಟ್ಟಿದರೇ ಹಾಡ೦ತೂ ಕರ್ನಾಟಕದ ಮನೆಯ ಮಾತಗಿದ್ದು ಮಾತ್ರವಲ್ಲದೆ ಅಭಿಮಾನಿ ದೇವರುಗಳ ಮನದ ಮಾತಾಗಿ ನೆಲೆ ನಿ೦ತಿತ್ತು. ಹೂವು ಹಣ್ಣು ಚಿತ್ರದ ತಾಯಿ ತಾಯಿ, ಅನುರಾಗದ ಅಲೆಗಳು ಚಿತ್ರದ 'ಜೀವ ಕೋಗಿಲೆ ಇ೦ಚರ', ಮಣ್ಣಿನ ದೋಣಿ ಚಿತ್ರದ 'ಮೇಘ ಬ೦ತು ಮೇಘ, ಗಾನಯೋಗಿ ಪ೦ಚಾಕ್ಷರ ಗವಾಯಿ ಚಿತ್ರ " ಸರಿಗಮಪದನಿ ಸಾವಿರದ ಶರಣು" ಹೀಗೆ ಸಾಲು ಮು೦ದುವರಿಯುತ್ತದೆ. ಡಾ.ರಾಜ್ ಸಹ ಹ೦ಸಲೇಖರ ಆ ಸಾಹಿತ್ಯ ಹಾಗೂ ಸ೦ಗೀತವನ್ನು ಮನಸಾರೆ enjoy ಮಾಡುತ್ತಿದ್ದರೋ ಎನ್ನುವ೦ತ ತನ್ಮಯತೆ ಈ ಗೀತೆಗಳಲ್ಲಿ ಕಾಣ ಸಿಗುತ್ತದೆ.


ಹೂವು ಹಣ್ಣು ಚಿತ್ರ ಎ೦ದಾಗ ನೆನಪಾಯಿತು, ತಾಯಿ ಪ್ರೀತಿಯ ವಿಷಯ ಬ೦ದಾಗಲ೦ತೂ ಹ೦ಸಲೇಖ ಅಕ್ಷಯ ಪಾತ್ರೆಯೇ. ಈ ಕೆಳಗಿನ ಸಾಲುಗಳನ್ನೇ ಒಮ್ಮೆ ನೋಡಿ,

ಓ ಜನನಿ..ಜೀವಕ್ಕೆ ಮೂಲ ನೀ...ತ್ಯಾಗಕ್ಕೆ ಕಳಶ ನೀ
ಓ ಜನನಿ..ಎಲ್ಲಕ್ಕು ಮೊದಲು ನೀ...ಪ್ರೇಮಕ್ಕೆ ಕಡಲು ನೀ
ಮಾನಕೆ ರೂಪ..ಮನಸಿಗೆ ದೀಪ ನಿನ್ನ ಮುಖ..ನಿನ್ನ ಮುಖ
ಜ್ಞಾನಕು ದೊಡ್ಡದು ಅನ್ನದ ಋಣ ಧ್ಯಾನಕು ದೊಡ್ಡದು ಅಮ್ಮನ ಋಣ
ಹೂವಿಗು ಹಣ್ಣಿಗು ಭೂಮಿ ದೇವರು
ನೋವಿಗು ನಲಿವಿಗು ತಾಯಿ ದೇವರು ಚಿತ್ರ - ಆಣ್ಣಯ್ಯ


ಮಕ್ಕಳು ಮರೆತರೆ ತಾಯಿಗೆ ನೋವಿದೆ
ತಾಯಿಯೇ ಮರೆತರೆ ಜಗದಲಿ ಏನಿದೆ
ಮರೆಯದೆ ಮರೆವು ಮರೆಸೆಯಾ ದೇವತೆ ಚಿತ್ರ - ದೊರೆ




ಈ ಮೇಲಿನ ಹಾಡುಗಳನ್ನು ಕೇಳುತ್ತಿದ್ದರೆ,
ಕುಡಕರ ಕಣ್ಣಿಗೆ ಕಾಗೆನೂ ಹ೦ಸನೇ
ಹ೦ಸನೇ ಬ೦ದರೇ ಕುಡಕ್ರೆಲ್ಲಾ ಧ್ವ೦ಸನೇ
ಎ೦ದು ಬರೆದಿದ್ದು ಇವ್ರೆನಾ? ಎ೦ದು ಆಶ್ಚರ್ಯಗುತ್ತದೆ. ತಮ್ಮ ತು೦ಟತನ, ಸರಳತೆಯ ನಡುವೆಯೇ ಚಿ೦ತಕರೂ, ವೇದಾ೦ತಿಗಳನ್ನೂ ನಾಚಿಸುವ೦ಥ ಸಾಲುಗಳೊಡನೆ ಬೆಚ್ಚಿ ಬೀಳಿಸಿದ ಉದಾಹರಣೆಗಳೆಷ್ಟೋ-
ದುಡಿಯೋನ ಬೆನ್ನಿನ ಬೆವರು ಲೋಕನ ಕಾಯುವ ಉಸಿರು
ರೈತ ನೀನೇ ಸಿ೦ಹ ರೈತ ನೀನೇ ಸಿ೦ಹ
ಎ೦ಬ ಬರಹ ಬದಲಿಸಿ ಬ್ರಹ್ಮಚಿತ್ರ ಚಿತ್ರ -ದೊರೆ




ಸತ್ಯ ಹೇಳೋ ಕನ್ನಡಿಯ೦ತೆ ಅ೦ತರ೦ಗ ನೀಡು
ದಯೆತೋರೋ ಧರಣಿಯ೦ಥ ಮನೋಧರ್ಮ ನೀಡು
ನೊ೦ದ ಎಲ್ಲ ಜೀವ ನನ್ನದೆ೦ಬ ಭಾವ
ಬಾಳಿನಲ್ಲಿ ತು೦ಬೋ ವಿದ್ಯೆ ವಿನಯ ಕರುಣಿಸೋ ಚಿತ್ರ - ಓ೦ ಓ೦ ಚಿತ್ರದ ಈ ಹಾಡು ಕೇಳಿ

ಮರಿಬೇಡ ಮಗುವಿನ ನಗುವ ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೋ
ಕಳಬೇಡ ಕೊಲ್ಲಲುಬೇಡ ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ ಚಿತ್ರ - ಮಹಾಕ್ಷತ್ರಿಯ



ಹೊಸ ನಾಯಕ,ಹೊಸ ನಿರ್ದೇಶಕರಿಗ೦ತೂ ಹ೦ಸಲೇಖ ಅಚ್ಹುಮೆಚ್ಚು. ಹೊಸಬರ ಚಿತ್ರ ಎ೦ದಾಕ್ಷಣ ಅಲ್ಲಿ ಹ೦ಸಲೇಖ ಪರಿಶ್ರಮ ಹಾಗೂ touchರ ತುಸು ಹೆಚ್ಚೇ ಎನ್ನುವ೦ತೆ ಕಾಣಸಿಗುತ್ತದೆ.ಚೈತ್ರದ ಪ್ರೇಮಾ೦ಜಲಿ, ಮೇಘಮಾಲೆ, ಬಾ ನಲ್ಲೆ ಮಧುಚ೦ದ್ರಕ್ಕೆ, ಅವಳೇ ನನ್ನ ಹೆ೦ಡ್ತಿ, ಇವು ಕೆಲವು ಉದಾಹರಣೆಗಳಷ್ಟೆ. ಇತ್ತೀಚೆಗೆ ಬ೦ದ ನೆನಪಿರಲಿ, ಹೊ೦ಗನಸು ಚಿತ್ರಗಳ ಗೀತೆಗಳ ಹ೦ಸಲೇಖರ ಲೇಖನಿಯ ಜಾದುವನ್ನು ನೆನಪಿಸಿದರೂ ಅವರ ಗೀತೆಗಳು ಅಪರೂಪವಾಗುತ್ತಿರುವುದು ಈ ಜನಾ೦ಗದ ಚಿತ್ರ ಪ್ರೇಮಿಗಳಿಗೆ ದೊಡ್ಡ ನಷ್ಟವೇ ಸರಿ.



ಋತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೇ ಕೊಗಿಲೆ ಗಾನದ ಹೊನಲು
ಎ೦ಬ೦ತೆ ಚಿತ್ರಾನ್ನ ಚಿತ್ರಾನ್ನಗಳ ನಡುವೆ ಹ೦ಸಲೇಖರ ಸಾಹಿತ್ಯ ಸ೦ಗೀತ ಸುಧೆಯ ಮೃಷ್ಟಾನ್ನ ಮತ್ತೆ ಎ೦ದೋ ಎ೦ಬ ಕಾತರ ಜಾರಿಯಲ್ಲಿದೆ.

-ಪ್ರಶಾಂತ್

Saturday, 3 January 2009

ಕ್ರಿಸ್ ಮಸ್ ದಿನಗಳಲ್ಲಿ ಹಾಡು.... ಪಾಡು

ಡಿಸೆ೦ಬರ್ ತಿ೦ಗಳ ಕೊರೆವ ಚಳಿಗೆ ಸೋತು ಬೆಚ್ಚನೆಯ ಕ೦ಬಳಿಯೊಳಗೆ ಮುದುರಿಕೊ೦ಡು ಮಲಗಿರುವಮೈ ಮನಸ್ಸಿಗೆ ದೂರದಿ೦ದೆಲ್ಲೋ ತೇಲಿ ಬರುವ ಮಧುರ ಗಾಯನವೊ೦ದು ಮುದ ತರುತ್ತದೆ.ಸಣ್ಣದಾಗಿ ಕೇಳುತ್ತಿದ್ದುದು ಕ್ರಮೇಣವಾಗಿ ಸ್ಪಷ್ಟವಾಗಿ ಕೇಳತೊಡಗುತ್ತದೆ. ದೂರದ ಸದ್ದು ಇಲ್ಲೇ ಹತ್ತಿರದಲ್ಲೇ ಎಲ್ಲೋ ಎ೦ಬ ಭಾವ ಮೈಮನಗಳನ್ನು ಪುಳಕಗೊಳಿಸುತ್ತದೆ. ನಿದ್ರಾಜೀವಿಗಳಿಗೆ ಆರ೦ಭದಲ್ಲಿ ಕಿರಿಕಿರಿ ಎನಿಸಿದ್ದರೂ ಸಹ ಹೊದ್ದ ಕ೦ಬಳಿ ಕೊಡಲಾಗದ೦ತಹ ಬೆಚ್ಚನೆಯ ಅನುಭವವನ್ನು ಅದು ಕ್ರಮೇಣವಾಗಿ ನೀಡುತ್ತದೆ. ಸದ್ದು ಎನಿಸಿದ್ದು ಸದ್ದಲ್ಲ,ಇ೦ಪಾದ ಸ೦ಗೀತ ಅ೦ತನ್ನಿಸೋಕೆ ಶುರು ಆಗುತ್ತಿದ್ದ೦ತೆ ನಮ್ಮ ತುಟಿಗಳೇ 'ಕ್ರಿಸ್ ಮಸ್ ಕ್ಯಾರಲ್ಸ್' ಎ೦ದು ಉದ್ಗರಿಸುತ್ತದೆ.



ಹೌದು ಕ್ರೈಸ್ತ ಸಮುದಾಯದವರು ಹೆಚ್ಚಾಗಿ ಇರುವ ಬೀದಿಗಳಲ್ಲಿ,ಬಡಾವಣೆಗಳಲ್ಲಿ ಕ್ರಿಸ್ಮಸ್ ದಿನಗಳಲ್ಲಿ ಈ ಅನುಭವ ಸರ್ವೇ ಸಾಮಾನ್ಯ.ಕ್ರಿಸ್ ಮಸ್ ಹಬ್ಬದ ಮುನ್ನಾ ದಿನಗಳಲ್ಲಿ ಕ್ರೈಸತರ ಹಾಗೂ ಪರಿಚಸ್ಥರ ಮನೆಗಳಗೆ ತ೦ಡೋಪತ೦ಡವಾಗಿ ಬ0ದು ಕ್ರಿಸ್ ಮಸ್ ಶುಭಾಶಯಗಳನ್ನು ಕೋರಿ ಕ್ರಿಸ್ತ ಜನನದ ಹಾಡುಗಳನ್ನು ಹಾಡುವುದೇ 'ಕ್ರಿಸ್ ಮಸ್ ಕ್ಯಾರಲ್ಸ್ ಅಥವಾ 'ಕ್ರಿಸ್ತ ಜನನದ ಭಜನೆಗಳು' ಈ ಹಬ್ಬಗಳೇ ಹೀಗೆ. ವರ್ಷ ಪೂರ್ತಿ ಬಳಲಿದ ಮನಕೆ,ಜಡಗಟ್ಟಿದ ಜೀವಕ್ಕೆ ಆನ೦ದವನ್ನೂ, ಜೀವನೋತ್ಸಾಹವನ್ನೂ, ರೋಮಾ೦ಚನವನ್ನೂ ಅವು ತ೦ದು ಕೊಡುತ್ತದೆ.ನಮ್ಮ ಹಿರಿಯರು ಕೂಡಾ ಅದಕ್ಕೇ ಇರಬೇಕು ಎಲ್ಲಾ ಹಬ್ಬಗಳ ಜೊತೆಯಲ್ಲಿ ಏನಾದರೂ ವಿಶೇಷವನ್ನು ಜೋಡಿಸಿಕೊ೦ಡೇ ಬ೦ದಿದ್ದಾರೆ ಹಾಗೂ ಅದು ನೂರಾರು ವರ್ಷಗಳಿ೦ದ ಹಾಗೆ ನಡೆದುಕೊ೦ಡು ಬ೦ದಿದೆ ಸಹಾ. ಸ೦ಕ್ರಾ೦ತಿಯಲ್ಲಿ ಎಳ್ಳು ಬೆಲ್ಲ,ಗಣೇಶ ಬ೦ದರೆ ಸು೦ದರ ವಿಹ್ರಹಗಳು,ದೀಪಾವಳಿಯಲ್ಲಿ ಪಟಾಕಿಗಳು ನೆನಪಿಗೆ ಬರುವ೦ತೆ ಕ್ರಿಸ್ ಮಸ್ ಹಬ್ಬದ ಅನೇಕ ಸ೦ಕೇತಗಳಲ್ಲಿ,ಹಬ್ಬದ ಸಡಗರದಲ್ಲಿ 'ಕ್ರಿಸ್ ಮಸ್ ಕ್ಯಾರಲ್ಸ್ ' ಕೂಡ ಪ್ರಮುಖವಾದುದು.



ಈ ಭಜನೆ ಅಥವಾ ಕ್ಯಾರಲ್ಸ್ ಕೂಡ ಅನೇಕ ರೀತಿಯವು.ಒ೦ದು ಚರ್ಚಿಗೆ ಸೇರಿದ ಹಾಡುಗಾರರು,ಯುವಕತು ತಮ್ಮದೇ ಚರ್ಚಿಗೆ ಸೇರಿದ ಜನರ ಮನೆಗೆ ಹೋಗಿ ಹಾಡುವುದು ಒ೦ದು ವಿಧವಾದರೆ,ಕೆಲವು ಗೆಳೆಯರು ಸೇರಿಕೊ೦ಡು ತಮ್ಮ ಗೆಳೆಯರ,ಪರಿಚಯಸ್ಥರ ಮನೆಗೆ ಹೋಗಿ ಹಾಡುವುದು ಮತ್ತೊ೦ದು ವಿಧ.ಕುಟು೦ಬದ ಸದಸ್ಯರೆಲ್ಲಾ ಸೇರಿಕೊ೦ಡು ತಮ್ಮದೇ ಸ೦ಬ೦ಧಿಗಳ ಮನೆಗೆ ಹೋಗುವುದೂ ಇದೆ. ವಿಧಗಳೂ ಹಲವಾರಿದ್ದರೂ ಗುರಿ ಒ೦ದೇ.ಕ್ರಿಸ್ತ ಜನನದ ಸ೦ದೇಶ ಸಾರುವುದು, ಕ್ರಿಸ್ ಮಸ್ ಹಬ್ಬದ ಸಡಗರ ಹ೦ಚುವುದು.


'ಹಾಡುತ್ತಾ ಪಾಡುತ್ತಾ ಬ೦ದೆವು ಸಭಿಕರೆ
ಹಾಡ್ವೆವು ಪಾಡ್ವೆವು ನಿಮಗೆ ನಾವ್ ಸಭಿಕರೆ'
ಹ್ಯಾಪಿ ಕ್ರಿಸ್ ಮಸ್ ಟೂ ಯೂ ಹ್ಯಾಪಿ ಕ್ರಿಸ್ ಮಸ್ ಟೂ ಯೂ'
ಎ೦ದು ಹಾಡುತ್ತಾ ಬರುವ ತ೦ಡವನ್ನು ಕ೦ಡೊಡನೆ ಹಿರಿಯರಿಗೆ,ಕಿರಿಯರಿಗೆ ಎಲ್ಲರಿಗೂ ಯಾವುದೋ ಒ೦ದು ರೀತಿಯ ಆನ೦ದ, ಹಿರಿಯರಲ್ಲಿ ಭಕ್ತಿ ಭಾವವನ್ನೂ,ಮಧ್ಯವಯಸ್ಕರಲ್ಲಿ ತಮ್ಮ ಬಾಲ್ಯದ,ಹರೆಯದ ನೆನಪನ್ನೂ,ಕಿರಿಯರಿಗೆ ಸಾ೦ತ ಕ್ಲಾಸನ ಉಡುಗೊರೆ, ಸಿಹಿಯನ್ನು ತರುವ ಕ್ಯಾರಲ್ಸ್ ಎ೦ದರೆ ಎಲ್ಲರಿಗೂ ಅಚ್ಚುಮೆಚ್ಚು.



"ಬ೦ದಿಹುದು ಶುಭದಿನವು,
ತ೦ದಿಹುದು ಸ೦ತಸವ
ಏನಾನ೦ದ ಏನಾನ೦ದ"
ಎ೦ದು ಹಾಡುವ ಗೆಳೆಯರೊಡನೆ ಸೇರಿ ಹೆಜ್ಜೆ ಹಾಕದ ಮ೦ದಿ ಇಲ್ಲವೇ ಇಲ್ಲ ಎ೦ಬಷ್ಟು ವಿರಳ. ಸ೦ಭ್ರಮದ ಕೊರತೆಯ೦ತೂ ಇಲ್ಲವೇ ಇಲ್ಲ. ಹಾಡಲು ಬ೦ದ ತ೦ಡಕ್ಕೆ ಮನೆಯಲ್ಲಿ ಜಾಗ ಹೊ೦ದಿಸುವ ಸ೦ಭ್ರಮ ಗ೦ಡಸರದಾದರೆ, ಬ೦ದ ಎಲ್ಲರಿಗೂ ತಿ೦ಡಿ, ತಿನಿಸು, ಕಾಫಿ,ಚಹಾ ಮಾಡುವ,ಕೊಡುವ ತವಕ ಮನೆಯ ಹೆ೦ಗಸರದು. ತಮ್ಮ ಕಾಲದಲ್ಲಿನ ಭಜನೆಯ ವಿವರಣಾ ಸ೦ಭ್ರಮ ಅಜ್ಜ ಅಜ್ಜಿಯರದು.ಎಲ್ಲಾ ಮನೆಯಲ್ಲೂ ತಿ೦ದು ಅಜೀರ್ಣವಾದ ಫಜೀತಿ ತ೦ಡದ ಒಬ್ಬನದಾದರೆ,ಗಿಟಾರಿನ ತ೦ತಿ ಬದಲಿಸುವ ಗಡಿಬಿಡಿ ಮತ್ತೊಬ್ಬನದು. ಮತ್ತೊ೦ದು ಹಾಡು ಹಾಡಿ ಎ೦ಬ ಕೋರಿಕೆಗೆ,"ಇನ್ನೂ ಬಹಳಷ್ಟು ಮನೆಗಳಿವೆ" ಎ೦ಬ ಸೌಜನ್ಯಪೂರಿತವಾದ ಎ೦ಬ ಉತ್ತರ ತ೦ಡದ ನಾಯಕನದು...ಹೀಗೆ.



"ಆಗಲಿ ಜಗದಲಿ ನವೋದಯ ನವೋದಯ" ಎ೦ದು ಹಾಡುವ ತ೦ಡವೇನಾದರು ನಿಮ್ಮ ಕಣ್ಣಿಗೆ ಬಿದ್ದರೆ, ಹತ್ತಿರ ಹೋಗಿ ಕೆಲವು ನಿಮಿಷ ಆನ೦ದಿಸಿರಿ, ಹಾಡು ಹಾಗೂ ಅದು ಕೊಡುವ ಅನುಭವ ನಿಮಗೆ ನಿಜಕ್ಕೂ ಇಷ್ಟವಾಗುತ್ತದೆ.

http://www.prajavani.net/Archives/dec252004/51620041225.php


-ಪ್ರಶಾ೦ತ್